ಮನದಲ್ಲಿ ಮಡುಗಟ್ಟಿದ್ದ
ಭಾವಗಳ ಕೆದಕಿ,ಬರೆಯಲು
ಪ್ರೇರೇಪಿಸಿತು ,ಪುಸ್ತಕದ ನಡುವಲ್ಲಿ
ಬೆಚ್ಚಗೆ ಮಲಗಿದ್ದ ನವಿಲುಗರಿ
ಬದುಕಿನ ಪುಸ್ತಕದಲ್ಲಿ
ನೆನಪುಗಳ ಪುಟ ಹೊರಳಿಸಿ
ಮತ್ತೆ ಅವತಾರವೆತ್ತಿ ನಲಿಯಿತು
ಜೋಪಾನವಾಗಿ ಬಚ್ಚಿಟ್ಟ ನವಿಲುಗರಿ
ಬಣ್ಣ ಬಣ್ಣದ ಭಾವಕ್ಕೆ
ಅನುಭಾವ ತುಂಬಿ,ಅನುರಾಗದ
ಅನುಬಂಧಕ್ಕೆ ಅನುಮೋದಿಸಿತು
ಮತ್ತೆ ಕಣ್ಣೆದುರು ಸಿಕ್ಕ ನವಿಲುಗರಿ
ಒಲವಿನ ಗೂಡು ಕಟ್ಟಿ
ಚೆಲುವಿನ ಚುಕ್ಕಿ ಇಟ್ಟು
ಪ್ರೇಮದ ರಂಗೋಲಿ ಬರೆಯಲು
ಪ್ರೇರೆಪಿಸಿತ್ತು ಮುಚ್ಚಿಟ್ಟ ನವಿಲುಗರಿ
# ಅಪೂರ್ವ ಚೇತನ್ ಪೆರಂದೋಡಿ
ಭಾರಿ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಶಾಲೆ, ಪಿಯು, ಐಟಿಐ…
ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 1ರವರೆಗೆ ಬಿಟ್ಟು ಬಿಟ್ಟು ಉತ್ತಮ ಮಳೆಯ ಮುನ್ಸೂಚನೆ…
ಸುಳ್ಯ ತಾಲೂಕಿನ ಬಾಳುಗೋಡು, ಹರಿಹರ, ಬಳ್ಪ, ಗುತ್ತಿಗಾರು, ಸುಬ್ರಹ್ಮಣ್ಯ ಸೇರಿದಂತೆ ಹಲವು ಗ್ರಾಮಗಳಲ್ಲಿ…
ಬಾಂಗ್ಲಾದೇಶದ ವಿಜ್ಞಾನಿಗಳು ಹಲಸಿನ ಬೀಜದಿಂದ ಖನಿಜಾಂಶ ಸಮೃದ್ಧ ಆಹಾರ ತಯಾರಿಸುವ ತಂತ್ರಜ್ಞಾನಕ್ಕೆ ಪೇಟೆಂಟ್…
ಭಾರತದ ಕೃಷಿ ರಫ್ತು ಉತ್ಪನ್ನಗಳ ಸಂಖ್ಯೆ 280ರಿಂದ ಸುಮಾರು 500ಕ್ಕೆ ಏರಿಕೆಯಾಗಿದೆ. ₹4.61…
ದೊಡ್ಡಬಳ್ಳಾಪುರ ಭಾಗದಲ್ಲಿ ಅಡಿಕೆ ಹೊಂಬಾಳೆಗಳನ್ನು ಕಳ್ಳರು ಕದ್ದೊಯ್ಯುತ್ತಿರುವ ಘಟನೆಗಳು ಹೆಚ್ಚಾಗಿವೆ. ಇದರಿಂದ ರೈತರು…