ಮನದಲ್ಲಿ ಮಡುಗಟ್ಟಿದ್ದ
ಭಾವಗಳ ಕೆದಕಿ,ಬರೆಯಲು
ಪ್ರೇರೇಪಿಸಿತು ,ಪುಸ್ತಕದ ನಡುವಲ್ಲಿ
ಬೆಚ್ಚಗೆ ಮಲಗಿದ್ದ ನವಿಲುಗರಿ
ಬದುಕಿನ ಪುಸ್ತಕದಲ್ಲಿ
ನೆನಪುಗಳ ಪುಟ ಹೊರಳಿಸಿ
ಮತ್ತೆ ಅವತಾರವೆತ್ತಿ ನಲಿಯಿತು
ಜೋಪಾನವಾಗಿ ಬಚ್ಚಿಟ್ಟ ನವಿಲುಗರಿ
ಬಣ್ಣ ಬಣ್ಣದ ಭಾವಕ್ಕೆ
ಅನುಭಾವ ತುಂಬಿ,ಅನುರಾಗದ
ಅನುಬಂಧಕ್ಕೆ ಅನುಮೋದಿಸಿತು
ಮತ್ತೆ ಕಣ್ಣೆದುರು ಸಿಕ್ಕ ನವಿಲುಗರಿ
ಒಲವಿನ ಗೂಡು ಕಟ್ಟಿ
ಚೆಲುವಿನ ಚುಕ್ಕಿ ಇಟ್ಟು
ಪ್ರೇಮದ ರಂಗೋಲಿ ಬರೆಯಲು
ಪ್ರೇರೆಪಿಸಿತ್ತು ಮುಚ್ಚಿಟ್ಟ ನವಿಲುಗರಿ
# ಅಪೂರ್ವ ಚೇತನ್ ಪೆರಂದೋಡಿ
ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…
PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…
ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…
ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…
ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…
ಭಾರತದ ತೆಂಗು ವಲಯ ಈಗ ಕಾಯಿ ಮಾರಾಟದಿಂದ ಮೌಲ್ಯವರ್ಧಿತ ಉತ್ಪನ್ನಗಳ ಜಾಗತಿಕ ಮಾರುಕಟ್ಟೆಯತ್ತ…