Advertisement
ಅನುಕ್ರಮ

ಕವನ | ಕರುನಾಡಿನ ರಾಜಕುಮಾರ

Share

ಕೋಟಿ ಹೃದಯ ಗೆದ್ದ ಕುವರ, ಆಗಿಹೋದ ಇಂದು ಅಮರ…
ಹೇಳು ವಿಧಿಯೇ ನೀ ಯಾಕಿಷ್ಟು ಕ್ರೂರಿ…
ಕೋಟಿ ಜನರ ಜನಮಾನಸದಲ್ಲಿ ಅಚ್ಚಳಿಯದ ನೆನಪು “ಅಪ್ಪು”…
ಇನ್ನೆಂದಿಗೂ ಬಾರದ ಲೋಕ ಸೇರಿಬಿಟ್ಟೆಯಾ, ನೀ ಸೇರಿಬಿಟ್ಟೆಯಾ…?

ಕೋಟಿ ಜನರ ಪ್ರಾರ್ಥನೆಯೂ ಫಲಿಸದೇ ಹೋಯಿತು ಇಂದು…
ನಿಮ್ಮ ನಿಷ್ಕಲ್ಮಶ ಮನಸ್ಸು ದೇವರಿಗೂ ಇಷ್ಟವಾಗಿ ಕರೆಸಿ ಬಿಟ್ಟನೇ ನಿಮ್ಮ ತನ್ನ ಬಳಿ, ಆ ಪರಮಾತ್ಮನ ಬಳಿ…
ಸಾವಿರಾರು ಜನರ ಬದುಕಿಗೆ ಬೆಳಕಾದ ನಿಮ್ಮ ಬದುಕು ಅಂತ್ಯವಾಯಿತೇ, ಇಲ್ಲಿಗೆ ಕೊನೆಯಾಯಿತೇ…?
ನಿಮ್ಮ ಬದುಕ ಯಾತ್ರೆಯು ಇಂದು ಕೊನೆಯಾಯಿತೇ, ಇಲ್ಲಿಗೆ ಮುಗಿದು ಹೋಯಿತೇ…?

ಹಾಡುತಿದ್ದ ನಿಮ್ಮ ಸ್ವರವು ಮೌನವಾಗಿದೆ, ಇಂದು ಮೌನವಾಗಿದೆ…
ಕುಣಿಯುತ್ತಿದ್ದ ನಿಮ್ಮ ಕೈ-ಕಾಲುಗಳು ನಿಂತುಹೋಗಿವೆ, ಇಂದು ನಿಂತು ಹೋಗಿವೆ…
ನಿಮ್ಮ ಬದುಕ ಯಾತ್ರೆಯು ಇಂದು ಮುಗಿದು ಹೋಯಿತೇ, ಇಲ್ಲಿಗೆ ಕೊನೆಯಾಯಿತೇ…?
ನೀವು ಇಂದು ಇಲ್ಲದೇ ಹೋದರೂ, ನಿಮ್ಮ ನೆನಪುಗಳೆಲ್ಲಾ ಉಳಿದು ಹೋಗಿವೆ, ನಮ್ಮ ಮನದಲ್ಲಿ ಅಚ್ಚಳಿಯದೇ ಉಳಿದುಹೋಗಿವೆ…

ನಿಮ್ಮ ಬದುಕ ಸಾಧನೆಯೆಲ್ಲಾ ನಮಗೆ ದಾರಿದೀಪವಾಗಿ, ನಿಮ್ಮ ಪ್ರತಿಯೊಂದು ಹೆಜ್ಜೆ ನಮ್ಮ ಬದುಕಿಗೆ ಸ್ಪೂರ್ತಿಯಾಗಿ ಕಾಣುವುದು, ನಮ್ಮ ಮುನ್ನಡೆಸುವುದು…
ಇಂದು ನೀವು ಇಲ್ಲದೇ ಹೋದರೂ, ನಿಮ್ಮ ನೆನಪುಗಳೆಲ್ಲಾ ನಮ್ಮ ಮನದಲ್ಲಿ ಉಳಿದುಹೋಗಿವೆ, ಅಚ್ಚಾಗಿ ಉಳಿದು ಹೋಗಿವೆ…
ಮುಂದಿನ ಜನ್ಮದಲ್ಲಿ ನೀವು ಇದೇ ಕರುನಾಡಿನಲ್ಲಿ ವೀರ ಕನ್ನಡಿಗನಾಗಿ ಹುಟ್ಟಿ ಬನ್ನಿ, ಮತ್ತೊಮ್ಮೆ ಹುಟ್ಟಿ ಬನ್ನಿ…
ಆ ಪರಮಾತ್ಮನು ನಿಮ್ಮ ಆತ್ಮಕ್ಕೆ ಶಾಂತಿಯನ್ನು ನೀಡಲೆಂದು ನಿಮಗೆ ನಾವು ದುಃಖದ ವಿದಾಯ ಹೇಳುತಿರುವೆವು, ನಾವು ಹೇಳುತಿರುವೆವು…

ಕೋಟಿ ಹೃದಯ ಗೆದ್ದ ಕುವರ, ಆಗಿಹೋದ ಇಂದು ಅಮರ…
ಹೇಳು ವಿದಿಯೇ ನೀನು ಯಾಕಿಷ್ಟು ಕ್ರೂರಿ…
ಕೋಟಿ ಜನರ ಪ್ರಾರ್ಥನೆಯು ಫಲಿಸದೇ ಹೋಯಿತು ಇಂದು…
ನಿಮ್ಮ ಬದುಕ ಯಾತ್ರೆಯು ಇಲ್ಲಿಗೆ ಮುಗಿದು ಹೋಯಿತು, ಇಂದು ಕೊನೆಯಾಯಿತು…
ನೀವು ಮತ್ತೆ ಹುಟ್ಟಿ ಬನ್ನಿ ನಮ್ಮ ಕರುನಾಡಿನ ಮನೆ ಮಗನಾಗಿ ಎಂದು ನಾವು ಬೇಡುತ್ತಾ ನಿಮ್ಮ ಆತ್ಮಕ್ಕೆ ಶಾಂತಿ ಕೋರುತ್ತಿರುವೆವು, ನಾವು ಕೋರುತ್ತಿರುವೆವು…

# ಉಲ್ಲಾಸ್ ಕಜ್ಜೋಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಮುಂಗಾರು ಬೇಗನೆ ವಿದಾಯ ಹೇಳುತ್ತಿದೆಯೇ..? ಸೆಪ್ಟೆಂಬರ್‌ನಲ್ಲಿ ಮಳೆ ಕಡಿಮೆಯಾಗುವ ಮುನ್ಸೂಚನೆ..?

ಸೆಪ್ಟೆಂಬರ್ 5–10ರ ನಂತರ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಗಣನೀಯವಾಗಿ ಕಡಿಮೆಯಾಗುವ…

15 minutes ago

ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ

ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…

9 hours ago

ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ

PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…

16 hours ago

ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ

ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…

1 day ago

ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ

ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…

1 day ago

ನಿಮ್ಮ ಹೆಸರಲ್ಲಿ 9 ಸಿಮ್‌ಗಳಿವೆಯೇ? ಆಗಸ್ಟ್ 24ರಿಂದ ಹೊಸ ನಿಯಮ – ಹೆಚ್ಚುವರಿ ನಂಬರ್‌ಗೆ ಬ್ರೇಕ್

ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…

2 days ago