Advertisement
ಅಂಕಣ

ಕವನ | ಕರುನಾಡಿನ ರಾಜಕುಮಾರ

Share

ಕೋಟಿ ಹೃದಯ ಗೆದ್ದ ಕುವರ, ಆಗಿಹೋದ ಇಂದು ಅಮರ…
ಹೇಳು ವಿಧಿಯೇ ನೀ ಯಾಕಿಷ್ಟು ಕ್ರೂರಿ…
ಕೋಟಿ ಜನರ ಜನಮಾನಸದಲ್ಲಿ ಅಚ್ಚಳಿಯದ ನೆನಪು “ಅಪ್ಪು”…
ಇನ್ನೆಂದಿಗೂ ಬಾರದ ಲೋಕ ಸೇರಿಬಿಟ್ಟೆಯಾ, ನೀ ಸೇರಿಬಿಟ್ಟೆಯಾ…?

Advertisement
Advertisement

ಕೋಟಿ ಜನರ ಪ್ರಾರ್ಥನೆಯೂ ಫಲಿಸದೇ ಹೋಯಿತು ಇಂದು…
ನಿಮ್ಮ ನಿಷ್ಕಲ್ಮಶ ಮನಸ್ಸು ದೇವರಿಗೂ ಇಷ್ಟವಾಗಿ ಕರೆಸಿ ಬಿಟ್ಟನೇ ನಿಮ್ಮ ತನ್ನ ಬಳಿ, ಆ ಪರಮಾತ್ಮನ ಬಳಿ…
ಸಾವಿರಾರು ಜನರ ಬದುಕಿಗೆ ಬೆಳಕಾದ ನಿಮ್ಮ ಬದುಕು ಅಂತ್ಯವಾಯಿತೇ, ಇಲ್ಲಿಗೆ ಕೊನೆಯಾಯಿತೇ…?
ನಿಮ್ಮ ಬದುಕ ಯಾತ್ರೆಯು ಇಂದು ಕೊನೆಯಾಯಿತೇ, ಇಲ್ಲಿಗೆ ಮುಗಿದು ಹೋಯಿತೇ…?

Advertisement

ಹಾಡುತಿದ್ದ ನಿಮ್ಮ ಸ್ವರವು ಮೌನವಾಗಿದೆ, ಇಂದು ಮೌನವಾಗಿದೆ…
ಕುಣಿಯುತ್ತಿದ್ದ ನಿಮ್ಮ ಕೈ-ಕಾಲುಗಳು ನಿಂತುಹೋಗಿವೆ, ಇಂದು ನಿಂತು ಹೋಗಿವೆ…
ನಿಮ್ಮ ಬದುಕ ಯಾತ್ರೆಯು ಇಂದು ಮುಗಿದು ಹೋಯಿತೇ, ಇಲ್ಲಿಗೆ ಕೊನೆಯಾಯಿತೇ…?
ನೀವು ಇಂದು ಇಲ್ಲದೇ ಹೋದರೂ, ನಿಮ್ಮ ನೆನಪುಗಳೆಲ್ಲಾ ಉಳಿದು ಹೋಗಿವೆ, ನಮ್ಮ ಮನದಲ್ಲಿ ಅಚ್ಚಳಿಯದೇ ಉಳಿದುಹೋಗಿವೆ…

ನಿಮ್ಮ ಬದುಕ ಸಾಧನೆಯೆಲ್ಲಾ ನಮಗೆ ದಾರಿದೀಪವಾಗಿ, ನಿಮ್ಮ ಪ್ರತಿಯೊಂದು ಹೆಜ್ಜೆ ನಮ್ಮ ಬದುಕಿಗೆ ಸ್ಪೂರ್ತಿಯಾಗಿ ಕಾಣುವುದು, ನಮ್ಮ ಮುನ್ನಡೆಸುವುದು…
ಇಂದು ನೀವು ಇಲ್ಲದೇ ಹೋದರೂ, ನಿಮ್ಮ ನೆನಪುಗಳೆಲ್ಲಾ ನಮ್ಮ ಮನದಲ್ಲಿ ಉಳಿದುಹೋಗಿವೆ, ಅಚ್ಚಾಗಿ ಉಳಿದು ಹೋಗಿವೆ…
ಮುಂದಿನ ಜನ್ಮದಲ್ಲಿ ನೀವು ಇದೇ ಕರುನಾಡಿನಲ್ಲಿ ವೀರ ಕನ್ನಡಿಗನಾಗಿ ಹುಟ್ಟಿ ಬನ್ನಿ, ಮತ್ತೊಮ್ಮೆ ಹುಟ್ಟಿ ಬನ್ನಿ…
ಆ ಪರಮಾತ್ಮನು ನಿಮ್ಮ ಆತ್ಮಕ್ಕೆ ಶಾಂತಿಯನ್ನು ನೀಡಲೆಂದು ನಿಮಗೆ ನಾವು ದುಃಖದ ವಿದಾಯ ಹೇಳುತಿರುವೆವು, ನಾವು ಹೇಳುತಿರುವೆವು…

Advertisement

ಕೋಟಿ ಹೃದಯ ಗೆದ್ದ ಕುವರ, ಆಗಿಹೋದ ಇಂದು ಅಮರ…
ಹೇಳು ವಿದಿಯೇ ನೀನು ಯಾಕಿಷ್ಟು ಕ್ರೂರಿ…
ಕೋಟಿ ಜನರ ಪ್ರಾರ್ಥನೆಯು ಫಲಿಸದೇ ಹೋಯಿತು ಇಂದು…
ನಿಮ್ಮ ಬದುಕ ಯಾತ್ರೆಯು ಇಲ್ಲಿಗೆ ಮುಗಿದು ಹೋಯಿತು, ಇಂದು ಕೊನೆಯಾಯಿತು…
ನೀವು ಮತ್ತೆ ಹುಟ್ಟಿ ಬನ್ನಿ ನಮ್ಮ ಕರುನಾಡಿನ ಮನೆ ಮಗನಾಗಿ ಎಂದು ನಾವು ಬೇಡುತ್ತಾ ನಿಮ್ಮ ಆತ್ಮಕ್ಕೆ ಶಾಂತಿ ಕೋರುತ್ತಿರುವೆವು, ನಾವು ಕೋರುತ್ತಿರುವೆವು…

# ಉಲ್ಲಾಸ್ ಕಜ್ಜೋಡಿ

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |

ಮೇ 7 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ…

15 hours ago

ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |

ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…

1 day ago

Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |

ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…

1 day ago

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

3 days ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

3 days ago