ಕವನ | ದುರ್ಗದ ಓಬವ್ವ

December 18, 2021
12:53 PM

ನಮ್ಮಯ ಹೆಮ್ಮೆಯ ಕನ್ನಡ ನಾಡಲಿ
ಚಿತ್ರದುರ್ಗವೆನ್ನುವ ನಗರವಿದೆ.
ಐತಿಹ್ಯ ಸಾರುವ ಕಲ್ಲಿನ ಕೋಟೆಯು
ನಗರದ ಮಧ್ಯದಿ ಶೋಭಿಸಿದೆ

ಬಹು ಹಿಂದಿನ ಕಾಲದಿ ನಾಯಕ ಹೊಯ್ಸಳ
ಚಾಲುಕ್ಯರೆಲ್ಲರು ಜೊತೆಗೂಡಿ.
ಏಳು ಸುತ್ತಿನಲಿ ಭದ್ರತೆ ಹೊಂದಿದ
ಕೋಟೆಯ ಕಟ್ಟಿದರೊಡಗೂಡಿ

ಮಸೀದಿ ದೇಗುಲ ಇದರೊಳಗಿರುವುದು
ಹಿಡಿಂಬೇಶ್ವರ ಸಹಿತದಲಿ
ಪಾಂಡವರಂದಿನ ಕಾಲದಿ ಅಜ್ಞಾತ
ವಾಸದಲಿದ್ದರು ಈ ಸ್ಥಳದಿ

ಮದಕರಿನಾಯಕರಾಳಿದ ಕಾಲದಿ
ಧಾಳಿಯನಿಟ್ಟನು ಹೈದರನು
ಒಳಗಡೆ ನುಸುಳುತ ಕಿಂಡಿಯ ಮೂಲಕ
ಬರುತಲಿ ಇದ್ದರು ಶತ್ರುಗಳು

ಮುದ್ದುಹನುಮನ ಪತ್ನಿಯು ಓಬವ್ವ
ಕಂಡಳು ದುರುಳರ ಆಗಮನ
ಮೌನದಿ ಒನಕೆಯ ಹಿಡಿಯುತ ನಸುಳುತ
ಜನರಿಗೆ ಬಡಿದಳು ಪುನಾ ಪುನ

ಒಡನೆಯೆ ದೊರೆಗಳ ಕಿವಿಗದು ಮುಟ್ಟಿತು
ಅರಿಗಳು ನುಸುಳುವ ಸಂಗತಿಯು
ಆದರೆ ಕಪಟದಿ ಓರ್ವನು ಇರಿಯುತ
ಓಬವ್ವಳ ಪ್ರಾಣವ ಹೀರಿದನು

ಒನಕೆಯ ಓಬವ್ವ ಮಾಡಿದ ತ್ಯಾಗವು
ದೇಶದ ಪ್ರೇಮವ ಸಾರುತಿದೆ
ದುರ್ಗದ ಮಹಿಮೆಗೆ ಒಪ್ಪ ಓರಣವ
ನೀಡಿದ ಖ್ಯಾತಿಯ ಕಥೆಯು ಇದೇ.

ಓಬವ್ವನ ಪ್ರತಿಮೆಯು ಇಂದಿಗು ಇರುವುದು
ದುರ್ಗದ ನಗರದಿ ಸಂತೋಷ
ತ್ಯಾಗಕೆ ಅರ್ಥವ ಹುಡುಕುವ ಜನರಿಗೆ
ಬೇರೇತಕೆ ಬೇಕಿದೆ ಸಂದೇಶ

#ಡಾ ವಾಣಿಶ್ರೀ ಕಾಸರಗೋಡು

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಸಂಪತ್ತು ಹೆಚ್ಚಾದರೆ ಬದುಕು ಶ್ರೀಮಂತವಾಗುತ್ತದೆಯೇ..?
September 10, 2026
10:45 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಬೇರೊಬ್ಬರ ಬದುಕಿನ ಅಳತೆಯಲ್ಲಿ ನಮ್ಮ ಬದುಕನ್ನು ಅಳೆಯುತ್ತಿದ್ದೇವೆಯೇ?
September 5, 2026
7:23 AM
by: ಮಹೇಶ್ ಪುಚ್ಚಪ್ಪಾಡಿ
ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ
August 26, 2026
5:00 PM
by: ಮಹೇಶ್ ಪುಚ್ಚಪ್ಪಾಡಿ
ಕೆಲವು ಸಂಬಂಧಗಳನ್ನು ಉಳಿಸುವುದು ಮೌನವೇ..
August 21, 2026
6:28 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror