Advertisement
ಅನುಕ್ರಮ

ಕವನ | ದುರ್ಗದ ಓಬವ್ವ

Share

ನಮ್ಮಯ ಹೆಮ್ಮೆಯ ಕನ್ನಡ ನಾಡಲಿ
ಚಿತ್ರದುರ್ಗವೆನ್ನುವ ನಗರವಿದೆ.
ಐತಿಹ್ಯ ಸಾರುವ ಕಲ್ಲಿನ ಕೋಟೆಯು
ನಗರದ ಮಧ್ಯದಿ ಶೋಭಿಸಿದೆ

ಬಹು ಹಿಂದಿನ ಕಾಲದಿ ನಾಯಕ ಹೊಯ್ಸಳ
ಚಾಲುಕ್ಯರೆಲ್ಲರು ಜೊತೆಗೂಡಿ.
ಏಳು ಸುತ್ತಿನಲಿ ಭದ್ರತೆ ಹೊಂದಿದ
ಕೋಟೆಯ ಕಟ್ಟಿದರೊಡಗೂಡಿ

ಮಸೀದಿ ದೇಗುಲ ಇದರೊಳಗಿರುವುದು
ಹಿಡಿಂಬೇಶ್ವರ ಸಹಿತದಲಿ
ಪಾಂಡವರಂದಿನ ಕಾಲದಿ ಅಜ್ಞಾತ
ವಾಸದಲಿದ್ದರು ಈ ಸ್ಥಳದಿ

ಮದಕರಿನಾಯಕರಾಳಿದ ಕಾಲದಿ
ಧಾಳಿಯನಿಟ್ಟನು ಹೈದರನು
ಒಳಗಡೆ ನುಸುಳುತ ಕಿಂಡಿಯ ಮೂಲಕ
ಬರುತಲಿ ಇದ್ದರು ಶತ್ರುಗಳು

ಮುದ್ದುಹನುಮನ ಪತ್ನಿಯು ಓಬವ್ವ
ಕಂಡಳು ದುರುಳರ ಆಗಮನ
ಮೌನದಿ ಒನಕೆಯ ಹಿಡಿಯುತ ನಸುಳುತ
ಜನರಿಗೆ ಬಡಿದಳು ಪುನಾ ಪುನ

ಒಡನೆಯೆ ದೊರೆಗಳ ಕಿವಿಗದು ಮುಟ್ಟಿತು
ಅರಿಗಳು ನುಸುಳುವ ಸಂಗತಿಯು
ಆದರೆ ಕಪಟದಿ ಓರ್ವನು ಇರಿಯುತ
ಓಬವ್ವಳ ಪ್ರಾಣವ ಹೀರಿದನು

ಒನಕೆಯ ಓಬವ್ವ ಮಾಡಿದ ತ್ಯಾಗವು
ದೇಶದ ಪ್ರೇಮವ ಸಾರುತಿದೆ
ದುರ್ಗದ ಮಹಿಮೆಗೆ ಒಪ್ಪ ಓರಣವ
ನೀಡಿದ ಖ್ಯಾತಿಯ ಕಥೆಯು ಇದೇ.

ಓಬವ್ವನ ಪ್ರತಿಮೆಯು ಇಂದಿಗು ಇರುವುದು
ದುರ್ಗದ ನಗರದಿ ಸಂತೋಷ
ತ್ಯಾಗಕೆ ಅರ್ಥವ ಹುಡುಕುವ ಜನರಿಗೆ
ಬೇರೇತಕೆ ಬೇಕಿದೆ ಸಂದೇಶ

#ಡಾ ವಾಣಿಶ್ರೀ ಕಾಸರಗೋಡು

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

‘ಅನ್ನಂ ಬ್ರಹ್ಮ’ ಭಾವದಿಂದ ಆಹಾರ ಸೇವಿಸಿದರೆ ಮುಕ್ತಿಯ ಸಾಧನ – ರಾಘವೇಶ್ವರ ಶ್ರೀ

ಗೋಕರ್ಣದಲ್ಲಿ ನಡೆದ 'ಅನ್ನಂ ಬ್ರಹ್ಮ' ಪ್ರವಚನದಲ್ಲಿ ರಾಘವೇಶ್ವರ ಭಾರತೀ ಶ್ರೀಗಳು ಭೋಜನವೇ ಅದ್ವೈತ…

5 hours ago

ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆ ತಾತ್ಕಾಲಿಕ ಮುಂದೂಡಿಕೆ | ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ

ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರತಿಭಟನಾನಿರತ ಕೃಷಿ ವಿದ್ಯಾರ್ಥಿಗಳಿಗೆ ಸರ್ಕಾರ…

6 hours ago

ಬರ್ಮಾ ಅಡಿಕೆ ಕಳ್ಳಸಾಗಣೆ ವಿರುದ್ಧ ಇಡಿ ಬಿಗಿ ಕ್ರಮ – ಇಬ್ಬರು ಉದ್ಯಮಿಗಳ ಮನೆಗಳ ಮೇಲೆ ದಾಳಿ

ಬರ್ಮಾ ಅಡಿಕೆ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಸಿಲ್ಚಾರ್‌ನ…

7 hours ago

ದೇಹ–ಮನಸ್ಸು–ಆತ್ಮದ ಸಮತೋಲನವೇ ನಿಜವಾದ ಆರೋಗ್ಯ: ಆಯುರ್ವೇದದ ಪರಮ ಗುರಿ ಆತ್ಮಜ್ಞಾನ – ರಾಘವೇಶ್ವರ ಶ್ರೀ

ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯ ಎಂದು ರಾಮಚಂದ್ರಾಪುರ ಶ್ರೀ…

1 day ago