(ಸಾಂದರ್ಭಿಕ ಚಿತ್ರ ಕೃಪೆ- ನೆಟ್ )
ನಮ್ಮಯ ಹೆಮ್ಮೆಯ ಕನ್ನಡ ನಾಡಲಿ
ಚಿತ್ರದುರ್ಗವೆನ್ನುವ ನಗರವಿದೆ.
ಐತಿಹ್ಯ ಸಾರುವ ಕಲ್ಲಿನ ಕೋಟೆಯು
ನಗರದ ಮಧ್ಯದಿ ಶೋಭಿಸಿದೆ
ಬಹು ಹಿಂದಿನ ಕಾಲದಿ ನಾಯಕ ಹೊಯ್ಸಳ
ಚಾಲುಕ್ಯರೆಲ್ಲರು ಜೊತೆಗೂಡಿ.
ಏಳು ಸುತ್ತಿನಲಿ ಭದ್ರತೆ ಹೊಂದಿದ
ಕೋಟೆಯ ಕಟ್ಟಿದರೊಡಗೂಡಿ
ಮಸೀದಿ ದೇಗುಲ ಇದರೊಳಗಿರುವುದು
ಹಿಡಿಂಬೇಶ್ವರ ಸಹಿತದಲಿ
ಪಾಂಡವರಂದಿನ ಕಾಲದಿ ಅಜ್ಞಾತ
ವಾಸದಲಿದ್ದರು ಈ ಸ್ಥಳದಿ
ಮದಕರಿನಾಯಕರಾಳಿದ ಕಾಲದಿ
ಧಾಳಿಯನಿಟ್ಟನು ಹೈದರನು
ಒಳಗಡೆ ನುಸುಳುತ ಕಿಂಡಿಯ ಮೂಲಕ
ಬರುತಲಿ ಇದ್ದರು ಶತ್ರುಗಳು
ಮುದ್ದುಹನುಮನ ಪತ್ನಿಯು ಓಬವ್ವ
ಕಂಡಳು ದುರುಳರ ಆಗಮನ
ಮೌನದಿ ಒನಕೆಯ ಹಿಡಿಯುತ ನಸುಳುತ
ಜನರಿಗೆ ಬಡಿದಳು ಪುನಾ ಪುನ
ಒಡನೆಯೆ ದೊರೆಗಳ ಕಿವಿಗದು ಮುಟ್ಟಿತು
ಅರಿಗಳು ನುಸುಳುವ ಸಂಗತಿಯು
ಆದರೆ ಕಪಟದಿ ಓರ್ವನು ಇರಿಯುತ
ಓಬವ್ವಳ ಪ್ರಾಣವ ಹೀರಿದನು
ಒನಕೆಯ ಓಬವ್ವ ಮಾಡಿದ ತ್ಯಾಗವು
ದೇಶದ ಪ್ರೇಮವ ಸಾರುತಿದೆ
ದುರ್ಗದ ಮಹಿಮೆಗೆ ಒಪ್ಪ ಓರಣವ
ನೀಡಿದ ಖ್ಯಾತಿಯ ಕಥೆಯು ಇದೇ.
ಓಬವ್ವನ ಪ್ರತಿಮೆಯು ಇಂದಿಗು ಇರುವುದು
ದುರ್ಗದ ನಗರದಿ ಸಂತೋಷ
ತ್ಯಾಗಕೆ ಅರ್ಥವ ಹುಡುಕುವ ಜನರಿಗೆ
ಬೇರೇತಕೆ ಬೇಕಿದೆ ಸಂದೇಶ
#ಡಾ ವಾಣಿಶ್ರೀ ಕಾಸರಗೋಡು
ಗೋಕರ್ಣದಲ್ಲಿ ನಡೆದ 'ಅನ್ನಂ ಬ್ರಹ್ಮ' ಪ್ರವಚನದಲ್ಲಿ ರಾಘವೇಶ್ವರ ಭಾರತೀ ಶ್ರೀಗಳು ಭೋಜನವೇ ಅದ್ವೈತ…
ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರತಿಭಟನಾನಿರತ ಕೃಷಿ ವಿದ್ಯಾರ್ಥಿಗಳಿಗೆ ಸರ್ಕಾರ…
ಉಪಗ್ರಹ, ಡ್ರೋನ್, GIS, AI ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನ ಬಳಸಿ ರಾಜ್ಯ…
ಬರ್ಮಾ ಅಡಿಕೆ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಸಿಲ್ಚಾರ್ನ…
ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 10ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳು ಗೋಚರಿಸಿವೆ.…
ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯ ಎಂದು ರಾಮಚಂದ್ರಾಪುರ ಶ್ರೀ…