ಚಳಿಗಾಲದಲ್ಲಿ ಬಿಸಿಬಿಸಿ ಕಡಲೆಕಾಯಿ ತಿನ್ನುವುದೇ ಖುಷಿ. ಕಡಲೆಕಾಯಿ ತಿನ್ನುವಾಗ ಹೆಚ್ಚಿನ ಜನರು ಅದರ ಮೇಲಿನ ಕೆಂಪು ಸಿಪ್ಪೆಯನ್ನು ತೆಗೆದುತಿನ್ನುತ್ತಾರೆ. ಆದರೆ, ಈ ಸಿಪ್ಪೆಯಲ್ಲಿ ಆರೋಗ್ಯಕ್ಕೆ ಬೇಕಾಗುವ ಅಂಶಗಳಿವೆ ಎಂಬುದು ಎಷ್ಟೋ ಜನರಿಗೆ ಗೊತ್ತಿರುವುದೇ ಇಲ್ಲ. ಒಂದು ವೇಳೆ ಇದರ ಪ್ರಯೋಜನಗಳನ್ನು ತಿಳಿದುಕೊಂಡರೆ ಯಾವುದೇ ಕಾರಣಕ್ಕೂ ಕಸವೆಂದು ಎಸೆಯುವುದೇ ಇಲ್ಲ. ಇನ್ನು ಈ ಕೆಂಪು ಸಿಪ್ಪೆಯ ಪ್ರಯೋಜನಗಳು ಏನೆಂದು ನೋಡಿದರೆ:
• ಈ ಸಿಪ್ಪೆಯು ಒಂದು ಸಣ್ಣ ಪೌಷ್ಟಿಕಾಂಶದ ನಿಧಿಯಂತೆ ಇರುತ್ತದೆ. ಇದರಲ್ಲಿ ಫೈಬರ್, ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಇ, ವಿಟಮಿನ್ ಬಿ6 ಮತ್ತು ದೇಹಕ್ಕೆ ಅಗತ್ಯವಾದ ಖನಿಜಗಳು ಸಮೃದ್ಧವಾಗಿದೆ.
• ಈ ಕೆಂಪು ಸಿಪ್ಪೆಯಲ್ಲಿರುವ ಪಾಲಿಫಿನಾಲ್ ಗಳು ಮತ್ತು ಫ್ಲೇವನಾಯ್ಡ್ ಗಳು ದೇಹದಲ್ಲಿನ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡುತ್ತವೆ ಮತ್ತು ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುತ್ತವೆ.
• ಇದು ವಯಸ್ಸಾಗುವಿಕೆಯ ಪರಿಣಾಮಗಳನ್ನು ಕಡಿಮೆ ಮಾಡುವುದಲ್ಲದೇ, ರೋಗನೀರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
• ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಡುತ್ತದೆ.
• ರಕ್ತದಲ್ಲಿನ ಸಕ್ಕರೆ ಮಟ್ಟ ಹಠಾತ್ ಏರಿಕೆಯಾಗುವುದಿಲ್ಲ. ಹೀಗಾಗಿ ಮಧುಮೇಹಿಗಳಿಗೂ ಸುರಕ್ಷಿತ.
• ಕೆಂಪು ಸಿಪ್ಪೆಯೊಂದಗೆ ಕಡಲಡಕಾಯಿಯನ್ನು ನೆನೆಸಿಟ್ಟು ತಿನ್ನುವುದರಿಂದ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.
ಗುಜ್ಜೆ ಬಳಸಿ ತಯಾರಿಸುವ ಮಂಚೂರಿ ರುಚಿಕರ ಫ್ಯೂಷನ್ ತಿನಿಸಾಗಿದೆ. ಮನೆಯಲ್ಲಿ ಸುಲಭವಾಗಿ ಮಾಡುವ…
ಬಲಮುರಿ, ಎಡಮುರಿ ಕಾವೇರಿ ತೀರಗಳಿಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಮುಳುಗು ಪ್ರಕರಣಗಳು…
ರಾಜ್ಯದ ಕೆಲವೆಡೆ ಮಳೆಯಾದರೂ, ಕರಾವಳಿಯಲ್ಲಿ ಮುಂದಿನ ಐದು ದಿನ ಬಿಸಿ ಮತ್ತು ತೇವಾಂಶ…
ರಾಜ್ಯದಲ್ಲಿ ಸಿಡಿಲು ಬಡಿತದಿಂದ 1,026 ಸಾವುಗಳು ದಾಖಲಾಗಿದೆ. ‘ದಾಮಿನಿ’ ಆ್ಯಪ್ ಬಳಸಿ ಮುನ್ನೆಚ್ಚರಿಕೆ…
ರಕ್ಷಾ ಆಯುರ್ವೇದವು ಏಪ್ರಿಲ್ 24ರಂದು ಸ್ವರ್ಣಪ್ರಾಶನ ಕಾರ್ಯಕ್ರಮ ಆಯೋಜಿಸಿದೆ. ಇದು ಮಕ್ಕಳ ರೋಗ…
ಕರ್ನಾಟಕದಲ್ಲಿ ಇಂದಿನಿಂದ ಪ್ರೀ-ಮಾನ್ಸೂನ್ ಮಳೆ ಚಟುವಟಿಕೆ ಆರಂಭವಾಗಲಿದೆ. ಕರಾವಳಿ, ಮಲೆನಾಡಿನಲ್ಲಿ ತಕ್ಷಣ ಮಳೆ,…