Opinion

ಮೂತ್ರಪಿಂಡ ಕಾಯಿಲೆ ಜೀವಕ್ಕೇ ಮಾರಕ | ಕಿಡ್ನಿಯ ಸಮಸ್ಯೆಗಳು ಮತ್ತು ಪರಿಹಾರ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮೂತ್ರ ಪಿಂಡಗಳು ದೇಹದ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತವೆ. ರಕ್ತದೊತ್ತಡ ಕಾಪಾಡಿಕೊಳ್ಳುತ್ತವೆ. ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತವೆ. ಮೂತ್ರಪಿಂಡದಲ್ಲಿ ಉಂಟಾಗುವ ಸಮಸ್ಯೆಗಳು ಈ ಕಾರ್ಯಗಳ ಮೇಲೆ ಪರಿಣಾಮ ಬೀರಬಹುದು. ಮೂತ್ರಪಿಂಡದ ತೊಂದರೆಗಳು ನಮ್ಮ ದೇಶದಲ್ಲಿ ಅನೇಕ ಜನರನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ.

Advertisement
Advertisement

ಈ ಕಾಯಿಲೆಗೆ ವಿವಿಧ ಅಂಶಗಳು ಕಾರಣವಾಗಿವೆ ಮುಖ್ಯವಾಗಿ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಅನಾರೋಗ್ಯಕರ ಜೀವನ ಶೈಲಿ. ಈ ಕಿಡ್ನಿ ಸಮಸ್ಯೆಗಳನ್ನು ಸರಿಯಾಗಿ ಚಿಕಿತ್ಸೆ ನೀಡದೆ ಇದ್ದಲ್ಲಿ ಮೂತ್ರಪಿಂಡ ಅಂತಿಮವಾಗಿ ಕೆಲಸ ಮಾಡುವುದನ್ನು ನಿಲ್ಲಿಸಬಹುದು. kidney failure, chronic kidney diseases (CKD ) Nephrotic syndrom, polycystic kidney Diseases ಇತ್ಯಾದಿ ಮೂತ್ರಪಿಂಡ ರೋಗಗಳು ಉಂಟಾಗಬಹುದು.

ದೀರ್ಘಕಾಲದ ಮೂತ್ರಪಿಂಡ ಕಾಯಿಲೆ… ಸಾಮಾನ್ಯವಾಗಿ ಇದು ಅಧಿಕ ರಕ್ತದೊತ್ತಡ ಹಾಗೂ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ಇರುವುದರಿಂದ ಕಂಡು ಬರುತ್ತದೆ ದೀರ್ಘಕಾಲದವರೆಗೆ ಈ ಅಧಿಕ ರಕ್ತದ ಒತ್ತಡ (BP)ಹಾಗೂ ಹೆಚ್ಚಿನ ಸಕ್ಕರೆಯ ಮಟ್ಟವು(Diabetis) ಮೂತ್ರಪಿಂಡದ ರಕ್ತನಾಳಗಳನ್ನು ಹಾನಿಗೊಳಿಸುವುದು ಮತ್ತು ಮೂತ್ರಪಿಂಡದ ಕಾರ್ಯಗಳನ್ನು ಕ್ಷೀಣಿಸುತ್ತವೆ. ಡಯಾಲಿಸಿಸ್ ಜೊತೆಗೆ ಇದನ್ನು ನಿಯಂತ್ರಿಸಬೇಕಾಗುತ್ತದೆ.ರೋಗವು ಕೊನೆ ಹಂತಕ್ಕೆ ತಲುಪಿದಾಗ ಮೂತ್ರಪಿಂಡದ ಕಸಿ ಶಿಫಾರಸು ಮಾಡಲಾಗುತ್ತದೆ (Kidney transplantation )

Acute Renal failure :(ಕಿಡ್ನಿ ವೈಪಲ್ಯ) ತೀವ್ರವಾದ ಮೂತ್ರಪಿಂಡದ ಹಾನಿಯು ಸಾಮಾನ್ಯವಾಗಿ ಗಾಯಗಳು ಅಥವಾ ಅಪಘಾತಗಳಿಂದ ಮೂತ್ರಪಿಂಡಗಳಿಗೆ ನೇರ ಹಾನಿಯಾಗುವುದರಿಂದ ಉಂಟಾಗುತ್ತದೆ.

ಮೂತ್ರಪಿಂಡ ಕಾಯಿಲೆ ಲಕ್ಷಣಗಳು
– ಕಡಿಮೆಯಾದ ಮೂತ್ರ ವಿಸರ್ಜನೆ
– ಕೀಲುಗಳು ಪಾದಗಳು ಮುಖದಲ್ಲಿ ಊತ ಹಾಗೂ ನೋವು
– ಉಸಿರಾಟದ ತೊಂದರೆ
– ಆಯಾಸ, ನಿದ್ರಾಹೀನತೆ
– ಎದೆ ನೋವು ಗೊಂದಲ

Advertisement

ಪರಿಹಾರ 
– ಕಿಡ್ನಿ ವೈಫಲ್ಯದಿಂದ ರಕ್ಷಿಸಲು ಅನೇಕ ಗಿಡಮೂಲಿಕೆಗಳು ಬಳಸುವುದು ಉತ್ತಮ.. ವರುಣ ಗೋಕ್ಷುರ ಪುನರ್ನವ ಶುಂಠಿ ತ್ರಿಫಲ ಅರಶಿನ ಇತ್ಯಾದಿ ಹಾಗೂ ಇವುಗಳಿಂದ ತಯಾರಿಸಿದ ಅನೇಕ ಆಯುರ್ವೇದ ಔಷಧಿಗಳು ಕಿಡ್ನಿಯ ಸಮಸ್ಯೆಯ ಆರಂಭದಲ್ಲಿ ತೆಗೆದುಕೊಳ್ಳುವುದರಿಂದ ಕಿಡ್ನಿಯ ವೈಫಲ್ಯದಿಂದ ರಕ್ಷಿಸಬಹುದು ಇವುಗಳ ನೈಸರ್ಗಿಕ ಗುಣಲಕ್ಷಣಗಳೊಂದಿಗೆ ಮೂತ್ರಪಿಂಡದ ಕಾರ್ಯ ನಿರ್ವಹಣೆ ಸರಿಯಾಗಿ ಮಾಡಲು ಸಹಾಯ ಮಾಡುವುದು
– ಉತ್ತಮ ಆಹಾರ….ತಾಜಾ ತರಕಾರಿ ಹಣ್ಣುಗಳ ಸೇವನೆ, ಶುದ್ಧವಾದ ಹಿತಮಿತವಾದ ನೀರು ಸೇವನೆ, ಗೋಧಿಯ ಹುಲ್ಲು, ದಾಳಿಂಬೆ ಹಾಗೂ – ಲಿಂಬೆಹಣ್ಣಿನ ರಸ ಕಿಡ್ನಿಯ ರಕ್ಷಣೆ ಮಾಡುವಲ್ಲಿ ಸಹಾಯಕಾರಿಯಾಗುತ್ತವೆ.
– ಮಾಂಸಹಾರವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡುವುದರಿಂದ ಸಸ್ಯಾಹಾರ ಸೇವನೆ ಉತ್ತಮ.
– ಆರೋಗ್ಯಕರ ಜೀವನ ಶೈಲಿ ಜೊತೆಗೆ ಮಾನಸಿಕ ಒತ್ತಡ ನಿಗ್ರಹಿಸಲು ಧ್ಯಾನ ಯೋಗ ಪ್ರಾಣಾಯಾಮ ದಿನನಿತ್ಯ ವ್ಯಾಯಾಮ ಮಾಡುವುದರಿಂದ
– ಮೂತ್ರಪಿಂಡದ ರೋಗಗಳನ್ನು ತಡೆಗಟ್ಟಬಹುದು.
ಯಾವುದೇ ಕಿಡ್ನಿಯ ಸಮಸ್ಯೆಯ ಲಕ್ಷಣಗಳು ಕಂಡು ಬಂದ ತಕ್ಷಣವೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ.

ಬರಹ :
ಡಾ.ಜ್ಯೋತಿ ಕೆ, ಲಕ್ಷ್ಮೀ ಕ್ಲಿನಿಕ್ ಮಂಗಳೂರು. 94481 68053
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ

ದೇಸೀ ಗೋತಳಿ ಸಂರಕ್ಷಣೆಗೆ ಗ್ರಾಮೀಣ ಪ್ರದೇಶ, ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯವಿದೆ. ದನ…

6 hours ago

ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವಕ್ಕೆ ಆದ್ಯತೆ | ಮಹಿಳಾ ನೇತೃತ್ವದ ಅಭಿವೃದ್ಧಿಗೆ ಮುನ್ನುಡಿ

ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವ ಹೆಚ್ಚಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದ್ದು, ಮಹಿಳಾ ನೇತೃತ್ವದ…

8 hours ago

ಹಾವೇರಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಳ

ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಸುರಿಯುತ್ತಿದ್ದು,…

8 hours ago

ಬಸವಸಾಗರ ಜಲಾಶಯದಿಂದ ನದಿಗೆ ಹರಿಸುವ ನೀರಿನ ಪ್ರಮಾಣದಲ್ಲಿ ಇಳಿಕೆ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯದಿಂದ ನದಿಗೆ ಹರಿಸುವ…

8 hours ago

ಫಸಲ್ ವಿಮಾ ಯೋಜನೆ | ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ

2025 ರ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ…

8 hours ago