Advertisement
ಸುದ್ದಿಗಳು

ನೆಲ್ಯಾಡಿ- ಕೊಕ್ಕಡ ರಸ್ತೆ ಅವ್ಯವಸ್ಥೆ | ದುರಸ್ತಿ ಯಾವಾಗ ಎಂದು ಕೇಳುತ್ತಾರೆ ಗ್ರಾಮದ ಜನ |

Share

ಕಡಬ ತಾಲೂಕಿನ ನೆಲ್ಯಾಡಿಯಿಂದ ಕೊಕ್ಕಡ ವನ್ನು ಸಂಪರ್ಕಿಸುವ ನೆಲ್ಯಾಡಿ ಪುತ್ಯೆ‌ ರಸ್ತೆಯ ಕೇವಲ ಅರ್ಧ ಕಿಲೋ ಮೀಟರ್ ರಸ್ತೆ ಜನಸಂಚಾರಕ್ಕೆ ಅಯೋಗ್ಯವಾದ ರಸ್ತೆಯಾಗಿ ಮಾರ್ಪಟ್ಟಿದೆ.

ಪ್ರಸ್ತುತ ದಿನಗಳಲ್ಲಿ ನೆಲ್ಯಾಡಿಯು ವ್ಯಾಪಾರ, ಕೃಷಿ ಚಟುವಟಿಕೆ, ಶಾಲಾ-ಕಾಲೇಜು ಹೀಗೆ ನಾನಾ ವಿಷಯದಲ್ಲಿ ಬೆಳೆದುನಿಂತ ಮುಖ್ಯ ಪೇಟೆಯಾಗಿದೆ. ಹೀಗಾಗಿ ಕೊಕ್ಕಡ , ಪುತ್ಯೆ, ಹಾರ ಪ್ರದೇಶದ ಜನರು ನೆಲ್ಯಾಡಿಯನ್ನು ಹೆಚ್ಚಿನ ವಹಿವಾಟುಗಳಿಗಾಗಿ ದಿನನಿತ್ಯ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಇಲ್ಲಿನ ಜನರು ಇದೇ ಪುತ್ಯೆ ಮಾರ್ಗವನ್ನು‌ ಬಳಸಿಕೊಂಡು ನೆಲ್ಯಾಡಿಗೆ ಹೋಗಬೇಕಾಗಿದೆ. ಆದರೆ ಸಂಚಾರಕ್ಕೆ ಮಾತ್ರಾ ಅಯೋಗ್ಯವಾಗಿದೆ.

ಈ ಭಾಗದ ರಸ್ತೆಯ ಮಧ್ಯದಲ್ಲಿ ಒಂದು ಸೇತುವೆ ಇದ್ದು, ಸೇತುವೆಯ ಒಂದು ಭಾಗ ಕಡಬ ತಾಲೂಕಿಗೆ ಸೇರಿದರೆ ಸೇತುವೆಯ ಇನ್ನೊಂದು ಭಾಗದ ರಸ್ತೆಯು ಬೆಳ್ತಂಗಡಿ ತಾಲೂಕಿಗೆ ಸೇರಿದೆ. ಪ್ರಸ್ತುತ ಈ ರಸ್ತೆಯು ಜಿಲ್ಲಾ ಪಂಚಾಯತ್ ರಸ್ತೆಯಿಂದ ಕಳೆದ ಐದು ತಿಂಗಳ ಹಿಂದೆಯೇ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದೆ. ಹಾಗೂ ಈ ರಸ್ತೆಯ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆ ನೋಡಿಕೊಳ್ಳುತ್ತಿದೆ.

ಕರ್ನಾಟಕ ಕೇರಳದ ಗಡಿಭಾಗವಾದ ಸುಳ್ಯ ಸಮೀಪದ ಪೈಚಾರಿನಿಂದ ಆರಂಭಗೊಳ್ಳುವ ಈ ರಸ್ತೆಯು ಬೆಳ್ಳಾರೆ – ಸವಣೂರು- ಆಲಂಗಾರು – ನೆಲ್ಯಾಡಿ- ಕೊಕ್ಕಡ- ಪಟ್ರಮೆ -ಧರ್ಮಸ್ಥಳ – ಉಜಿರೆ- ಮುಂಡಾಜೆ ಮೂಲಕ ದಿಡುಪೆ ಸೇರಲಿದೆ. ರಸ್ತೆಯು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಕಾರಣ ಇಲ್ಲಿನ ಸ್ಥಳೀಯ ಆಡಳಿತಗಳು ಕೂಡ ಈ ರಸ್ತೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯನ್ನು ಪ್ರಶ್ನಿಸಿದರೆ ನಮಗೆ ಸರಕಾರದಿಂದ ಅನುದಾನ ದೊರೆತಿಲ್ಲ ಹಾಗಾಗಿ ಕಾಮಗಾರಿಯನ್ನು ಆರಂಭಿಸಲು ಆಗುವುದಿಲ್ಲ ಎನ್ನುತ್ತಾರೆ.

ಸರ್ಕಾರ, ಆಡಳಿತ ಎಲ್ಲವೂ ಇದ್ದರೂ ಇಚ್ಛಾಶಕ್ತಿ ಮಾತ್ರ ನಿಮ್ಮಲ್ಲಿಲ್ಲ. ಚುನಾವಣೆ ಹತ್ತಿರ ಬಂದಾಗ ಮತಪ್ರಚಾರಕ್ಕಾಗಿ ಬರುವ ಜನಪ್ರತಿನಿಧಿಗಳು ಈಗೊಂದು ಬಾರಿ ಈ ರಸ್ತೆಯಲ್ಲಿ ಪ್ರಯಾಣಿಸಿದರೆ ಇಲ್ಲಿನ ಜನರ ಕಷ್ಟ ಅರ್ಥ ಆದೀತು ಅನ್ನುವುದು ಇಲ್ಲಿನ ಜನರ ವಿಷಾದ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಸಮರ್ಥ ಸಮನ್ಯು

ಸಮರ್ಥ ಸಮನ್ಯು , - ಬರಹಗಾರರು, ವಿಮರ್ಶಕರು.

Published by
ಸಮರ್ಥ ಸಮನ್ಯು

Recent Posts

ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದಿಲ್ಲ

ಮೈಸೂರು ಜಿಲ್ಲೆಯ ಮೇಲ್ಸೇತುವೆ ಕಾಮಗಾರಿಗಳ ವೇಳೆ ಯಾವುದೇ ಮರಗಳನ್ನು ಕಡಿಯುವುದಿಲ್ಲ ಎಂದು ಸಂಸದ…

41 minutes ago

ರಾಜ್ಯದ ಹಲವೆಡೆ ಮಳೆ; ಕುಕನೂರಿನಲ್ಲಿ 7 ಸೆಂ.ಮೀ ಮಳೆ

ರಾಜ್ಯದ ಒಳನಾಡಿನ ಕೆಲವೆಡೆ ಮಳೆಯಾಗಿದ್ದು, ಕುಕನೂರಿನಲ್ಲಿ 7 ಸೆಂ.ಮೀ ಮಳೆಯಾಗಿದೆ. ಕಲಬುರಗಿಯಲ್ಲಿ 41…

45 minutes ago

ಹವಾಮಾನ ವರದಿ | 07-05-2026 | ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು : ಕರಾವಳಿ-ಮಲೆನಾಡಿನಲ್ಲಿ ಮುಂದಿನ 10 ದಿನ ಮಳೆ ಸಾಧ್ಯತೆ,

08.05.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ ರಾಜ್ಯದ ಹಲವು…

18 hours ago

ಕೆಲವು ರಾಜ್ಯಗಳಲ್ಲಿ ಸುಡುವ ಬಿಸಿಲು, ಇನ್ನೂ ಕೆಲವು ಕಡೆ ಮಳೆ – ದೇಶಾದ್ಯಂತ ಹವಾಮಾನ ವೈಪರೀತ್ಯ

ದೇಶದ ಹಲವೆಡೆ ಬಿಸಿಗಾಳಿ ತೀವ್ರವಾಗಿದ್ದು, ಕೆಲ ರಾಜ್ಯಗಳಲ್ಲಿ ಮಳೆ ಹಾಗೂ ಮೋಡ ಕವಿದ…

1 day ago

ಪರಿಸರ ಸಂರಕ್ಷಣೆಯಿಂದ ಮಾತ್ರ ಸುಸ್ಥಿರ ಆರೋಗ್ಯ ಸಾಧ್ಯ

ಪರಿಸರ ಮಾಲಿನ್ಯ ಮತ್ತು ಹಸಿರು ಹೊದಿಕೆ ನಾಶದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಪ್ರಕೃತಿ…

1 day ago

ಸ್ಥಳೀಯ ಸಂಸ್ಥೆ ಚುನಾವಣೆ ಶೀಘ್ರ – ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದಲ್ಲಿ ಬಾಕಿ ಇರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಶೀಘ್ರದಲ್ಲೇ ನಡೆಸಲು ಸರ್ಕಾರ ಸಿದ್ಧವಿದೆ…

1 day ago