ಅಭಿವೃದ್ಧಿ ನಿರಂತರ. ಯಾವತ್ತೂ ಶಿಥಿಲದಿಂದ ಸುಧಾರಣೆಯ ಕಡೆಗೆ. ಆದರೆ ಗ್ರಾಮೀಣ ಭಾಗ ಕಟ್ಟ-ಕೊಲ್ಲಮೊಗ್ರ ಪ್ರದೇಶ ಜನರಿಗೆ ಹಾಗಲ್ಲ ಶಿಥಿಲದಿಂದ ಶಿಥಿಲಾವಸ್ಥೆ ಕಡೆಗೆ..!. ಬುಧವಾರದ ಮಳೆಗೆ ಇದ್ದ ಸೇತುವೆ ಕೊಚ್ಚಿ ಹೋಗಿ ಈ ಸ್ಥಿತಿ ಬಂದಿದೆ..!. ಘಟನೆ ಇದು.
ಸುಳ್ಯ ತಾಲೂಕಿನ ಕಟ್ಟ-ಕೊಲ್ಲಮೊಗ್ರ ಗ್ರಾಮೀಣ ಭಾಗ. ಕಾಡು ಹಾಗೂ ಶಿಥಿಲ ರಸ್ತೆಯ ಮೂಲಕ ಸಂಪರ್ಕ ಇರುವ ಊರು. ಇಲ್ಲಿ ಕಟ್ಟ – ಕೊಲ್ಲಮೊಗ್ರ ಮಾರ್ಗ ಮಧ್ಯೆ ಮುಳುಗು ಸೇತುವೆ ಇದೆ. ಕಳೆದ ಸುಮಾರು ಆರು ವರ್ಷದಿಂದ ಸ್ವಲ್ಪ ಸ್ವಲ್ಪ ಶಿಥಿಲಾವಸ್ಥೆಯಿಂದ ಕೂಡಿತ್ತು. ಬುಧವಾರ ಸುರಿದ ಮಳೆಗೆ ಇದ್ದ ಸೇತುವೆಯೂ ಸಂಪೂರ್ಣವಾಗಿ ಶಿಥಿಲಗೊಂಡಿದೆ.
ಈ ಹಿಂದೆ ದ್ವಿಚಕ್ರ ವಾಹನ ಸವಾರರು ದಾಟುತ್ತಿದ್ದು ಈಗ ದ್ವಿಚಕ್ರವಾಹನಕ್ಕೂ ಸವಾರಿ ಕಷ್ಟವಾಗಿದೆ. ಪಾದಾಚಾರಿಗಳಿಗೆ ಮಾತ್ರಾ ಹೋಗುವ ಸ್ಥಿತಿಗೆ ಬಂದಿದೆ. ಆಡಳಿತವು ಈ ಕಡೆಗೆ ಗಮನಹರಿಸಬೇಕಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಸೇತುವೆಗಳು ಸಂಪರ್ಕದ ದೃಷ್ಟಿಯಿಂದ ಮಹತ್ವ ಪಡೆದುಕೊಳ್ಳುತ್ತದೆ. ಅತೀ ಅಗತ್ಯವಾಗಿ ದುರಸ್ತಿ ಆಗಬೇಕಿದೆ ಎಂಬುದು ಜನರ ಒತ್ತಾಯ.
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…
ಆಲಮಟ್ಟಿ ಕೃಷ್ಣಾ ಜಲಾಶಯದಲ್ಲಿ 114.896 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೆಲವೇ…
ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಬಿಟ್ಟುಬಿಟ್ಟು ಮಳೆ ಮುಂದುವರಿಯುವ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 66 ರಷ್ಟು ಮಳೆ ಕೊರತೆಯಿಂದ ಕೇವಲ ಶೇ.…
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…
ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…