ಅಭಿವೃದ್ಧಿ ನಿರಂತರ. ಯಾವತ್ತೂ ಶಿಥಿಲದಿಂದ ಸುಧಾರಣೆಯ ಕಡೆಗೆ. ಆದರೆ ಗ್ರಾಮೀಣ ಭಾಗ ಕಟ್ಟ-ಕೊಲ್ಲಮೊಗ್ರ ಪ್ರದೇಶ ಜನರಿಗೆ ಹಾಗಲ್ಲ ಶಿಥಿಲದಿಂದ ಶಿಥಿಲಾವಸ್ಥೆ ಕಡೆಗೆ..!. ಬುಧವಾರದ ಮಳೆಗೆ ಇದ್ದ ಸೇತುವೆ ಕೊಚ್ಚಿ ಹೋಗಿ ಈ ಸ್ಥಿತಿ ಬಂದಿದೆ..!. ಘಟನೆ ಇದು.
ಸುಳ್ಯ ತಾಲೂಕಿನ ಕಟ್ಟ-ಕೊಲ್ಲಮೊಗ್ರ ಗ್ರಾಮೀಣ ಭಾಗ. ಕಾಡು ಹಾಗೂ ಶಿಥಿಲ ರಸ್ತೆಯ ಮೂಲಕ ಸಂಪರ್ಕ ಇರುವ ಊರು. ಇಲ್ಲಿ ಕಟ್ಟ – ಕೊಲ್ಲಮೊಗ್ರ ಮಾರ್ಗ ಮಧ್ಯೆ ಮುಳುಗು ಸೇತುವೆ ಇದೆ. ಕಳೆದ ಸುಮಾರು ಆರು ವರ್ಷದಿಂದ ಸ್ವಲ್ಪ ಸ್ವಲ್ಪ ಶಿಥಿಲಾವಸ್ಥೆಯಿಂದ ಕೂಡಿತ್ತು. ಬುಧವಾರ ಸುರಿದ ಮಳೆಗೆ ಇದ್ದ ಸೇತುವೆಯೂ ಸಂಪೂರ್ಣವಾಗಿ ಶಿಥಿಲಗೊಂಡಿದೆ.
ಈ ಹಿಂದೆ ದ್ವಿಚಕ್ರ ವಾಹನ ಸವಾರರು ದಾಟುತ್ತಿದ್ದು ಈಗ ದ್ವಿಚಕ್ರವಾಹನಕ್ಕೂ ಸವಾರಿ ಕಷ್ಟವಾಗಿದೆ. ಪಾದಾಚಾರಿಗಳಿಗೆ ಮಾತ್ರಾ ಹೋಗುವ ಸ್ಥಿತಿಗೆ ಬಂದಿದೆ. ಆಡಳಿತವು ಈ ಕಡೆಗೆ ಗಮನಹರಿಸಬೇಕಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಸೇತುವೆಗಳು ಸಂಪರ್ಕದ ದೃಷ್ಟಿಯಿಂದ ಮಹತ್ವ ಪಡೆದುಕೊಳ್ಳುತ್ತದೆ. ಅತೀ ಅಗತ್ಯವಾಗಿ ದುರಸ್ತಿ ಆಗಬೇಕಿದೆ ಎಂಬುದು ಜನರ ಒತ್ತಾಯ.
ಬೇಸಿಗೆ(summer) ಮತ್ತು ಬೆವರು(Sweating) ಒಂದು ಪರಿಪೂರ್ಣ ಸಮೀಕರಣವಾಗಿದೆ. ಬೇಸಿಗೆಯಲ್ಲಿ ಬೆವರುವುದು ಒಂದು ದೊಡ್ಡ…
ಗ್ಯಾರಂಟಿ(Guarantee) ಘೋಷಣೆ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಇದೀಗ ಒಂದು ವರ್ಷ…
ದ್ವಿತೀಯ ಪಿಯುಸಿಯ ಎರಡನೇ ಪರೀಕ್ಷೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶ ಘೋಷಣೆಯಾದ…
ದೇಶದ ಮಹಾ ಸಮರ ಲೋಕಸಭೆ ಚುನಾವಣೆ ೨೦೨೪. ದೇಶದ ಜನತೆ ಬಹಳ ಕುತೂಹಲದಿಂದ…
ಮೇ 24ರಿಂದ ರಾಜ್ಯದಾದ್ಯಂತ ಮಳೆಯ ಪ್ರಮಾಣವೂ ಕಡಿಮೆಯಾಗುವ ಮುನ್ಸೂಚನೆ ಇದೆ. ಜೂನ್ ಮೊದಲ…
ಮಳೆಗಾಲದ ಆರಂಭದಲ್ಲಿ ಮೂಲಭೂತ ಸೇವೆ ಎಂದು ಇಂದು ಗ್ರಾಮೀಣ ಭಾಗದಲ್ಲೂ ಬಯಸುವ ವಿದ್ಯುತ್…