ಸರಕಾರಗಳು ಇವರ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಂಡಿದೆ. ಆದರೂ ಸೌಲಭ್ಯಗಳು ಇನ್ನೂ ತಲಪುತ್ತಿಲ್ಲ. ದಾಖಲೆಗಳು ಹೇಳುತ್ತವೆ ಇವರು ಕ್ರೈಸ್ತರೆಂದು…!. ಇವರು ಸುಳ್ಯ ತಾಲೂಕಿನ ಪಂಜ ಪರಿಸರದಲ್ಲಿರುವ ಕೊರಗ ಸಮುದಾಯದ ಹಲವು ಕುಟುಂಬಗಳು ಇಂದಿಗೂ ಮೂಲಭೂತ ಸೌಲಭ್ಯದ ಕೊರತೆಯಿಂದ ಬಳಲುತ್ತಿವೆ. ಮಾನವೀಯ ನೆಲೆಯಲ್ಲಿ ಇವರಿಗೆ ಸೌಲಭ್ಯಗಳು ಈಗ ತಲುಪಬೇಕಿದೆ.
ಸೌಲಭ್ಯಕ್ಕಾಗಿ , ಮನೆ ನಿರ್ಮಾಣಕ್ಕಾಗಿ ಕಚೇರಿಗಳಿಗೆ ಅಲೆದೂ ಅಲೆದೂ ಈಗ ಕಚೇರಿ ಎಂದಾಗಲೇ ಇವರಲ್ಲಿ ಕೆಲವರಿಗೆ ಅಲರ್ಜಿ ಆಗಿದೆ. ನಮಗೇನು ಸಿಗಲ್ಲ ಎಂಬ ಭಾವನೆ ಇದೆ. ರಾಜಕೀಯ ಮುಖಂಡರೂ ಚುನಾವಣೆಯ ವೇಳೆಗೆ ಬರುತ್ತಾರೆ ಮತ್ತೆ ಈ ಕಡೆ ಬರಲ್ಲ ಎನ್ನುತ್ತಾರೆ.
ಆದರೆ ರಾಜಕೀಯ ಮುಖಂಡರು ಹೇಳುತ್ತಾರೆ, ಚುನಾವಣೆ ನಂತರ ಮನೆ ನಿರ್ಮಾಣ ಸೇರಿದಂತೆ ಮೂಲಭೂತ ಸೌಲಭ್ಯಕ್ಕಾಗಿ ಅವರನ್ನು ಕರೆದುಕೊಂಡು ಹೋದರೂ ಮತ್ತೆ ಬರಲ್ಲ, ಹೀಗಾಗಿ ಸೌಲಭ್ಯ ನೀಡುವುದಾದರೂ ಹೇಗೆ ಎಂದು ಹೇಳುತ್ತಾರೆ. ಮತಾಂತರ ಆಗಿರುವುದು ಒಂದು ಭಾಗವಾದರೆ, ಇನ್ನೂ ಮತಾಂತರ ಆಗದೇ ಇರುವವರಿಗೂ ಸೌಲಭ್ಯಗಳು ದೊರೆತಿಲ್ಲ, ಈಗಲೂ ದುಸ್ಥಿತಿಯಲ್ಲಿರುವ ಮನೆಯಲ್ಲಿ ಬದುಕುತ್ತಿದ್ದಾರೆ.
ಸದ್ಯ ಮತಾಂತರ ಆಗಿರಬಹುದು , ಕೆಲವರು ಹೆಸರುಗಳು ಬದಲಾಗಿರಬಹುದು , ಧರ್ಮ ಹಾಗೂ ಹೆಸರಿನ ದಾಖಲೆಗಳಲ್ಲಿ ಲೋಪ ಇರಬಹುದು, ಅದೇನೇ ಇದ್ದರೂ ಮಾನವೀಯತೆಯಿಂದ ಮೇಲಾದ್ದು ಯಾವುದೂ ಇಲ್ಲ. ಈಗ ಸರಕಾರಗಳು, ಇಲಾಖೆಗಳು, ರಾಜಕೀಯ ಮುಖಂಡರು ಮಾನವೀಯತೆಯ ಆಧಾರದಲ್ಲಿಯೇ ಇಲ್ಲಿನ ಕುಟುಂಬಗಳಿಗೆ ಮೂಲಭೂತ ಸೌಲಭ್ಯ ಒದಗಿಸಿಕೊಡುವ ಕೆಲಸ ಆಗಬೇಕಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಕರ್ತವ್ಯ ನಿರ್ವಹಿಸುವ ವೈದ್ಯರು ಬೆಳಗ್ಗೆ 9 ಗಂಟೆಯಿಂದ…
ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾದ ಕೃಷಿ ಉತ್ಪನ್ನಗಳ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ ಎಂದು ಗದಗ…
ಕೆಂಪು ಮೆಣಸಿನಕಾಯಿಗೆ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ-ಎಂಐಎಸ್ ಅಡಿಯಲ್ಲಿ ಬೆಲೆ ಕೊರತೆ ಪಾವತಿ-ಪಿಡಿಪಿ ಯೋಜನೆಯನ್ನು…
ಅನಧಿಕೃತ ಮರಳು ಸಾಗಾಟ ತಡೆಯಲು ಜಿಲ್ಲಾ ಮಟ್ಟದಲ್ಲಿ ರಚಿಸಲಾಗಿರುವ ಕಾರ್ಯಪಡೆ ಮರಳು ಸಮಿತಿಗೆ…
ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಭಯ ಬಿಟ್ಟು, ಪೂರ್ವಭಾವಿ ತಯಾರಿ ಮಾಡಿಕೊಂಡು, ಆತ್ಮವಿಶ್ವಾಸದಿಂದ ಪರೀಕ್ಷೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತಾರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490.