ತುಳುನಾಡಿನ ದೈವಗಳನ್ನು ಏಕೆ ನಂಬಬೇಕು ? | ದೈವಾರಾಧನೆಗೆ ಇಲ್ಲಿ ಮಹತ್ವ ಏಕಿದೆ? | ಇಲ್ಲಿದೆ ಪ್ರತ್ಯಕ್ಷ ಘಟನೆ |

April 1, 2021
10:29 PM

ತುಳುನಾಡು ಎಂದರೆ ದೈವಗಳ ನಾಡು. ದೈವಾರಾಧನೆಯೇ ಇಲ್ಲಿ ಪ್ರಮುಖ. ಹೀಗಾಗಿ ನಂಬಿದವನಿಗೆ ಇಂಬು ಖಚಿತ ಎಂಬುದು ಹಿಂದಿನಿಂದೂ ನಡೆದುಕೊಂಡಿದೆ ಬಂದಿದೆ. ಅಂತಹ ಪವಿತ್ರ ದೈವೀ ಶಕ್ತಿಗಳ ಪ್ರಕಟೀಕರಣವಾಗಿದೆ. ಮಂಗಳೂರಿನಲ್ಲಿ ಕೊರಗಜ್ಜ ದೈವಸ್ಥಾನ ಅಪವಿತ್ರಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೇ ಕ್ಷೇತ್ರದಲ್ಲಿ ತಪ್ಪೊಪ್ಪಿ ಇದೀಗ ಪೊಲೀಸ್‌ ಇಲಾಖೆಯೂ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಯ ಹಲವು ಕಡೆಗಳಲ್ಲಿ ಕೊರಗಜ್ಜ ದೈವಸ್ಥಾನ ಇದೆ. ಅತ್ಯಂತ ಕಾರಣಿಕವಾದ ಈ ದೈವಗಳ ಆರಾಧನೆಯೂ ಶ್ರದ್ಧಾ ಭಕ್ತಿಯಿಂದ ಎಲ್ಲೆಡೆ ನಡೆಯುತ್ತದೆ. ಅಂತಹ ದೈವದ ಹುಂಡಿಯನ್ನು ಅಪವಿತ್ರಗೊಳಿಸಿದ ಘಟನೆ ನಡೆದಿತ್ತು. ಇದಕ್ಕಾಗಿ ಪೊಲೀಸ್‌ ಇಲಾಖೆಯೂ ಕ್ರಮ ಕೈಗೊಂಡಿತ್ತು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿತ್ತು.ಆದರೆ ಆರೋಪಿ ಪತ್ತೆಯಾಗಲಿಲ್ಲ.

ಇದೀಗ ಎಮ್ಮೆಕೆರೆಯಲ್ಲಿ ನಡೆದ ದೈವಸ್ಥಾನದ ಜಾತ್ರೆಯಲ್ಲಿ ವ್ಯಕ್ತಿಯೊಬ್ಬ ದೈವದ ಮುಂದೆ ಕ್ಷಮೆ ಕೇಳಿದ್ದು , ಎಲ್ಲಾ ಘಟನೆಗಳನ್ನು ವಿವರಿಸಿದ್ದಾನೆ, ಒಬ್ಬ ಮೃತಪಟ್ಟಿದ್ದು ಇನ್ನೊಬ್ಬನ ಆರೋಗ್ಯವೂ ಹದಗೆಟ್ಟಿದೆ ಎಂದೂ ಹೇಳಿದ್ದ.
ಈ ಘಟನೆಯ ಬಳಿಕ ಪೊಲೀಸ್‌ ಇಲಾಖೆ ಮಾಹಿತಿ ಪಡೆದಿದೆ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಯುತ್ತಿದೆ.

ತುಳುನಾಡಿನ ದೈವ ದೇವರುಗಳು ನಂಬಿಕೆಯ ಪ್ರತೀಕಗಳು. ಹೀಗಾಗಿ ಇಲ್ಲಿ ದೈವಾರಾಧನೆ, ದೇವತಾ ಆರಾಧನೆಗಳಲ್ಲಿ ಎಲ್ಲೂ ಲೋಪಗಳು ನಡೆಯುವುದಿಲ್ಲ, ಮಾತ್ರವಲ್ಲ ಆ ದೈವೀ ಶಕ್ತಿಗಳ ಮುಂದೆ, ನಂಬಿಕೆಗಳ ಮುಂದೆ ಯಾವ ಆಟವೂ ನಡೆಯುವುದಿಲ್ಲ ಎನ್ನುವುದೂ ತಿಳಿಯುತ್ತದೆ ಎಂದು ಭಕ್ತರು ಅಭಿಪ್ರಾಯ ಪಡುತ್ತಾರೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ ; ಔಷಧಿಗಿಂತ ಉತ್ತಮ ಜೀವನಶೈಲಿಯೇ ಪರಿಹಾರ: ರಾಘವೇಶ್ವರ ಶ್ರೀ
August 3, 2026
8:43 PM
by: ದ ರೂರಲ್ ಮಿರರ್.ಕಾಂ
ಆಹಾರ-ನಿದ್ರೆ ಪರಸ್ಪರ ಪೂರಕ; ಉತ್ತಮ ನಿದ್ರೆಗೆ ಹಸಿವು ಅಗತ್ಯ: ರಾಘವೇಶ್ವರ ಶ್ರೀ
August 2, 2026
9:50 PM
by: ದ ರೂರಲ್ ಮಿರರ್.ಕಾಂ
ಮೊಬೈಲ್ ನೋಡುತ್ತಾ ಊಟ ಮಾಡಬೇಡಿ, ಶಿಸ್ತಿನ ಜೀವನವೇ ಆರೋಗ್ಯದ ರಹಸ್ಯ – ರಾಘವೇಶ್ವರ ಶ್ರೀ
August 1, 2026
7:39 PM
by: ದ ರೂರಲ್ ಮಿರರ್.ಕಾಂ
ಸಮಯ ತಪ್ಪಿ ತಿಂದ ಆಹಾರವೇ ವಿಷವಾಗಬಹುದು – ರಾಘವೇಶ್ವರ ಶ್ರೀ
July 31, 2026
9:21 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror