ನಮ್ಮ ಕೃಷಿಯಲ್ಲಿ ಬಿಸಿನೆಸ್ಸಿಗೆ (Agri business) ಅನುಯೋಜ್ಯವಾದ ದೃಷ್ಟಿಕೋನದ ಕೊರತೆ ಇದೆ. ನಮ್ಮ ದೀರ್ಘಾವಧಿ ಬೆಳೆಗಳು ಉದ್ಯಮಶೀಲತೆಗೆ ಅತ್ಯಂತ ಸಮರ್ಪಕವಾಗಿವೆ. ಅದರ ಮಧ್ಯೆ ನಾವು ಅನಾವಶ್ಯಕವಾಗಿ ಮಾರುಕಟ್ಟೆಗೆ ಅವಶ್ಯಕತೆವಲ್ಲದ ತಳಿಗಳ ಬಗ್ಗೆ ಕನ್ಫ್ಯೂಸ್ ಆಗಬಾರದು. ಅದೇ ರೀತಿ ಎಡೆ ಬೆಳೆಗಳ ಬಗ್ಗೆಯೂ ಕನ್ಫ್ಯೂಸ್ ಆಗಬಾರದು.
ನಮ್ಮದೇ ಒಂದೊಂದು ಕ್ಲಸ್ಟರ್ ರೂಪಿಕರಣ ಮಾಡಿ ಅದರ ಉತ್ಪನ್ನಗಳನ್ನು ಉತ್ತರ ಭಾರತದ ಗ್ರಾಹಕರ ಕ್ಲಸ್ಟರ್ಗೆ ತಲುಪಿಸುವ ಪ್ರಯತ್ನ ಮಾಡಬಹುದು. ಹವಾಮಾನ ವೈಪರಿತ್ಯ ಹಾಗೂ ಕಾರ್ಮಿಕರ ವೆಚ್ಚದಿಂದಲಾಗಿ ಅಡಿಕೆಯ ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ. 2016 ರಲ್ಲಿ 200 ರೂಪಾಯಿ ಉತ್ಪಾದನೆ ವೆಚ್ಚ ಇದ್ದ ಅಡಿಕೆಗೆ ಈಗ 300-350 ರೂಪಾಯಿ ವೆಚ್ಚಕ್ಕೆ ತಲುಪಿದೆ. ಉದ್ಯಮಶೀಲತೆ ಹಾಗೂ ಮೌಲ್ಯವರ್ಧನೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಆದಾಯಕ್ಕೂ ಸ್ಥಿರ ಮಾರುಕಟ್ಟೆಗೂ ಪೂರಕವಾಗುವಲ್ಲದು.
ಡಾ ವೇಣುಗೋಪಾಲ ಕಳೆಯತ್ತೋಡಿಯವರು ಸಾವಯವ ಕೃಷಿಯ ಮಹತ್ವವನ್ನು ತಿಳಿಸಿದರು. ಶ್ರೀಹರಿ ಭಟ್ ಇವರು ತಂತ್ರಜ್ಞಾನದ ಬಳಕೆಯಿಂದ ಕಾರ್ಮಿಕ ಸಮಸ್ಯೆಗೆ ಪರಿಹಾರ ರೋಪ್ ವೆ ಯಂತಹ ಪರಿಹಾರದ ಮಾರ್ಗವನ್ನು ಸೂಚಿಸಿದರು. ಕಸ್ತೂರಿ ಅಡ್ಯಂತಾಯ 30 ದನದಿಂದ 25,000 ರಿಂದ 30,000 ಆದಾಯ ಪಡೆಯುವ ಬಗ್ಗೆ ತಿಳಿಸಿದರು.
ವಿಶ್ವೇಶ್ವರ ಭಟ್ ಬಂಗಾರಡ್ಕ ಇವರು ಸರ್ಕಾರ ಯಾವ ರೀತಿ ಸಣ್ಣ ಹಿಡುವಳಿದಾರರ ಹಿತವನ್ನು ಗಮನಿಸುತ್ತದೆ ಎಂಬುದನ್ನು ತಿಳಿಸಿದರು. ಯಾವ ರೀತಿ ವೆಚ್ಚಗಳನ್ನು ನಿಯಂತ್ರಿಸಬಹುದು ಹಾಗೂ ನಷ್ಟದ ಮಾರ್ಗಗಳನ್ನು ತಡೆಯಬಹುದು ಎಂದು ತಿಳಿಸಿದರು. ಸುರೇಶ್ ಗೌಡ ಅವರು ತಮ್ಮ ಬಸಳೆ ಕೃಷಿಯ ಯಶೋಗಾಥೆಯನ್ನು ತಿಳಿಸಿದರು.ಗೋವಿಂದ ಭಟ್ ಮಾಣಿಲ ಇವರು ತಮ್ಮ 22 ಸುರಂಗಗಳ ಮೂಲಕ ಪಡೆಯುವ ನೀರಿನ ನೀರಾವರಿ ಸೌಲಭ್ಯವನ್ನು ತಿಳಿಸಿದರು.
ಕಾಸರಗೋಡು ಜಿಲ್ಲೆಯ ದೈಗೋಳಿಯಲ್ಲಿರುವ ಸಾಯಿನಿಕೇತನ ಸೇವಾಶ್ರಮಕ್ಕೆ ಮಂಗಳೂರು ಎಂಆರ್ಪಿಎಲ್ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ ಕಟ್ಟದ…
ಮತದಾನ ಏಕೆ ಮಾಡಬೇಕು, ಯೋಚಿಸಿ ಏಕೆ ಮತದಾನ ಮಾಡಲೇಬೇಕು..? ಈ ಬಗ್ಗೆ ಅಭಿಪ್ರಾಯ…
ರಾಜ್ಯಕ್ಕೆ ಕೇಂದ್ರದಿಂದ(Central Govt) ಬರಬೇಕಾದ ಬರ ಪರಿಹಾರ ಕುರಿತಂತೆ ರಾಜ್ಯ ಹಾಗೂ ಕೇಂದ್ರ…
ಪರಿಸರ ಔಷಧ ಶಾಸ್ತ್ರವು(Environmental Medicine) ಸಾಮಾನ್ಯವಾಗಿ ಮಾನವನ ಆರೋಗ್ಯದ(Human health) ಮೇಲೆ ನಕಾರಾತ್ಮಕ…
ಕರ್ನಾಟಕದಲ್ಲಿ(Karnakta) ಮೊದಲ ಹಂತದ ಚುನಾವಣೆ(Election) ಮುಗಿದಿದ್ದು, ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ(Campaign)…