ದೂರದ ಊರಿನಲ್ಲಿರುವ ಸಂಬಂಧಿಕರಿಗೆ ಏನಾದ್ರು ಪಾರ್ಸೆಲ್ ಕಳಿಸಬೇಕಾದ್ರೆ ತಟ್ಟನೆ ನೆನಪು ಬರೋದು ಕೆಎಸ್ಆರ್ಟಿಸಿ. ಚಾಲಕನಿಗೂ, ನಿರ್ವಹಕನಿಗೂ ಏನಾದರೂ ಗೌರವಧನ ಕೊಟ್ಟರೆ ಆಯ್ತು, ಪಾರ್ಸೆಲ್ ಖಚಿತವಾಗಿಯೂ ತಲಪುತ್ತೆ ಎನ್ನುವ ನಂಬಿಕೆ. ಹೆಚ್ಚಿನ ಬಸ್ ಗಳಲ್ಲಿ ಈ ಸೇವೆ ಇದೆ. ಜನ ಮಾತ್ರವಲ್ಲದೆ ಸರಕುಗಳನ್ನು ಕೆಎಸ್ಆರ್ಟಿಸಿ ಸಾಗಿಸುತ್ತದೆ. ಇನ್ನು ಮೇಲೆ ಭವಿಷ್ಯದಲ್ಲಿ ಸರಕು ಸಾಗಾಣಿಕೆ ವ್ಯವಹಾರದ ಮೇಲೆ ಕಣ್ಣಿಟ್ಟು ಲಾರಿಗಳನ್ನು ಖರೀದಿಸಲು ಮುಂದಾಗಿದೆ ಕೆಎಸ್ಆರ್ಟಿಸಿ.
ಕೆಎಸ್ಆರ್ಟಿಸಿ #KSRTC ಶೀಘ್ರದಲ್ಲೇ ಲಾರಿಗಳ ಸೇವೆ ಒದಗಿಸಲಿದೆ. ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿದೆ. ಸರಕು #Goods ಸಾಗಾಣಿಕೆಗಾಗಿಯೇ ಪ್ರತ್ಯೇಕ ವಾಹನಗಳ ಸೇವೆ ಒದಗಿಸಲು ಕೆಎಸ್ಆರ್ಟಿಸಿ ಮುಂದಾಗಿದೆ. ಸರಕು ಸಾಗಾಣಿಕೆ ಸೇವೆಯನ್ನು ನೀಡಲು ಲಾರಿಗಳನ್ನು ಒದಗಿಸಲು ಮುಂದಾಗುತ್ತಿದೆ. ಪ್ರಸ್ತುತ KSRTC ತನ್ನ ಸರಕು ಸಾಗಾಣಿಕೆಗಳನ್ನು ಬಸ್ಗಳಲ್ಲೇ ಪಾರ್ಸೆಲ್ ಮೂಲಕ ಸಾಗಣೆ ಮಾಡುತ್ತದೆ. ಆದರೆ ಭವಿಷ್ಯದಲ್ಲಿ ಸರಗು ಸಾಗಾಣಿಕೆ ವ್ಯವಹಾರದ ಮೇಲೆ ಕಣ್ಣಿಟ್ಟು ಲಾರಿಗಳನ್ನು ಖರೀದಿಸಲು ಮುಂದಾಗಿದೆ.
ಯೋಜನೆಯ ಮೊದಲ ಹಂತದ ಭಾಗವಾಗಿ ಒಟ್ಟು 10 KSRTC ಲಾರಿಗಳು ಸೇವೆ ಒದಗಿಸಲಿವೆ ಎನ್ನಲಾಗಿದೆ. ಇತ್ತ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಪ್ರಮುಖ ಯೋಜನೆಯಾಗಿರುವ ಶಕ್ತಿ ಯೋಜನೆಗೆ ನಾಡಿನಾದ್ಯಂತ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಸಾವಿರಾರು ಮಹಿಳೆಯರು ಯೋಜನೆಯ ಲಾಭವನ್ನು ತಮ್ಮ ಪ್ರತಿನಿತ್ಯದ ಜೀವನದಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಕೆಎಸ್ಆರ್ಟಿಸಿ ಬಸ್ ಸೇರಿದಂತೆ ಸರ್ಕಾರಿ ಸಾರಿಗೆ ವಾಹನಗಳಲ್ಲಿ ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆ ಹಾಗೂ ಪ್ಯಾನಿಕ್ ಬಟನ್ ವ್ಯವಸ್ಥೆ ಅಳವಡಿಕೆಗೆ 30.74 ಕೋಟಿ ರೂಪಾಯಿ ವೆಚ್ಚದ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆಗೆ ಸಂಪುಟ ಅಸ್ತು ಎಂದಿದೆ.
ಶಿಕ್ಷಣ ಪದ್ದತಿ ಬದಲಾಗಬೇಕು. ಕೃಷಿಯೂ ಪಠ್ಯದಭಾಗವಾಬೇಕು.ಎಳವೆಯಲ್ಲಿಯೇ ಕೃಷಿಯನ್ನು ಕಲಿಯುವ ಹಾಗೆ ಆಗಬೇಕು ಎನ್ನುತ್ತಾರೆ…
ಅಕ್ಷಯ ತೃತೀಯ(Akshaya Trutiya)... ಅಕ್ಷಯ ತೃತೀಯ ಮೇ.10 ಶುಕ್ರವಾರ, ಈ ದಿನದಂದು ಚಂದ್ರ…
ಬೀಜ(Seed) ಎಂಬುದು ಬರೀ ಬಿತ್ತನೆ ವಸ್ತುವಲ್ಲ. ಅದು ಕೃಷಿಯ(Agriculture) ಜೀವನಾಡಿ. ಸಾವಿರಾರು ವರ್ಷಗಳಿಂದ…
ಎಲ್ ನಿನೋ ಪ್ರಭಾವ ಹಿನ್ನೆಲೆ ದೇಶದಾದ್ಯಂತ ಬರಗಾಲದ ಛಾಯೆ ಆವರಿಸಿತ್ತು. ಕಳೆದ 15…
ಭಾರತದಲ್ಲಿ ಎಲ್ಲಾ ಧರ್ಮದವರಿಗೂ ಸಮಾನ ಹಕ್ಕು ಇದೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ…
ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣದ…