Advertisement
ಅನುಕ್ರಮ

ಆಡಂಬರ ಮತ್ತು ಬೂಟಾಟಿಕೆ | ಮಾನಸಿಕತೆ ಮತ್ತು ಸಹಜ ಬದುಕಿನ ಪಾಠ

Share

ಇಂದಿನ ಸಮಾಜದಲ್ಲಿ ಆಡಂಬರ (luxury) ಮತ್ತು ಬೂಟಾಟಿಕೆ (show-off)  ಒಂದು ಸಾಮಾನ್ಯ ಪ್ರವೃತ್ತಿಯಂತಾಗಿದೆ. ಜನರು ತಮ್ಮನ್ನು ತಾವು ಇರುವುದಕ್ಕಿಂತ ಹೆಚ್ಚು ತೋರಿಸಿಕೊಳ್ಳಲು ಯತ್ನಿಸುತ್ತಿರುವುದು ಹೆಚ್ಚಾಗಿ ಕಣ್ಣಿಗೆ ಕಾಣಿಸುತ್ತದೆ.. ಇದು ಕೇವಲ ಜೀವನಶೈಲಿ ಬದಲಾವಣೆ ಅಲ್ಲ, ಅದು ಒಂದು ಮಾನಸಿಕ ಪ್ರವೃತ್ತಿ ಹಾಗೂ ಸಾಂಸ್ಕೃತಿಕ ಒತ್ತಡದ ಫಲ.

  1. ಆಡಂಬರದ ಹುಟ್ಟು -ಮನೋವಿಜ್ಞಾನಿಕ ದೃಷ್ಟಿ:
    ಸಾಮಾಜಿಕ ಹೋಲಿಕೆ (Social Comparison Theory) : ಮನೋವಿಜ್ಞಾನಿ ಫೆಸ್ಟಿಂಗರ್ ಹೇಳುವಂತೆ, ಮನುಷ್ಯನು ಯಾವಾಗಲೂ ತನ್ನನ್ನು ಇತರರೊಂದಿಗೆ ಹೋಲಿಸುತ್ತಾನೆ. ಇತರರಿಗಿಂತ ಹಿಂದುಳಿದಿದ್ದೇನೆಂಬ ಭಾವನೆ ಅವನನ್ನು ಹೆಚ್ಚಾಗಿ ತೋರಿಸಿಕೊಳ್ಳಲು ಪ್ರೇರೇಪಿಸುತ್ತದೆ.
    ಅಸ್ಥಿರ ಆತ್ಮಗೌರವ (Fragile Self-Esteem): ಆತ್ಮವಿಶ್ವಾಸ ಕೊರತೆಯುಳ್ಳವರು ಹೊರಗಿನ ಬಟ್ಟೆ, ಮನೆ, ಕಾರು, ಆಭರಣಗಳ ಮೂಲಕ ತಮ್ಮ “Value” ತೋರಿಸಲು ಯತ್ನಿಸುತ್ತಾರೆ. ಮುಖ್ಯವಾಗಿ ಸಾಮಾಜಿಕ ಮಾಧ್ಯಮಗಳ ಪ್ರಭಾವ ಜೀವನದಲ್ಲಿ ಬಹಳಷ್ಟು ಬದಲಾವಣೆ ತರಲು ಕಾರಣವಾಗಿದೆ. ಇನ್‌ಸ್ಟಾಗ್ರಾಂ, ಫೇಸ್ಬುಕ್ ಮುಂತಾದ ಪ್ಲಾಟ್ಫಾರ್ಮುಗಳು ಜೀವನವನ್ನು ಒಂದು ರೀತಿಯ “ಪೋಟೋ–ಪರಿಪೂರ್ಣ”ವಾಗಿ ,ತಾತ್ಪರ್ಯದಲ್ಲಿ ಕೃತಕವಾಗಿ ತೋರಿಸಲು ಒತ್ತಡ ಸೃಷ್ಟಿಸುತ್ತವೆ.
  2. ಬೂಟಾಟಿಕೆಯ ಪರಿಣಾಮಗಳು :
    ಇದರಿಂದಾಗಿ ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡಿ ಸಾಲದ ಹೊರೆ ಹೊರುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ.  ತೋರಿಕೆಯ ಬದುಕು ನಿರಂತರ ‘‘performance anxiety’  ಮಾನಸಿಕ ಒತ್ತಡ ಹೆಚ್ಚಿಸುತ್ತದೆ. “ಇತರರು ನನ್ನನ್ನು ಹೇಗೆ ನೋಡುವರು?” ಎಂಬ ಚಿಂತೆಯೇ ಮನಸ್ಸನ್ನು ನಾಶಮಾಡುತ್ತದೆ. ನಿಜವಾದ ಸ್ನೇಹ, ಸಂಬಂಧಗಳು ಹಾಳಾಗಿ, “ಹಣ–ಬಟ್ಟೆ–ಆಡಂಬರ”ದ ಮೇಲೆ ಆಧಾರಿತ ಸಂಬಂಧಗಳು ಮಾತ್ರ ಉಳಿಯುತ್ತವೆ.
    “ಆಂತರಿಕ ಸಂತೋಷ” ಬಿಟ್ಟು “ಹೊರಗಿನ ಮೆಚ್ಚುಗೆ”ಯನ್ನು ಮಾತ್ರ ಹುಡುಕುವ ವ್ಯಕ್ತಿ ನಿರಂತರವಾಗಿ ಖಾಲಿತನದ ಅಸಹಜ ಜೀವನ ಅನುಭವಿಸುತ್ತಾನೆ.
  3. ಮಾನಸಿಕ ಪರಿಣಾಮ:
    ಮನೋವಿಜ್ಞಾನದಲ್ಲಿ ಇದನ್ನು ““Status Anxiety” ಅಥವಾ “Compensatory Consumption” ಎಂದು ಕರೆಯುತ್ತಾರೆ. ವ್ಯಕ್ತಿಗೆ ತನ್ನ ಬದುಕು ಅಲ್ಪವಾಗಿದೆ ಎಂಬ ಭಾವನೆ ಬಂದು, ಅದನ್ನು ಮುಚ್ಚಲು ಹೊರಗಿನ ಆಡಂಬರವನ್ನು ತೋರಿಸಲು ಪ್ರಯತ್ನಿಸುತ್ತಾನೆ.
    ಇದು OCD  (Obsessive–Compulsive Disorder) – (ಮನಸ್ಸಿನಲ್ಲಿ ಬಲವಂತವಾಗಿ ಬರುವ ಆಲೋಚನೆಗಳು ಮತ್ತು ಅವುಗಳಿಂದ ಹುಟ್ಟುವ ಅಸ್ಥಿರವಾದ ನಡೆ-ನುಡಿಗಳು ) ಅಥವಾ depression ಮಟ್ಟದ ರೋಗವಲ್ಲ; ಆದರೆ ಸಾಮಾಜಿಕ–ಮಾನಸಿಕ ಒತ್ತಡದಿಂದ ಹುಟ್ಟುವ ಅಸ್ವಸ್ಥ ಮನೋಸ್ಥಿತಿ.
  4. ಸಹಜ ಬದುಕಿನ ಶಕ್ತಿ
    ಸಹಜ ಬದುಕು ಎಂದರೆ ನೈಜ ಅಗತ್ಯಗಳಿಗೆ ತಕ್ಕ ಜೀವನ: ಸರಳತೆ, ನೈತಿಕ ಮೌಲ್ಯ, ಸಂಬಂಧಗಳ ಬಲ. ವೈಜ್ಞಾನಿಕವಾಗಿ ಸರಳ ಜೀವನವನ್ನು ಹೇಳುವುದಾದರೆ ಕಡಿಮೆ ಒತ್ತಡ ಇದ್ದಷ್ಟೂ ಹೆಚ್ಚು ಮಾನಸಿಕ ಆರೋಗ್ಯವಿರುತ್ತದೆ. ಸಂಶೋಧನೆಗಳು ಹೇಳುವ ಪ್ರಕಾರ ಸಾಧಾರಣ ಸರಳತೆಯ ಜೀವನವನ್ನು ರೂಢಿಸಿಕೊಂಡವರು ಹೆಚ್ಚು ಸಂತೋಷಿಯಾಗಿದ್ದಾರೆ.
  5. ಸಹಜ ಬದುಕು ರೂಢಿಸಿಕೊಳ್ಳುವ ಮಾರ್ಗಗಳು
    ಸ್ವಯಂ ಅರಿವು (Self-awareness): “ನನಗೆ ಏನು ಬೇಕು? ನಾನು ಏಕೆ ಖರೀದಿಸುತ್ತಿದ್ದೇನೆ?” ಎಂದು ಸ್ವಯಂ ಪ್ರಶ್ನಿಸಿಕೊಳ್ಳುವುದು.
    ಮೌಲ್ಯಾಧಾರಿತ ಬದುಕು (Value-Based Living): “ಜನರು ಏನು ಹೇಳುತ್ತಾರೆ?” ಎಂಬುದಕ್ಕಿಂತ, “ನಾನು ನನ್ನ ಅಂತರಾಳಕ್ಕೆ ಹೊಂದುತ್ತೇನೆ?” ಎಂಬುದನ್ನು ಪರಿಶೀಲಿಸಬೇಕು.
    Mindfulness ಅಭ್ಯಾಸ: ಧ್ಯಾನ, ಯೋಗ ಇವು ಅನಾವಶ್ಯಕ ಪ್ರದರ್ಶಿಸುವಿಕೆಯ ಹಂಬಲವನ್ನು ಕಡಿಮೆ ಮಾಡುತ್ತವೆ.
    ಮಿನಿಮಲಿಸಂ (Minimalism): ಅನಗತ್ಯ ವಸ್ತುಗಳನ್ನು ದೂರವಿಟ್ಟು ಅಗತ್ಯತೆಯನ್ನು ಮಾತ್ರ ಅಳವಡಿಸಿಕೊಂಡರೆ ಮನಸ್ಸು ಹಗುರವಾಗುತ್ತದೆ.
    ಸಂಬಂಧ ಮತ್ತು ಮೌಲ್ಯ ಪ್ರಾಮುಖ್ಯತೆ: ಹಣ–ಆಡಂಬರಕ್ಕಿಂತ ನಿಜವಾದ ಸಂಬಂಧಗಳನ್ನು ಉಳಿಸಿಕೊಳ್ಳುವುದು ಮತ್ತು ಕಾಪಾಡುವುದು.
    ಆಡಂಬರ ಒಂದು ಸಮಾಜ ನಿರ್ಮಿತ ಒತ್ತಡ; ಬೂಟಾಟಿಕೆ ಒಂದು ಮಾನಸಿಕ ಪ್ರತಿಕ್ರಿಯೆ; ಸಹಜ ಬದುಕು ಮಾತ್ರ ನಿಜವಾದ ಸಂತೋಷದ ಮಾರ್ಗ.
    “ಅಲಂಕ್ರಿಯಾಂ ನ ಹಿ ಸುಂದರತಾಂ ಕರೋತಿ, ಸ್ವಭಾವಸೌಂದರ್ಯಮೇವ ಶೋಭಯತಿ” – ಅಲಂಕಾರವು ನಿಜವಾದ ಸುಂದರತೆಯನ್ನು ನೀಡದು; ಸ್ವಭಾವದ ಸರಳತೆಯೇ ನಿಜವಾದ ಅಲಂಕಾರ ಸಹಜ ಬದುಕೆಂಬುದು ಆಂತರಿಕ ಶಾಂತಿಯನ್ನು ಮತ್ತು ನಿಜವಾದ ಸಂತೋಷವನ್ನು ನೀಡುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್‌ ಮಾಡಿ.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

Published by
ಕುಮಾರಸುಬ್ರಹ್ಮಣ್ಯ ಮುಳಿಯಾಲ

Recent Posts

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

4 hours ago

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

7 hours ago

ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…

16 hours ago

ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ

ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…

16 hours ago

ಮಂಗಳೂರಿನ ಅಶ್ಮಿತ್ ಎ.ಜೆ. ಅವರಿಗೆ ‘ಸರಿಗಮಪ 2026’ರ ಕಿರೀಟ

ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…

17 hours ago

ಮಲೆನಾಡು ತಪ್ಪಲಲ್ಲಿ ಧಾರಾಕಾರ ಮಳೆ – ಹಲವು ಕಡೆ ಕೆಲವೇ ಗಂಟೆಯಲ್ಲಿ 100 ಮಿಮೀ ದಾಟಿದ ಮಳೆ

ದಕ್ಷಿಣ ಕನ್ನಡದ ಮಲೆನಾಡು ತಪ್ಪಲಿನ ಸುಬ್ರಹ್ಮಣ್ಯ, ಸುಳ್ಯ, ಕಡಬ ಸೇರಿದಂತೆ ಹಲವು ಪ್ರದೇಶಗಳಲ್ಲಿ…

1 day ago