Advertisement
MIRROR FOCUS

ಶಿವಂ… ಶಿವೋಹಂ… ನಿರಾಭರಣ ಶಿವನಿಗೆ ಇಂದು ಬಿಲ್ವಪತ್ರೆ ತನ್ನಿರೋ…..

Share

ಶಿವಂ ಶಿವೋಹಂ… ಶಿವಮಯವಾದ ಈ ದಿನ ಶಿವರಾತ್ರಿ. ಶಿವನಿಗೆ  ಪ್ರಿಯವಾದ ದಿನ ಶಿವರಾತ್ರಿ.

ಮಾಘ ಮಾಸದ ಶುಕ್ಲ ಪಕ್ಷದ ಚತುರ್ದಶಿಯ ದಿನವೇ ಮಹಾಶಿವರಾತ್ರಿ.  14 ಇಂದ್ರಿಯಗಳನ್ನು ಜಯಿಸಿದವನು ಶಿವ.  14 ಲೋಕಗಳಿಗೆ ಒಡೆಯನಾಗಿರುವ ಪರಮೇಶ್ವರನಿಗೆ ಚತುರ್ದಶಿ ಯಂದು ಪೂಜಿಸುವುದು ಬಹು ವಿಶೇಷವಾಗಿರುತ್ತದೆ.  ಶಿವರಾತ್ರಿ ಯಂದು   ಶಿವಪಾರ್ವತಿಯರು ಜತೆಗೂಡಿ  ಪ್ರಪಂಚ ಪರ್ಯಟನೆ ಮಾಡುತ್ತಾರೆ. ತನ್ನನ್ನು ಯಾರು ಭಕ್ತಿಯಿಂದ ಪೂಜಿಸುತ್ತಾರೋ  ಶಿವ ಅವರಿಗೊಲಿಯುತ್ತಾನೆ, ಇಷ್ಟಗಳನ್ನು ಈಡೇರಿಸುತ್ತಾನೆ, ತಪ್ಪುಗಳನ್ನು ಮನ್ನಿಸುತ್ತಾನೆ , ಪಾಪಗಳಿಂದ ಮುಕ್ತನಾಗಿಸುತ್ತಾನೆ, ಎಂಬುದು ಭಕ್ತರ  ನಂಬುಗೆ. ನಿರಾಭರಣನಾದ ಶಿವನಿಗೆ ಬಿಲ್ವಪತ್ರೆ, ಎಕ್ಕದ ಹೂಗಳೆಂದರೆ ಬಲು ಪ್ರಿಯ.
ಸಾಮಾನ್ಯವಾಗಿ ಹಬ್ಬಗಳೆಂದರೆ  ನೆನಪಾಗುವುದು ಭಕ್ಷ್ಯ ಭೋಜನಗಳು. ಆದರೆ ಶಿವರಾತ್ರಿ ಇದಕ್ಕೆ ಅಪವಾದ.  ಈ ದಿನ ಉಪವಾಸಕ್ಕೇ ಪ್ರಾಮುಖ್ಯತೆ.  ನಮ್ಮಲ್ಲಿ ಶಿವರಾತ್ರಿಯ ದಿನ ರಾತ್ರಿ ನೈವೇದ್ಯಕ್ಕಾಗಿ  ಬಾಳೆಕಾಯಿ ದೋಸೆ ಅದೂ ಉಪ್ಪು ಹಾಕದೆ ಮಾಡಲಾಗುತ್ತದೆ. ಜೊತೆಗೆ ಬಾಳೆಹಣ್ಣು  ರಸಾಯನ.  ನಮ್ಮನೆಯಲ್ಲಿ  ಬೆಳೆದ  ಕದಳಿ ಬಾಳೆಕಾಯಿಯ ದೋಸೆ  ಮಾಡುತ್ತೇವೆ.  ಬಾಳೆಕಾಯಿಯ ಸಿಪ್ಪೆ ತೆಗೆದು ನುಣ್ಣಗೆ ಬೀಸಬೇಕು.  ದೋಸೆ ಕಾವಲಿಯಲ್ಲಿ ಬರಿ ಕೈಯಿಂದ ಬೀಸಿದ ಬಾಳೆಕಾಯಿ ಹಿಟ್ಟಿನ ತೆಳ್ಳನೆಯ  ದೋಸೆ ಮಾಡಲಾಗುತ್ತದೆ.  ಅದರೊಂದಿಗೆ ಬಾಳೆಹಣ್ಣು ರಸಾಯನ . ಕೆಲವೆಡೆ ಬೇಯಿಸಿದ ಬಾಳೆಕಾಯಿಯ ಸೇಮಿಗೆಯೂ  ಮಾಡುವ ಪರಿಪಾಠವಿದೆ.
ಅನನ್ಯ ಭಟ್‌ ಹಾಡಿರುವ  ಹಾಡು….
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ

ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…

7 hours ago

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

14 hours ago

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

17 hours ago

ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…

1 day ago

ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ

ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…

1 day ago

ಮಂಗಳೂರಿನ ಅಶ್ಮಿತ್ ಎ.ಜೆ. ಅವರಿಗೆ ‘ಸರಿಗಮಪ 2026’ರ ಕಿರೀಟ

ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…

1 day ago