Advertisement
The Rural Mirror ಕಾಳಜಿ

ಮಿರರ್‌ ನೆರವು | ಬಾಲಕಿಯ ಚಿಕಿತ್ಸೆಗೆ ನೆರವಾಗುವಿರಾ…

Share

ಕಾಸರಗೋಡು ಜಿಲ್ಲೆಯ  ಕುಂಬ್ದಾಜೆ ಪಂಚಾಯತ್ 13ನೇ ವಾರ್ಡ್ ವ್ಯಾಪ್ತಿಯ ಕಜೆಮಲೆ ನಿವಾಸಿ ಉದಯ ಕುಮಾರ್ ಹಾಗೂ ಸವಿತಾ ದಂಪತಿಗಳ ಪುತ್ರಿ ನಾರಂಪಾಡಿ  ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಸಾನ್ವಿ (7) ಅಪರೂಪವಾಗಿ ಕಂಡುಬರುವ ತಲಸ್ಸೇಮಿಯಾ ಮೇಜರ್ ಎಂಬ  ಕಾಯಿಲೆ ತಗಲಿದ್ದು, ಚಿಕಿತ್ಸೆಗಾಗಿ ಬಡ ಕುಟುಂಬ ದಾನಿಗಳಿಂದ ನೆರವನ್ನು ಕೇಳಿಕೊಂಡಿದೆ.

ಈಗಾಗಲೇ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಈ ಬಾಲಕಿಯ ಚಿಕಿತ್ಸೆಗಾಗಿ ಈ ಬಡ ಕುಟುಂಬ ಅಪಾರ ಮೊತ್ತ ವ್ಯಯಿಸಿದ್ದು, ಮುಂದೆ ಅಸ್ಥಿಮಜ್ಜೆ ಕಸಿ ಮಾಡುವ ಶಸ್ತ್ರಕ್ರಿಯೆ ನಡೆಯಬೇಕಿದ್ದು, ಅಂದಾಜು 40 ಲಕ್ಷ ಮೊತ್ತ ಅವಶ್ಯಕವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಷ್ಟು ದೊಡ್ಡ ಮೊತ್ತವನ್ನು ಹೊಂದಿಸಲು ಅಸಾಧ್ಯವಾದ ಈ ಬಡ ಕುಟುಂಬಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ಕುಂಬ್ದಾಜೆ ಪಂಚಾಯತ್ ಅಧ್ಯಕ್ಷ ಹಮೀದ್ ಪೊಸೊಳಿಗೆ ಅಧ್ಯಕ್ಷತೆಯಲ್ಲಿ ಊರ ಪರವೂರ ಬಂಧುಗಳ ಸಹಕಾರದೊಂದಿಗೆ ಸಾನ್ವಿ ಚಿಕಿತ್ಸಾ ಸಹಾಯ ಸಮಿತಿಯನ್ನು ರೂಪಿಸಿದ್ದು, ಸಮಿತಿಯ ಖಾತೆಯ ಮುಖಾಂತರ ದಾನಿಗಳಿಂದ ಚಿಕಿತ್ಸಾ ನೆರವನ್ನು ಸ್ವೀಕರಿಸಲಾಗುತ್ತಿದೆ.

ಇದರೊಂದಿಗೆ ಸಮಿತಿಯ ಸದಸ್ಯರು ಗುಂಪುಗಳಾಗಿ ತೆರಳಿ, ವಿವಿಧ ಸ್ವ ಸಹಾಯ ಸಂಘ, ಕ್ಲಬ್, ವಿದ್ಯಾ ಸಂಸ್ಥೆ, ಪೊಲೀಸ್ ಠಾಣೆ ಸೇರಿದಂತೆ ಸರ್ಕಾರಿ ಹಾಗೂ ಸರ್ಕಾರೇತರ ಕಚೇರಿಗಳಿಂದಲೂ ಆರ್ಥಿಕ ನೆರವನ್ನು ಸ್ವೀಕರಿಸುತ್ತಿದ್ದಾರೆ. ಬೆಳಿಂಜ – ಬದಿಯಡ್ಕ – ಕಾಸರಗೋಡು ಸಂಚರಿಸುವ ಬಿಲಾಲ್, ಮಲ್ಲ – ಕಾಸರಗೋಡು – ಪೈಕ – ಮುಳ್ಳೇರಿಯಾ – ಬದಿಯಡ್ಕ – ಪೆರ್ಲ ರಸ್ತೆ ಮೂಲಕ ಸಾಗುವ ದುರ್ಗಾ ಗಣೇಶ್, ಕಿನ್ನಿಂಗಾರು- ಮುಳ್ಳೇರಿಯಾ – ಕಾಸರಗೋಡು ಸಂಚರಿಸುವ ರಶ್ಮಿ ಎಂಬ ಖಾಸಗಿ ಬಸ್ ಕಾರುಣ್ಯ ಯಾತ್ರೆ ನಡೆಸಿ, ಒಂದು ದಿನದ ಸಂಗ್ರಹವನ್ನು ಬಾಲಕಿಯ ಚಿಕಿತ್ಸೆಗಾಗಿ ನೀಡಿದ್ದು, ಕಾಸರಗೋಡು- ಮಧೂರ್- ನೀರ್ಚಾಲ್- ಬದಿಯಡ್ಕ – ಪೆರ್ಲ ಸಂಚರಿಸುವ ಸಂಘಂ ಎಂಬ ಖಾಸಗಿ ಬಸ್ ಜು. 19 ರಂದು ಕಾರುಣ್ಯ ಯಾತ್ರೆ ನಡೆಸಿ ಬಾಲಕಿಯ ಚಿಕಿತ್ಸೆಗಾಗಿ ನೆರವಾಗಲಿದೆ.

ಇದರೊಂದಿಗೆ ಪೆರ್ಲ ರಿಕ್ಷಾ ಚಾಲಕರು ಬುಧವಾರ ಕಾರುಣ್ಯ ನಡೆಸಿ ಒಂದು ದಿನದ ಸಂಗ್ರಹವನ್ನು ಚಿಕಿತ್ಸಾ ನಿಧಿಗೆ ಸಮರ್ಪಿಸಿದ್ದು, ಶಿವಾಜಿ ಆಟೋ ಟ್ಯಾಕ್ಸಿ ಸ್ಟ್ಯಾಂಡ್ ಮುಳ್ಳೇರಿಯಾ ಚಾಲಕರು ಮುನ್ನಡೆಸುವ ಕಾರುಣ್ಯ ಯಾತ್ರಾ ಜು.16 ಶನಿವಾರ ನಡೆಯಲಿದೆ.

ಚಿಕಿತ್ಸೆಗಾಗಿ ಮತ್ತಷ್ಟು ಮೊತ್ತದ ಅವಶ್ಯಕತೆಯಿದ್ದು ದಾನಿಗಳು ತಮ್ಮ ಕೈಲಾದಷ್ಟು ಮೊತ್ತವನ್ನು ನೀಡಿ ಬಾಲಕಿಯ ಮುಂದಿನ ಚಿಕಿತ್ಸೆಗೆ ಅನುವು ಮಾಡಿಕೊಡಬೇಕಾಗಿ ಸಮಿತಿ ಪದಾಧಿಕಾರಿಗಳು ವಿನಂತಿಸಿದ್ದಾರೆ.

ಸಂಪರ್ಕ ಹಾಗೂ ಖಾತೆ ಸಂಖ್ಯೆ :

Saanvi Medical Treatment Committee
ಕೇರಳ ಗ್ರಾಮೀಣ ಬ್ಯಾಂಕ್ ಜಯನಗರ (ಕುಂಬ್ದಾಜೆ) ಶಾಖೆ
ಖಾತೆ ಸಂಖ್ಯೆ : 40413101052286
ಐಎಫ್ಎಸ್ಸಿ ಕೋಡ್ :  KLGB0040413
ಗೂಗಲ್ ಪೇ/ ಪೇಟಿಯಂ : 8921968983

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

4 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

8 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

1 day ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

1 day ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

1 day ago

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

2 days ago