Advertisement
MIRROR FOCUS

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮೊಬೈಲ್ ಅಭ್ಯಾಸ | 2050 ವೇಳೆಗೆ ಪ್ರಪಂಚದಲ್ಲಿ ಶೇ 50 ಮಂದಿಗೆ ಮಂದ ದೃಷ್ಟಿ ಸಾಧ್ಯತೆ…! |

Share

ಈಗ ಜಗತ್ತು, ಮೊಬೈಲ್‌ ಜಗತ್ತೇ ಆಗಿದೆ. ಅದಿಲ್ಲಾಂದ್ರೆ  ಜೀವನವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಮಕ್ಕಳಿಂದ ಹಿಡಿದು ಮುದುಕರವರೆಗೂ ಮೊಬೈಲ್‌ ನಮ್ಮ ಜೀವನವನ್ನು ಆವರಿಸಿ ಬಿಟ್ಟಿದೆ. ಪಂಚೇಂದ್ರಿಯಗಳಲ್ಲಿ ಕಣ್ಣುಗಳಿಗೆ ಸದಾ ಪ್ರಧಾನ ಸ್ಥಾನ ಇದೆ. ಸರ್ವೇಂದ್ರಿಯನಂ ನಯನಂ ಪ್ರಧಾನಂ ಎಂದು ದೊಡ್ಡವರು ಹೇಳಿರುವುದು ಇದೇ ಅರ್ಥದಲ್ಲಿ. ಹೌದು ಮನುಷ್ಯನಿಗೆ ಇರುವ ಅಂಗಗಳಲ್ಲಿ ಕಣ್ಣುಗಳು ಅತಿ ಸೂಕ್ಷ್ಮ.. ಅದು ನಮಗೆ ಜಗತ್ತನ್ನು ತೋರಿಸುತ್ತದೆ. ಆದರೆ ಇತ್ತೀಚಿಗೆ ವಿಶ್ವ ಆರೋಗ್ಯ ಸಂಸ್ಥೆ ಒಂದು ಶಾಕಿಂಗ್ ವಿಷಯ ಪ್ರಕಟಿಸಿದೆ. ಪ್ರಸ್ತುತ ಜಗತ್ತಿನಲ್ಲಿ ಅಂದಾಜು 2.2 ಬಿಲಿಯನ್‌ ಜನರು ದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ. ಇನ್ನು 2050 ರ ಹೊತ್ತಿಗೆ ಈ ಸಂಖ್ಯೆಯು ಇನ್ನೂ ತುಂಬಾ ಹೆಚ್ಚಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ SPEX 2030 ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡುತ್ತದೆ. ಪ್ರಸ್ತುತ ಜಗತ್ತಿನಲ್ಲಿ 2.2 ಬಿಲಿಯನ್‌ಗಳಿಗೆ ಹೆಚ್ಚು ಜನರು ದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ. ಸಂತ್ರಸ್ತರಲ್ಲಿ ಒಂದು ಬಿಲಿಯನ್ ಜನರಿಗೆ ಸರಿಪಡಿಸಬಹುದಾದ ದೋಷವಿದೆ. ಶೇ 90 ದೃಷ್ಟಿ ಕೊರತೆ ಇರುವವರು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಇದ್ದಾರೆ. ಭಾರತದಲ್ಲಿಯೂ ಸಹ 10 ಕೋಟಿ ಜನರಿಗೆ ಕಣ್ಣಿಗೆ ಕನ್ನಡಕಗಳು ಬೇಕಾಗಿರುವ ಪರಿಸ್ಥಿತಿಯಿದೆ. ನಿನಿಜವಾಗಿ ಪ್ರತಿಯೊಬ್ಬರಿಗೂ ಸರಿಯಾದ ಕಣ್ಣಿನ ಆರೈಕೆ ಬೇಕಾಗಿದೆ. ಈ ಚಿಕಿತ್ಸೆಗಾಗಿ 24.8 ಬಿಲಿಯನ್ ಯುಎಸ್ ಡಾಲರ್ ಅಗತ್ಯವಿದೆ. ಕಣ್ಣಿನ ರೋಗಿಗಳಿಗೆ ಸಹಾಯ ಮಾಡದಿದ್ದರೆ, ವಿಶ್ವವು ಭಾರೀ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ. ಕಣ್ಣಿನ ಸಮಸ್ಯೆಯಲ್ಲಿ ಮೈಯೋಪಿಯಾ ಒಂದು ಪ್ರಮುಖ ಸಮಸ್ಯೆಯಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು  ಅಂದಾಜಿಸಿದೆ.

Myopia: ಮೈಯೋಪಿಯಾ ಎಂದರೆ : ಸಮೀಪ ದೃಷ್ಟಿ (ಮೈಯೋಪಿಯಾ ಅಥವಾ ಹತ್ತಿರದ ದೃಷ್ಟಿ ಅಸ್ವಸ್ಥತೆ) ಅಸ್ವಸ್ಥತೆ ಎಂದರೆ ಹತ್ತಿರ ಇರುವ ವಸ್ತುಗಳು ಸ್ಪಷ್ಟವಾಗಿ ಕಾಣುತ್ತವೆ. ಆದರೆ ಅದೇ ದೂರವಿರುವ ವಸ್ತುಗಳು ಅಸ್ಪಷ್ಟವಾಗಿ ಮಾತ್ರವೇ ಕಾಣುತ್ತವೆ. ಸಾಮಾನ್ಯವಾಗಿ ಈ ಲಕ್ಷಣವನ್ನು ಹತ್ತಿರದ ದೃಷ್ಟಿ ಎಂದೂ ಕರೆಯಲಾಗುತ್ತದೆ, ಇದು ವಕ್ರೀಭವನದ ಕಣ್ಣಿನ ಪರಿಸ್ಥಿತಿಯಲ್ಲಿ ಅತ್ಯಂತ ಸಾಮಾನ್ಯವಾದುದು. ಸಾಮಾನ್ಯಕ್ಕಿಂತ ಉದ್ದವಾದ ಕಣ್ಣು ಅಥವಾ ಸಾಮಾನ್ಯ ಕಾರ್ನಿಯಾಕ್ಕಿಂತ ಕಡಿದಾದ ಕಾರಣ, ಬೆಳಕು ರೆಟಿನಾದ ಮುಂದೆ ಕೇಂದ್ರೀಕೃತವಾಗಿರುತ್ತದೆ. ಇದರಿಂದ ದೂರದಲ್ಲಿರುವ ವಸ್ತುಗಳು ಅಸ್ಪಷ್ಟವಾಗಿ ಗೋಚರಿಸುತ್ತವೆ. ಸಮೀಪದೃಷ್ಟಿ ಸೌಮ್ಯ, ಮಧ್ಯಮ ಅಥವಾ ತೀವ್ರತರದ್ದಾಗಿರುತ್ತದೆ.

ನಿಜಕ್ಕೂ… ಕಣ್ಣಿನ ದೋಷ ಪೂರ್ಣಪ್ರಮಾಣದಲ್ಲಿ ಕಂಡುಬಂದರೆ ಮಾತ್ರವೇ ಜನ ವೈದ್ಯರ ಬಳಿ ಹೋಗುವುದು. ಆ ವೇಳೆಗೆ ಇಂತಹ ಸಮಸ್ಯೆ ಹೆಚ್ಚೇ ಆಗಿರುತ್ತದೆ. ಮೈಯೋಪಿಯಾದಿಂದ ಮಾಡಬೇಕಾದ ಕೆಲಸಗಳು ಕೂಡ ಮಾಡಿಕೊಳ್ಳಲಾಗದ ಸ್ಟೇಜ್‌ಗೆ ತಲುಪಬಹುದು. 2050 ರಲ್ಲಿ ವಿಶ್ವದ ಅರ್ಧದಷ್ಟು ಜನರು ಇಂತಹ ಮೈಯೋಪಿಯಾದಿಂದ ಬಳಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವಿವರಿಸಿದೆ. ಸಮೀಪ ದೃಷ್ಟಿ ರೋಗದಿಂದ ಬಳಲುತ್ತಿರುವವರ ಸಂಖ್ಯೆ ಭಾರತ ಸೇರಿದಂತೆ ಏಷ್ಯಾದ ದೇಶಗಳಲ್ಲಿ ತುಂಬಾ ಹೆಚ್ಚಾಗಿವೆ. ಇಲ್ಲಿ ಹೆಚ್ಚಿನ ವೈದ್ಯಕೀಯ ಸೇವೆಗಳು ಲಭ್ಯವಾಗಬೆಕಿದೆ.

ವಿಶ್ವ ಆರೋಗ್ಯ ಸಂಸ್ಥೆ  ಪ್ರಕಾರ ಮಕ್ಕಳನ್ನು ಡಿಜಿಟಲ್​ ಪರದೆಯಿಂದ ದೂರವಿಡುವ ಮೂಲಕ ಇದನ್ನು ಸಾಧಿಸಬಹುದಾಗಿದೆ. ಅಂದರೆ ಸ್ಮಾರ್ಟ್ ಫೋನ್, ಟಿವಿ, ಕಂಪ್ಯೂಟರ್ ಅನ್ನು ನೋಡುವ ಸಮಯ ಮತ್ತು ಅಭ್ಯಾಸವನ್ನು ಕಡಿಮೆ ಮಾಡುವುದು. ಇದರಿಂದ ಸಂತ್ರಸ್ತರಾಗುವವರ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಎಲ್ಲಾ ವಯಸ್ಸಿನವರಿಗೆ ಕಡ್ಡಾಯವಾಗಿ ಕಣ್ಣಿನ ಪರೀಕ್ಷೆಗಳನ್ನು ಮಾಡಬೇಕಾಗಿದೆ. ದೃಷ್ಟಿ ಲೋಪವನ್ನು ಕಡಿಮೆ ಮಾಡಲು ಸರ್ಕಾರದಿಂದ ಸಾರ್ವಜನಿಕ ಜಾಗೃತಿ ಕಾರ್ಯವಾಗುವುದು ಅಗತ್ಯವೆಂದು ಭಾವಿಸಲಾಗಿದೆ. ಇದರಿಂದ ಜನರು ತಮ್ಮ ಮಕ್ಕಳನ್ನು ಕಾಪಾಡಬಹುದು.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

23 hours ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

1 day ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

1 day ago

ರಸಗೊಬ್ಬರದಲ್ಲಿ ಆತ್ಮನಿರ್ಭರತೆ ಅನಿವಾರ್ಯ – ಸಂಕಷ್ಟದಿಂದ ಅವಕಾಶದತ್ತ ಭಾರತ ಸಾಗಬೇಕಿದೆ

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…

2 days ago

ಹವಾಮಾನ ವರದಿ | 24-07-2026 | ಕರಾವಳಿಯಲ್ಲಿ ಮುಂದುವರಿಯುವ ಮಳೆ, ಜುಲೈ ಅಂತ್ಯದ ವೇಳೆಗೆ ಮುಂಗಾರು ಹೇಗೆ..?

ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…

2 days ago