ಬೆಳ್ಳಿಪ್ಪಾಡಿ ಬಿ ಎಸ್ ಎನ್ ಎಲ್ ಟವರ್ ಗೆ ಸಂಬಂಧಿಸಿ ಮೈಕ್ರೋ ಗೆ ಹೋಗುವ ವಿದ್ಯುತ್ ಲೈನ್ ಗೆ ತಾಗುವ ಮರದ ಗೆಲ್ಲು ಲೈನ್ ತೆರವು ಮಾಡುವ ಸೇವಾ ಕಾರ್ಯ ನಡೆಯಿತು. ಸ್ಥಳೀಯ ಶಕ್ತಿ ಯುವಕ ಮಂಡಲ ಬೆಳ್ಳಿಪ್ಪಾಡಿ ಮತ್ತು ಹಿಂದೂ ಐಕ್ಯ ವೇದಿ ಬೆಳ್ಳಿಪ್ಪಾಡಿ ಘಟಕದ ವತಿಯಿಂದ ಸೇವಾಕಾರ್ಯ ಮಾಡಲಾಯಿತು.
ಈ ಸಂದರ್ಭದಲ್ಲಿ ವಿದ್ಯುತ್ ಇಲಾಖೆಯ ಪವರ್ ಮ್ಯಾನ್ , ಬಿ ಎಸ್ ಎನ್ ಎಲ್ ಉದ್ಯೋಗಿಗಳು , ಶಕ್ತಿ ಯುವಕ ಮಂಡಲ ಹಾಗೂ ಹಿಂದೂ ಐಕ್ಯ ವೇದಿ ಬೆಳ್ಳಿಪ್ಪಾಡಿ ಯ ಅಧ್ಯಕ್ಷರು ಮತ್ತು ಸರ್ವಸದಸ್ಯರು ಭಾಗವಹಿಸಿದರು. ಇದೇ ಸಂದರ್ಭ BSNL ಗೆ ಸಂಬಂಧಿಸಿ ಅಧಿಕಾರಿಗಳು ಆದಷ್ಟು ಬೇಗ ನೆಟ್ವರ್ಕ್ ಸಮಸ್ಯೆಯನ್ನು ಬಗೆಹರಿಸಲು ಮನವಿ ಮಾಡಲಾಯಿತು.
ಗ್ರಾಮೀಣ ಭಾಗದಲ್ಲಿ ಮೊಬೈಲ್ ನೆಟ್ವರ್ಕ್ , ವಿದ್ಯುತ್ ಸಮಸ್ಯೆ ಇದ್ದರೂ ಯುವಕ ಸಂಘಟನೆಗಳು ಸಕ್ರಿಯವಾಗಿ ಇಲಾಖೆಗಳ ಜೊತೆಗೆ ಸಹಕರಿಸುತ್ತಾ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಇಲಾಖೆಗಳು ಮಾತ್ರಾ ಸೇವೆ ಒದಗಿಸುವಲ್ಲಿ ವಿಳಂಬ ಮಾಡುತ್ತಿರುವುದು ಅಷ್ಟೇ ವಿಷಾದವಾಗಿದೆ.
ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…
2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…
ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…
ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಸಂಪರ್ಕ ಒದಗಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ.
ಜಾಗತಿಕ ತಾಪಮಾನ ನಿಯಂತ್ರಣಕ್ಕೆ ವೃಕ್ಷ ಸಂವರ್ಧನೆ ಮುಖ್ಯ ಎಂದು ಸಚಿವ ಈಶ್ವರ ಖಂಡ್ರೆ…
ICAR ಕೃಷಿ ಕ್ಷೇತ್ರವನ್ನು ಬಲಪಡಿಸಲು ಸ್ಪೆಷಲ್ ಟಾಸ್ಕ್ ಫೋರ್ಸ್ ರಚಿಸಿದೆ. ಹವಾಮಾನ ಸವಾಲುಗಳಿಗೆ…