Advertisement
Exclusive - Mirror Hunt

ಪರಿಸರ ಶಾಲೆ | ಮಕ್ಕಳಿಗೆ ಪಾಠದ ಅಂಕದಷ್ಟೇ ಪರಿಸರ ಕಾಳಜಿಯೂ ಅಗತ್ಯ | ಪುತ್ತೂರಿನ ಈ ಪ್ಲೇ ಸ್ಕೂಲ್‌ ಮಾದರಿ ಏಕೆ..?

Share

ಒಂದು ಪ್ಲೇ ಸ್ಕೂಲ್.‌ ಕಳೆದ 17 ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳಿಗೆ ಪರಿಸರದ ಬಗ್ಗೆ, ದೇಶದ ಬಗ್ಗೆ, ಸ್ವಾವಲಂಬನೆಯ ಬಗ್ಗೆ ಪಾಠ ಮಾಡುತ್ತಿದೆ ಈ ಪ್ಲೇ ಸ್ಕೂಲ್.‌ ಅಷ್ಟೇ ಅಲ್ಲ ಪ್ರತೀ ಮಗುವಿನ ಪೈಲ್‌ ರಚನೆ ಮಾಡಿ ಪೋಷಕರಿಗೆ ನೀಡಲಾಗುತ್ತಿದೆ. ಮಗುವಿನ ಆಸಕ್ತಿಯ ಮೇಲೆ ಪೋಷಕರಿಗೂ ಮಕ್ಕಳನ್ನು ಬೆಳೆಸಲು ಸಾಧ್ಯವಿದೆ. ಈ ಪ್ಲೇ ಸ್ಕೂಲ್‌ ನಡೆಸುತ್ತಿರುವವರು ಪ್ರತಿಮಾ ಹೆಗ್ಡೆ. 

ಪುತ್ತೂರಿನ ಬೈಪಾಸ್‌ ಬಳಿಯಲ್ಲಿ ಬಾಲವನಕ್ಕೆ ತೆರಳುವ ರಸ್ತೆಯ ಪಕ್ಕದಲ್ಲಿದೆ ಈ ಪ್ಲೇ ಸ್ಕೂಲ್.‌ ಲಿಟ್ಲ್‌ ಏಂಜೆಲ್ಸ್‌ ಎನ್ನುವ ಹೆಸರಿನ ಪ್ಲೇ ಸ್ಕೂಲ್‌ 17 ವರ್ಷಗಳಿಂದ ಪುತ್ತೂರಿನಲ್ಲಿ ಚಟುವಟಿಕೆ ನಡೆಸುತ್ತಿದೆ. ಪ್ರತೀ ವರ್ಷ ಸರಾಸರಿ 15 ಪುಟ್ಟ ಮಕ್ಕಳು ಇಲ್ಲಿಗೆ ಬರುತ್ತಾರೆ. ಭಾರೀ ಅಬ್ಬರದ ಪ್ರಚಾರ ಇಲ್ಲದೆ, ಸದ್ದು ಗದ್ದಲ ಇಲ್ಲದೆ ಈ ಶಾಲೆಯನ್ನು ಮಿಸ್‌ ಆಂಟಿಯಾಗಿ ಬೆಳೆಸುತ್ತಿದ್ದಾರೆ ಪ್ರತಿಮಾ ಹೆಗ್ಡೆ.

ಪ್ರತಿಮಾ ಹೆಗ್ಡೆ

ಸಮಾಜದಲ್ಲಿ ಹಲವಾರು ಶಾಲೆಗಳು ಇವೆ. ವಿವಿಧ ತರಬೇತಿ ಸಂಸ್ಥೆಗಳೂ ಇವೆ. ಆದರೆ ಮಾನವೀಯ ಮೌಲ್ಯಗಳನ್ನು ತಿಳಿಸುವ, ಬೆಳೆಸುವ ಕೆಲಸ, ಪರಿಸರ ಪೂರಕ ಕೆಲಸ ಎಳವೆಯಲ್ಲಿಯೇ ನಡೆಯಬೇಕಿದೆ. ಇದು ಮಕ್ಕಳ ಭವಿಷ್ಯದ ಅಡಿಪಾಯ. ಈ ದೇಶದ ಅಡಿಪಾಯವೂ ಹೌದು. ಈ ಅಡಿಪಾಯ ಹಾಕುವ ಕೆಲಸ ಇಲ್ಲಿ ಪುತ್ತೂರಿನ ಲಿಟ್ಲ್‌ ಏಂಜೆಲ್ಸ್‌ನಲ್ಲಿ ನಡೆಯುತ್ತಿದೆ. ಇಂದು ನೀರಿಲ್ಲದೆ ಕಂಗಾಲಾದ ಪರಿಸ್ಥಿತಿ ಇದೆ, ಪ್ರಾಣಿಗಳು ಫೋಟೋದಲ್ಲಿ ಮಾತ್ರವೇ ಕಾಣುತ್ತಿದೆ, ಕಾಡು ನಾಶವಾಗಿದೆ.. ಇಂತಹದರ ನಡುವೆ ಭವಿಷ್ಯದಲ್ಲಿ ಈ ಬಗ್ಗೆಯೂ ಕಾಳಜಿ ಬೆಳೆಯಬೇಕಾದರೆ ಮಕ್ಕಳಿಂದ ಮಾತ್ರವೇ ಸಾಧ್ಯ. ಯಾರೂ ನಡೆಯದ ಹಾದಿಯಲ್ಲಿ ಸಾಗುವ ಕೆಲಸ ಇಲ್ಲಿ ಮಾಡುತ್ತಿದ್ದಾರೆ ಪ್ರತಿಮಾ ಹೆಗ್ಡೆ.

ಇಲ್ಲಿ ಪರಿಸರದ ಪಾಠವಂತೂ ಮಕ್ಕಳು ಬಹಳ ಇಷ್ಟಪಡುತ್ತಾರೆ.ಕೇವಲ ಶೈಕ್ಷಣಿಕ ಅಂಕವಷ್ಟೇ ಮಕ್ಕಳ ಬದುಕಲ್ಲ, ಪ್ರತೀ ಮಗು ಕೂಡಾ ಇಂದು ಪ್ರತಿಭಾನ್ವಿತ ಮಗುವಾಗಿದೆ. ಕೆಲವು ಮಕ್ಕಳು ಪಾಠದಲ್ಲಿ ಇದ್ದರೆ, ಇನ್ನೂ ಕೆಲವು ಮಕ್ಕಳು ಬೇರೆಯದೇ ಕ್ಷೇತ್ರದಲ್ಲಿ ಪ್ರತಿಭಾನ್ವಿತರಾಗಿರುತ್ತಾರೆ. ಅವರ ಆಸಕ್ತಿಯನ್ನು ಗುರುತಿಸಿ ಪೋಷಕರು ಬೆಳೆಸಬೇಕು ಎನ್ನವ ಪ್ರತಿಮಾ ಹೆಗ್ಡೆ ಅವರು ಅವರ ಶಾಲೆಗೆ ಬರುವ ಮಗುವಿನ ಆಸಕ್ತಿಯನ್ನು ದಾಖಲಿಸುತ್ತಾ ಪೈಲ್‌ ಮಾಡಿ ವರ್ಷದ ಕೊನೆಗೆ ಪೋಷಕರಿಗೆ ನೀಡುತ್ತಾರೆ. ಈ ಮೂಲಕ ಮಗುವಿನ ಆಸಕ್ತಿಯೂ ಪೋಷಕರಿಗೆ ತಿಳಿಯುತ್ತದೆ, ಮಕ್ಕಳಗಿಗೂ ಆಸಕ್ತಿಯನ್ನು ಹೊರಹಾಕುವ ವೇದಿಕೆಯೂ ಆಗುತ್ತದೆ. ಈ ಮೂಲಕ ಸಮಾಜವನ್ನು ಕಟ್ಟುವ, ದೇಶವನ್ನು ಕಟ್ಟುವ ಕೆಲಸವನ್ನು ಲಿಟ್ಲ್‌ ಏಂಜೆಲ್ಸ್‌ ಪ್ಲೇ ಸ್ಕೂಲ್‌ ಮಾಡುತ್ತಿದೆ.

ದೇಶ ಕಟ್ಟುವ ಕೆಲಸ ಎಂದರೆ ರಚನಾತ್ಮಕ ಕೆಲಸ. ಅದರಲ್ಲಿ ಹೋರಾಟದ ಹೊರತಾಗಿ ರಚನಾತ್ಮಕವಾಗಿ ಕಟ್ಟಬೇಕಾದ ಹಲವು ಸಂಗತಿಗಳು ಇವೆ. ಇಲ್ಲೂ ಅದೇ ಕೆಲಸ ನಡೆಯುತ್ತಿದೆ. ಪರಿಸರದ ಬಗ್ಗೆ ಸಾಕಷ್ಟು ಹೋರಾಟಗಳು ನಡೆದರೂ, ಸ್ವಚ್ಛತೆಯ ಅರಿವು ಸಾಕಷ್ಟು ಮೂಡಿಸಿದರೂ ಸಮಾಜ ಬದಲಾಗಲಿಲ್ಲ. ಇಲ್ಲಿ ಮಕ್ಕಳ ಮೂಲಕ ಪರಿಸರ ಜಾಗೃತಿ, ಶಿಸ್ತು, ಸ್ವಚ್ಛತೆಯ ಅರಿವು ಮೂಡಿಸಿದರೆ ಮುಂದಿನ ಕೆಲವು ವರ್ಷಗಳಲ್ಲಿ ಬದಲಾವಣೆ ನಿಶ್ಚಿತ ಎನ್ನುವ ಅಭಿಪ್ರಾಯ ಪ್ರತಿಮಾ ಅವರದು. ಹೀಗಾಗಿ ಮಕ್ಕಳನ್ನು ದೇಶಕ್ಕೆ ಪೂರಕವಾಗಿ ಯೋಚಿಸುವ, ಕಟ್ಟುವ ಕೆಲಸವು ಸದ್ದಿಲ್ಲದೆ ಇಲ್ಲಿ ನಡೆಯುತ್ತದೆ. ಕಳೆದ 17 ವರ್ಷಗಳಿಂದ ಪರಿಸರ, ಸ್ವಚ್ಛತೆ, ಶಿಸ್ತು, ಆಟ.. ಹೀಗೇ ಎಲ್ಲಾ ಆಯಾಮಗಳಲ್ಲೂ ಮಕ್ಕಳನ್ನು ಕಟ್ಟಿದ್ದಾರೆ ಇಲ್ಲಿ.

ಶಾಲೆಗೆ ತೆರಳುವ ಮುನ್ನ ಈ ಪ್ಲೇ ಶಾಲೆಗೆ ಬರುವ ಮಕ್ಕಳನ್ನು ಪರಿಸರಕ್ಕೆ ಪೂರಕವಾಗಿ ಬೆಳೆಸಲಾಗುತ್ತಿದೆ. ಇದೇ ಸ್ಪಂದನೆಯು ಸಮಾಜದಿಂದ, ಪೋಷಕರಿಂದಲೂ ಬೇಕಾಗಿದೆ. ಈಚೆಗೆ ಮಕ್ಕಳಿಗೆ ಹಕ್ಕಿಗಳಿಗೆ ಬೇಸಗೆಯಲ್ಲಿ ಕುಡಿಯುವ ನೀರು ಇರಿಸುವ ಉದ್ದೇಶವನ್ನು ತಿಳಿಸಲಾಗಿತ್ತು. ಬಹಳ ಆಸಕ್ತಿಯಿಂದ ಮಕ್ಕಳು ಇದನ್ನು ಮಾಡಿದ್ದರು. ಇದು ಮುಂದೆಯೂ ನಡೆಯಬೇಕಾದರೆ ಸಮಾಜದ ಹಾಗೂ ಪೋಷಕರ ಪ್ರಭಾವವೂ ಅಷ್ಟೇ ಇದೆ. ಮಕ್ಕಳನ್ನು ಬೆಳೆಸುವ ದಾರಿಯನ್ನು ಹೇಳಿಕೊಡುವುದಷ್ಟೇ ಕೆಲಸ ಇಲ್ಲಿ ನಡೆಯುತ್ತದೆ. ಮುಂದಿನದು ಜವಾಬ್ದಾರಿ ಸಮಾಜದ್ದೂ ಇದೆ. ಇದಕ್ಕಾಗಿ ಈ ಪುಟ್ಟ ಪ್ರಯತ್ನ ಸಮಾಜಕ್ಕೂ ತಿಳಿದಿರಬೇಕು. ಮಕ್ಕಳಿಗೆ ಅಂಕವಷ್ಟೇ ಅಂತಿಮವಲ್ಲ, ಮಕ್ಕಳನ್ನು ಬೆಳೆಸಬೇಕಾದ ದಾರಿಗಳು ಹಲವು ಇದೆ. ಇದೆಲ್ಲವೂ ಪೋಷಕರು ತಿಳಿದಿರಬೇಕು ಎನ್ನುತ್ತಾರೆ ಪ್ರತಿಭಾ.….ವಿಡಿಯೋ ಇದೆ

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಅಡಿಕೆ ಒಡೆದು ಉದುರುತ್ತಿದೆಯೇ..? ಕಾರಣ ಕೇವಲ ಬೋರಾನ್ ಕೊರತೆ ಅಷ್ಟೇ ಅಲ್ಲ- ಕೀಟವೂ ಇರಬಹುದು ಎನ್ನುತ್ತಾರೆ ವಿಜ್ಞಾನಿಗಳು

ಅಡಿಕೆ ಒಡೆದು ಬೀಳುವ ಸಮಸ್ಯೆಗೆ ಬೋರಾನ್ ಕೊರತೆ ಮಾತ್ರವಲ್ಲ, ಪೆರಿಯಾಂತ್ ಮೈಟ್ ಕೀಟದ…

7 hours ago

ಎಲ್ ನಿನೋ ಅಧಿಕೃತವಾಗಿ ಆರಂಭ – ಕರಾವಳಿ ಕರ್ನಾಟಕದ ಮಳೆ ಮೇಲೆ ಪರಿಣಾಮ ಬೀಳುತ್ತಾ? ಹವಾಮಾನ ಇಲಾಖೆ ನಿಗಾ

ಭಾರತೀಯ ಹವಾಮಾನ ಇಲಾಖೆ ಎಲ್ ನಿನೋ ಆರಂಭಗೊಂಡಿರುವುದನ್ನು ಅಧಿಕೃತವಾಗಿ ದೃಢಪಡಿಸಿದೆ. ಕರಾವಳಿ ಕರ್ನಾಟಕದಲ್ಲಿ…

7 hours ago

ಬರಗಾಲದಿಂದ ಹೆಚ್ಚಾಗಬಹುದು ಆ್ಯಂಟಿಬಯೋಟಿಕ್ ಪ್ರತಿರೋಧ..! ಹೊಸ ಸಂಶೋಧನೆಯ ಎಚ್ಚರಿಕೆ

ಬರಗಾಲದ ಪರಿಸ್ಥಿತಿಗಳು ಮಣ್ಣಿನಲ್ಲಿನ ಬ್ಯಾಕ್ಟೀರಿಯಾಗಳಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧ ಹೆಚ್ಚಿಸಲು ಕಾರಣವಾಗಬಹುದು ಎಂದು ಹೊಸ…

21 hours ago

ಜೇನುನೊಣಗಳ ಅಳಿವು ಕೃಷಿಗೂ, ಆಹಾರ ಭದ್ರತೆಗೂ ದೊಡ್ಡ ಅಪಾಯ – ತಜ್ಞರ ಎಚ್ಚರಿಕೆ

ಜೇನುನೊಣಗಳ ಸಂಖ್ಯೆ ಕುಸಿಯುತ್ತಿರುವುದು ಕೃಷಿ ಉತ್ಪಾದನೆ, ಆಹಾರ ಭದ್ರತೆ ಮತ್ತು ಪರಿಸರ ಸಮತೋಲನಕ್ಕೆ…

21 hours ago

ಒಂದು ಹಕ್ಕಿಯ ಫೋಟೋಗಾಗಿ 7 ತಿಂಗಳು ಕಾಯ್ದ ವ್ಯಕ್ತಿ..!, 60ನೇ ಹುಟ್ಟುಹಬ್ಬವನ್ನೂ ವಿಭಿನ್ನವಾಗಿ ಆಚರಿಸಿದರು..!

ವಿಟ್ಲದ ಆರ್‌. ಕೆ. ಪೈ ಅವರು ತಮ್ಮ 60ನೇ ಹುಟ್ಟುಹಬ್ಬವನ್ನು ಮಕ್ಕಳಲ್ಲಿ ಪ್ರಕೃತಿ…

1 day ago

₹1.11 ಕೋಟಿ ಮೌಲ್ಯದ ಕಳಪೆ ಗುಣಮಟ್ಟದ ಅಡಿಕೆ ವಶಕ್ಕೆ – ಮಹಾರಾಷ್ಟ್ರದ ಕೋಲ್ಡ್ ಸ್ಟೋರೇಜ್‌ನಲ್ಲೂ ಕಳಪೆ ಅಡಿಕೆ ದಾಸ್ತಾನು..!

ನಾಗ್ಪುರದ ಕಾಂಪ್ಟಿಯಲ್ಲಿ FDA ಹಾಗೂ ಪೊಲೀಸರು ನಡೆಸಿದ ದಾಳಿಯಲ್ಲಿ ₹1.11 ಕೋಟಿ ಮೌಲ್ಯದ…

1 day ago