Advertisement
Opinion

ಮುಯಿಜು಼ ಎನ್ನುವ ಚೈನೀಸ್ ನಾಯಿ | ಭಾರತ ಮಾಡಿದ ಸಹಾಯ ಮರೆತ ಮಾಲ್ಡೀವ್ಸ್‌ನ ಪ್ರಧಾನಿ |

Share

ಮುಯಿಜು಼ ಎನ್ನುವ ಚೈನೀಸ್(China)ನಾಯಿ – ಇವನ ಹೆಸರು ಮೊಹಮ್ಮದ್ ಮುಯಿಜು಼(Mohammad Muizzu), ಕೆಲ ತಿಂಗಳ ಹಿಂದೆ ನೆರೆ ರಾಷ್ಟ್ರ ಮಾಲ್ಡೀವ್ಸ್ ನಲ್ಲಿ(Maldives) ನಡೆದ ಚುನಾವಣೆಯಲ್ಲಿ ಗೆದ್ದು ಆ ದೇಶದ ರಾಷ್ಟ್ರಪತಿಯಾಗಿ(President) ಅಧಿಕಾರ ವಹಿಸಿಕೊಂಡ. ದೈಹಿಕವಾಗಿ ನೋಡೋಕೆ ಜೀವನದಲ್ಲಿ ಜಿಗುಪ್ಸೆ ಹೊಂದಿದ ಒಂದು ನಿತ್ರಾಣ ಮೇಕೆಯಂತೆ ಕಂಡರೂ ಮಾನಸಿಕವಾಗಿ ಇವ ಚೈನೀಸ್ ಬಿಸಾಕಿದ ಮೂಳೆ ಕಡಿಯುವ ನಾಯಿ. ಅಸಲಿಗೆ ಇವನು ಎಲಕ್ಷನ್ ಗೆದ್ದಿದ್ದೇ ಭಾರತ(India) ವಿರೋಧಿ ನಿಲುವಿನಿಂದ. ಯಾವ ಭಾರತ ಒಬ್ಬ ದೊಡ್ಡಣ್ಣನಂತೆ ಸಹಾಯಕ್ಕೆ ನಿಂತು ಈ ದ್ವೀಪದೇಶ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ನೆರವಿಗೆ ಧಾವಿಸುತ್ತಿದ್ದುದನ್ನು ಮರೆತ ನಮಕ್ ಹರಾಮ್ ಇವನು.

ಇವರಿಗೆ ಸಹಾಯವಾಗಲೆಂದು ಭಾರತ, ಹೆಲಿಕಾಪ್ಟರುಗಳು ಮತ್ತು ವಿಮಾನವನ್ನು ನೀಡಿ, ಅವುಗಳ ನಿರ್ವಹಣೆಗೆ ಸುಮಾರು 78 ಜನರ ತಾಂತ್ರಿಕ ವರ್ಗವನ್ನು ಕಳಿಸಿಕೊಟ್ಟರೆ, ಈ ಕೃತಘ್ನ ನಮಗೆ ಭಾರತೀಯರು ಇಲ್ಲಿರುವುದು ಬೇಡ ಎನ್ನುವ ಚುನಾವಣಾ ಭಾಷಣ ಬಿಗಿದು ಗೆದ್ದು ಬಂದವನು. ಅಸಲಿಗೆ ಇದರ ಹಿನ್ನಲೆಯಲ್ಲಿ ಇರುವುದು ಚೀನಾದ ಷಡ್ಯಂತ್ರ. ಇವನ ಚುನಾವಣೆಗೆ ಯಥೇಚ್ಛವಾಗಿ ದುಡ್ಡುಕೊಟ್ಟು ಗೆಲ್ಲಿಸಿದ್ದೇ ಚೀನಾ. ಗೆದ್ದ ನಂತರ ಚೀನಾದ ಗುಲಾಮನಂತೆ ನಡೆದುಕೊಳ್ಳುತ್ತಿರುವ ಈ ನೀಚ ಚೀನಾದ ಹಡಗು ಮಾಲ್ಡೀವ್ಸಿಗೆ ಬರಲು ಅನುವು ಮಾಡಿಕೊಟ್ಟ. ಆದರೆ ಅಲ್ಲಿ ಭಾರತೀಯ ವಿಮಾನಗಳ ಹಾರಾಟ ನೋಡಿ ಚೀನಾಕ್ಕೆ ಅಂಗವಿಶೇಷದಲ್ಲಿ ತುರಿಕೆಯಾಗಿ, ಭಾರತೀಯರನ್ನು ಇಲ್ಲಿಂದ ಕಳಿಸಿದರೆ ನಿನಗೆ ಇನ್ನೊಂದಿಷ್ಟು ಮೂಳೆಗಳನ್ನು ಎಸೆಯುತ್ತೇವೆ ಎಂದಾಗ, ಇವನಿಗೆ ಒಂದಿಷ್ಟು ಬಲ ಬಂದಂತಾಗಿ “ಭಾರತ ಔಟ್” ಅಂತಾ ಬೊಗಳೋಕೆ ಶುರು ಮಾಡಿದೆ ಈ ಶ್ವಾನ.

ಭಾರತ ಮಾಲ್ಡೀವ್ಸನ್ನು ಯಾವ ಕಾರಣಕ್ಕೂ ತೊರೆಯುವುದಿಲ್ಲ, ಅದಕ್ಕೆ ಹಲವಾರು ಕಾರಣಗಳಿವೆ. ಮೊದಲಿದ್ದಂತೆ ಮಾಲ್ಡೀವ್ಸ್ ಒಂದು ಶಾಂತಿ ಪ್ರಿಯ ದೇಶವಾಗಿ ಉಳಿದಿಲ್ಲ. ಜನಸಂಖ್ಯೆಯ ಶೇಕಡಾವಾರು ತೆಗೆದುಕೊಂಡರೆ ಐಸಿಸ್ ಮತ್ತು ಲಶ್ಕರ್ ಸಂಘಟನೆಗಳಿಗೆ ಅತಿ ಹೆಚ್ಚು ರಿಕ್ರೂಟುಗಳ ಹೋಗುತ್ತಿರುವುದು ಇಲ್ಲಿಂದಲೇ. ದೂರ ಹೋಗುವುದೇಕೆ, ಈ ಮುಯಿಜುನ ಹೆಂಡತಿಯ ಇಬ್ಬರು ಅಣ್ಣಂದಿರು ಇಸ್ಲಾಮಿನ ಮೂಲಭೂತವಾದಿ ಸಂಘಟನೆಗಳಿಗೆ ಸೇರಿದವರು. ಇಲ್ಲಿನವರಿಗೂ ಮತ್ತು ಕೇರಳದ ಕೆಲವು ಮೂಲಭೂತವಾದಿಗಳೊಂದಿಗೆ ಕೆಲವು ರಹಸ್ಯ ಸಂಭಂದಗಳಿವೆ. ಅಯೋಧ್ಯೆಯಲ್ಲಿ ಅನುಮಾನಾಸ್ಪದವಾಗಿ ಓಡಾಡಿಕೊಂಡಿದ್ದ ಮೂವರನ್ನು ಬಂಧಿಸಲಾಗಿದೆ. ಈ ಮೂವರನ್ನು ಮಾಲ್ಡೀವ್ಸಿನಿಂದ ಒಬ್ಬ ಮಹಿಳೆ ನಿರ್ದೇಶಿಸುತ್ತಿದ್ದಳಂತೆ.

ನಿನ್ನೆ ಅಂದರೆ 6 ಮಾರ್ಚ್ 2024 ರಂದು ಭಾರತೀಯ ನೌಕಾದಳ INS ಜಟಾಯು ಎನ್ನುವ ಹೆಸರಿನ ಇನ್ನೊಂದು ಹೊಸ ನೌಕಾನೆಲೆಯನ್ನು ಲಕ್ಷದ್ವೀಪ ಸಮೂಹದ ಮಿನಿಕಾಯ್ ದ್ವೀಪದಲ್ಲಿ ಉದ್ಘಾಟಿಸಿತು. ಸಾಂಪ್ರದಾಯಿಕವಾಗಿ ನೌಕಾ ನೆಲೆಗಳನ್ನು ಸ್ಥಿರಹಡಗುಗಳು ಎಂದು ಕರೆಯಲಾಗುತ್ತದೆ, ಆದ್ದರಿಂದ INS ಜಟಾಯು ಒಂದು ಹಡಗು ಅಲ್ಲ, ಇದು ನೌಕಾ ನೆಲೆ. INS ಜಟಾಯು INS ದ್ವೀಪರಕ್ಷಕ ನಂತರ ಲಕ್ಷದ್ವೀಪದಲ್ಲಿ ಭಾರತದ ಎರಡನೇ ನೌಕಾ ನೆಲೆಯಾಗಿದೆ. ಹೀಗೆ ಮಾಲ್ಡೀವ್ಸ್ ಸಮೀಪವೇ ಭದ್ರಗೊಳ್ಳುತ್ತಿರುವ ಭಾರತೀಯ ನೌಕಾಬಲವನ್ನು ನೋಡಿ ಚೈನೀಸ್ ಡ್ರಾಗನ್ ಕುಂಯ್ ಗುಡುತ್ತಿದ್ದರೆ, ಮುಯಿಜುನ ಗಂಟಲಲ್ಲಿ ಮೂಳೆ ಅಡ್ಡಡ್ಡ ಸಿಕ್ಕಿ ಹಾಕಿಕೊಂಡಿರುವಂತೆ ಚಡಪಡಿಸುತ್ತಿದೆ.

ಪಿಕ್ಚರ್ ಅಭೀ ಬಾಕಿ ಹೈ ಮೆರೇ ದೋಸ್ತ್!

ಬರಹ – WG CDR Sudarshan

Maldivian President Muizzu is choosing China over India: What is at play?India is set to pull its first batch of military personnel from the Maldives on Sunday as the island nation moves closer to China. The phased withdrawal of about 80 Indian troops must meet a May deadline set by President Mohamed Muizzu, who is widely seen to be pro-China.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

6 hours ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

6 hours ago

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

1 day ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

2 days ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

2 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

2 days ago