Advertisement
ಸುದ್ದಿಗಳು

ನಾ. ಕಾರಂತ ಪೆರಾಜೆಯವರ ಲೇಖನಗಳು ಬೆಂಗಳೂರು ವಿವಿ ಪಠ್ಯಕ್ಕೆ ಸೇರ್ಪಡೆ

Share

ಕೃಷಿ ಮಾಸಿಕ ಅಡಿಕೆ ಪತ್ರಿಕೆಯ ಸಹ ಸಂಪಾದಕ, ಅಂಕಣಗಾರ, ನಾ. ಕಾರಂತ ಪೆರಾಜೆಯವರ ಎರಡು ಕೃಷಿ ಸಂಬಂಧಿ ಲೇಖನಗಳು ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯದಲ್ಲಿ ಸೇರ್ಪಡೆಗೊಂಡಿದೆ. ಈ ಲೇಖನಗಳು ಉದಯವಾಣಿಯ ‘ನೆಲದ ನಾಡಿ’ ಅಂಕಣ ಹಾಗೂ ‘ತರಂಗ’ದಲ್ಲಿ ಪ್ರಕಟವಾದಂತಹುಗಳು.

ಬಿ.ಎಚ್.ಎಂ.ಪ್ರಥಮ ಸೆಮಿಸ್ಟರ್ – ಭಾಷಾ ಕನ್ನಡ ಪಠ್ಯದಲ್ಲಿ ‘ಆಹಾರ ಸಂರಕ್ಷಣೆಯಿಂದ ಬದುಕಿಗೆ ಭದ್ರತೆ’ (ಉದಯವಾಣಿ) ಎನ್ನುವ ಲೇಖನ. ನಮ್ಮ ಹಿರಿಯರ ಆಹಾರ ಸಂರಕ್ಷಣಾ ವಿಧಾನದ ಸುತ್ತ ಹೆಣೆದ ಬರಹವಿದು. ಹಲಸು, ಮಾವು, ಬಾಳೆಹಣ್ಣು, ಭತ್ತ.. ಮೊದಲಾದವುಗಳ ಸಂರಕ್ಷಣೆ, ಅವುಗಳ ಮೌಲ್ಯವರ್ಧನೆಗಳು ಹಳ್ಳಿ ಬದುಕಿನಲ್ಲಿ ಸಹಜವಾಗಿ ಹಾಸುಹೊಕ್ಕಾದ ಕಾಲಘಟ್ಟವನ್ನು ಕಾರಂತರು ಲೇಖನದಲ್ಲಿ ವಿವರಿಸಿದ್ದರು. ಒಂದು ಕಾಲಘಟ್ಟದಲ್ಲಿ ಬದುಕನ್ನು ಆಧರಿಸಿದ ಹಲಸು, ಹಲಸಿನ ಹಣ್ಣು, ಹಲಸಿನ ಕಾಯಿಯ ಉಪ್ಪುಸೊಳೆ, ಪಲ್ಯ, ವಿವಿಧ ಖಾದ್ಯಗಳ ಪರಿಚಯ; ಕಾಡುಮಾವಿನ ಮಾಂಬಳ ತಯಾರಿ, ಹಲಸಿನ ಹಣ್ಣಿನ ಬೆರಟ್ಟಿ, ಹಸಿಮೆಣಸಿನ ಮಜ್ಜಿಗೆ ಮೆಣಸು, ಬಾಳೆಹಣ್ಣಿನ ಸುಕೇಳಿ, ಪುನರ್ಪುಳಿ ಮಂದಸಾರ ಹಾಗೂ ಸಿಪ್ಪೆಯ ಬಳಕೆ, ಅಕ್ಕಿ ಮುಡಿಯ ಬಳಕೆ.. ಇವೆಲ್ಲಾ ಅಲಿಖಿತ ಹಳ್ಳಿ ತಂತ್ರಜ್ಞಾನದಲ್ಲಿ ಕಾಪಾಡಲ್ಪಟ್ಟವುಗಳು. ಯಾವುದೇ ಕೃತಕ ಸಂರಕ್ಷಕಗಳನ್ನು ಬಳಸದ ಹಳ್ಳಿ ಜ್ಞಾನ.

ಬಿ.ಬಿ.ಎ ಪ್ರಥಮ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯದಲ್ಲಿ ‘ಹತ್ತು ಪೈಸೆಗೆ ಒಂದು ಲೀಟರ್ ನೀರು’ (ತರಂಗ) ಲೇಖನ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಶುದ್ಧ ಗಂಗಾ’ ಯೋಜನೆಯಡಿ ರೂಪುಗೊಂಡ ಅಭಿಯಾನ. ಹಳ್ಳಿ ಜನರಿಗೆ ಕುಡಿಯಲು ಶುದ್ಧ ನೀರನ್ನು ಒದಗಿಸುವ ಈ ಯೋಜನೆಯು ಯಶಸ್ಸಾಗಿದೆ. ಇದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಕನಸು. ಮುಖ್ಯವಾಗಿ ಹೆಚ್ಚು ನೀರಿನ ಸಮಸ್ಯೆಯಿರುವ ಉತ್ತರ ಕರ್ನಾಟಕ ಭಾಗದಲ್ಲಿ ತುಂಬು ಜನಸ್ವೀಕೃತಿಗೊಂಡ ಯೋಜನೆ. ನೀರಿನ ಹಂಚಿಕೆಗೆ ಕ್ರಮಬದ್ಧವಾದ ಆಡಳಿತ ವ್ಯವಸ್ಥೆಯನ್ನೂ ಮಾಡಿದ್ದಾರೆ. ಆರೋಗ್ಯ ಕಾಳಜಿಯ ಗ್ರಾಮೀಣರಿಗೆ ‘ಶುದ್ಧ ಗಂಗಾ’ ವರದಾನವಾಗಿದೆ.

ನಾ. ಕಾರಂತ ಪೆರಾಜೆಯವರು ಈ ಹಿಂದೆ ಬರೆದಿದ್ದ ಪದ್ಮಶ್ರೀ ಹರೇಕಳ ಹಾಜಬ್ಬರ ಬಗೆಗಿನ ‘ಅಕ್ಷರ ಯೋಗಿಯ ನೋಡಲ್ಲಿ’ ಲೇಖನವು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಹಾಗೂ ದಾವಣಗೆರೆ ವಿಶ್ವವಿದ್ಯಾಲಯಗಳ ವಾಣಿಜ್ಯ ವಿಭಾಗದ ನಾಲ್ಕನೇ ಸೆಮಿಸ್ಟರ್‍ನ ಕನ್ನಡ ಪಠ್ಯದಲ್ಲಿ ಸೇರಿತ್ತು.
ಮೇಲಿನ ಲೇಖನಗಳು ‘ನೆಲದ ನಾಡಿ’ ಪುಸ್ತಕದಲ್ಲಿ ಪ್ರಕಟವಾಗಿದ್ದುವು. ಬೆಂಗಳೂರು ವಿವಿಯವರು ಪುಸ್ತಕದಿಂದ ಲೇಖನಗಳನ್ನು ಆಯ್ದುಕೊಂಡಿದ್ದಾರೆ. ನಾ. ಕಾರಂತರು ಕೃಷಿ, ಯಕ್ಷಗಾನದ ಕುರಿತಾದ ಪುಸ್ತಕ ರಚಯಿತರು. ಉದಯವಾಣಿ, ಹೊಸದಿಗಂತ, ಪ್ರಜಾವಾಣಿ ಹಾಗೂ ಸುದ್ದಿ ಬಿಡುಗಡೆಗಳಲ್ಲಿ ಅಂಕಣಕಾರರಾಗಿದ್ದರು.’ಪುತ್ತೂರು ತಾಲೂಕು ಹದಿನೇಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕೋವಿಡ್ ಕಾಲಘಟ್ಟದ ಧನಾತ್ಮಕ ಯಶೋಗಾಥೆಗಳ ಸಂಕಲನ ‘ಮುಸ್ಸಂಜೆಯ ಹೊಂಗಿರಣ’ ಹಾಗೂ ಹಲಸಿನ ಜಗದಗಲದ ಹಿನ್ನೋಟ ‘ಅನ್ನದ ಮರ’ ಅವರ ಈಚೆಗಿನ ಪ್ರಕಟಣೆಗಳು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅನ್ನವೇ ಜೀವನ, ಅನ್ನವೇ ಮೃತ್ಯು

ಮಿತಾಹಾರ, ಯಜ್ಞಸ್ವರೂಪ ಭೋಜನ ಹಾಗೂ ಆಹಾರದ ಶಾಸ್ತ್ರೋಕ್ತ ಮಹತ್ವವನ್ನು ಶ್ರೀ ರಾಘವೇಶ್ವರ ಭಾರತೀ…

5 hours ago

ಕೃಷಿ ಕ್ಷೇತ್ರಕ್ಕೆ ಎಥೆನಾಲ್‌ ದೊಡ್ಡ ಅವಕಾಶ

ಎಥೆನಾಲ್‌ ನೀತಿಯಿಂದ ರೈತರಿಗೆ ಉತ್ತಮ ಬೆಲೆ ದೊರೆಯಲಿದ್ದು, ದೇಶದ ಇಂಧನ ಭದ್ರತೆಯೂ ಬಲಗೊಳ್ಳಲಿದೆ…

5 hours ago

ಮಾನವ–ವನ್ಯಜೀವಿ ಸಂಘರ್ಷ ತಡೆಗೆ ರಾಷ್ಟ್ರೀಯ ಕಾರ್ಯತಂತ್ರ – ಕರ್ನಾಟಕದ AI ಮಾದರಿಗೆ ಕೇಂದ್ರದ ಮೆಚ್ಚುಗೆ

ಮಾನವ–ವನ್ಯಜೀವಿ ಸಂಘರ್ಷ ತಡೆ ಕುರಿತು ನಡೆದ ಸಂಸದೀಯ ಸಭೆಯಲ್ಲಿ ಕರ್ನಾಟಕದ AI ಆಧಾರಿತ…

6 hours ago

ಅಕ್ರಮ ಅಡಿಕೆ ಆಮದು ತಡೆಗೆ ಕೇಂದ್ರದ ಭರವಸೆ – ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಭೇಟಿಯಾದ ಕ್ಯಾಂಪ್ಕೊ ನಿಯೋಗ

ಅಕ್ರಮ ಅಡಿಕೆ ಆಮದು, ಜಿಎಸ್‌ಟಿ ತಾರತಮ್ಯ ಹಾಗೂ ಸಹಕಾರ ಸಂಘಗಳ ಸಮಸ್ಯೆಗಳ ಕುರಿತು…

6 hours ago

ಹವಾಮಾನ ವರದಿ | 08-07-2026 | ರಾಜ್ಯದಲ್ಲಿ ಮುಂಗಾರು ಪರಿಸ್ಥಿತಿ ಹೇಗಿದೆ…? ಕರಾವಳಿಯಲ್ಲಿ ಮಳೆ ಕಡಿಮೆಯಾಗುತ್ತಿದೆಯೇ?

ಆಗಸ್ಟ್‌ 8ರಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯ ಪ್ರಮಾಣ ಇಳಿಕೆಯಾಗುವ ಲಕ್ಷಣಗಳಿವೆ. ಆಗಸ್ಟ್‌…

15 hours ago

ಮ್ಯಾನ್ಮಾರ್‌ನಿಂದ ಭಾರತಕ್ಕೆ ಅಕ್ರಮ ಅಡಿಕೆ ಜಾಲ | ಮೂರು ಹಂತದ ಕಳ್ಳಸಾಗಣೆ ಜಾಲವನ್ನು ಬಯಲಿಗೆಳೆದ ಇಡಿ

ಮ್ಯಾನ್ಮಾರ್‌ನಿಂದ ಭಾರತಕ್ಕೆ ಅಕ್ರಮವಾಗಿ ಅಡಿಕೆ ಸಾಗಿಸುತ್ತಿದ್ದ ಮೂರು ಹಂತದ ಜಾಲವನ್ನು ಇಡಿ ತನಿಖೆಯಲ್ಲಿ…

19 hours ago