ಕೃಷಿ ಕಾನೂನುನುಗಳು ಮತ್ತೆ ಮುಂದುವರಿಯಬಹುದು | ಕೃಷಿ ಸಚಿವ ನರೇಂದ್ರ ತೋಮರ್ |

December 29, 2021
2:38 PM

ರೈತರ ನಿರಂತರ ಪ್ರತಿಭಟನೆ ರಾಷ್ಟ್ರವ್ಯಾಪಿ ನಡೆದ ನಂತರ ಕಳೆದ ತಿಂಗಳು ರದ್ದುಪಡಿಸಿದ ಮೂರು ಕೃಷಿ ಕಾನೂನುಗಳನ್ನು ಸರ್ಕಾರವು ಮತ್ತೆ ಜಾರಿಗೆ ತರಬಹುದು ಅಥವಾ ಮರು ಪರಿಚಯಿಸಬಹುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಮೂರು ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಸರ್ಕಾರವು ಒಂದು ಹೆಜ್ಜೆ ಹಿಂದಕ್ಕೆ ಹೋಗಿರುವುದು  ನಿಜ, ಆದರೆ ಅದು ಮತ್ತೆ ಎರಡು ಹೆಜ್ಜೆ ಮುಂದಕ್ಕೆ ಮುಂದುವರಿಯಬಹುದು ಎಂದು ಹೇಳಿದರು.

ನಾವು ಕೃಷಿ ತಿದ್ದುಪಡಿ ಕಾನೂನುಗಳನ್ನು ತಂದಿದ್ದೇವೆ. ಆದರೆ ಕೆಲವರು ಈ ಕಾನೂನುಗಳನ್ನು ಇಷ್ಟಪಡಲಿಲ್ಲ. 7೦ ವರ್ಷಗಳ ನಂತರ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೃಷಿ ಕ್ಷೇತ್ರವೂ ದೊಡ್ಡ ಸುಧಾರಣೆಯಾಗಿದೆ. ರೈತರು ಭಾರತದ ಬೆನ್ನಲುಬು, ಬೆನ್ನೆಲುಬು ಗಟ್ಟಿಯಾಗಿದ್ದರೆ ದೇಶವೂ ಸದೃಢವಾಗುತ್ತದೆ ಎಂದರು.

ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೃಷಿ ಸಚಿವರು ಸಾರ್ವಜನಿಕವಾಗಿ ವ್ಯತಿರಿಕ್ತವಾಗಿ ಮತ್ತೆ ರೈತರನ್ನು, ರೈತ ಹೋರಾಟವನ್ನು ಅವಮಾನಿಸಿದ್ದಾರೆ. ಸರಕಾರ ಮತ್ತೊಮ್ಮೆ ರೈತ ವಿರೋಧಿ ಕ್ರಮಕ್ಕೆ ಮುಂದಾದರೆ ಅನ್ನದಾತರು ಮತ್ತೆ ಸತ್ಯಾಗ್ರಹಕ್ಕೆ ಮುಂದಾಗುತ್ತಾರೆ . ಮಾತ್ರವಲ್ಲ ಸರಕಾರದ ಅಹಂಕಾರವನ್ನು ಒಮ್ಮೆ ಹತ್ತಿಕ್ಕಿ ಸತ್ಯಾಗ್ರಹ ಮಾಡುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ಟ್ವೀಟ್ ಮೂಲಕ ಉತ್ತರಿಸಿದ್ದಾರೆ. 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | 06-09-2026 | ಕರ್ನಾಟಕದಲ್ಲಿ ಮಳೆ ಇಳಿಮುಖದ ಲಕ್ಷಣ
September 6, 2026
2:52 PM
by: ಸಾಯಿಶೇಖರ್ ಕರಿಕಳ
ಭಾರತದ ಹಸಿರು ಯೋಜನೆಗಳಿಗೆ ಜಪಾನ್‌ನ ಕಾರ್ಬನ್ ಕ್ರೆಡಿಟ್ ಅವಕಾಶ – ರೈತರೂ ಪಡೆಯಬಹುದೇ ಇದರ ಲಾಭ?
September 6, 2026
12:28 PM
by: ದ ರೂರಲ್ ಮಿರರ್.ಕಾಂ
ಹಿಮಾಲಯದಲ್ಲಿ ಮತ್ತೊಂದು ಅಪಾಯದ ಎಚ್ಚರಿಕೆ..!
September 6, 2026
11:11 AM
by: ದ ರೂರಲ್ ಮಿರರ್.ಕಾಂ
ಎಲ್ ನಿನೊ ಮತ್ತಷ್ಟು ಬಲಗೊಳ್ಳುವ ಮುನ್ಸೂಚನೆ..!
September 6, 2026
10:01 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror