Advertisement
ವಿಶೇಷ ವರದಿಗಳು

ರಬ್ಬರ್‌ ರಪ್ತು | ತ್ರಿಪುರಾದಿಂದ ನೇಪಾಳಕ್ಕೆ 14 ಟನ್ ನೈಸರ್ಗಿಕ ರಬ್ಬರ್ ರವಾನೆ |

Share

ಭಾರತದಲ್ಲಿ ಕೇರಳದ ನಂತರ ನೈಸರ್ಗಿಕ ರಬ್ಬರ್‌ ಉತ್ಪಾದನೆಯ ಎರಡನೇ ಅತಿದೊಡ್ಡ ಉತ್ಪಾದಕ ರಾಜ್ಯ ತ್ರಿಪುರಾ. ಇದೀಗ ತ್ರಿಪುರಾದಿಂದ  14 ಟನ್‌ ರಬ್ಬರ್‌ ನೇಪಾಳಕ್ಕೆ ರವಾನಿಸಿದೆ ಎಂದು ರಬ್ಬರ್ ಬೋರ್ಡ್ ಅಧಿಕಾರಿಗಳು  ತಿಳಿಸಿದ್ದಾರೆ.

ರಬ್ಬರ್ ಬೋರ್ಡ್ ಪ್ರವರ್ತಿತ ಮಣಿಮಲಯಾರ್ ರಬ್ಬರ್ಸ್ ಪ್ರೈವೇಟ್ ಲಿಮಿಟೆಡ್ 2020 ರಲ್ಲಿ ತ್ರಿಪುರಾದಿಂದ ನೇಪಾಳಕ್ಕೆ 18 ಟನ್ ನೈಸರ್ಗಿಕ ರಬ್ಬರ್ ರಫ್ತು ಮಾಡಿತ್ತು. ಮಣಿಮಲಯರ್ ರಬ್ಬರ್‌ ಜನರಲ್ ಮ್ಯಾನೇಜರ್ ಅರುಣಾಭಾ ಮಜುಂದಾರ್‌ ಅವರ ಪ್ರಕಾರ,  14,550 ಕೆ.ಜಿ. (ಲ್ಯಾಟೆಕ್ಸ್) ತ್ರಿಪುರಾದಲ್ಲಿ ಉತ್ಪಾದನೆಯಾಗಿದ್ದು, ಇದನ್ನು ಶೂ ಉತ್ಪಾದನೆಗಾಗಿ ಕಠ್ಮಂಡುವಿಗೆ ರವಾನೆ ಮಾಡಲಾಗಿದೆ ಎನ್ನುತ್ತಾರೆ. ನೇಪಾಳಕ್ಕೆ ರಕ್ಸಾಲ್-ಬಿರ್‌ಗುಂಜ್ ಗಡಿ ಮಾರ್ಗದ ಮೂಲಕ ವಾಹನದ ಮೂಲಕ ಸಾಗಿಸಲಾಗಿದೆ.

1997 ರಿಂದ, ಮೇಘಾಲಯದ ಗುವಾಹಟಿ, ಸಿಲ್ಚಾರ್ ಮತ್ತು ತುರಾದಲ್ಲಿ ಕಚೇರಿಗಳನ್ನು ಹೊಂದಿರುವ ಮಣಿಮಲಯರ್ ರಬ್ಬರ್ಸ್ ರೈತರಿಗೆ ಮಾರುಕಟ್ಟೆ ಸಹಾಯವನ್ನು ಒದಗಿಸಿದೆ. ತ್ರಿಪುರಾದಲ್ಲಿ ಪ್ರಸ್ತುತ 89,264 ಹೆಕ್ಟೇರ್ ಭೂಮಿಯಲ್ಲಿ ನೈಸರ್ಗಿಕ ರಬ್ಬರ್  ಬೆಳೆಯುತ್ತದೆ, ವಾರ್ಷಿಕವಾಗಿ 1,691 ಕೋಟಿ ಮೌಲ್ಯದ 93,371 ಟನ್ ರಬ್ಬರ್ ಅನ್ನು ನೀಡುತ್ತದೆ. ತ್ರಿಪುರಾದಲ್ಲಿ, ರಬ್ಬರ್ ಕೃಷಿಯು ಆದಿವಾಸಿಗಳು ಸೇರಿದಂತೆ ಸುಮಾರು ಎರಡು ಲಕ್ಷ ಕುಟುಂಬಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ನೆರವಾಗಿದೆ.

ರಬ್ಬರ್ ಬೋರ್ಡ್ ಅಧಿಕಾರಿಗಳ ಪ್ರಕಾರ, ಏಳು ಈಶಾನ್ಯ ರಾಜ್ಯಗಳು ವಾರ್ಷಿಕವಾಗಿ 1,90,000 ಹೆಕ್ಟೇರ್‌ಗಳಲ್ಲಿ ರಬ್ಬರ್  ಬೆಳೆಯುತ್ತವೆ 1,11,700 ಟನ್ ನೈಸರ್ಗಿಕ ರಬ್ಬರ್ ಅನ್ನು ಉತ್ಪಾದಿಸುತ್ತವೆ. ಅಸ್ಸಾಂ 58,000 ಹೆಕ್ಟೇರ್ ಗಳಲ್ಲಿ ವಾರ್ಷಿಕವಾಗಿ 31,000 ಟನ್ ನೈಸರ್ಗಿಕ ರಬ್ಬರ್ ಅನ್ನು ಉತ್ಪಾದಿಸುತ್ತದೆ. ಮೇಘಾಲಯವು 17,000 ಹೆಕ್ಟೇರ್‌ಗಳಲ್ಲಿ 9,500 ಟನ್‌, ನಾಗಾಲ್ಯಾಂಡ್‌ನಲ್ಲಿ 6,100 ಟನ್‌ಗಳೊಂದಿಗೆ 15,000 ಹೆಕ್ಟೇರ್‌ಗಳಲ್ಲಿ ಉತ್ಪಾದನೆಯಾಗುತ್ತದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ದಾಖಲೆ: ಕಲಬುರಗಿ ಯುವ ರೈತನಿಗೆ ರಾಜ್ಯದ ಮೆಚ್ಚುಗೆ!

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…

5 hours ago

2026 ಮುಂಗಾರು ಮುನ್ಸೂಚನೆ – ಕೇರಳಕ್ಕೆ ನಿರೀಕ್ಷೆಗಿಂತ ಮುನ್ನವೇ ಆಗಮನ? – ಮಳೆ ಕಡಿಮೆಯಾಗುವ ಸಾಧ್ಯತೆ- ಕೃಷಿಗೆ ದೊಡ್ಡ ಸವಾಲು

2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…

7 hours ago

ಈರುಳ್ಳಿಯಲ್ಲಿ ಇಳುವರಿ ಹೆಚ್ಚಿಸುವ ರಹಸ್ಯ..! ಜೇನುನೊಣಗಳ ಪರಾಗಸ್ಪರ್ಶದಿಂದ ಡಬಲ್ ಲಾಭ

ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…

8 hours ago

ಗ್ರಾಮೀಣ ಜಾಲಕ್ಕೆ ನೆಟ್ವರ್ಕ್ ಬೂಸ್ಟ್‌ – ಬಿಎಸ್ಎನ್ಎಲ್ ಸುಧಾರಣೆಗೆ ಕೇಂದ್ರದ ಆದ್ಯತೆ

ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಸಂಪರ್ಕ ಒದಗಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ.

8 hours ago

ಜಾಗತಿಕ ತಾಪಮಾನಕ್ಕೆ ಪರಿಹಾರ : ವೃಕ್ಷ ಸಂವರ್ಧನೆಗೆ ಒತ್ತು

ಜಾಗತಿಕ ತಾಪಮಾನ ನಿಯಂತ್ರಣಕ್ಕೆ ವೃಕ್ಷ ಸಂವರ್ಧನೆ ಮುಖ್ಯ ಎಂದು ಸಚಿವ ಈಶ್ವರ ಖಂಡ್ರೆ…

8 hours ago

ಕೃಷಿಗೆ ಹೊಸ ದಿಕ್ಕು – ICAR ಟಾಸ್ಕ್ ಫೋರ್ಸ್ ಘೋಷಣೆ – ರೈತರ ಆದಾಯ ಹೆಚ್ಚಳಕ್ಕೆ ಪ್ಲಾನ್

ICAR ಕೃಷಿ ಕ್ಷೇತ್ರವನ್ನು ಬಲಪಡಿಸಲು ಸ್ಪೆಷಲ್ ಟಾಸ್ಕ್ ಫೋರ್ಸ್ ರಚಿಸಿದೆ. ಹವಾಮಾನ ಸವಾಲುಗಳಿಗೆ…

17 hours ago