Advertisement
ವಿಶೇಷ ವರದಿಗಳು

ರಬ್ಬರ್‌ ರಪ್ತು | ತ್ರಿಪುರಾದಿಂದ ನೇಪಾಳಕ್ಕೆ 14 ಟನ್ ನೈಸರ್ಗಿಕ ರಬ್ಬರ್ ರವಾನೆ |

Share

ಭಾರತದಲ್ಲಿ ಕೇರಳದ ನಂತರ ನೈಸರ್ಗಿಕ ರಬ್ಬರ್‌ ಉತ್ಪಾದನೆಯ ಎರಡನೇ ಅತಿದೊಡ್ಡ ಉತ್ಪಾದಕ ರಾಜ್ಯ ತ್ರಿಪುರಾ. ಇದೀಗ ತ್ರಿಪುರಾದಿಂದ  14 ಟನ್‌ ರಬ್ಬರ್‌ ನೇಪಾಳಕ್ಕೆ ರವಾನಿಸಿದೆ ಎಂದು ರಬ್ಬರ್ ಬೋರ್ಡ್ ಅಧಿಕಾರಿಗಳು  ತಿಳಿಸಿದ್ದಾರೆ.

ರಬ್ಬರ್ ಬೋರ್ಡ್ ಪ್ರವರ್ತಿತ ಮಣಿಮಲಯಾರ್ ರಬ್ಬರ್ಸ್ ಪ್ರೈವೇಟ್ ಲಿಮಿಟೆಡ್ 2020 ರಲ್ಲಿ ತ್ರಿಪುರಾದಿಂದ ನೇಪಾಳಕ್ಕೆ 18 ಟನ್ ನೈಸರ್ಗಿಕ ರಬ್ಬರ್ ರಫ್ತು ಮಾಡಿತ್ತು. ಮಣಿಮಲಯರ್ ರಬ್ಬರ್‌ ಜನರಲ್ ಮ್ಯಾನೇಜರ್ ಅರುಣಾಭಾ ಮಜುಂದಾರ್‌ ಅವರ ಪ್ರಕಾರ,  14,550 ಕೆ.ಜಿ. (ಲ್ಯಾಟೆಕ್ಸ್) ತ್ರಿಪುರಾದಲ್ಲಿ ಉತ್ಪಾದನೆಯಾಗಿದ್ದು, ಇದನ್ನು ಶೂ ಉತ್ಪಾದನೆಗಾಗಿ ಕಠ್ಮಂಡುವಿಗೆ ರವಾನೆ ಮಾಡಲಾಗಿದೆ ಎನ್ನುತ್ತಾರೆ. ನೇಪಾಳಕ್ಕೆ ರಕ್ಸಾಲ್-ಬಿರ್‌ಗುಂಜ್ ಗಡಿ ಮಾರ್ಗದ ಮೂಲಕ ವಾಹನದ ಮೂಲಕ ಸಾಗಿಸಲಾಗಿದೆ.

1997 ರಿಂದ, ಮೇಘಾಲಯದ ಗುವಾಹಟಿ, ಸಿಲ್ಚಾರ್ ಮತ್ತು ತುರಾದಲ್ಲಿ ಕಚೇರಿಗಳನ್ನು ಹೊಂದಿರುವ ಮಣಿಮಲಯರ್ ರಬ್ಬರ್ಸ್ ರೈತರಿಗೆ ಮಾರುಕಟ್ಟೆ ಸಹಾಯವನ್ನು ಒದಗಿಸಿದೆ. ತ್ರಿಪುರಾದಲ್ಲಿ ಪ್ರಸ್ತುತ 89,264 ಹೆಕ್ಟೇರ್ ಭೂಮಿಯಲ್ಲಿ ನೈಸರ್ಗಿಕ ರಬ್ಬರ್  ಬೆಳೆಯುತ್ತದೆ, ವಾರ್ಷಿಕವಾಗಿ 1,691 ಕೋಟಿ ಮೌಲ್ಯದ 93,371 ಟನ್ ರಬ್ಬರ್ ಅನ್ನು ನೀಡುತ್ತದೆ. ತ್ರಿಪುರಾದಲ್ಲಿ, ರಬ್ಬರ್ ಕೃಷಿಯು ಆದಿವಾಸಿಗಳು ಸೇರಿದಂತೆ ಸುಮಾರು ಎರಡು ಲಕ್ಷ ಕುಟುಂಬಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ನೆರವಾಗಿದೆ.

ರಬ್ಬರ್ ಬೋರ್ಡ್ ಅಧಿಕಾರಿಗಳ ಪ್ರಕಾರ, ಏಳು ಈಶಾನ್ಯ ರಾಜ್ಯಗಳು ವಾರ್ಷಿಕವಾಗಿ 1,90,000 ಹೆಕ್ಟೇರ್‌ಗಳಲ್ಲಿ ರಬ್ಬರ್  ಬೆಳೆಯುತ್ತವೆ 1,11,700 ಟನ್ ನೈಸರ್ಗಿಕ ರಬ್ಬರ್ ಅನ್ನು ಉತ್ಪಾದಿಸುತ್ತವೆ. ಅಸ್ಸಾಂ 58,000 ಹೆಕ್ಟೇರ್ ಗಳಲ್ಲಿ ವಾರ್ಷಿಕವಾಗಿ 31,000 ಟನ್ ನೈಸರ್ಗಿಕ ರಬ್ಬರ್ ಅನ್ನು ಉತ್ಪಾದಿಸುತ್ತದೆ. ಮೇಘಾಲಯವು 17,000 ಹೆಕ್ಟೇರ್‌ಗಳಲ್ಲಿ 9,500 ಟನ್‌, ನಾಗಾಲ್ಯಾಂಡ್‌ನಲ್ಲಿ 6,100 ಟನ್‌ಗಳೊಂದಿಗೆ 15,000 ಹೆಕ್ಟೇರ್‌ಗಳಲ್ಲಿ ಉತ್ಪಾದನೆಯಾಗುತ್ತದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!

ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…

7 hours ago

ಹಸು ಕರು ಹಾಕಿದ ಬಳಿಕದ “ಪ್ಲಾಸೆಂಟಾ” ದಿಂದ ತಯಾರಿಸಬಹುದೇ ನೈಸರ್ಗಿಕ ದ್ರಾವಣ?

ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…

8 hours ago

ಹವಾಮಾನ ವರದಿ | 07-09-2026 | ಕರ್ನಾಟಕದಲ್ಲಿ ಮುಂದಿನ ಮಳೆಯ ಚಿತ್ರಣ ಹೇಗಿದೆ..?

ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…

15 hours ago

ಹೆಬ್ರಿಯ ಗೋಡಂಬಿ ತ್ಯಾಜ್ಯದಿಂದ ಹಡಗುಗಳಿಗೆ ಇಂಧನ..!

ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…

21 hours ago

ಮಡಿಕೇರಿಯಲ್ಲಿ ಅಡಿಕೆ ಹಾಳೆ ತಟ್ಟೆಗೂ ನಿಷೇಧ..!

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…

21 hours ago

ಹವಾಮಾನ ವರದಿ | 06-09-2026 | ಕರ್ನಾಟಕದಲ್ಲಿ ಮಳೆ ಇಳಿಮುಖದ ಲಕ್ಷಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…

2 days ago