ಮನದಲ್ಲಿ ಮಡುಗಟ್ಟಿದ್ದ
ಭಾವಗಳ ಕೆದಕಿ,ಬರೆಯಲು
ಪ್ರೇರೇಪಿಸಿತು ,ಪುಸ್ತಕದ ನಡುವಲ್ಲಿ
ಬೆಚ್ಚಗೆ ಮಲಗಿದ್ದ ನವಿಲುಗರಿ
ಬದುಕಿನ ಪುಸ್ತಕದಲ್ಲಿ
ನೆನಪುಗಳ ಪುಟ ಹೊರಳಿಸಿ
ಮತ್ತೆ ಅವತಾರವೆತ್ತಿ ನಲಿಯಿತು
ಜೋಪಾನವಾಗಿ ಬಚ್ಚಿಟ್ಟ ನವಿಲುಗರಿ
ಬಣ್ಣ ಬಣ್ಣದ ಭಾವಕ್ಕೆ
ಅನುಭಾವ ತುಂಬಿ,ಅನುರಾಗದ
ಅನುಬಂಧಕ್ಕೆ ಅನುಮೋದಿಸಿತು
ಮತ್ತೆ ಕಣ್ಣೆದುರು ಸಿಕ್ಕ ನವಿಲುಗರಿ
ಒಲವಿನ ಗೂಡು ಕಟ್ಟಿ
ಚೆಲುವಿನ ಚುಕ್ಕಿ ಇಟ್ಟು
ಪ್ರೇಮದ ರಂಗೋಲಿ ಬರೆಯಲು
ಪ್ರೇರೆಪಿಸಿತ್ತು ಮುಚ್ಚಿಟ್ಟ ನವಿಲುಗರಿ
# ಅಪೂರ್ವ ಚೇತನ್ ಪೆರಂದೋಡಿ
ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…
ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಪಿಂಗಾರ, ಮಾಸ್, ಟಿಎಸ್ಎಸ್, ತುಮ್ಕೋಸ್, ಮ್ಯಾಮ್ಕೋಸ್ ಹಾಗೂ ಕ್ಯಾಂಪ್ಕೊ…
ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ 28 ಸಿಬ್ಬಂದಿಯ ಎಲಿಫೆಂಟ್ ಟಾಸ್ಕ್ ಫೋರ್ಸ್…
ಕೊಪ್ಪ ಅರಣ್ಯ ವಿಭಾಗದಲ್ಲಿ ಕಾಡಾನೆಗಳು ನಾಡಿಗೆ ಪ್ರವೇಶಿಸದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ…
ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…
ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…