ಮನದಲ್ಲಿ ಮಡುಗಟ್ಟಿದ್ದ
ಭಾವಗಳ ಕೆದಕಿ,ಬರೆಯಲು
ಪ್ರೇರೇಪಿಸಿತು ,ಪುಸ್ತಕದ ನಡುವಲ್ಲಿ
ಬೆಚ್ಚಗೆ ಮಲಗಿದ್ದ ನವಿಲುಗರಿ
ಬದುಕಿನ ಪುಸ್ತಕದಲ್ಲಿ
ನೆನಪುಗಳ ಪುಟ ಹೊರಳಿಸಿ
ಮತ್ತೆ ಅವತಾರವೆತ್ತಿ ನಲಿಯಿತು
ಜೋಪಾನವಾಗಿ ಬಚ್ಚಿಟ್ಟ ನವಿಲುಗರಿ
ಬಣ್ಣ ಬಣ್ಣದ ಭಾವಕ್ಕೆ
ಅನುಭಾವ ತುಂಬಿ,ಅನುರಾಗದ
ಅನುಬಂಧಕ್ಕೆ ಅನುಮೋದಿಸಿತು
ಮತ್ತೆ ಕಣ್ಣೆದುರು ಸಿಕ್ಕ ನವಿಲುಗರಿ
ಒಲವಿನ ಗೂಡು ಕಟ್ಟಿ
ಚೆಲುವಿನ ಚುಕ್ಕಿ ಇಟ್ಟು
ಪ್ರೇಮದ ರಂಗೋಲಿ ಬರೆಯಲು
ಪ್ರೇರೆಪಿಸಿತ್ತು ಮುಚ್ಚಿಟ್ಟ ನವಿಲುಗರಿ
# ಅಪೂರ್ವ ಚೇತನ್ ಪೆರಂದೋಡಿ
ಮಯೂರ.ಕೆ, 7ನೇ ತರಗತಿ, ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರ ಚೊಕ್ಕಾಡಿ | -…
ಜುಲೈ 9 ರಂದು ಭಾರತ್ ಬಂದ್ಗೆ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ದೇಶವ್ಯಾಪಿ…
ಮಗು ಗರ್ಭದಲ್ಲಿದ್ದಾಗಲೇ ಕೆಲವು ಘಟನೆಗಳಿಗೆ ಪ್ರತಿಕ್ರಿಯಿಸುವ ಬಗ್ಗೆ ಕೆಲವು ವೈಜ್ಞಾನಿಕ ಅಧ್ಯಯನಗಳು ಹೇಳಿವೆ.…
ಶಿಕ್ಷಣ ಸಂಸ್ಥೆಗಳಲ್ಲಿ ಹಾಸ್ಟೆಲ್ ವ್ಯವಸ್ಥೆ ಸರ್ವೇ ಸಾಮಾನ್ಯ. ಹೀಗೆ ಹಾಸ್ಟೆಲ್ ಇದೆ ಅಂದ…
ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ…
ಹಕ್ಕಿಗಳಿಗೆ ಗೂಡುಕಟ್ಟುವ ಮೂಲಕ ಪರಿಸರ ಸಂರಕ್ಷಣೆಗೆ ಪಣತೊಟ್ಟಿರುವ ದಂಪತಿಗಳು ಬಂಟ್ವಾಳ ತಾಲೂಕಿನಲ್ಲಿದ್ದಾರೆ. ಇವರ…