ಅನುಕ್ರಮ

ರಕ್ಷಣಾ ಸಚಿವರನ್ನು ತಲುಪಿದ ಮಾಸ್ಕ್ !

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ತ್ರಿಕೆಯಲ್ಲೊಂದು ಸುದ್ದಿ ಓದಿದೆ – ಉಡುಪಿಯ ಎರಡನೇ ಪಿಯು ವಿದ್ಯಾರ್ಥಿ ಇಶಿತಾ ಆಚಾರ್ಯ ಭಾರತೀಯ ಸೇನೆಗೆ ಮಾಸ್ಕ್ ತಯಾರಿಸಿ ಕಳುಹಿಸಿದ್ದಾರೆ. ಇವರ ಈ ದೇಶಪ್ರೀತಿಯ ಕಾರ್ಯಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅಭಿನಂದಿಸಿದ್ದಾರೆ.

Advertisement

ತಾನು ಕಲಿವ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಮಾಸ್ಕ್ ಬ್ಯಾಂಕಿಗೆ ಈ ಮಾಸ್ಕ್ ಗಳು ಸೇರಬೇಕಾಗಿತ್ತು. ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇದನ್ನು ಬಳಸುವ ಉದ್ದೇಶ. ಆದರೆ ಮುನ್ನೂರು ಮಾಸ್ಕ್ ತಯಾರಿಸುವ ಹೊತ್ತಿಗೆ ಎಸ್.ಎಸ್.ಎಲ್.ಸಿ.ಪರೀಕ್ಷೆ ಮುಗಿದಿತ್ತು! ಆಗಲೇ ಬ್ಯಾಂಕಿನಲ್ಲಿ ಮಾಸ್ಕ್ ನ ಠೇವಣಿ ಹೆಚ್ಚಾಗಿತ್ತು.
ಇಶಿತಾ ಯೋಚಿಸಿದರು. ಇದೂ ಕೂಡಾ ದೇಶಸೇವೆಯಲ್ಲವೆ? ಮಾಸ್ಕ್‌ ಗಳನ್ನು ಸೇನೆಗೆ ಯಾಕೆ ಕಳುಹಿಸಬಾರದು? ಯೋಚನೆ ಕಾರ್ಯರಂಗಕ್ಕಿಳಿಯಿತು. ಅಧಿಕಾರಿಗಳನ್ನು ಸಂಪರ್ಕಿಸಿ ವಿನಂತಿಸಿದರು. ಕೊನೆಗೆ ತಾನೇ ಸ್ವತಃ ಜುಲೈ ಮಧ್ಯ ಭಾಗದಲ್ಲಿ ರಕ್ಷಣಾ ಸಚಿವರಿಗೆ ಮಾಸ್ಕ್ ಗಳನ್ನು ಕೊರಿಯರ್ ಮೂಲಕ ಕಳುಹಿಸಿದರು. ಆಶ್ಚರ್ಯ, ಸೆಪ್ಟೆಂಬರಿನಲ್ಲಿ ರಕ್ಷಣಾ ಸಚಿವರಿಂದ ಅಭಿನಂದನಾ ಪತ್ರ.

 

ಇಶಿತಾ ಖುಷ್. 

ದೇಶದ ರಕ್ಷಣಾ ಮಂತ್ರಿಗಳು ವಿದ್ಯಾರ್ಥಿಯಾದ ನನಗೆ ಪತ್ರ ಬರೆಯಬಹುದೆಂಬ ಕನಸೂ ಇದ್ದಿರಲಿಲ್ಲ.” ಎಂದಿದ್ದಾರೆ.

ಯೂಟ್ಯೂಬಿನಲ್ಲಿರುವ ಮಾಸ್ಕ್ ತಯಾರಿ ಮಾಹಿತಿಯನ್ನು ಕಲಿತ ಇಶಿತಾ ಮಾಸ್ಕ್ ಸಿದ್ಧಪಡಿಸಿದ್ದಾರೆ. ನಿಜಕ್ಕೂ ಖುಷಿ ಪಡುವ ವಿಚಾರ.

ಇಶಿತಾ ಅಂಬಲಪಾಡಿಯವರು. ತಂದೆ ಗಿರೀಶ್ ಆಚಾರ್, ತಾಯಿ ನಂದಿತಾ ಆಚಾರ್. ಎಪ್ರಿಲ್-ಮೇ ಲಾಕ್‍ಡೌನಿನಲ್ಲಿ ಸಿದ್ಧವಾದ ಮಾಸ್ಕ್ ತಯಾರಿ ಈಗ ದೇಶ ಮಟ್ಟದ ಸುದ್ದಿ. ವಿದ್ಯಾರ್ಥಿ ದಿಸೆಯ ಈ ಸಣ್ಣ ಕೆಲಸ ಇದೆಯಲ್ಲಾ, ಇದು ದೇಶಮಟ್ಟದಲ್ಲಿ ದೊಡ್ಡದೇ. ‘ನಮ್ಮನ್ನು ಕಾಯುವ ಯೋಧರಿಗಾಗಿ ನಾವು ಇಷ್ಟಾದರೂ ಮಾಡಬೇಡ್ವೇ’ ಎನ್ನುವ ವಿದ್ಯಾರ್ಥಿನಿಯ ಆಶಯದ ಹಿಂದೆ ನಿಜಾರ್ಥದ ದೇಶಭಕ್ತಿಯಿದೆ.

ದೇಶಭಕ್ತಿಯನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸುವ ಕಾಲಘಟ್ಟದಲ್ಲಿ ಇಶಿತಾಳ ಸಣ್ಣ ಕೆಲಸ ಸದ್ದಾಗದು. ರಂಗುರಂಗಿನ ಮಾಧ್ಯಮಗಳಿಗೆ ಇದೇನೂ ದೊಡ್ಡ ಸುದ್ದಿಯಲ್ಲ. ವಾಹಿನಿಗಳೆಲ್ಲಾ ಡ್ರಗ್ಸ್ ಮಾಫಿಯಾದ ಸತ್ಯಗಳನ್ನು (!) ಕೆದಕುವ ಕೆಲಸದಲ್ಲಿವೆ. ಅವುಗಳಿಗೆ ಇಶಿತಾಳ ಕೆಲಸ ಕಾಣದು.

ಮಾಧ್ಯಮ ಬೆಳಕಿಗಾಗಿ ಅವರು ಮಾಸ್ಕ್ ತಯಾರಿಸಿದ್ದೂ ಅಲ್ಲ. ಆದರೆ ದೇಶದ ಬಗ್ಗೆ ಕನಿಷ್ಠ ಒಲವು ಮತ್ತು ಪ್ರೀತಿಯಿರುವ ಎಲ್ಲರೂ ಶ್ಲಾಘಿಸಬೇಕಾದ ಕಾರ್ಯವನ್ನು ಇಶಿತಾ ಮಾಡಿದ್ದಾರೆ.  ಕೋವಿಡ್ 19 ಯಾನದಲ್ಲಿ ಬದುಕು ಸಾಗುತ್ತಿದೆ. ವಿಷಾದಗಳ ಮಧ್ಯೆ ಇಂತಹ ಚಿಕ್ಕಪುಟ್ಟ ವಿಚಾರಗಳು ಪಾಸಿಟಿವ್ ಬೆಳಕಿಂಡಿಗಳಾಗಿ ಗೋಚರಿಸುತ್ತವೆ.

# ನಾ. ಕಾರಂತ ಪೆರಾಜೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |

ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…

34 minutes ago

ಹೊಸರುಚಿ| ಗುಜ್ಜೆ ರೋಲ್

ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…

49 minutes ago

ಅಮರನಾಥ ಯಾತ್ರೆಗೆ ನೋಂದಣಿ ಪ್ರಕ್ರಿಯೆ ಆರಂಭ | ಜೂನ್‌ 29 ರಿಂದ ಯಾತ್ರೆ ಆರಂಭ |

ಹಿಂದೂಗಳ ಪವಿತ್ರ ಯಾತ್ರಾಸ್ಥಳ, ವಾರ್ಷಿಕ ಪವಿತ್ರ ಅಮರನಾಥ ಯಾತ್ರೆ  ಜೂನ್‌ 29 ರಿಂದ, …

56 minutes ago

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಅನಿರ್ಧಿಷ್ಟಾವದಿ ಲಾರಿ ಮುಷ್ಕರ | ಸಂಧಾನ ಮಾತುಕತೆಯೂ ವಿಫಲ |

ಡೀಸೆಲ್ ದರ ಹೆಚ್ಚಳವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು, ಟೋಲ್ ಶುಲ್ಕ ಕಡಿಮೆ ಮಾಡಬೇಕು,…

1 hour ago

ಅಡಿಕೆ ಬೆಳೆಗಾರರಿಗೆ ನಿಜವಾದ ಸಮಸ್ಯೆ ಯಾವುದು ? ಮುಂದೆ ಇರುವ ಸವಾಲುಗಳು ಯಾವುದು ?

ಅಡಿಕೆ ಬೆಳೆ ರಾಜ್ಯದಲ್ಲಿ ಮಾತ್ರವಲ್ಲ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಸ್ತರಣೆ…

10 hours ago

ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಹೊಸತನ | ವಜ್ರಗಳ LGD ಟೆಸ್ಟಿಂಗ್ ಮಿಷನ್

ಶುದ್ಧತೆಯ ವಿಚಾರ ಬಂದಾಗ ನಂಬಿಕೆಯೂ ಮುಖ್ಯ. ಅದಕ್ಕಾಗಿ, 8 ದಶಕಗಳಿಂದ ನಿಮ್ಮ ಎದುರಿನಲ್ಲಿ…

18 hours ago