Advertisement
Opinion

ಕ್ಯಾಲೆಂಡರ್ ಬದಲಾವಣೆಯ ಹೊಸ ವರ್ಷ | ಕಾಲ, ಚೈತನ್ಯ ಮತ್ತು ಆತ್ಮಪುನರ್‌ನವೀಕರಣ

Share

ಕಾಲವು ಮನುಷ್ಯನಿಗಿಂತ ಪ್ರಾಚೀನ. ಕ್ಯಾಲೆಂಡರ್‌ಗಳು ಕಾಲವನ್ನು ಅಳೆಯುವ ಮಾನವ ನಿರ್ಮಿತ ಸಾಧನಗಳು; ಕಾಲವು ಸ್ವತಃ ಅವುಗಳಿಗೆ ಅತೀತ. ಆದರೂ ಮನುಷ್ಯನು ಕಾಲದ ನಿರಂತರ ಪ್ರವಾಹದಲ್ಲಿ ಅರ್ಥವನ್ನು ಹುಡುಕುವ ಜೀವಿ. ಆ ಅರ್ಥಾನ್ವೇಷಣೆಯ ಒಂದು ಸಂಕೇತವೇ “ಹೊಸ ವರ್ಷ”. ದಿನಾಂಕ ಒಂದರಿಂದ ಮತ್ತೊಂದಕ್ಕೆ ಸಾಗುವ ಈ ಗಣಿತೀಯ ಪರಿವರ್ತನೆಗೆ ಮಾನವನು ತಾತ್ವಿಕ ಅರ್ಥವನ್ನು ಆರೋಪಿಸುತ್ತಾನೆ. ಅದರಲ್ಲಿ ಆಶಯವೂ ಇದೆ, ಅಪಾಯವೂ ಇದೆ.

ಭಾರತೀಯ ಸಂಸ್ಕೃತಿಯಲ್ಲಿ ಕಾಲವನ್ನು ರೇಖೀಯವಾಗಿ ನೋಡುವ ಪಾಶ್ಚಾತ್ಯ ದೃಷ್ಟಿಗೆ ವಿರುದ್ಧವಾಗಿ, ಚಕ್ರಾಕಾರವಾಗಿ ಗ್ರಹಿಸಲಾಗುತ್ತದೆ. ಸೃಷ್ಟಿ–ಸ್ಥಿತಿ–ಲಯ ಎಂಬ ತ್ರಿವಿಧ ಚಲನೆಯೊಳಗೆ ಕಾಲ ನಿರಂತರವಾಗಿ ಪುನರಾವರ್ತಿಸುತ್ತದೆ. ಕಾಲೋ ಹಿ ಭಗವಾನ್ ಎಂಬ ತತ್ತ್ವದಲ್ಲಿ ಕಾಲವು ಕೇವಲ ಘಟನೆಗಳ ಸರಮಾಲೆಯಲ್ಲ; ಅದು ಚೈತನ್ಯದ ಅಭಿವ್ಯಕ್ತಿ. ಈ ದೃಷ್ಟಿಯಲ್ಲಿ “ಹೊಸ” ಎನ್ನುವುದು ನಿಜವಾದ ಹೊಸ ಆರಂಭವಲ್ಲ, ಆತ್ಮಪರಿಶೀಲನೆಯ ಪುನರಾವೃತ್ತ ಅವಕಾಶ.

ಆದ್ದರಿಂದ ಹೊಸ ವರ್ಷವು ಆಚರಣೆಯ ಕ್ಷಣವಲ್ಲ; ಅದು ಆತ್ಮಸಂವಾದದ ವಿರಾಮ. ಹೊರಗಣ ಗದ್ದಲದ ನಡುವೆ ಮನುಷ್ಯನು ತನ್ನೊಳಗೆ ನೋಡುವ ಧೈರ್ಯ ತೋರಿಸಿದರೆ ಮಾತ್ರ ಹೊಸ ವರ್ಷ ಅರ್ಥಪೂರ್ಣವಾಗುತ್ತದೆ. ಇಂದಿನ ಸಮಾಜದಲ್ಲಿ ಹೊಸ ವರ್ಷವು ಬಹುಮಟ್ಟಿಗೆ ಉಪಭೋಗದ ಉತ್ಸವವಾಗಿದೆ.ಹೆಚ್ಚಿನ ಶಬ್ದ, ಹೆಚ್ಚಿನ ದೃಶ್ಯ, ಕಡಿಮೆ ಚಿಂತನೆ. ಆಚರಣೆ ವಿಸ್ತಾರವಾಗಿದೆ; ಅರ್ಥ ಕ್ಷೀಣಿಸಿದೆ. ಆದರೆ ತತ್ತ್ವಶಾಸ್ತ್ರ ಹೇಳುವುದು,ಅರ್ಥವಿಲ್ಲದ ಆಚರಣೆ ಆತ್ಮವಿಸ್ಮರಣೆಯ ಮೊದಲ ಹಂತ.

ಹೊಸ ವರ್ಷದ ಗುರಿಗಳೆಂದು ನಾವು ರೂಪಿಸುವವು ಸಾಮಾನ್ಯವಾಗಿ ಬಾಹ್ಯ ಸಾಧನೆಗಳ ಪಟ್ಟಿ. ಹೆಚ್ಚು ಸಂಪಾದನೆ, ಹೆಚ್ಚಿನ ಸ್ಥಾನಮಾನ, ವಿಸ್ತಾರವಾದ ಪ್ರಭಾವ ,ಇವುಗಳೆಲ್ಲ ಬದುಕಿನ ಪರಿಧಿಯನ್ನು ವಿಸ್ತರಿಸುತ್ತವೆ; ಆದರೆ ಆಳವನ್ನು ಹೆಚ್ಚಿಸುವುದಿಲ್ಲ. ಭಾರತೀಯ ತತ್ತ್ವಚಿಂತನೆ ಗುರಿಯನ್ನು ಫಲದ ಪ್ರಮಾಣದಿಂದ ಅಳೆಯುವುದಿಲ್ಲ; ಚಿತ್ತದ ಪಾಕ್ವತೆಯಿಂದ ಅಳೆಯುತ್ತದೆ. ಯಥಾ ಚಿತ್ತಂ ತಥಾ ಭವತಿ — ಮನಸ್ಸಿನ ಸ್ಥಿತಿಯೇ ಬದುಕಿನ ಸ್ವರೂಪವನ್ನು ನಿರ್ಧರಿಸುತ್ತದೆ. ಆದ್ದರಿಂದ ಆತ್ಮಶಿಸ್ತುವಿಲ್ಲದೆ ಯಾವುದೇ ಗುರಿಯೂ ತತ್ತ್ವಶಾಸ್ತ್ರೀಯವಾಗಿ ಸಾರ್ಥಕವಲ್ಲ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ಹೊಸತನವೆಂದರೆ ಹಳೆಯದನ್ನು ತಿರಸ್ಕರಿಸುವ ಹಠವಲ್ಲ; ಹಳೆಯದನ್ನು ಅರಿತು ಮೀರಿಸುವ ಜ್ಞಾನ. ಪರಂಪರೆ ಎನ್ನುವುದು ಕಾಲದ ಭಾರವಲ್ಲ; ಅದು ಮೌಲ್ಯಗಳ ಸಂಗ್ರಹ. ಪಾಶ್ಚಾತ್ಯ ಕ್ಯಾಲೆಂಡರ್ ಅನ್ನು ಅನುಸರಿಸುವುದರಿಂದ ಭಾರತೀಯ ಸಂಸ್ಕೃತಿಯ ಆತ್ಮ ನಾಶವಾಗುವುದಿಲ್ಲ; ಆದರೆ ಅದನ್ನು ನಿರ್ಲಕ್ಷಿಸಿದರೆ ಆತ್ಮ ನಿಧಾನವಾಗಿ ಕ್ಷೀಣಿಸುತ್ತದೆ. ಸಂಸ್ಕೃತಿಯ ಜೀವಂತಿಕೆ ಸಂರಕ್ಷಣೆಯಲ್ಲಿ ಅಲ್ಲ; ವಿವೇಕಪೂರ್ಣ ಪರಿವರ್ತನೆಯಲ್ಲಿ ಇದೆ. …… ಮುಂದೆ ಓದಿ……

ಇಲ್ಲಿ “ನಮ್ಮತನದ ಹೊಸತನ” ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಮ್ಮತನವೆಂದರೆ ಆಚರಣೆಗಳ ಪಟ್ಟಿಯಲ್ಲ; ಅದು ಚೈತನ್ಯದ ಸ್ಥಿತಿ. ಪಾಶ್ಚಾತ್ಯ ಆಚರಣೆಗಳ ಅಂಧಾನುಕರಣೆಯು ಸುಲಭ; ಆದರೆ ಅವುಗಳೊಳಗಿನ ಶಿಸ್ತು, ಸಮಯಪಾಲನೆ, ಯೋಜನಾ ದೃಷ್ಟಿಯನ್ನು ತನ್ನ ಮೌಲ್ಯಾಧಾರಿತ ಬದುಕಿಗೆ ಅಳವಡಿಸಿಕೊಳ್ಳುವುದು ಕಷ್ಟ. ಆದರೆ ನಿಜವಾದ ಭಾರತೀಯತೆ ಆ ಕಠಿಣತೆಯು  ಕಾಲಕ್ಕೆ ಹೊಂದಿಕೊಂಡು ಸಾಗುತ್ತಾ, ಆತ್ಮವನ್ನು ಕಳೆದುಕೊಳ್ಳದ ಸ್ಥೈರ್ಯದಲ್ಲಿ ಕಾಣುತ್ತದೆ.

ಭಾರತೀಯ ತತ್ತ್ವಶಾಸ್ತ್ರ ಮನುಷ್ಯನನ್ನು ಉಪಭೋಗಿಯಂತೆ ಕಾಣುವುದಿಲ್ಲ; ಸಾಧಕನಂತೆ ಕಾಣುತ್ತದೆ. ಬದುಕು ಪ್ರದರ್ಶನದ ವೇದಿಕೆಯಾಗಬಾರದು; ಸಾಧನೆಯ ಕ್ಷೇತ್ರವಾಗಬೇಕು. ಹೊಸ ವರ್ಷವು ನಮ್ಮೊಳಗಿನ ಅಹಂಕಾರವನ್ನು ಹೆಚ್ಚಿಸಿದರೆ ಅದು ವಿಫಲ. ಅದನ್ನು ಕಡಿಮೆ ಮಾಡಿದರೆ ಮಾತ್ರ ಅದು ಸಾರ್ಥಕ. ಸಹನೆ, ಸಂಯಮ, ಜವಾಬ್ದಾರಿ ,ಇವು ತತ್ತ್ವಶಾಸ್ತ್ರೀಯವಾಗಿ ಹೊಸ ವರ್ಷದ ಮೂಲ ಮೌಲ್ಯಗಳು.

ಕಾಲ ನಿರಂತರವಾಗಿ ಬದಲಾಗುತ್ತದೆ. ಆದರೆ ಚೈತನ್ಯ ಬದಲಾಗದಿದ್ದರೆ ಮನುಷ್ಯನು ಅದೇ ವೃತ್ತದಲ್ಲಿ ಸುತ್ತುತ್ತಾನೆ. ಹೊಸ ಕ್ಯಾಲೆಂಡರ್ ಹೊಸ ಬದುಕನ್ನು ಖಚಿತಪಡಿಸುವುದಿಲ್ಲ; ಹೊಸ ಮನಸ್ಸು ಮಾತ್ರ ಅದನ್ನು ಸಾಧ್ಯವಾಗಿಸುತ್ತದೆ. ಆದ್ದರಿಂದ ಹೊಸ ವರ್ಷವನ್ನು ಸಂಭ್ರಮದ ದಿನವೆಂದು ಅಲ್ಲ, ಸಂಸ್ಕಾರದ ಕ್ಷಣವೆಂದು ನೋಡಬೇಕು,ಘೋಷಣೆಗಳ ಕಾಲವಲ್ಲ, ನಿಶ್ಚಯಗಳ ಸಮಯವೆಂದು ಗ್ರಹಿಸಬೇಕು.

ಹೊಸ ವರ್ಷ ಎಂದರೆ,  ಹೊಸ ಮುಖವಾಡವಲ್ಲ ,ಹೊಸ ಮನಸ್ಸು, ಹೊಸ ಘೋಷಣೆಗಳಲ್ಲ ,ಹೊಸ ಶಿಸ್ತು, ಹೊಸ ಆರಂಭವಲ್ಲ ,ಹೊಸ ಅರ್ಥ. …… ಮುಂದೆ ಓದಿ……

ಈ ಅರ್ಥ ಗ್ರಹಿಸಲ್ಪಟ್ಟಾಗಲೇ, ಕಾಲದ ಬದಲಾವಣೆ ಚೇತನ್ಯದ ಪರಿವರ್ತನೆಯಾಗಿ ರೂಪುಗೊಳ್ಳುತ್ತದೆ. ಅದೇ ಹೊಸ ವರ್ಷದ ತತ್ತ್ವಶಾಸ್ತ್ರೀಯ ಸಾರ್ಥಕತೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು .

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

Published by
ಕುಮಾರಸುಬ್ರಹ್ಮಣ್ಯ ಮುಳಿಯಾಲ

Recent Posts

ಜೂನ್‌ನಲ್ಲಿ 40% ಮಳೆ ಕೊರತೆ – ಜುಲೈನಲ್ಲಿ ಮುಂಗಾರು ಭರ್ಜರಿ..! ದೇಶಾದ್ಯಂತ ಮಳೆ ಚುರುಕು

ಜೂನ್‌ನಲ್ಲಿ ದಾಖಲಾಗಿದ್ದ ಮಳೆ ಕೊರತೆ ಜುಲೈ ಆರಂಭದ ಭಾರೀ ಮಳೆಯಿಂದ ವೇಗವಾಗಿ ಕಡಿಮೆಯಾಗುತ್ತಿದೆ.…

11 hours ago

ರಾಜ್ಯದ 9 ಜಿಲ್ಲೆಗಳಲ್ಲಿ ಜುಲೈ 9 ರಿಂದ 11ರವರೆಗೆ ಭಾರೀ ಮಳೆ ಸಾಧ್ಯತೆ – IMD ಯೆಲ್ಲೋ ಅಲರ್ಟ್

ಜುಲೈ 9ರಿಂದ 11ರವರೆಗೆ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ…

11 hours ago

E20 ಪೆಟ್ರೋಲ್‌ನಿಂದ ಮೈಲೇಜ್ ಕಡಿಮೆಯಾಗುತ್ತದೆಯೇ? ಹಳೆಯ ವಾಹನಗಳಿಗೆ ಅಪಾಯ ಇದೆಯೇ?

E20 ಪೆಟ್ರೋಲ್ ಬಳಕೆಯಿಂದ ಸುಮಾರು 3–5% ಮೈಲೇಜ್ ಕುಸಿಯುವ ಸಾಧ್ಯತೆ ಇದೆ. ಆದರೆ…

16 hours ago

ಹವಾಮಾನ ವರದಿ | 06-07-2026 | ಕರ್ನಾಟಕದಲ್ಲಿ ಮಳೆ ಮತ್ತಷ್ಟು ಕಡಿಮೆಯಾಗುವ ಸೂಚನೆ | ಜುಲೈ 10ರಿಂದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಸಾಧ್ಯತೆ

ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜುಲೈ…

17 hours ago

ಅಡಿಕೆಯಿಂದ ಹಲಸಿನತ್ತ “ಸಂತೋಷ” ಪಯಣ – ನೀರಿನ ಕೊರತೆಯ ಸವಾಲನ್ನು ಅವಕಾಶವಾಗಿಸಿದ ಕೃಷಿಕ

ನೀರಿನ ಕೊರತೆಯಿಂದ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿದ ಪುತ್ತೂರಿನ…

2 days ago