ರಸ್ತೆ ಬದಿಯ ಸೂಚನಾ ಫಲಕವನ್ನು ಸ್ವಚ್ಛ ಮಾಡುವ ಕಾರ್ಯವೊಂದರ ಕತೆ ಇದು. ಅದರಲ್ಲೇನು ವಿಶೇಷ ..? . ಈ ಕಾರ್ಯ ಮಾಡಿರುವುದು ಮಾನಸಿಕ ದುರ್ಬಲನೊಬ್ಬ. ಈ ಮೂಲಕ ಸಾರ್ವಜನಿಕರಿಗೆ ಜವಾಬ್ದಾರಿಯ ಪಾಠ ಕಲಿಸಿದ್ದಾನೆ.
ಭಾನುವಾರ ಬೆಳಗ್ಗಿನ ಜಾವ ಶಿಶಿಲ ನಿವಾಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಪ್ರಾ. ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಅವರು ಕೆಲಸದ ನಿಮಿತ್ತ ಕೊಕ್ಕಡಕ್ಕೆ ಹೊರಟಿದ್ದರು. ಈ ಸಂದರ್ಭದಲ್ಲಿ ಧರ್ಮಸ್ಥಳ -ಶಿಶಿಲ ತಿರುವಿನಲ್ಲಿರುವ ಸೂಚನಾ ಫಲಕವನ್ನು ಓರ್ವ ವ್ಯಕ್ತಿ ಸ್ವಚ್ಚ ಮಾಡುತ್ತಿದ್ದ. ಇದನ್ನು ಕಂಡ ಅವರಿಗೆ ಧನ್ಯವಾದ ತಿಳಿಸಲು ಹತ್ತಿರ ತೆರಳಿದ್ದಾರೆ. ಆದರೆ ಆ ವ್ಯಕ್ತಿ ಮಾನಸಿಕವಾಗಿ ತುಂಬಾ ದುರ್ಬಲನಾಗಿದ್ದ ಮತ್ತು ತೀರಾ ಬಳಲಿದ್ದ. ವಿಚಾರಿಸಿದಾಗ ಆತ ತಾನು ಹಾಸನದ ರಮೆಶ, ” ಮಂಜಣ್ಣನ ಸೇವೆ ” ಮಾಡುತ್ತಿರುವುದಾಗಿ ಹೇಳಿದ.
ಬಳಿಕ ನೆರೆದ ಸ್ಥಳಿಯರು ಒಂದಷ್ಟು ಧನ ಸಹಾಯ ಮಾಡಿದಾಗ ಸಂತೊಷದಿಂದ ಸ್ವೀಕರಿಸಿದ. ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡ ವ್ಯಕ್ತಿ ಈ ಸಮಾಜಕ್ಕೆ ನೀಡಿದ ಸಂದೇಶ ಗಮನಾರ್ಹವಾಗಿತ್ತು.
ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.
''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…
ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…
ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.
ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…
ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…