ರಸ್ತೆ ಬದಿಯ ಸೂಚನಾ ಫಲಕವನ್ನು ಸ್ವಚ್ಛ ಮಾಡುವ ಕಾರ್ಯವೊಂದರ ಕತೆ ಇದು. ಅದರಲ್ಲೇನು ವಿಶೇಷ ..? . ಈ ಕಾರ್ಯ ಮಾಡಿರುವುದು ಮಾನಸಿಕ ದುರ್ಬಲನೊಬ್ಬ. ಈ ಮೂಲಕ ಸಾರ್ವಜನಿಕರಿಗೆ ಜವಾಬ್ದಾರಿಯ ಪಾಠ ಕಲಿಸಿದ್ದಾನೆ.
ಭಾನುವಾರ ಬೆಳಗ್ಗಿನ ಜಾವ ಶಿಶಿಲ ನಿವಾಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಪ್ರಾ. ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಅವರು ಕೆಲಸದ ನಿಮಿತ್ತ ಕೊಕ್ಕಡಕ್ಕೆ ಹೊರಟಿದ್ದರು. ಈ ಸಂದರ್ಭದಲ್ಲಿ ಧರ್ಮಸ್ಥಳ -ಶಿಶಿಲ ತಿರುವಿನಲ್ಲಿರುವ ಸೂಚನಾ ಫಲಕವನ್ನು ಓರ್ವ ವ್ಯಕ್ತಿ ಸ್ವಚ್ಚ ಮಾಡುತ್ತಿದ್ದ. ಇದನ್ನು ಕಂಡ ಅವರಿಗೆ ಧನ್ಯವಾದ ತಿಳಿಸಲು ಹತ್ತಿರ ತೆರಳಿದ್ದಾರೆ. ಆದರೆ ಆ ವ್ಯಕ್ತಿ ಮಾನಸಿಕವಾಗಿ ತುಂಬಾ ದುರ್ಬಲನಾಗಿದ್ದ ಮತ್ತು ತೀರಾ ಬಳಲಿದ್ದ. ವಿಚಾರಿಸಿದಾಗ ಆತ ತಾನು ಹಾಸನದ ರಮೆಶ, ” ಮಂಜಣ್ಣನ ಸೇವೆ ” ಮಾಡುತ್ತಿರುವುದಾಗಿ ಹೇಳಿದ.
ಬಳಿಕ ನೆರೆದ ಸ್ಥಳಿಯರು ಒಂದಷ್ಟು ಧನ ಸಹಾಯ ಮಾಡಿದಾಗ ಸಂತೊಷದಿಂದ ಸ್ವೀಕರಿಸಿದ. ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡ ವ್ಯಕ್ತಿ ಈ ಸಮಾಜಕ್ಕೆ ನೀಡಿದ ಸಂದೇಶ ಗಮನಾರ್ಹವಾಗಿತ್ತು.
ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 24ರವರೆಗೂ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…
ಗ್ರಾಮೀಣ ಹಾಗೂ ಸಾರಿಗೆ ಸಂಪರ್ಕದಿಂದ ವಂಚಿತ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸೇವೆ ಹೆಚ್ಚಿಸುವ…
ಕರ್ನಾಟಕದಲ್ಲಿ ಮಳೆ ಚಟುವಟಿಕೆ ಸದ್ಯಕ್ಕೆ ಇಳಿಕೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10 ದಿನವೂ ಚದುರಿದ…
ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…
ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…