ರಸ್ತೆ ಬದಿಯ ಸೂಚನಾ ಫಲಕವನ್ನು ಸ್ವಚ್ಛ ಮಾಡುವ ಕಾರ್ಯವೊಂದರ ಕತೆ ಇದು. ಅದರಲ್ಲೇನು ವಿಶೇಷ ..? . ಈ ಕಾರ್ಯ ಮಾಡಿರುವುದು ಮಾನಸಿಕ ದುರ್ಬಲನೊಬ್ಬ. ಈ ಮೂಲಕ ಸಾರ್ವಜನಿಕರಿಗೆ ಜವಾಬ್ದಾರಿಯ ಪಾಠ ಕಲಿಸಿದ್ದಾನೆ.
ಭಾನುವಾರ ಬೆಳಗ್ಗಿನ ಜಾವ ಶಿಶಿಲ ನಿವಾಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಪ್ರಾ. ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಅವರು ಕೆಲಸದ ನಿಮಿತ್ತ ಕೊಕ್ಕಡಕ್ಕೆ ಹೊರಟಿದ್ದರು. ಈ ಸಂದರ್ಭದಲ್ಲಿ ಧರ್ಮಸ್ಥಳ -ಶಿಶಿಲ ತಿರುವಿನಲ್ಲಿರುವ ಸೂಚನಾ ಫಲಕವನ್ನು ಓರ್ವ ವ್ಯಕ್ತಿ ಸ್ವಚ್ಚ ಮಾಡುತ್ತಿದ್ದ. ಇದನ್ನು ಕಂಡ ಅವರಿಗೆ ಧನ್ಯವಾದ ತಿಳಿಸಲು ಹತ್ತಿರ ತೆರಳಿದ್ದಾರೆ. ಆದರೆ ಆ ವ್ಯಕ್ತಿ ಮಾನಸಿಕವಾಗಿ ತುಂಬಾ ದುರ್ಬಲನಾಗಿದ್ದ ಮತ್ತು ತೀರಾ ಬಳಲಿದ್ದ. ವಿಚಾರಿಸಿದಾಗ ಆತ ತಾನು ಹಾಸನದ ರಮೆಶ, ” ಮಂಜಣ್ಣನ ಸೇವೆ ” ಮಾಡುತ್ತಿರುವುದಾಗಿ ಹೇಳಿದ.
ಬಳಿಕ ನೆರೆದ ಸ್ಥಳಿಯರು ಒಂದಷ್ಟು ಧನ ಸಹಾಯ ಮಾಡಿದಾಗ ಸಂತೊಷದಿಂದ ಸ್ವೀಕರಿಸಿದ. ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡ ವ್ಯಕ್ತಿ ಈ ಸಮಾಜಕ್ಕೆ ನೀಡಿದ ಸಂದೇಶ ಗಮನಾರ್ಹವಾಗಿತ್ತು.
ಚಿಕ್ಕಮಗಳೂರಿನ ರೈತ ಶಿವಪ್ರಸಾದ್ ಬೇವಿನ ಬೀಜ ಸಂಸ್ಕರಣೆಯ ಮೂಲಕ ಯಶಸ್ಸು ಕಂಡಿದ್ದಾರೆ. ಅವರ…
ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು ಭಾರತೀಯ ಕೃಷಿಗೆ ದೊಡ್ಡ ಹೊಡೆತವಾಗುವ…
ಯಾದಗಿರಿಯಲ್ಲಿ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಹಾಗೂ…
ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…
2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…
ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…