ಅಡಿಕೆ ಹಾಳಾಗದಂತೆ ದಾಸ್ತಾನು ಮಾಡುವುದು ಹೇಗೆ? ಈ ಬಗ್ಗೆ ಅಡಿಕೆ ಬೆಳೆಗಾರರಲ್ಲಿ ಇರುವ ಬಹುವಾದ ಚರ್ಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಪಿಂಗಾರ ರೈತ ಉತ್ಪಾದಕ ಸಂಸ್ಥೆ ಪರಿಹಾರವೊಂದನ್ನು ಕಂಡುಕೊಂಡಿದೆ. ಅಡಿಕೆ ದಾಸ್ತಾನು ಬಗ್ಗೆಯೇ ಅಧ್ಯಯನ ನಡೆಸಿದೆ, ಅಡಿಕೆ ದಾಸ್ತಾನು ಮಾಡಲು ಮಾತ್ರೆ ಹಾಕದೆಯೇ ಹೊಸದೊಂದು ಪ್ರಯತ್ನದಲ್ಲಿ ಯಶಸ್ಸಾಗಿದೆ. ನೈಟ್ರೋಜನ್ ಗ್ಯಾಸ್ ಬಳಕೆ ಈ ಪ್ರಯತ್ನದ ಹೆಜ್ಜೆ.
ಅಡಿಕೆ ಬೆಳೆಗಾರರ ಎಲ್ಲರಲ್ಲೂ ಇರುವ ಚರ್ಚೆ , ಅಡಿಕೆ ಹಾಳಾಗದಂತೆ ದಾಸ್ತಾನು ಇಡುವುದು ಹೇಗೆ ?. ಎಲ್ಲರಲ್ಲೂ ಇರುವ ಸುಲಭ ವಿಧಾನ ಅಡಿಕೆಗೆ ಮಾತ್ರೆ ಹಾಕಿ ದಾಸ್ತಾನು ಇಡುವುದು. ಈಚೆಗೆ ಕೆಲವು ಸಮಯಗಳಿಂದ ಈ ಬಗ್ಗೆಯೇ ಚರ್ಚೆಯಾಗುತ್ತಿದೆ. ಅಡಿಕೆಗೆ ಹಾಕುವ ಮಾತ್ರೆಯಿಂದಾಗಿಯೇ ಅಡಿಕೆ ಹಾನಿಕಾರಕವಾಗುತ್ತಿದೆ ಎನ್ನುವುದು ಚರ್ಚೆಯ ವಿಷಯ. ಹಾಗಿದ್ದರೆ ಏನು ಮಾಡಬಹುದು ಪರ್ಯಾಯ ಎನ್ನುವುದಕ್ಕೆ ಉತ್ತರ ಇದ್ದಿರಲಿಲ್ಲ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಪಿಂಗಾರ ರೈತ ಉತ್ಪಾದಕ ಸಂಸ್ಥೆ ಈ ಬಗ್ಗೆಯೇ ಅಧ್ಯಯನ ನಡೆಸಿದೆ, ಅಡಿಕೆ ದಾಸ್ತಾನು ಮಾಡಲು ಮಾತ್ರೆ ಹಾಕದೆಯೇ ಹೊಸದೊಂದು ಪ್ರಯತ್ನದಲ್ಲಿ ಯಶಸ್ಸಾಗಿದೆ. (ರಾಮ್ ಕಿಶೋರ್ ಮಂಚಿ ಅವರ ಸಂದರ್ಶನದ ಯೂಟ್ಯೂಬ್ ಲಿಂಕ್ ಇಲ್ಲಿದೆ…..)
ಪಿಂಗಾರ ಸಂಸ್ಥೆಯು ಕಳೆದ ವರ್ಷದಿಂದಲೇ ಈ ಅಧ್ಯಯನ ಆರಂಭ ಮಾಡಿದೆ. ಅಡಿಕೆ ದಾಸ್ತಾನು ಮಾಡಲು ಮಾತ್ರೆಯ ಬದಲಾಗಿ ನೈಟ್ರೋಜನ್ ಗ್ಯಾಸ್ ಬಳಕೆ ಮಾಡಿದೆ. ದಾಸ್ತಾನು ಕೋಣೆಯ ಒಳಗಡೆ ಗಾಳಿಯಾಡದಂತೆ ಎಚ್ಚರಿಸಿ ವಹಿಸಿ, ದಾಸ್ತಾನು ಕೊಠಡಿಯ ಒಳಗೆ ನೈಟ್ರೋಜನ್ ಗ್ಯಾಸ್ ತುಂಬಿಸುವ ಮೂಲಕ ಯಾವುದೇ ಕೀಟಗಳು ಕ್ರಿಯಾಶೀಲವಾಗದಂತೆ ಮಾಡುವ ಕೆಲಸವನ್ನು ಮಾಡಿದೆ. ಹೀಗಾಗಿ ಅಡಿಕೆ ಯಾವುದೇ ರಾಸಾಯನಿಕ ಇಲ್ಲದೆಯೇ ಗುಣಮಟ್ಟ ಕಾಯ್ದುಕೊಂಡಿರುವುದು ಪಿಂಗಾರ ಸಂಸ್ಥೆ ಗಮನಿಸಿದೆ. ಇದೀಗ ಬೆಳೆಗಾರರಿಗೂ ಈ ಮಾಹಿತಿ ನೀಡಿ, ಮುಂದೆ ಆಸಕ್ತ ಕೃಷಿಕರ ಅಡಿಕೆಯನ್ನೂ ದಾಸ್ತಾನು ಇರಿಸಲು ಹೆಜ್ಜೆ ಇರಿಸಿದೆ.
ಈ ಪ್ರಯತ್ನ ಎಲ್ಲೆಡೆಯೂ ಮಾಡಬಹುದಾಗಿದೆ. ಆಹಾರ ಪದಾರ್ಥಗಳ ರಕ್ಷಣೆ, ದಾಸ್ತಾನುನಲ್ಲಿಯೂ ಬಳಕೆ ಮಾಡಬಹುದು ಎಂದು ಪಿಂಗಾರ ಸಂಸ್ಥೆ ಅಧ್ಯಕ್ಷ ರಾಮ್ ಕಿಶೋರ್ ಮಂಚಿ ಹೇಳಿದ್ದಾರೆ. ಅಡಿಕೆಯು ಯಾವುದೇ ಹಾನಿಯಾಗದೆ ಗುಣಮಟ್ಟವನ್ನು ಕಾಯ್ದುಕೊಂಡಿದೆ ಎಂದು ಹೇಳಿದ್ದಾರೆ. ವಿವಿಧ ಬಗೆಯ ಅಡಿಕೆಯನ್ನು ಈ ಪ್ರಯೋಗದಲ್ಲಿ ಒಳಪಡಿಸಲಾಗಿದೆ, ಎಲ್ಲಾ ಬಗೆಯ ಅಡಿಕೆಯೂ ಅದೇ ಗುಣಮಟ್ಟವನ್ನು ಕಾಯ್ದುಕೊಂಡಿದೆ ಎಂದು ಹೇಳುತ್ತಾರೆ ರಾಮ್ ಕಿಶೋರ್ ಮಂಚಿ.
"ತಾಯಿಯ ಹೆಸರಲ್ಲಿ ಒಂದು ಸಸಿ"-2.0 ಅಭಿಯಾನದಡಿ 10 ಕೋಟಿ ಗಿಡಗಳನ್ನು ನೆಡುವ ಗುರಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಆಮದಾಗುವ ಕಚ್ಚಾ ಉತ್ಪನ್ನದ ಪ್ರಭಾವ ತೆಂಗು ಮತ್ತು ಅದರ ಉತ್ಪನ್ನಗಳ ಮೇಲೆ ಇಲ್ಲದೇ…
"ಜನರು ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಗೌರವ, ಸರಳ ಜೀವನಶೈಲಿ ಮತ್ತು ಅರಣ್ಯದ…
ಕ್ರೀಡೆಯನ್ನು ಅಸಹಜ ಶಕ್ತಿಯ ರೂಪದಲ್ಲಿ ನೋಡಿದರೆ ಅದು ತನ್ನ ಮೂಲ ಆಶಯವನ್ನೇ ಕಳೆದುಕೊಳ್ಳುತ್ತದೆ.…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490