Advertisement
ಸುದ್ದಿಗಳು

ಈ ಕೋಳಿ ಮೊಟ್ಟೆ ಒಂದರ ಬೆಲೆ ಬರೋಬ್ಬರಿ 100 ರೂಪಾಯಿ! ಕೋಳಿ ಸಾಕಾಣಿಕೆ ಮಾಡೋರಿಗೆ ಬಂಪರ್

Share

ಭಾರತದಲ್ಲಿ ಜನರು ಕೋಳಿ ಮತ್ತು ಮೊಟ್ಟೆಗಳನ್ನು ಹೆಚ್ಚು ತಿನ್ನುತ್ತಾರೆ. ಕೋಳಿ ವ್ಯಾಪಾರದಲ್ಲಿ ತೊಡಗಿರುವ ಜನರು ಯಾವಾಗಲೂ ಚೆನ್ನಾಗಿ ಆದಾಯ  ಗಳಿಸುತ್ತಾರೆ. ಪಶುಸಂಗೋಪನೆಯಂತೆ, ಕೋಳಿ ಸಾಕಣೆಯಲ್ಲಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡುವ ಅಗತ್ಯವಿಲ್ಲ.

Advertisement
Advertisement

ವಾಸ್ತವವಾಗಿ,  ಸಾಮಾನ್ಯ ಕೋಳಿಗಳು ವರ್ಷದಲ್ಲಿ 60 ರಿಂದ 70 ಮೊಟ್ಟೆಗಳನ್ನು ಇಡುತ್ತವೆ. ಹಾಗೆ ನಾವು ತಿನ್ನುವ ಮಾಮೂಲು ಮೊಟ್ಟೆಗಳ ಬೆಲೆ 5-6 ರೂಪಾಯಿ ಇರುತ್ತದೆ. ಆದರೆ ಇಲ್ಲೊಂದು ಕೋಳಿ ತಳಿಯ ಒಂದು ಮೊಟ್ಟೆಗೆ ಬರೊಬ್ಬರಿ 100 ರೂಪಾಯಿ. ಇದೇನು ಚಿನ್ನದ ಮೊಟ್ಟೆಯೇ ಎಂದು ನೀವು ಆಶ್ಚರ್ಯ ಪಟ್ಟರು ಅಚ್ಚರಿಯೇನಿಲ್ಲ.  ಈ ಕೋಳಿಗಳನ್ನು ಸಾಕಿದರೆ ನಿಜಕ್ಕೂ ಅವು ಚಿನ್ನದ ಬೆಲೆಯ ಮೊಟ್ಟೆಯನ್ನು ನೀಡುತ್ತವೆ. ಈ ಕೋಳಿ ತಳಿಯ ಹೆಸರು ಅಸಿಲ್ ಕೋಳಿ.  ಈ ಕೋಳಿ ನೀವು ಸಾಕಿದ್ದಲ್ಲಿ ಕೇವಲ ಒಂದು ಕೋಳಿಯಿಂದ ವರ್ಷದಲ್ಲಿ 60 ರಿಂದ 70 ಸಾವಿರ ರೂಪಾಯಿ ಗಳಿಸಬಹುದು.

Advertisement

ನೀವು 5 ರಿಂದ 10 ಕೋಳಿಗಳೊಂದಿಗೆ ಕೋಳಿ ವ್ಯಾಪಾರವನ್ನು ಪ್ರಾರಂಭಿಸಬಹುದು. ಕೆಲವು ತಿಂಗಳ ನಂತರ ನೀವು ಕೋಳಿ ಮತ್ತು ಮೊಟ್ಟೆಗಳನ್ನು ಮಾರಾಟ ಮಾಡುವ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದು. ಈ ಕೋಳಿಗಳು ಸಾಮಾನ್ಯವಾಗಿ ದೇಶೀಯ ಕೋಳಿಗಳಂತೆ ಅಲ್ಲ. ಇವುಗಳ ಬಾಯಿ ಉದ್ದವಾಗಿದೆ. ಇದು ತುಂಬಾ ಕಡಿಮೆ ತೂಕವನ್ನು ಹೊಂದಿದೆ. ಈ ಕೋಳಿಗಳು ಹೆಚ್ಚೆಂದರೆ 3 ಕೆ.ಜಿ ಮಾತ್ರ ತೂಕ ಬರುತ್ತವೆ.  ಈ ತಳಿಯ ಕೋಳಿಗಳನ್ನು ಹೆಚ್ಚಾಗಿ ಹುಂಜದ ಕಾಳಗಗಳಲ್ಲಿ ಬಳಸಲಾಗುತ್ತದೆ. ಅಸಿಲ್ ತಳಿಯ ಕೋಳಿ ಸಾಕಿದರೆ ರೈತ ಬಂಧುಗಳು ಮೊಟ್ಟೆ ಮಾರಾಟ ಮಾಡಿ ಶ್ರೀಮಂತರಾಗಬಹುದು.

Advertisement

ಈ ಅಸಿಲ್ ತಳಿಯ ಕೋಳಿ ಹೆಚ್ಚಾಗಿ ತಮಿಳುನಾಡು, ಆಂದ್ರಪ್ರದೇಶ, ಒಡಿಸ್ಸಾದಲ್ಲಿ ಕಂಡು ಬರುತ್ತದೆ. ವಿದೇಶಗಳಿಗೆ ಇದನ್ನು ಹೆಚ್ಚಾಗಿ ರಫ್ತು ಮಾಡಲಾಗುತ್ತದೆ.

ಕೃಷಿಯ ಹೊರತಾಗಿ, ಭಾರತದಲ್ಲಿ ರೈತರು ಪಶುಪಾಲನೆ ಮತ್ತು ಕೋಳಿ ಸಾಕಣೆಯನ್ನು ಅಧಿಕ ಪ್ರಮಾಣದಲ್ಲಿ ಮಾಡುತ್ತಾರೆ. ಇದರಿಂದ ರೈತರಿಗೆ ಉತ್ತಮ ಆದಾಯ ದೊರೆಯುತ್ತದೆ. ರಾಜ್ಯ ಸರ್ಕಾರ ಕೂಡ ಪಶುಸಂಗೋಪನೆ ಮತ್ತು ಕೋಳಿ ಸಾಕಾಣೆಯನ್ನು ಉತ್ತೇಜಿಸುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಅನುದಾನ ನೀಡುತ್ತವೆ. ರೈತರ ಆದಾಯ ಹೆಚ್ಚಾಗಲಿ ಎಂಬುದು ಸರ್ಕಾರದ ಆಶಯ.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸುಸ್ಥಿರ ಕೃಷಿ ತರಬೇತಿ ಕಾರ್ಯಗಾರ | ಯುವ ಕೃಷಿಕರಿಗೆ ಕೃಷಿ ಬಗ್ಗೆ ಮಾಹಿತಿ

ಮೂರು ದಿನಗಳ 'ಸುಸ್ಥಿರ ಕೃಷಿ ತರಬೇತಿ'(Sustainable Agriculture Training) ಕಾರ್ಯಾಗಾರ ಮೇ.28 ರಿಂದ…

7 hours ago

ಕೆರೆಯಲ್ಲಿ ಸಾಕಿದ್ದ ಮೀನುಗಳ ಮಾರಣಹೋಮ | ಬೃಹತ್‌ ಗಾತ್ರ ಮೀನು ಸಾವು | ಅಪಾರ ನಷ್ಟ |

ದಾವಣಗೆರೆ(Davanagere) ತಾಲೂಕಿನ ಬೇತೂರು ಗ್ರಾಮದಲ್ಲಿರುವ  ಕೆರೆಯಲ್ಲಿ(Lake) ಮೀನುಗಳ(Fish) ಮಾರಣಹೋಮವಾಗಿದೆ(Dead). ಈ ಕೆರೆಯಲ್ಲಿ 3…

7 hours ago

ಮೇ 31ಕ್ಕೆ ದೇಶದಲ್ಲಿ ಮುಂಗಾರು ಪ್ರವೇಶ ಸಾಧ್ಯತೆ | ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಮಳೆ |

ಮೇ 31ರಿಂದ ದೇಶದಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ…

8 hours ago

ಭಾರತ ಚಂದ್ರನಂಗಳದಲ್ಲಿದೆ | ನಮ್ಮ ಮಕ್ಕಳು ಚರಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ | ಪಾಕ್ ಸಂಸದ ಪಾಕ್‌ ಆಡಳಿತ ವಿರುದ್ಧ ಕಿಡಿ

ಭಾರತ (India) ಚಂದ್ರನನ್ನು(Moon) ತಲುಪಿದೆ. ಆದರೆ ನಮ್ಮ ಮಕ್ಕಳು(Children) ಇಲ್ಲಿ ಚರಂಡಿಯಲ್ಲಿ ಬಿದ್ದು…

8 hours ago

ಎರಡನೇ ವರ್ಷದ ಆನೆ ಗಣತಿಗೆ ದಕ್ಷಿಣ ಭಾರತದ 4 ರಾಜ್ಯಗಳು ಸಜ್ಜು | ಆನೆಗಳ ಸಂಖ್ಯೆ ಹೆಚ್ಚಳವಾಗಿದೆಯೇ..?

ಕರ್ನಾಟಕ(Karnataka), ತಮಿಳುನಾಡು(Tamilnadu), ಆಂಧ್ರಪ್ರದೇಶ(Andra Pradesh) ಮತ್ತು ಕೇರಳ(Kerala) ಒಳಗೊಂಡ ದಕ್ಷಿಣ ಭಾರತದ ನಾಲ್ಕು…

11 hours ago

Karnataka Weather |16-05-2024 | ಹಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ | ಮೇ 17 ರಿಂದ ಉತ್ತಮ ಮಳೆ ಸಾಧ್ಯತೆ |

ಮೇ 17 ರಿಂದ ದಕ್ಷಿಣ ಒಳನಾಡು, ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ…

11 hours ago