MIRROR FOCUS

ಕರಾವಳಿ – ಮಲೆನಾಡುಗಳಲ್ಲೂ ವಿಷರಹಿತ ಕೋಸು ಬೆಳೆ…! | ಕಾಸರಗೋಡು – ದಕ, ಉಡುಪಿಗಳಲ್ಲಿ ಕೋಸ್ ಬೆಳೆದ ರೈತರು

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕೇರಳದಲ್ಲಾಗಲೀ(Kerala) ಕರಾವಳಿ(Coastal), ಮಲೆನಾಡಿನಲ್ಲಾಗಲೀ(Malenadu) ಹೂಕೋಸು(Cauliflower), ಎಲೆಕೋಸು(Cabbage) ಕೃಷಿ(cultivation) ಸಾಧ್ಯವಾಗುವುದಿಲ್ಲ. ಆದರೆ ಕೇರಳ ಕೃಷಿ ವಿಶ್ವವಿದ್ಯಾಲಯದ ಡಾ. ನಾರಾಯಣನ್ ಕುಟ್ಟಿ ( ಈಗ ವಿಶ್ರಾಂತ) ಅವರ ಸತತ ಪ್ರಯತ್ನದಿಂದ ಈಗ ಚಳಿಗಾಲದಲ್ಲಿ ರಾಸಾಯನಿಕ ಬಳಸದೆ ಕ್ಯಾಬೇಜ್, ಕಾಲಿಫ್ಲವರ್, ಬ್ರೊಕೊಲಿಗಳನ್ನು(Broccoli) ಕೇರಳದಾದ್ಯಂತ ಬೆಳೆಸಲು ಸಾಧ್ಯವಾಗುತ್ತಿದೆ. ಕೋಸುಗಳನ್ನು ವಾಣಿಜ್ಯ(Commercial crop) ಮಟ್ಟದಲ್ಲೂ ಬೆಳೆಯುವವರಿದ್ದಾರೆ. ಕೆಲವರು ಕಾಸರಗೋಡು(Kasargodu) ಜಿಲ್ಲೆಯಲ್ಲೂ ಬೆಳೆದು ಮಾರುತ್ತಾರೆ. ಹಾಗಾಗಿ ಉಕ, ಸಾಗರ, ಸಕ್ಲೇಶಪುರದಲ್ಲೂ ಸಾಧ್ಯ ಅನಿಸುತ್ತಿದೆ.

Advertisement

ಕೆಲವೊಂದು ನಿರ್ದಿಷ್ಟ ತಳಿಗಳು ಮಾತ್ರ ಈ ಪ್ರದೇಶದಲ್ಲಿ ಬೆಳೆ ಕೊಡುತ್ತದೆ. ಈ ತಳಿಗಳಲ್ಲಿ ಹಲವನ್ನು ಕೇಕೃವಿಯವರು ಗುರುತಿಸಿ ಪ್ರಕಟಿಸಿದ್ದಾರೆ. ಆಯ್ಕೆ ಮಾಡುವ ತಳಿ ಬಹಳ ಮುಖ್ಯ. ನಮ್ಮಲ್ಲಿಗೆ ಹೊಂದದ ತಳಿಯಾದರೆ, ಅದು ಎಲೆ ಬೆಳೆಸೀತು ಆದರೆ ಹೂಕೋಸು, ಎಲೆಕೋಸುಗಳ ಖಾದ್ಯ ಭಾಗ ಬೆಳೆಯದು! ನೆಂಟರು – ಸ್ನೇಹಿತರ ಬಳಿ ಹೇಳಿ ಯಾವುದೋ ತಳಿಯ ಬೀಜ ಬಿತ್ತಿ ಬೆಳೆದು ಸೋತವರಿದ್ದಾರೆ.

“ ಈ ಬೆಳೆಗಳಿಗೆ ರಾತ್ರಿ ಸೂಕ್ತ ಉಷ್ಣತೆ ಇರಬೇಕು. ಹಗಲಿನದು ಲೆಕ್ಕವಿಲ್ಲ. 15ರಿಂದ 20 ಡಿಗ್ರಿ ಸೆಲ್ಶಿಯಸ್ ಅತ್ಯುತ್ತಮ. 18ರಿಂದ 22ರ ವರೆಗೂ ನಡೆಯುತ್ತದೆ. ಈ ಉಷ್ಣತೆಯ ಶ್ರೇಣಿ ಇರುವಲ್ಲಿ ಬೆಳೆಸಬಹುದು” ಎನ್ನುತ್ತಾರೆ ನಾರಾಯಣನ್ ಕುಟ್ಟಿ. ಕೋಸಿನದು ಎರಡೂವರೆ ತಿಂಗಳ ಬೆಳೆ. ನವೆಂಬರ್ ಮೊದಲ ವಾರದಲ್ಲಿ ನೆಡಬೇಕು. ದಶಂಬರ ಮೊದಲ ವಾರಕ್ಕಿಂತ ತಡ ಆಗಬಾರದು. ಕಾಸರಗೋಡು, ದಕ, ಉಡುಪಿ ಜಿಲ್ಲೆಗಳಲ್ಲಿ ಮನೆ ಮಟ್ಟಿಗೆ ಕೋಸು ಬೆಳೆದು ಗೆದ್ದವರಿದ್ದಾರೆ. ಉಕ, ಸಾಗರ, ಚಿಕ್ಕಮಗಳೂರು ಊರುಗಳಲ್ಲಿ ಸಾಧ್ಯವೇ? ಹವಾಮಾನದ ಅಂಕಿ-ಅಂಶ ಗಮನಿಸಿದರೆ ಸಾಧ್ಯ. ಕೃಷಿಯ ಪ್ರಯೋಗ ಮಾಡಬೇಕಾದರೆ ಸೂಕ್ತ ತಳಿಯ ಬೀಜ ಬೇಕು. ಅದನ್ನು ಪ್ರೋ ಟ್ರೇಯಲ್ಲಿ ಗಿಡ ಮಾಡಲು ಕಲಿಯಬೇಕು. “ಫೆಬ್ರವರಿ 15ರೊಳಗೆ ಕೊಯ್ಲು ಮುಗಿಯಬೇಕು. ಅನಂತರ ರಾತ್ರಿಯ ಉಷ್ಣತೆ ಏರುತ್ತದೆ” ಎನ್ನುತ್ತಾರೆ ಡಾ. ನಾರಾಯಣನ್ ಕುಟ್ಟಿ. ಪ್ರಯೋಗಕ್ಕೆ ಮುಂದಾಗುವ ಆಸಕ್ತರಿದ್ದಾರೆಯೇ?

Advertisement
ಬರಹ :
ಶ್ರೀ ಪಡ್ರೆ
, ಸಂಪಾದಕರು, ಅಡಿಕೆ ಪತ್ರಿಕೆ ( ತಮ್ಮ ಪೇಸ್‌ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು )
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹೊಸರುಚಿ | ಹಲಸಿನ ಹಣ್ಣಿನ ಬಜ್ಜಿ

ಹಲಸಿನ ಹಣ್ಣಿನ ಬಜ್ಜಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ :  ಹಲಸಿನ…

2 hours ago

ಎತ್ತಿನಹೊಳೆ ಯೋಜನೆಯಡಿ ವಿವಿಧ ಜಿಲ್ಲೆಗಳಿಗೆ ನೀರು ತುಂಬಿಸುವ ಚಿಂತನೆ

ಎತ್ತಿನಹೊಳೆ ಯೋಜನೆಯಡಿ ಮೊದಲು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳನ್ನು…

2 hours ago

ದೇಶದ ಉತ್ಪನ್ನಗಳನ್ನು ಬಳಸಲು ರೈತರ ಸಂಕಲ್ಪ

ದೇಶದ ರೈತರ ಹಿತಕ್ಕೆ ಧಕ್ಕೆಯಾಗುವ ಯಾವುದೇ ಒಪ್ಪಂದಗಳನ್ನು ಭಾರತ ಮಾಡಿಕೊಳ್ಳುವುದಿಲ್ಲ ಎಂದು ಕೃಷಿ…

2 hours ago

ಹವಾಮಾನ ವರದಿ | 15-08-2025 | ಸದ್ಯ ಸಾಮಾನ್ಯ ಮಳೆ, ಆ.20 ರ ನಂತರ ಮಳೆ ಕಡಿಮೆ

ಬಂಗಾಳಕೊಲ್ಲಿಯ ಆಂದ್ರಾ, ಒಡಿಶಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಆಗಸ್ಟ್ 18,19 ರಂದು…

23 hours ago

ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!

ಗ್ರಾಮೀಣ ಮಟ್ಟದ ಆರ್ಥಿಕ‌ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…

1 day ago

ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿಗಳಿಗೆ ಚುನಾವಣೆ

ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…

1 day ago