ನೋಡಿ ಮಾರ್ರೆ ಎಷ್ಟು ಚಂದ ಉಂಟಲ್ಲ ಈ ಎರಡು ಫೋಟೋ?. ಯಾರೋ ಆರ್ಟಿಸ್ಟ್ ಮಾಡಿದ ಆರ್ಟ್ ಥರ ಕಾಣ್ತದೆ. ಮುಹೂರ್ತ ಕೂಡಿ ಬರ್ತಿದ್ರೆ ಈ ಪೋಸ್ಟ್ ಎರಡು ವರ್ಷ ಹಿಂದೇನೆ ಹಾಕ್ತಿದ್ದೆ, ಆದ್ರೆ ಕಾಲ ಈಗ ಕೂಡಿ ಬಂದಿದೆ. ಸ್ವಲ್ಪ ಉರಿವ ಬೆಂಕಿಗೆ ತುಪ್ಪ ಹಾಕುವ ಅಂತ ಅನಿಸ್ತಾ ಉಂಟು.
28 ಜುಲೈ 2021 ರಂದು ಕೊಡಿಯಾಲಬೈಲ್ ಪಿಯು ಕಾಲೇಜು ಎದುರಿಂದ ಹೋಗ್ತಿರುವಾಗ ಈ ಫೋಟೋ ತೆಗ್ದಿದ್ದೆ. ಜೊತೆಗೆ ಇದ್ದ ಅಕ್ಕನ ಹತ್ರ ರೋಡ್ ಅವ್ಯವಸ್ಥೆ ಹೇಳ್ಕೊಂಡು ಬಾಯಿಗೆ ಬಂದಾಗೇ ಬೈದಿದ್ದೆ.After all ಒಂದು ಸಾಮಾನ್ಯ ಹುಡುಗಿ ಮತ್ತೆಂತ ಮಾಡ್ಲಿಕ್ಕಾಗ್ತದೆ ಅಲ್ವಾ? ನನ್ನ ಹಾಗೆ ಆ ಊರಿನ ಜನ ಎಲ್ಲ ಇದೆ ಥರ ಬೈಕೊಂಡು ಸುಮ್ನೆ ಕೋಪ ತಡ್ಕೊಂಡು ಕೂತಿರ್ತಾರೆ. ಈಗ ಒಂದು ರಾಜಕಾರಣಿಯ ಹೇಳಿಕೆಯಿಂದ ಆ ಸಿಟ್ಟಿನ ಕಟ್ಟೆ ಒಡೆದಿದೆ. Actually ಇದೊಂದು ಒಳ್ಳೆಯ ಬೆಳವಣಿಗೆ. ಎಲೆಕ್ಷನ್ ಟೈಂಗೆ ಎಂತ ಬೇಕಾದ್ರೂ ಹೇಳಿ ಯಾಮಾರಿಸಲಿಕೆ ಮನೆಮನೆಗೆ ಬರ್ತಾರೆ , ಅದೇ ಎಲೆಕ್ಷನ್ ಮುಗ್ದ್ಮೇಲೆ ಅವ್ರ ಆಶ್ವಾಸನೆಗಳನ್ನು ಅನುಷ್ಠಾನಕ್ಕೆ ತರಿಸಲಿಕೆ ಜನ ತಾಲೂಕ್, ಡಿಸ್ಟ್ರಿಕ್ಟ್ ಆಫೀಸ್ ಅಂತ ಸುತ್ತಬೇಕು, ಇಲ್ಲಾಂದ್ರೆ ಅವ್ರಿಗೆ ಹೋಗಿ ಶಾಲು ಹೊದಿಸಿ ಸನ್ಮಾನ ಮಾಡಿಸಿ ರಿಕ್ವೆಸ್ಟ್ ಮಾಡ್ಸಬೇಕು. ನಮ್ಮ ಊರಿಗೆ ಒಂದು ಕಾಂಕ್ರೀಟ್ ರೋಡ್ ಮಾಡಿಸಿ, ಒಂದು ಟವರ್ ಗೆ ಅಪ್ರೂವಲ್ ಕೊಡಿ, ಒಂದು ಬ್ರಿಜ್ ಕಟ್ಟಿಸಿ ಕೊಡಿ ಅಂತ. ಅದೆಲ್ಲ ಆದ್ಮೇಲೆ 5 ವರ್ಷದ ಟರ್ಮ್ ಅಲ್ಲಿ 3 ವರ್ಷ ಆದ್ಮೇಲೆ ಕಾಂಟ್ರಾಕ್ಟ್ ಕೊಟ್ಟು ಬ್ಯಾಂಡೇಜ್ ಹಾಕಿದ ಹಾಗೆ 200 mtr ಉದ್ದ ಕಾಂಕ್ರೀಟ್ ಹಾಕಿ ಹೋಗ್ತಾರೆ. ಬೋರ್ಡ್ ಮಾತ್ರ ದೊಡ್ಡದಾಗಿ ಅವ್ರೆ ಕಾಂಕ್ರೀಟ್ ಹಾಕಿಸಿದ ಹಾಗೆ ಹಾಕ್ತಾರೆ, ಮತ್ತೆ ಬೇಕಲ್ಲ 5 ವರ್ಷದ ಎಂಡ್ ಗೆ ಸಾಧನೆ ಲಿಸ್ಟ್ ಅಲ್ಲಿ ಹಾಕ್ಲಿಕೆ, ನಾನು ಅದು ಮಾಡಿದ್ದೇನೆ, ಇದು ಮಾಡಿದ್ದೇನೆ, ಆ ಪಕ್ಷದವರು ಎಂತ ಅಂಬಟೆ ಸ ಕೊಡ್ಲಿಲ್ಲ, ನೀವು ನಮ್ಮ ಪಕ್ಷಕ್ಕೆ ಓಟು ಹಾಕಿ, MLA ಇಲ್ಲದಿದ್ರೂ CM ಮುಖ ನೋಡಿ ವೋಟ್ ಹಾಕಿ ಅಂತ ಬೆಣ್ಣೆ ಹಚ್ತಾರೆ.
ಸಾಮಾನ್ಯ ಜನರೇ ಒಂದು ವಿಷ್ಯ ನೆನಪಿಟ್ಕೊಳ್ಳಿ..! ನಮ್ಮಿಂದ ಎಂತ ಮಾಡ್ಲಿಕೆ ಆಗುದಿಲ್ಲ, ನಮ್ಮ ಮಾತಿಗೆ ಬೆಲೆ ಇಲ್ಲ ಅನ್ನುದು ಮೊದ್ಲು ಬಿಡಿ. ನಿಮ್ಮಿಂದ್ಲೇ ಆ ರಾಜಕಾರಣಿಗಳಿಗೆ ದುಡ್ಡಾಗ್ತಿರುದು. ಸಣ್ಣ ಮೊಸರು ಪ್ಯಾಕೆಟ್ ಇಂದ ಹಿಡಿದು ಎಲ್ಲದಕ್ಕೆ ಸಹ ಟ್ಯಾಕ್ಸ್ ಕಟ್ಟುದಿಲ್ವ ನೀವು? ಸ್ವಲ್ಪ ಯೋಚನೆ ಮಾಡಿ. ಎಲೆಕ್ಷನ್ ಟೈಮ್ ಗೆ ಅವ್ರು ಕೊಡುವ ಪುಕ್ಸಟೆ ಹಣ, ಹೆಂಡ, ಪಾರ್ಟಿ ಗೆ ಎಲ್ಲ ಬೀಳ್ಬೇಡಿ, ದುಡ್ಡಿನ ಅಟ್ಟಿಯನ್ನೇ ಹಾಸಿಗೆ ಮಾಡಿ ಮಲಗ್ತಾರೆ ಅವ್ರು, ನಿಮಿಗೆ ಕೊಡುವ ಜುಜುಬಿ ಸಾವಿರ ರೂಪಾಯಿ ಯಾವ ಲೆಕ್ಕ ಮಾರ್ರೆ? ಈ ಪೋಸ್ಟ್ ನೋಡಿದ್ದೀರಾ ಅಂದ್ರೆ ಓದ್ಲಿಕೆ ಬರಿಲಿಕ್ ಬರ್ತದೆ ಅನ್ಕೊಂಡಿದ್ದೇನೆ. ಆದ್ದರಿಂದ ಒಂದು ಸಣ್ಣ ಸಹಾಯ ನಿಮಿಗೆ ನೀವೇ ಮಾಡಿ. ನಿಮ್ಮ ಮಕ್ಲಿಗೆ ಯಾವದೇ ಜಾಬ್ ಬೇಕಿದ್ರೂ ಇಂಟರ್ವ್ಯೂ ಕೊಡ್ಬೇಕು, ಎಕ್ಸಾಮ್ ಬರೀಬೇಕು, ಎಲ್ಲ ಪಾಸ್ ಆದ್ರೆ ಅಷ್ಟೇ ಜಾಬ್, ಪ್ರೈವೇಟ್ ಇಲ್ಲ ಗವರ್ನಮೆಂಟ್ ( ಒಬಿಸಿ, ಜನರಲ್ ಅವ್ರು ಗವರ್ನಮೆಂಟ್ ಜಾಬ್ ಹೆಸರು ಮರ್ತುಬಿಡಿ, ನಮ್ಮ ನಿಮ್ಮ ಹಣೆಬರಹದಲ್ಲಿಲ್ಲ ಅದು ಆಯ್ತಾ) ಮನೆಗೆ ವೋಟ್ ಕೇಳ್ಳಿಕೆ ಬರ್ತಾರಲ್ಲ, ಅವ್ರಿಗೆ ಸಹ ಒಂದ್ ಇಂಟರ್ವ್ಯೂ ತಗೊಳ್ಳಿ. ಭಾರಿ ದೊಡ್ಡ ಕೆಲಸ ಏನಿಲ್ಲ ಅದ್ರಲ್ಲಿ. 1. ನಿಮ್ಮ ಪಕ್ಷದ ಅಭ್ಯರ್ಥಿಯ ಕ್ವಾಲಿಫಿಕೇಷನ್ ಎಂತ?ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…
ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಪಿಂಗಾರ, ಮಾಸ್, ಟಿಎಸ್ಎಸ್, ತುಮ್ಕೋಸ್, ಮ್ಯಾಮ್ಕೋಸ್ ಹಾಗೂ ಕ್ಯಾಂಪ್ಕೊ…
ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ 28 ಸಿಬ್ಬಂದಿಯ ಎಲಿಫೆಂಟ್ ಟಾಸ್ಕ್ ಫೋರ್ಸ್…
ಕೊಪ್ಪ ಅರಣ್ಯ ವಿಭಾಗದಲ್ಲಿ ಕಾಡಾನೆಗಳು ನಾಡಿಗೆ ಪ್ರವೇಶಿಸದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ…
ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…
ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…