ನೋಡಿ ಮಾರ್ರೆ ಎಷ್ಟು ಚಂದ ಉಂಟಲ್ಲ ಈ ಎರಡು ಫೋಟೋ?. ಯಾರೋ ಆರ್ಟಿಸ್ಟ್ ಮಾಡಿದ ಆರ್ಟ್ ಥರ ಕಾಣ್ತದೆ. ಮುಹೂರ್ತ ಕೂಡಿ ಬರ್ತಿದ್ರೆ ಈ ಪೋಸ್ಟ್ ಎರಡು ವರ್ಷ ಹಿಂದೇನೆ ಹಾಕ್ತಿದ್ದೆ, ಆದ್ರೆ ಕಾಲ ಈಗ ಕೂಡಿ ಬಂದಿದೆ. ಸ್ವಲ್ಪ ಉರಿವ ಬೆಂಕಿಗೆ ತುಪ್ಪ ಹಾಕುವ ಅಂತ ಅನಿಸ್ತಾ ಉಂಟು.
28 ಜುಲೈ 2021 ರಂದು ಕೊಡಿಯಾಲಬೈಲ್ ಪಿಯು ಕಾಲೇಜು ಎದುರಿಂದ ಹೋಗ್ತಿರುವಾಗ ಈ ಫೋಟೋ ತೆಗ್ದಿದ್ದೆ. ಜೊತೆಗೆ ಇದ್ದ ಅಕ್ಕನ ಹತ್ರ ರೋಡ್ ಅವ್ಯವಸ್ಥೆ ಹೇಳ್ಕೊಂಡು ಬಾಯಿಗೆ ಬಂದಾಗೇ ಬೈದಿದ್ದೆ.After all ಒಂದು ಸಾಮಾನ್ಯ ಹುಡುಗಿ ಮತ್ತೆಂತ ಮಾಡ್ಲಿಕ್ಕಾಗ್ತದೆ ಅಲ್ವಾ? ನನ್ನ ಹಾಗೆ ಆ ಊರಿನ ಜನ ಎಲ್ಲ ಇದೆ ಥರ ಬೈಕೊಂಡು ಸುಮ್ನೆ ಕೋಪ ತಡ್ಕೊಂಡು ಕೂತಿರ್ತಾರೆ. ಈಗ ಒಂದು ರಾಜಕಾರಣಿಯ ಹೇಳಿಕೆಯಿಂದ ಆ ಸಿಟ್ಟಿನ ಕಟ್ಟೆ ಒಡೆದಿದೆ. Actually ಇದೊಂದು ಒಳ್ಳೆಯ ಬೆಳವಣಿಗೆ. ಎಲೆಕ್ಷನ್ ಟೈಂಗೆ ಎಂತ ಬೇಕಾದ್ರೂ ಹೇಳಿ ಯಾಮಾರಿಸಲಿಕೆ ಮನೆಮನೆಗೆ ಬರ್ತಾರೆ , ಅದೇ ಎಲೆಕ್ಷನ್ ಮುಗ್ದ್ಮೇಲೆ ಅವ್ರ ಆಶ್ವಾಸನೆಗಳನ್ನು ಅನುಷ್ಠಾನಕ್ಕೆ ತರಿಸಲಿಕೆ ಜನ ತಾಲೂಕ್, ಡಿಸ್ಟ್ರಿಕ್ಟ್ ಆಫೀಸ್ ಅಂತ ಸುತ್ತಬೇಕು, ಇಲ್ಲಾಂದ್ರೆ ಅವ್ರಿಗೆ ಹೋಗಿ ಶಾಲು ಹೊದಿಸಿ ಸನ್ಮಾನ ಮಾಡಿಸಿ ರಿಕ್ವೆಸ್ಟ್ ಮಾಡ್ಸಬೇಕು. ನಮ್ಮ ಊರಿಗೆ ಒಂದು ಕಾಂಕ್ರೀಟ್ ರೋಡ್ ಮಾಡಿಸಿ, ಒಂದು ಟವರ್ ಗೆ ಅಪ್ರೂವಲ್ ಕೊಡಿ, ಒಂದು ಬ್ರಿಜ್ ಕಟ್ಟಿಸಿ ಕೊಡಿ ಅಂತ. ಅದೆಲ್ಲ ಆದ್ಮೇಲೆ 5 ವರ್ಷದ ಟರ್ಮ್ ಅಲ್ಲಿ 3 ವರ್ಷ ಆದ್ಮೇಲೆ ಕಾಂಟ್ರಾಕ್ಟ್ ಕೊಟ್ಟು ಬ್ಯಾಂಡೇಜ್ ಹಾಕಿದ ಹಾಗೆ 200 mtr ಉದ್ದ ಕಾಂಕ್ರೀಟ್ ಹಾಕಿ ಹೋಗ್ತಾರೆ. ಬೋರ್ಡ್ ಮಾತ್ರ ದೊಡ್ಡದಾಗಿ ಅವ್ರೆ ಕಾಂಕ್ರೀಟ್ ಹಾಕಿಸಿದ ಹಾಗೆ ಹಾಕ್ತಾರೆ, ಮತ್ತೆ ಬೇಕಲ್ಲ 5 ವರ್ಷದ ಎಂಡ್ ಗೆ ಸಾಧನೆ ಲಿಸ್ಟ್ ಅಲ್ಲಿ ಹಾಕ್ಲಿಕೆ, ನಾನು ಅದು ಮಾಡಿದ್ದೇನೆ, ಇದು ಮಾಡಿದ್ದೇನೆ, ಆ ಪಕ್ಷದವರು ಎಂತ ಅಂಬಟೆ ಸ ಕೊಡ್ಲಿಲ್ಲ, ನೀವು ನಮ್ಮ ಪಕ್ಷಕ್ಕೆ ಓಟು ಹಾಕಿ, MLA ಇಲ್ಲದಿದ್ರೂ CM ಮುಖ ನೋಡಿ ವೋಟ್ ಹಾಕಿ ಅಂತ ಬೆಣ್ಣೆ ಹಚ್ತಾರೆ.
ಸಾಮಾನ್ಯ ಜನರೇ ಒಂದು ವಿಷ್ಯ ನೆನಪಿಟ್ಕೊಳ್ಳಿ..! ನಮ್ಮಿಂದ ಎಂತ ಮಾಡ್ಲಿಕೆ ಆಗುದಿಲ್ಲ, ನಮ್ಮ ಮಾತಿಗೆ ಬೆಲೆ ಇಲ್ಲ ಅನ್ನುದು ಮೊದ್ಲು ಬಿಡಿ. ನಿಮ್ಮಿಂದ್ಲೇ ಆ ರಾಜಕಾರಣಿಗಳಿಗೆ ದುಡ್ಡಾಗ್ತಿರುದು. ಸಣ್ಣ ಮೊಸರು ಪ್ಯಾಕೆಟ್ ಇಂದ ಹಿಡಿದು ಎಲ್ಲದಕ್ಕೆ ಸಹ ಟ್ಯಾಕ್ಸ್ ಕಟ್ಟುದಿಲ್ವ ನೀವು? ಸ್ವಲ್ಪ ಯೋಚನೆ ಮಾಡಿ. ಎಲೆಕ್ಷನ್ ಟೈಮ್ ಗೆ ಅವ್ರು ಕೊಡುವ ಪುಕ್ಸಟೆ ಹಣ, ಹೆಂಡ, ಪಾರ್ಟಿ ಗೆ ಎಲ್ಲ ಬೀಳ್ಬೇಡಿ, ದುಡ್ಡಿನ ಅಟ್ಟಿಯನ್ನೇ ಹಾಸಿಗೆ ಮಾಡಿ ಮಲಗ್ತಾರೆ ಅವ್ರು, ನಿಮಿಗೆ ಕೊಡುವ ಜುಜುಬಿ ಸಾವಿರ ರೂಪಾಯಿ ಯಾವ ಲೆಕ್ಕ ಮಾರ್ರೆ?ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…