ಕೂಡ್ಲಿಗಿ | ಪಂಡರಾಪುರ ಶ್ರೀಪಾಂಡುರಂಗ ದರ್ಶನಕ್ಕೆ ಭಕ್ತರ ಪಾದಯಾತ್ರೆ |

November 3, 2024
6:33 AM

ಮಹಾರಾಷ್ಟ್ರದ ಪಂಡರಾಪುರ ಶ್ರೀಪಾಂಡುರಂಗ ದೇವರ ಸನ್ನಿಧಿಗೆ ಹಲವಾರು ಭಕ್ತರು ಪಾದಯಾತ್ರೆ ಮೂಲಕ ಸಾಗುತ್ತಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ತಳವಾರಹಟ್ಟಿ ಬಳಗಟ್ಟ ಗ್ರಾಮದ ಪಂಡರಾಪುರ ಶ್ರೀಪ‍ಾಂಡು ರಂಗ ಸ್ವಾಮಿ ಪಾದಯಾತ್ರೆ ಭಕ್ತರ ಸೇವಾ ಸಮಿತಿ, ಸತತ 11ನೇ ವರ್ಷದ ಪಾದಯಾತ್ರೆ ಹಮ್ಮಿಕೊಂಡಿತ್ತು.

Advertisement

ಪಾದಯಾತ್ರೆ ತಂಡದಲ್ಲಿ ಮಹಿಳಾ ಭಕ್ತರು ಯುವಕರು ವೃದ್ಧರಾದಿ‌ಯಾಗಿ, ಒಟ್ಟು ಮೂವತ್ತು ಜನರುಳ್ಳ ಭಕ್ತರ ದಂಡು ಭಜನೆ ಮಾಡುತ್ತಾ ಪ‍ಾದಯಾತ್ರೆ ಮೂಲಕ ಮುಂದೆ ತೆರಳಿತು. ಪ್ರತಿ ದಿನ 25-30 ಕಿಲೋ ಮೀಟರ್ ಪಾದಯಾತ್ರೆ ಮೂಲಕ ಕ್ರಮಿಸುವ ತಂಡ. ದಾರಿಯುದ್ದಕ್ಕೂ ಶ್ರೀರಂಗನ ನಾಮಸ್ಮರಣೆ ಮಾಡುತ್ತಾ  ಸಾಗಿತು.

ನೆರೆ ರ‍ಾಜ್ಯ ಮಹರಾಷ್ಟ್ರದಲ್ಲಿರುವ, ಪಂಡರಾಪುರ ಕ್ಷೇತ್ರಕ್ಕೆ ಭಕ್ತರ ದಂಡು ತಮ್ಮ ಪಾದಯಾತ್ರೆ ಯಶಸ್ವಿಗೊಳಿಸಿ ಸಮಾಪ್ತಿ ಗೊಳಿಸುತ್ತಾರೆ. ಇದೇ ರೀತಿ  ಕರ್ನಾಟಕದ ಮೂಲೆ ಮೂಲೆ ಮೂಲೆಗಳಿಂದ ಸತತ ಹತ್ತಾರು ವರ್ಷಗಳಿಂದ ಪಾದಯಾತ್ರೆ ಹಮ್ಮಿಕೊಳ್ಳುವ ಹಲವಾರು ಮಂದಿ ಇದ್ದಾರೆ.

ಬರಹ :
ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 26-03-2025 | ಇಂದೂ ಕೆಲವು ಕಡೆ ಗಾಳಿ ಸಹಿತ ಮಳೆ ಸಾಧ್ಯತೆ | ಮಾ.27 ರಿಂದ ಮಳೆ ಕಡಿಮೆ |
March 26, 2025
1:29 PM
by: ಸಾಯಿಶೇಖರ್ ಕರಿಕಳ
ಕಂದಕ ಬದು ನಿರ್ಮಾಣ ಕುರಿತ ಕಾರ್ಯಾಗಾರ | ಬದು ನಿರ್ಮಾಣದಿಂದ ಮಳೆ ನೀರು ಪೋಲು ನಿಯಂತ್ರಣ |
March 26, 2025
7:06 AM
by: The Rural Mirror ಸುದ್ದಿಜಾಲ
ಹಾಸನ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ | ಸೆರೆ ಹಿಡಿದ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ
March 26, 2025
6:49 AM
by: The Rural Mirror ಸುದ್ದಿಜಾಲ
ಕೋಲಾರ ತಾಲೂಕಿನ ಅಬ್ಬಣಿ ಕಿರು ಅರಣ್ಯ ಪ್ರದೇಶದಲ್ಲಿ ಒತ್ತುವರಿ ತೆರವು  ಕಾರ್ಯಾಚರಣೆ
March 26, 2025
6:46 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror