ಅನುಕ್ರಮ

ನಿತ್ಯ ಜಂಜಡದ ನಡುವೆ……… ಉಪ್ಪಿನಕಾಯಿಯ ಚಿಂತೆ..!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಮಾರು ಎರಡು ತಿಂಗಳಿನಿಂದ ನಿತ್ಯ ಮುಂಜಾನೆಯ ತೋಟದ ವಾಕಿಂಗ್ ಕೊನೆಯಾಗಿದೆ…. ಎಂತ ಹೇಳುತ್ತಿದ್ದಾಳೆ ಅನ್ನಿಸಿತಾ? ಈ ವರುಷದ ಕಾಡು ಮಾವಿನ ಹಣ್ಣು ಮುಗಿಯಿತು ಎಂಬುದು ವಿಷಯ. ಎರಡು ಮೂರು ಕವರ್ ತಗೊಂಡು ಬೇರೆ ಬೇರೆ ಜಾತಿಯ ಮಾವಿನ ಹಣ್ಣು ಹೆಕ್ಕಲು ಓಡೋಡಿ ಹೋಗುತ್ತಿದ್ದ ಕೆಲಸಕ್ಕೆ ಸದ್ಯ ವಿರಾಮ. ಇನ್ನು ಮುಂದಿನ ವರ್ಷ. ಯಾವ ಮಾವಿನ ಮರ ಫಲ ಬಿಡ ಬಹುದು?

Advertisement

ಉಪ್ಪಿನಕಾಯಿ ಮಿಡಿ ಹಾಕುವ ಮರ ಈ ಬಾರಿ ಹೂ ಬಿಟ್ಟಿತ್ತು ಆದರೆ ಉಳಿಯಲಿಲ್ಲ. ಮುಂದಕ್ಕೆ ಆಗ ಬಹುದೋ ಇಲ್ಲವೋ ಗೊತ್ತಿಲ್ಲ. ಸ್ವಲ್ಪ ಹಾಕಿದ ಉಪ್ಪಿನಕಾಯಿ ಸಾಕಗ ಬಹುದೋ ಗೊತ್ತಿಲ್ಲ. ನೆಕ್ಕರೆ ಮಾವಿನಕಾಯಿಯ ತುಂಡು ಉಪ್ಪಿನಕಾಯಿಯೇ ಗತಿಯಾ ಗೊತ್ತಿಲ್ಲ. ಯಾವುದಕ್ಕೂ ಇರಲಿ ಅಂತ ಸ್ವಲ್ಪ ಬೇಯಿಸಿದ ತುಂಡು ಹಾಕಿ ಇಟ್ಟು ಕೊಂಡರೆ ಧೈರ್ಯ ಅಂತ ಮಾಡಿ ಇಟ್ಟದ್ದೂ ಆಗಿದೆ. ಮನೆ ಎಂದ ಮೇಲೆ ಉಪ್ಪಿನಕಾಯಿ ಇಲ್ಲದಿದ್ದರೆ ಆದೀತೇ? ಬೇರೆ ಏನೂ ಇಲ್ಲದಿದ್ದರೂ ಒಂದು ತುಂಡು ಉಪ್ಪಿನಕಾಯಿ, ನೀರು ಮಜ್ಜಿಗೆ ಇದ್ದರೆ ನಮಗೆ ಮೃಷ್ಟಾನ್ನವೇ.

ನಿತ್ಯ ಕಾರ್ಯಕ್ರಮಕ್ಕೆ ಹೋಗಿ ಗಡದ್ದು ಊಟ ಮಾಡಿ ಬಾಯಿ ಕೆಟ್ಟಾಗ ಲಿಂಬೆಹುಳಿಯ ಚಪ್ಪೆ ಉಪ್ಪಿನಕಾಯಿ ಮಜ್ಜಿಗೆಗೆ ಸರಿಸಾಟಿಯಾದದ್ದು ಬೇರೆ ಯಾವುದೂ ಇಲ್ಲ. ಅದರಲ್ಲೂ ಈ ಉಪ್ಪಿನಕಾಯಿಗೆ ಬೇವಿನ ಸೊಪ್ಪು, ಗಾಂಧಾರಿ ಮೆಣಸು, ಶುಂಠಿಯ ಸಣ್ಣ ತುಂಡು, ಬೆಳ್ಳುಳ್ಳಿಯ ಕೊಚ್ಚಲು ತೆಂಗಿನ ಎಣ್ಣೆಯ ಒಗ್ಗರಣೆಗೆ ಲಿಂಬೆ ಹುಳಿಯ ರಸ ತೆಗೆದ ಸಿಪ್ಪೆಯ ಪುಟ್ಟ ತುಂಡುಗಳನ್ನು ಹಾಕಿ ಮಾಡಿದ ಉಪ್ಪಿನ ಕಾಯಿ ಸೂಪರ್. ಒಮ್ಮೆ ಮಾಡಿ ಹೇಳಿ ಆಯ್ತಾ!

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದರ್ಶಿತ್‌ ಕೆ ಎಸ್

ದರ್ಶಿತ್‌ ಕೆ ಎಸ್‌, 3 ನೇ ತರಗತಿ, ಜ್ಞಾನಗಂಗಾ ಸೆಂಟ್ರಲ್‌ ಸ್ಕೂಲ್‌, ಬೆಳ್ಳಾರೆದರ್ಶಿತ್‌…

3 hours ago

ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿಲ್ಲ | ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ವರದಿ ನೀಡಲು ರಚಿಸಲಾಗಿದ್ದ ತಜ್ಞರ ಸಮಿತಿ…

4 hours ago

ಮೆಕ್ಕೆಜೋಳ ಸಮಾವೇಶ | ಕನಿಷ್ಠ ಬೆಂಬಲ ಬೆಲೆ ಮೂಲಕ ರೈತರ ಹಿತರಕ್ಷಣೆ

ದೇಶದಲ್ಲಿ ಮೆಕ್ಕೆಜೋಳ ಉತ್ಪಾದನೆ ಹೆಚ್ಚಳ ಮತ್ತು ಅಭಿವೃದ್ದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕನಿಷ್ಠ…

4 hours ago

ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಪ್ರದೇಶ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ನಿಷೇಧ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ದ ಯಾತ್ರಾ ಸ್ಥಳ ಘಾಟಿ ಕ್ಷೇತ್ರದ…

5 hours ago

ಚಾರ್ಮಾಡಿ ಘಾಟ್‌ನಲ್ಲಿ ದಟ್ಟ ಮಂಜು | ವಾಹನ ಸವಾರರಿಗೆ ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚನೆ

ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಮಳೆ ಹಾಗು ದಟ್ಟ ಮಂಜು ಆವರಿಸಿದ…

5 hours ago

ತಾಳಮದ್ದಳೆ ಸಪ್ತಾಹ ಸಮಾರೋಪ | ಕುರಿಯ ಪ್ರಶಸ್ತಿ ಪ್ರದಾನ ಪ್ರಶಸ್ತಿ ಪಡೆವ ಕಲಾವಿದನ ಬದುಕು ಆದರ್ಶವಾಗಿರಬೇಕು

ಓರ್ವ ಕಲಾವಿದ ಸಮಾಜಮುಖಿಯಾಗಿ, ಕಲಾತ್ಮಕವಾಗಿ ಹೇಗೆ ಬದುಕಬೇಕೆನ್ನುವುದನ್ನು ಹಾಸ್ಯಗಾರ್ ದಿ.ಪೆರುವಡಿ ನಾರಾಯಣ ಭಟ್ಟರು…

5 hours ago