Advertisement
ಅನುಕ್ರಮ

ಸಸ್ಯ ಪರಿಚಯ | ಮರಳಿ ತನ್ನಿ ಮರೆತ ಸೊಪ್ಪು – ತುಂಬೆ ಗಿಡ

Share

ಅಚ್ಚ ಬಿಳಿಯ ಹೂಗಳಿಂದ ನಳನಳಿಸುವ ತುಂಬೆ ಗಿಡವು ಶಿವ ದೇವರಿಗೆ ಪ್ರೀತಿಯ ಹೂವಂತೆ. ಮಳೆಗಾಲದಲ್ಲಿ ಅಂಗಳ, ಹೂತೋಟ, ತೋಟದ ಬದಿಗಳಲ್ಲಿ ಹುಟ್ಟಿ ಬೆಳೆಯುವ ತುಂಬೆ ಗಿಡವು ಔಷಧೀಯ ಗಿಡ.

ಚಿಕ್ಕ ಮಕ್ಕಳಿಗೆ ಕಫದ ಸಮಸ್ಯೆ ಯಾದಾಗ ತುಂಬೆ ಎಲೆಗಳ ರಸವನ್ನು ಜೇನುತುಪ್ಪ ಸೇರಿಸಿ ನುಣ್ಣಗೆ ಅರೆದು ಕುಡಿಸಿದರೆ ಕಫ ನಿವಾರಣೆ ಆಗುತ್ತದೆ. ಶೀತ, ನೆಗಡಿ , ಜ್ವರ ತಲೆನೋವು ಮೊದಲಾದ ಮಳೆಗಾಲದ ಸಮಸ್ಯೆಗಳನ್ನು ತುಂಬೆ ಕಷಾಯವನ್ನು ಸೇವಿಸಿ ಕಡಿಮೆ ಮಾಡಿಕೊಳ್ಳಬಹುದು. ಅಲರ್ಜಿ, ತುರಿಕಜ್ಜಿಗಳಿಗೆ ತುಂಬೆ ರಸವನ್ನು ಉಪ್ಪಿನ ಜತೆ ಬೆರೆಸಿ ಹಚ್ಚಿದರೆ ಉಪಶಮನವಾಗುತ್ತದೆ.

ಕಣ್ಣು ನೋವು ಬಂದಾಗ ಒಂದು ಹಿಡಿ ತುಂಬೆಹೂಗಳನ್ನು ಚೆನ್ನಾಗಿ ಜಜ್ಜಿ ಶುದ್ಧ ವಾದ ಬಟ್ಟೆಯನ್ನು ಬಳಸಿ ರಸವನ್ನು ಹಿಂಡಿಕೊಂಡು ಕಣ್ಣಿಗೆ ನಾಲ್ಕಾರು ಹನಿಗಳನ್ನು ದಿನಕ್ಕೆರಡು ಬಾರಿ ಬಿಡಬೇಕು. ಎರಡು ಮೂರು ದಿನಗಳಲ್ಲಿ ಕಣ್ಣುನೋವು ಕಡಿಮೆಯಾಗುತ್ತದೆ. ತುಂಬೆ ಬೇರನ್ನು ಸಹ ಔಷಧವಾಗಿ ಬಳಸುತ್ತಾರೆ.ಆಯುರ್ವೇದದಲ್ಲಿ ತುಂಬೆ ಗಿಡವನ್ನು ತುಂಬಾ ಬಳಕೆ ಮಾಡುತ್ತಾರೆ.

ಮಳೆಗಾಲದಲ್ಲಿ ಸಮೃದ್ಧವಾಗಿ ದೊರೆಯುವ ತುಂಬೆ ಗಿಡಗಳನ್ನು ಬೇರು ಸಹಿತ ಕಿತ್ತು ಅದನ್ನು ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡರೆ ಬೇಸಿಗೆಯಲ್ಲಿ ಗಿಡಗಳ ಲಭ್ಯತೆ ಕಡಿಮೆ ಇದ್ದಾಗ ಔಷಧವಾಗಿ ಬಳಸಿ ಕೊಳ್ಳಬಹುದು.

ತುಂಬೆ ಗಿಡ ಚರ್ಮದ ತುರಿಕೆಗೆ ಉತ್ತಮ ಔಷಧವಾಗಿದೆ. ಎಲೆಗಳ ರಸವನ್ನು ಪೇಸ್ಟ್ ಮಾಡಿ ಚರ್ಮಕ್ಕೆ ಲೇಪಿಸಿದರೆ ತಕ್ಷಣ ತುರಿಕೆ ಕಡಿಮೆಯಾಗುತ್ತದೆ. ತುಂಬೆಗಿಡದ ಬೇರಿನ ಪುಡಿಯೊಂದಿಗೆ 1-2 ಗ್ರಾಂ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಕುಡಿದರೆ ಸಂಧಿವಾತ ಕಡಿಮೆಯಾಗುತ್ತದೆ. ನಿದ್ರಾಹೀನತೆಯ ನಿವಾರಣೆಗೆ ತುಂಬೆ ಗಿಡದ ಕಷಾಯ ಸಹಕಾರಿ. ತುಂಬೆ ಗಿಡದ ಎಲೆಗಳ ಕಷಾಯ ಮಾಡಿ ಕುಡಿದರೆ ನರಗಳ ಸೆಳೆತ, ಗಂಟು ಕಟ್ಟುವುದು, ನೋವು ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ತುಂಬೆ ರಸಕ್ಕೆ ಕರಿಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ ಸೇವಿಸಿದರೆ ಮಲೇರಿಯಾ ಜ್ವರ ಕಡಿಮೆಯಾಗುತ್ತದೆ.

ದ್ರೋಣಿ ಪುಷ್ಠಿ ಎಂಬ ಹೆಸರಿರುವ ತುಂಬೆ ಗಿಡದ ಪುಡಿಯನ್ನು ಯಕೃತ್ತಿನ ಅಸ್ವಸ್ಥತೆಯನ್ನು ದೂರ ಮಾಡುತ್ತದೆ. ತುಂಬೆ ಗಿಡದ ಕಷಾಯವು ಅಜೀರ್ಣಕ್ಕೆ ಉತ್ತಮ ಪ್ರಯೋಜನಕಾರಿ. ಇದರ ಸಸ್ಯ ಶಾಸ್ತ್ರೀಯ ಹೆಸರು (eucas spera) ಹೊಟ್ಟೆಯಲ್ಲಿ ಜಂತುಹುಳವಿನಿಂದಾಗಿ ಪ್ರಾರಂಭವಾದರೆ ತುಂಬೆಯ ಎಲೆಗಳನ್ನು ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ಸೇವಿಸಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ಕಷಾಯ ಮಾಡಿ ಚಿಟಿಕೆ ಅರಸಿನ ಬೆರೆಸಿ ಕುಡಿದರೆ ಶರೀರದಲ್ಲಿ ಹಸಿಗಾಯ ಮಾಯವಾಗುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಜಯಲಕ್ಷ್ಮಿ ದಾಮ್ಲೆ

ಜಯಲಕ್ಷ್ಮಿ ದಾಮ್ಲೆ ಅವರು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದಾರೆ. ಪರಿಸರ ಸಂಬಂಧಿತ ಬರಹ, ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದಾರೆ.

Published by
ಜಯಲಕ್ಷ್ಮಿ ದಾಮ್ಲೆ

Recent Posts

ಬೇಸಿಗೆಯಲ್ಲಿ ನಿಮ್ಮ ಕಿಡ್ನಿಯನ್ನು ಕಾಪಾಡಿ..! ಮೂತ್ರಪಿಂಡದ ಕಲ್ಲು ಸಮಸ್ಯೆ ಏಕೆ ಹೆಚ್ಚುತ್ತಿದೆ?

ಬೇಸಿಗೆಯಲ್ಲಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.…

3 days ago

ಮಳೆಗಾಲ ಆರಂಭ- ಜೂನ್‌ 1ರಿಂದ ರಸ್ತೆ, ಗುಡ್ಡ, ಮಣ್ಣು ಅಗೆತ ಕಾಮಗಾರಿಗೆ ನಿರ್ಬಂಧ – ನಗರಪಾಲಿಕೆ ಎಚ್ಚರಿಕೆ

ಮಂಗಳೂರು ನಗರದಲ್ಲಿ ಮಳೆಗಾಲದ ಹಿನ್ನೆಲೆ ಜೂನ್‌ 1ರಿಂದ ಸೆಪ್ಟೆಂಬರ್‌ 30ರವರೆಗೆ ರಸ್ತೆ, ಗುಡ್ಡ…

3 days ago

ಅಸ್ಸಾಂನಲ್ಲಿ ಭಾರೀ ಅಕ್ರಮ ಅಡಿಕೆ ವಶ : ಡಿಆರ್‌ಐ ದಾಳಿ, 60 ಸಾವಿರ ಕೆಜಿ ವಿದೇಶಿ ಅಡಿಕೆ ಜಪ್ತಿ

ಈಶಾನ್ಯ ಭಾರತದಲ್ಲಿ ಡಿಆರ್‌ಐ ನಡೆಸಿದ ದಾಳಿಯಲ್ಲಿ ಸುಮಾರು 60 ಸಾವಿರ ಕೆಜಿ ಅಕ್ರಮ…

4 days ago

“ಒಂದು ದಿನ ಅಡಿಕೆ ಮಾರುಕಟ್ಟೆಗೆ ‘ಏಲಿಯನ್ಸ್’ ಬಂದರೆ?” ರೈತನ ಭವಿಷ್ಯದ ಬಗ್ಗೆ ಎಚ್ಚರಿಸುವ ಕಲ್ಪಿತ ಕಥೆ

ಅಡಿಕೆ ಮಾರುಕಟ್ಟೆಗೆ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಬಂದರೆ ರೈತರಿಗೆ ಆರಂಭದಲ್ಲಿ ಲಾಭದ ಅನುಭವ…

4 days ago

“ಕಾಕ್ರೋಚ್‌ ಜನತಾ ಪಾರ್ಟಿ”ಗೆ ಹೊಸ ಎದುರಾಳಿ..! ವೈರಲ್‌ ಆಗುತ್ತಿದೆ “ನ್ಯಾಷನಲ್‌ ಪ್ಯಾರಾಸಿಟಿಕ್‌ ಫ್ರಂಟ್‌”

“ಕಾಕ್‌ರೋಚ್‌ ಜನತಾ ಪಾರ್ಟಿ” ಬಳಿಕ ಇದೀಗ “ನ್ಯಾಷನಲ್‌ ಪ್ಯಾರಾಸಿಟಿಕ್‌ ಫ್ರಂಟ್‌” ಎಂಬ ಹೊಸ…

5 days ago