Advertisement
ಅನುಕ್ರಮ

ಸಸ್ಯ ಪರಿಚಯ | ಮರಳಿ ತನ್ನಿ ಮರೆತ ಸೊಪ್ಪು – ತುಂಬೆ ಗಿಡ

Share

ಅಚ್ಚ ಬಿಳಿಯ ಹೂಗಳಿಂದ ನಳನಳಿಸುವ ತುಂಬೆ ಗಿಡವು ಶಿವ ದೇವರಿಗೆ ಪ್ರೀತಿಯ ಹೂವಂತೆ. ಮಳೆಗಾಲದಲ್ಲಿ ಅಂಗಳ, ಹೂತೋಟ, ತೋಟದ ಬದಿಗಳಲ್ಲಿ ಹುಟ್ಟಿ ಬೆಳೆಯುವ ತುಂಬೆ ಗಿಡವು ಔಷಧೀಯ ಗಿಡ.

ಚಿಕ್ಕ ಮಕ್ಕಳಿಗೆ ಕಫದ ಸಮಸ್ಯೆ ಯಾದಾಗ ತುಂಬೆ ಎಲೆಗಳ ರಸವನ್ನು ಜೇನುತುಪ್ಪ ಸೇರಿಸಿ ನುಣ್ಣಗೆ ಅರೆದು ಕುಡಿಸಿದರೆ ಕಫ ನಿವಾರಣೆ ಆಗುತ್ತದೆ. ಶೀತ, ನೆಗಡಿ , ಜ್ವರ ತಲೆನೋವು ಮೊದಲಾದ ಮಳೆಗಾಲದ ಸಮಸ್ಯೆಗಳನ್ನು ತುಂಬೆ ಕಷಾಯವನ್ನು ಸೇವಿಸಿ ಕಡಿಮೆ ಮಾಡಿಕೊಳ್ಳಬಹುದು. ಅಲರ್ಜಿ, ತುರಿಕಜ್ಜಿಗಳಿಗೆ ತುಂಬೆ ರಸವನ್ನು ಉಪ್ಪಿನ ಜತೆ ಬೆರೆಸಿ ಹಚ್ಚಿದರೆ ಉಪಶಮನವಾಗುತ್ತದೆ.

ಕಣ್ಣು ನೋವು ಬಂದಾಗ ಒಂದು ಹಿಡಿ ತುಂಬೆಹೂಗಳನ್ನು ಚೆನ್ನಾಗಿ ಜಜ್ಜಿ ಶುದ್ಧ ವಾದ ಬಟ್ಟೆಯನ್ನು ಬಳಸಿ ರಸವನ್ನು ಹಿಂಡಿಕೊಂಡು ಕಣ್ಣಿಗೆ ನಾಲ್ಕಾರು ಹನಿಗಳನ್ನು ದಿನಕ್ಕೆರಡು ಬಾರಿ ಬಿಡಬೇಕು. ಎರಡು ಮೂರು ದಿನಗಳಲ್ಲಿ ಕಣ್ಣುನೋವು ಕಡಿಮೆಯಾಗುತ್ತದೆ. ತುಂಬೆ ಬೇರನ್ನು ಸಹ ಔಷಧವಾಗಿ ಬಳಸುತ್ತಾರೆ.ಆಯುರ್ವೇದದಲ್ಲಿ ತುಂಬೆ ಗಿಡವನ್ನು ತುಂಬಾ ಬಳಕೆ ಮಾಡುತ್ತಾರೆ.

ಮಳೆಗಾಲದಲ್ಲಿ ಸಮೃದ್ಧವಾಗಿ ದೊರೆಯುವ ತುಂಬೆ ಗಿಡಗಳನ್ನು ಬೇರು ಸಹಿತ ಕಿತ್ತು ಅದನ್ನು ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡರೆ ಬೇಸಿಗೆಯಲ್ಲಿ ಗಿಡಗಳ ಲಭ್ಯತೆ ಕಡಿಮೆ ಇದ್ದಾಗ ಔಷಧವಾಗಿ ಬಳಸಿ ಕೊಳ್ಳಬಹುದು.

ತುಂಬೆ ಗಿಡ ಚರ್ಮದ ತುರಿಕೆಗೆ ಉತ್ತಮ ಔಷಧವಾಗಿದೆ. ಎಲೆಗಳ ರಸವನ್ನು ಪೇಸ್ಟ್ ಮಾಡಿ ಚರ್ಮಕ್ಕೆ ಲೇಪಿಸಿದರೆ ತಕ್ಷಣ ತುರಿಕೆ ಕಡಿಮೆಯಾಗುತ್ತದೆ. ತುಂಬೆಗಿಡದ ಬೇರಿನ ಪುಡಿಯೊಂದಿಗೆ 1-2 ಗ್ರಾಂ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಕುಡಿದರೆ ಸಂಧಿವಾತ ಕಡಿಮೆಯಾಗುತ್ತದೆ. ನಿದ್ರಾಹೀನತೆಯ ನಿವಾರಣೆಗೆ ತುಂಬೆ ಗಿಡದ ಕಷಾಯ ಸಹಕಾರಿ. ತುಂಬೆ ಗಿಡದ ಎಲೆಗಳ ಕಷಾಯ ಮಾಡಿ ಕುಡಿದರೆ ನರಗಳ ಸೆಳೆತ, ಗಂಟು ಕಟ್ಟುವುದು, ನೋವು ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ತುಂಬೆ ರಸಕ್ಕೆ ಕರಿಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ ಸೇವಿಸಿದರೆ ಮಲೇರಿಯಾ ಜ್ವರ ಕಡಿಮೆಯಾಗುತ್ತದೆ.

ದ್ರೋಣಿ ಪುಷ್ಠಿ ಎಂಬ ಹೆಸರಿರುವ ತುಂಬೆ ಗಿಡದ ಪುಡಿಯನ್ನು ಯಕೃತ್ತಿನ ಅಸ್ವಸ್ಥತೆಯನ್ನು ದೂರ ಮಾಡುತ್ತದೆ. ತುಂಬೆ ಗಿಡದ ಕಷಾಯವು ಅಜೀರ್ಣಕ್ಕೆ ಉತ್ತಮ ಪ್ರಯೋಜನಕಾರಿ. ಇದರ ಸಸ್ಯ ಶಾಸ್ತ್ರೀಯ ಹೆಸರು (eucas spera) ಹೊಟ್ಟೆಯಲ್ಲಿ ಜಂತುಹುಳವಿನಿಂದಾಗಿ ಪ್ರಾರಂಭವಾದರೆ ತುಂಬೆಯ ಎಲೆಗಳನ್ನು ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ಸೇವಿಸಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ಕಷಾಯ ಮಾಡಿ ಚಿಟಿಕೆ ಅರಸಿನ ಬೆರೆಸಿ ಕುಡಿದರೆ ಶರೀರದಲ್ಲಿ ಹಸಿಗಾಯ ಮಾಯವಾಗುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಜಯಲಕ್ಷ್ಮಿ ದಾಮ್ಲೆ

ಜಯಲಕ್ಷ್ಮಿ ದಾಮ್ಲೆ ಅವರು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದಾರೆ. ಪರಿಸರ ಸಂಬಂಧಿತ ಬರಹ, ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದಾರೆ.

Published by
ಜಯಲಕ್ಷ್ಮಿ ದಾಮ್ಲೆ

Recent Posts

ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…

17 hours ago

200 ಹಸುಗಳಿಂದ ₹2 ಕೋಟಿ ವಾರ್ಷಿಕ ಆದಾಯ…! ಗಮನ ಸೆಳೆದ ಉತ್ತರ ಪ್ರದೇಶದ ಮಾದರಿ

ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…

17 hours ago

ರಬ್ಬರ್ ತೋಟ ಹಸಿರಾಗಿರಬಹುದು… ಆದರೆ ಕಾಡಿಗೆ ಪರ್ಯಾಯವಲ್ಲ…! ಮಲೇಷ್ಯಾ ಅಧ್ಯಯನ ವರದಿ

ರಬ್ಬರ್ ತೋಟಗಳು ಹಸಿರಾಗಿದ್ದರೂ ಅವು ನೈಸರ್ಗಿಕ ಮಳೆಕಾಡಿನ ಜೀವವೈವಿಧ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು…

22 hours ago

ಅಡುಗೆ ಎಣ್ಣೆ ಆಮದು 7% ಏರಿಕೆ – ಭಾರತ ಇನ್ನೂ ಆಮದು ಅವಲಂಬಿತ

ಭಾರತದ ಅಡುಗೆ ಎಣ್ಣೆ ಆಮದು ಎಂಟು ತಿಂಗಳಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಜೂನ್‌ನಲ್ಲಿ ಆಮದು…

22 hours ago

ಕೇರಳದಲ್ಲಿ ಪ್ರತಿವರ್ಷ ₹1,200 ಕೋಟಿ ಮೌಲ್ಯದ ಹಲಸು ವ್ಯರ್ಥ..! ಮೌಲ್ಯವರ್ಧನೆಗೆ ಸರ್ಕಾರ ಮುಂದಾಗಲಿ ಎಂಬ ಒತ್ತಾಯ

ಕೇರಳದಲ್ಲಿ ಉತ್ಪಾದನೆಯಾಗುವ ಬಹುತೇಕ ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ ಸುಮಾರು ₹1,200 ಕೋಟಿ…

22 hours ago

ಅವೈಜ್ಞಾನಿಕ ಮಳೆ ವರದಿ ಶೈಕ್ಷಣಿಕ ವಲಯಕ್ಕೆ ತೊಂದರೆ – ಹವಾಮಾನ ಮುನ್ಸೂಚನೆ ಕುರಿತು ಎಸ್.ಎಲ್. ಭೋಜೆಗೌಡ ಕಳವಳ

ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…

2 days ago