70 ವರ್ಷಗಳ ಬಳಿಕ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಂದ ಚೀತಾ | “ಪ್ರಾಜೆಕ್ಟ್‌ ಚೀತಾ ” ತಂಡದಲ್ಲಿ ಪುತ್ತೂರಿನ ಮುಳಿಯದ ಡಾ.ಸನತ್‌ ಕುಮಾರ್ |

September 17, 2022
2:37 PM

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಆಫ್ರಿಕಾದ ನಮೀಬಿಯಾದಿಂದ ತರಲಾದ ಎಂಟು ಚಿರತೆಗಳನ್ನು ತರಲಾಗಿದೆ. ಭಾರತಕ್ಕೆ ಈ ತಳಿಯ ವನ್ಯಪ್ರಾಣಿಗಳನ್ನು ಮರು ಪರಿಚಯಿಸುವ ಕಾರ್ಯಕ್ರಮದಡಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನವಾದ ಶನಿವಾರ ಇವುಗಳನ್ನು ಬಿಡುಗಡೆ ಮಾಡಿದರು. ಚೀತಾ ತರುವ ತಂಡದಲ್ಲಿನ ಪಶುವೈದ್ಯರು ಹಾಗೂ ವನ್ಯಜೀವಿ ತಜ್ಞರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಳಿಯ ಕುಟುಂಬದ ಡಾ.ಸನತ್‌ ಕುಮಾರ್‌ ಮುಳಿಯ ಇದ್ದರು. 

Advertisement

ಭಾರತದಲ್ಲಿ 1952 ರಲ್ಲಿ ಚೀತಾಗಳು ಅಳಿದುಹೋಗಿದೆ ಎಂದು ಪರಿಗಣಿಸಲಾಗಿತ್ತು. ಇದೀಗ ಮತ್ತೆ ಆಗಮಿಸಿದ ಈ ಚೀತಾ ದೇಶದಾದ್ಯಂತ ಕುತೂಹಲ ಹಾಗೂ ಸಂಭ್ರಮಕ್ಕೆ ಕಾರಣವಾಗಿತ್ತು. ಇದಕ್ಕಾಗಿ ಪ್ರಧಾನಿಗಳ 72 ನೇ ಜನ್ಮದಿನದ ಆಚರಣೆಯ ಸಂದರ್ಭದ ನೆನಪಾಗಿದೆ.ಈ ಚೀತಾಗಳ ಮರು ಪರಿಚಯದ ಮೂಲಕ ಪ್ರವಾಸಿಗರನ್ನು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ.

“ಪ್ರಾಜೆಕ್ಟ್‌ ಚೀತಾ” ಹೆಸರಿನ ಈ ಯೋಜನೆಯಲ್ಲಿ ಎಂಟು ಚೀತಾಗಳಲ್ಲಿ ಐದು ಹೆಣ್ಣು, 2 ರಿಂದ 5 ವರ್ಷ ವಯಸ್ಸಿನ ನಡುವೆ, ಮತ್ತು ಮೂರು 4.5 ರಿಂದ 5.5 ವರ್ಷದೊಳಗಿನ ಗಂಡುಗಳಾಗಿವೆ. ಬೋಯಿಂಗ್ 747-400 ವಿಮಾನ ಶನಿವಾರ ಬೆಳಿಗ್ಗೆ 7:55 ರ ಸುಮಾರಿಗೆ ಗ್ವಾಲಿಯರ್ನಲ್ಲಿ ಇಳಿದ ನಂತರ, ಚೀತಾಗಳನ್ನು ವಾಯುಪಡೆಯ ಹೆಲಿಕಾಪ್ಟರ್ ಗಳಲ್ಲಿ ರಾಷ್ಟ್ರೀಯ ಉದ್ಯಾನವನಕ್ಕೆ ಕರೆದೊಯ್ಯಲಾಯಿತು. ಚೀತಾ ತರುವ ತಂಡದಲ್ಲಿ ಎಂಟು ಜನ ತಜ್ಞರು ತಂಡದಲ್ಲಿದ್ದರು.  ಅಧಿಕಾರಿಗಳು ಹಾಗೂ ಪಶುವೈದ್ಯರು, ವನ್ಯಜೀವಿ ತಜ್ಞರು ಇದ್ದರು. ಒಟ್ಟು ಮೂವರು ವನ್ಯಜೀವಿ ತಜ್ಞರು ಹಾಗೂ ಪಶುವೈದ್ಯರು ಇದ್ದರು.

Advertisement

Advertisement

ನಮೀಬಿಯಾದ ಭಾರತೀಯ ಹೈಕಮಿಷನರ್ ಪ್ರಶಾಂತ್  ಅಗರ್‌ವಾಲ್‌ ಈ ಯೋಜನೆಯ ಮುಖ್ಯಸ್ಥರಾಗಿದ್ದರು. ಯದುವೇಂದ್ರ ದೇವ್‌, ವಿಕ್ರಂ ಸಿಂಗ್‌ ಮೊದಲಾದ ತಜ್ಷರು ಹಾಗೂ ವನ್ಯಜೀವಿ ತಜ್ಞ ಹಾಗೂ ಪಶುವೈದ್ಯರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಳಿಯದ ದಿ.ಕೇಶವ ಭಟ್‌ ಹಾಗೂ ಉಷಾ ಮುಳಿಯ ಅವರ ಪುತ್ರ ಡಾ.ಸನತ್‌ ಕುಮಾರ್‌ ಮುಳಿಯ ಭಾಗವಹಿಸಿದ್ದರು. 

ಶುಕ್ರವಾರ ನಮೀಬಿಯಾದ ರಾಜಧಾನಿ ವಿಂಡ್‌ಹೋಕ್‌ನ ಉತ್ತರಕ್ಕೆ  ರಸ್ತೆಯ ಮೂಲಕ 11 ಗಂಟೆಗಳ ಹಾರಾಟಕ್ಕಾಗಿ “ಕ್ಯಾಟ್ ಪ್ಲೇನ್” ಎಂದು ಕರೆಯಲಾಗುವ ಚಾರ್ಟರ್ಡ್ ಬೋಯಿಂಗ್ ವಿಮಾನ ಸಿದ್ಧಪಡಿಸಲಾಗಿತ್ತು.

ನಮೀಬಿಯಾದ ಭಾರತೀಯ ಹೈಕಮಿಷನರ್ ಪ್ರಶಾಂತ್ ಅಗರವಾಲ್ ಪ್ರಕಾರ, ಈ ಯೋಜನೆಯು ವಿಶ್ವದ ಮೊದಲ ಭೂಖಂಡದ ಚಿರತೆಗಳ ಸ್ಥಳಾಂತರವಾಗಿದೆ, ಇದು ವಿಶ್ವದ ಅತ್ಯಂತ ವೇಗದ ಭೂ ಪ್ರಾಣಿಯಾಗಿದೆ.ಈ ಸ್ಥಳಾಂತರಕ್ಕೆ ಭಾರತವು ಹೆಚ್ಚು ಉತ್ಸುಕವಾಗಿದೆ. ಏಕೆಂದರೆ ಇದು ಭಾರತದ ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ನಡೆಯುತ್ತಿದೆ ಎಂದು ನಮೀಬಿಯಾದಲ್ಲಿ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದರು.

Advertisement

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಬಿಡಲಾಗಿರುವ ಈ ಚೀತಾಗಳನ್ನು ಉಪಗ್ರಹದ ಮೂಲಕ ಗಮನಿಸಲು ಎಲ್ಲ ಚೀತಾಗಳಿಗೂ ರೇಡಿಯೋ ಕಾಲರ್‌ಗಳನ್ನು ಅಳವಡಿಸಲಾಗಿದೆ. ಈ ಚೀತಾಗಳ ಪ್ರತಿ ನಿಮಿಷದ ಚಲನವಲನಗಳ ಮೇಲೆ ದಿನದ 24 ಗಂಟೆಯೂ ನಿಗಾ ವಹಿಸಲು ಇದಕ್ಕೆಂದೇ ಮೀಸಲಾದ ತಂಡವೊಂದು ಕೆಲಸ ಮಾಡಲಿದೆ.

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನ 748 ಚ ಕಿ ಮೀ ಇದೆ. ಮಾನವ ಸಂಚಾರ ವಿರಳವಾಗಿರುವ ಈ ಉದ್ಯಾನವನದಲ್ಲಿ ಚೀತಾಗಳಿಗೆ ಉತ್ತಮವಾದ ವಾತಾವರಣ ಇದ್ದು ಸೂಕ್ತ ವಾತಾವರಣ ಇರುವ ಕಾರಣದಿಂದ ಈ ಪ್ರದೇಶದಲ್ಲಿ ಚೀತಾಗಳನ್ನು ಬಿಡಲಾಗಿದೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆನೆ ದಾಳಿಗೆ ಮೂರು ವರ್ಷದಲ್ಲಿ 129 ರೈತರು ಬಲಿ | ವಿಧಾನಪರಿಷತ್‌ನಲ್ಲಿ ಮಾಹಿತಿ ನೀಡಿದ ಅರಣ್ಯ ಇಲಾಖೆ
August 11, 2025
9:01 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 11-08-2025 | ಇಂದು ಸಾಮಾನ್ಯ ಮಳೆ | ಆ-12 ರಿಂದ ಆ-20 ರವರಗೆ ರಾಜ್ಯದ ವಿವಿದೆಡೆ ಮಳೆ |
August 11, 2025
1:47 PM
by: ಸಾಯಿಶೇಖರ್ ಕರಿಕಳ
ವೈಜ್ಞಾನಿಕ ಶಿಫಾರಸ್ಸಿನಂತೆ ರಸಗೊಬ್ಬರದ ಬಳಕೆ ಸೂಕ್ತ – ರೈತರಿಗೆ ಸಲಹೆ
August 11, 2025
8:43 AM
by: The Rural Mirror ಸುದ್ದಿಜಾಲ
ರಾಜ್ಯದ ಹಲವೆಡೆ ಮುಂದಿನ 7 ದಿನಗಳ ಕಾಲ ವ್ಯಾಪಕ ಮಳೆ | ಬೆಂಗಳೂರಿಗೆ ಎಲ್ಲೋ ಅಲರ್ಟ್
August 11, 2025
7:27 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group