Advertisement
ಸಾಹಿತ್ಯ

ಮಾಗುವುದು ಸಾಧನೆ ಬೀಗುವುದು ಸುಮ್ಮನೆ

Share

ಬೀಗುವಿಕೆಗಿಂತ ಮಾಗುವಿಕೆಯದು ಉತ್ತಮ
ಮಾಗಿಯೂ ಬೀಗದಿರುವಿಕೆಯು ಅತ್ಯುತ್ತಮ
ಮಾಗದೆ ಮಾಗಿರುವಂತೆ ಬೀಗುವುದು ವ್ಯಸನ
ಮಾಗದೆ ಬೀಗುವುದಕೆ ವೇಷವೇ ಸಾಧನ
ಮಾಗಿದವ ಬೀಗಲಾರ
ಬೀಗುವವ ಮಾಗಲಾರ
ಮಾಗುವುದು ಸಾಧನೆ
ಬೀಗುವುದು ಸುಮ್ಮನೆ ||

ಮಾಗಲೋಸುಗ ಕಳಚಬೇಕು ಮುಖವಾಡವನು
ಮಾಗಲೋಸುಗ ತೆರೆಯಬೇಕಂತಃಚಕ್ಷುವನು
ಮಾಗಲೋಸುಗ ಸವೆಸಬೇಕು ಕಾಯವನು
ಮಾಗಲೋಸುಗ ಬಳಸಬೇಕಂತಃಕರಣವನು
ಪಂಚಜ್ಞಾನೇಂದ್ರಿಯ ಪಂಚಕರ್ಮೇಂದ್ರಿಯಂ
ಗಳನು ಸರಿಯಾದ ಕ್ರಮದಿಂದ ಬಳಸುತಲಿ
ಧರ್ಮಮಾರ್ಗವೆ ಸಾಧುಮಾರ್ಗವೆಂದರಿತು ಸನ್ಮಾರ್ಗದಲಿ ಮನುಜ ಸಾಗುವುದು ಒಳಿತು ||

ದೇಹ ತೊಳೆಯಲು ಬೇಕು ಸ್ನಾನ
ಮನವ ತೊಳೆಯಲು ಬೇಕು ಧ್ಯಾನ
ಬುದ್ಧಿ ಬೆಳೆಯಲು ಬೇಕು ಚಿಂತನ
ಬಾಹ್ಯ ಅಭ್ಯಂತರದಿ ಪಾಲಿಸಲು ಶೌಚವನು
ತೊಲಗುವುದು ಬೇಡದಾ ಕಳೆಯು
ಹುಲುಸಾಗಿ ಬೆಳೆಯುವುದು ಬೆಳೆಯು ||

ಫಲತುಂಬಿದಾ ವೃಕ್ಷ ಬಾಗುವುದು ದಿಟವು
ಬಾಗಿದಾ ವೃಕ್ಷವದು ಮಾಗಿದ ಸಂಕೇತವು ಬಾಗಬೇಕಾದಲ್ಲಿ ಬಾಗುವಾ ಕಾಯವದು
ಬೀಗದೆಂದೆಂದೂ ಮಾಗುವುದು ದಿಟವು
ಬಾಗಬೇಕಾದದ್ದು ಕಾಯ
ಮಾಗಬೇಕಾದದ್ದು ನ್ಯಾಯ ||

ಬೀಗುವವ ಬಾಗಲಾರ
ಬಾಗದವ ಮಾಗಲಾರ
ಮಾಗಿದವ ಬೀಗಲಾರ
ಬೀಗುವವ ಮಾಗಲಾರ
ಮಾಗುವುದು ಸಾಧನೆ
ಬೀಗುವುದು ಸುಮ್ಮನೆ ||‌

✍️ ಜಯಪ್ರಕಾಶ್ ಎ ನಾಕೂರು

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ

ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…

23 hours ago

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

1 day ago

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

1 day ago

ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…

2 days ago

ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ

ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…

2 days ago

ಮಂಗಳೂರಿನ ಅಶ್ಮಿತ್ ಎ.ಜೆ. ಅವರಿಗೆ ‘ಸರಿಗಮಪ 2026’ರ ಕಿರೀಟ

ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…

2 days ago