Advertisement
ಸಾಹಿತ್ಯ

ಮಾಗುವುದು ಸಾಧನೆ ಬೀಗುವುದು ಸುಮ್ಮನೆ

Share

ಬೀಗುವಿಕೆಗಿಂತ ಮಾಗುವಿಕೆಯದು ಉತ್ತಮ
ಮಾಗಿಯೂ ಬೀಗದಿರುವಿಕೆಯು ಅತ್ಯುತ್ತಮ
ಮಾಗದೆ ಮಾಗಿರುವಂತೆ ಬೀಗುವುದು ವ್ಯಸನ
ಮಾಗದೆ ಬೀಗುವುದಕೆ ವೇಷವೇ ಸಾಧನ
ಮಾಗಿದವ ಬೀಗಲಾರ
ಬೀಗುವವ ಮಾಗಲಾರ
ಮಾಗುವುದು ಸಾಧನೆ
ಬೀಗುವುದು ಸುಮ್ಮನೆ ||

ಮಾಗಲೋಸುಗ ಕಳಚಬೇಕು ಮುಖವಾಡವನು
ಮಾಗಲೋಸುಗ ತೆರೆಯಬೇಕಂತಃಚಕ್ಷುವನು
ಮಾಗಲೋಸುಗ ಸವೆಸಬೇಕು ಕಾಯವನು
ಮಾಗಲೋಸುಗ ಬಳಸಬೇಕಂತಃಕರಣವನು
ಪಂಚಜ್ಞಾನೇಂದ್ರಿಯ ಪಂಚಕರ್ಮೇಂದ್ರಿಯಂ
ಗಳನು ಸರಿಯಾದ ಕ್ರಮದಿಂದ ಬಳಸುತಲಿ
ಧರ್ಮಮಾರ್ಗವೆ ಸಾಧುಮಾರ್ಗವೆಂದರಿತು ಸನ್ಮಾರ್ಗದಲಿ ಮನುಜ ಸಾಗುವುದು ಒಳಿತು ||

ದೇಹ ತೊಳೆಯಲು ಬೇಕು ಸ್ನಾನ
ಮನವ ತೊಳೆಯಲು ಬೇಕು ಧ್ಯಾನ
ಬುದ್ಧಿ ಬೆಳೆಯಲು ಬೇಕು ಚಿಂತನ
ಬಾಹ್ಯ ಅಭ್ಯಂತರದಿ ಪಾಲಿಸಲು ಶೌಚವನು
ತೊಲಗುವುದು ಬೇಡದಾ ಕಳೆಯು
ಹುಲುಸಾಗಿ ಬೆಳೆಯುವುದು ಬೆಳೆಯು ||

ಫಲತುಂಬಿದಾ ವೃಕ್ಷ ಬಾಗುವುದು ದಿಟವು
ಬಾಗಿದಾ ವೃಕ್ಷವದು ಮಾಗಿದ ಸಂಕೇತವು ಬಾಗಬೇಕಾದಲ್ಲಿ ಬಾಗುವಾ ಕಾಯವದು
ಬೀಗದೆಂದೆಂದೂ ಮಾಗುವುದು ದಿಟವು
ಬಾಗಬೇಕಾದದ್ದು ಕಾಯ
ಮಾಗಬೇಕಾದದ್ದು ನ್ಯಾಯ ||

ಬೀಗುವವ ಬಾಗಲಾರ
ಬಾಗದವ ಮಾಗಲಾರ
ಮಾಗಿದವ ಬೀಗಲಾರ
ಬೀಗುವವ ಮಾಗಲಾರ
ಮಾಗುವುದು ಸಾಧನೆ
ಬೀಗುವುದು ಸುಮ್ಮನೆ ||‌

✍️ ಜಯಪ್ರಕಾಶ್ ಎ ನಾಕೂರು

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ

ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ…

3 hours ago

ಹವಾಮಾನ ವರದಿ | 16-09-2026 | ಕರಾವಳಿಯಲ್ಲಿ ಸೆಖೆ, ಸಂಜೆ ಅಲ್ಲಲ್ಲಿ ಮಳೆ ನಿರೀಕ್ಷೆ

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.17ರಂದು ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ…

4 hours ago

ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?

ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್‌ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ…

11 hours ago

ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ

ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…

19 hours ago

ಮಳೆಗೆ ಬೆಂಗಳೂರು ತತ್ತರ – ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ

ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಏಕಾಏಕಿ ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿ…

21 hours ago

ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…

1 day ago