ಹವಾಮಾನ ಬದಲಾವಣೆಯ ಪರಿಣಾಮವಾಗಿ ಸಮುದ್ರದಲ್ಲಿನ ವಿವಿಧ ಪ್ರಾಣಿಗಳ ಮೇಲೆ ಪರಿಣಾಮ ಬೀರಿವೆ ಎಂದು ಸಂಶೋಧನಾ ವರದಿ ಬಹಿರಂಗ ಮಾಡಿದೆ. ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾನಿಲಯದ ಸಂಶೋಧಕರು ಮತ್ತು ಜಾಗತಿಕ ಸಮುದ್ರ ತಜ್ಞರು ಸಮುದ್ರ ಜೀವಶಾಸ್ತ್ರದ ಬಗ್ಗೆ ಪರಿಶೀಲಿಸಿದ್ದರು.
ಹವಾಮಾನ ಬದಲಾವಣೆಯಿಂದ ವಾತಾವರಣದ ಏರುಪೇರಾಗಿವೆ. ಈ ಕಾರಣದಿಂದ ಮೀನುಗಾರಿಕಾ ವಲಯದ ಸುಮಾರು 4000 ವಿವಿಧ ಜಲಚರಗಳು ಸಂಕಷ್ಟ ಎದುರಿಸುತ್ತಿವೆ. ಹೀಗಾಗಿ ಈಗ ಜಲಚರಗಳಲ್ಲಿ ಅತ್ಯಂತ ದುರ್ಬಲವಾಗಿರುವ ಹಾಗೂ ಹೆಚ್ಚು ಅಪಾಯದಲ್ಲಿರುವ ಸಮುದ್ರದ ಜಲಚರ ಜಾತಿಗಳನ್ನು ಗುರುತಿಸಲಾಗುತ್ತಿದೆ. ಈ ಮೂಲಕ ಜಾಗತಿಕವಾಗಿ ಜಲಚರಗಳ ಸಂರಕ್ಷಣೆ ಹಾಗೂ ಮಾನವ ಹಸ್ತಕ್ಷೇಪದ ಹವಾಮಾನ ಬದಲಾವಣೆ ತಡೆಯುವ ಪ್ರಯತ್ನ ನಡೆಸಬಹುದಾಗಿದೆ ಎಂದು ವರದಿಯಾಗಿದೆ.
ಮೃದ್ವಂಗಿಗಳು, ಹವಳಗಳು ನಮ್ಮ ಸಾಗರಗಳಲ್ಲಿನ ಆಳದಲ್ಲಿ ಸಂಕಷ್ಟ ಅನುಭವಿಸುತ್ತಿವೆ ಹಾಗೂ ವಿವಿಧ ಮಾಲಿನ್ಯಗಳನ್ನು ಎದುರಿಸುತ್ತಿವೆ. ನಕ್ಷತ್ರ ಮೀನುಗಳು, ಸಮುದ್ರ ಬಸವನಗಳು ಮತ್ತು ಹಾರುವ ಮೀನುಗಳು ಹವಾಮಾನ ಬದಲಾವಣೆ- ಸಂಬಂಧಿತ ಒತ್ತಡಗಳಿಗೆ ಹೆಚ್ಚು ಗುರಿಯಾಗುತ್ತವೆ ಎಂದು ನಾವು ಕಂಡುಹಿಡಿದಿದ್ದೇವೆ, ಇವೆಲ್ಲವೂ ಪ್ರಪಂಚದಾದ್ಯಂತದ ಸಾಗರಗಳಲ್ಲಿ ಕಂಡುಬರುತ್ತದೆ ಎಂದು ಸಂಶೋಧಕ ಡಾ.ಬುಟ್ ವರದಿ ಮಾಡಿದ್ದಾರೆ.
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…