MIRROR FOCUS

ದಾರಿದೀಪಗಳಾಗುವ ಬದಲು ದೀಪಧಾರಿಗಳಾಗಿ ಮುನ್ನಡೆಯಬೇಕು- ವೇಣುಗೋಪಾಲ ಶೇರ | ಅಂಬಿಕಾ ಮಹಾವಿದ್ಯಾಲಯದಲ್ಲಿ ‘ಸಕಾರಾತ್ಮಕ ಪತ್ರಿಕೋದ್ಯಮ’ ತರಬೇತಿ ತರಗತಿಗಳಿಗೆ ಚಾಲನೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನಕಾರಾತ್ಮಕ ವಿಚಾರಗಳು ನಮ್ಮನ್ನು ಅತೀವವಾಗಿ ಆಕರ್ಷಿಸುತ್ತಿವೆ. ಪರಿಣಾಮವಾಗಿ ನಮ್ಮಲ್ಲಿನ ಮೌಲ್ಯಗಳು ಕುಸಿಯಲಾರಂಭಿಸಿವೆ. ಮಾಧ್ಯಮಗಳಲ್ಲಿನ ವೈಭವೀಕರಿಸಿದ ಅಪರಾಧ ಸುದ್ದಿಗಳು ನಮ್ಮೊಳಗಿನ ಮನುಷ್ಯಗುಣದ ಮೇಲೆ ಕೆಟ್ಟ ರೀತಿಯಲ್ಲಿ ಪ್ರಭಾವ ಬೀರುತ್ತಿವೆ. ಹಾಗಾಗಿ ಮೌಲ್ಯಗಳನ್ನಾಧರಿಸಿದ ವ್ಯಕ್ತಿತ್ವಗಳನ್ನು ರೂಪುಗೊಳಿಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ದಿಕ್ಕುತಪ್ಪುತ್ತಿರುವ ಸಮಾಜಕ್ಕೆ ದಾರಿದೀಪಗಳಾಗುವ ಬದಲು ದೀಪಧಾರಿಗಳಾಗಿ ಕತ್ತಲಿರುವಲ್ಲೆಲ್ಲಾ ಬೆಳಕು ಚೆಲ್ಲುವ ಕೆಲಸಗಳಾಗಬೇಕು ಎಂದು ಸುಳ್ಯದ ಮುರುಳ್ಯದ ಕೃಷಿಕ ವೇಣುಗೋಪಾಲ ಶೇರ ಹೇಳಿದರು.

Advertisement
Advertisement

ಅವರು ಪುತ್ತೂರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಹಾಗೂ ರೂರಲ್ ಮಿರರ್ ಡಿಜಿಟಲ್ ಮೀಡಿಯಾದ ಸಹಯೋಗದಲ್ಲಿ ಆರಂಭಿಸಲಾದ ಸಕಾರಾತ್ಮಕ ಪತ್ರಿಕೋದ್ಯಮ ಎಂಬ ತರಬೇತಿ ತರಗತಿಗಳನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಇಂದಿನ ಪೀಳಿಗೆಗೆ ಯಾರನ್ನು ಅನುಕರಣೆ ಮಾಡಬೇಕೆಂಬ ಕಲ್ಪನೆಗಳಿಲ್ಲ. ಆದರ್ಶಗಳನ್ನು ಬಿತ್ತುವ ವ್ಯವಸ್ಥೆಗಳು ಒಂದು ಹಂತದಲ್ಲಿ ತುಂಬಾ ಕಡಿಮೆಯಾದದ್ದರ ಪರಿಣಾಮವನ್ನು ಇಂದಿನ ಪೀಳಿಗೆ ಅನುಭವಿಸುತ್ತಿದೆ. ಪರಿಸ್ಥಿತಿಯೊಂದಿಗಿನ ರಾಜಿ ಇಂದು ಎಲ್ಲೆಡೆಯೂ ಕಂಡುಬರುತ್ತಿದೆ. ಆದರೆ ಅದರಿಂದಾಗಿ ನಾವು ನೈತಿಕವಾದ ಅಧಃಪತನವನ್ನು ಕಾಣಲಾರಂಭಿಸಿದ್ದೇವೆ ಎಂಬುದು ಗಮನಾರ್ಹ. ಪ್ರವಾಹದೊಂದಿಗೆ ಕ್ರಮಿಸುವುದು ಸಾಧನೆಯೇನೂ ಅಲ್ಲ. ಆದರೆ ಪ್ರವಾಹಕ್ಕೆ ವಿರುದ್ಧವಾಗಿ ನಮಗೆ ಸರಿ ಅನ್ನಿಸಿದ ಹಾದಿಯಲ್ಲೇ ಹೋಗುವುದು ಕ್ಲಿಷ್ಟಕರವಾದರೂ ಆತ್ಮತೃಪ್ತಿ ಉಳ್ಳಂತಹದ್ದು ಎಂದು ಅಭಿಪ್ರಾಯಪಟ್ಟರು.
ಪತ್ರಿಕೋದ್ಯಮದಲ್ಲಿ ಇಂದು ಆಯ್ಕೆಗಳು ಹಲವಾರಿವೆ. ಆದರೆ ಕೃಷಿ ಗ್ರಾಮೀಣ ಸಂಗತಿಗಳನ್ನು ಪಸರಿಸುವ ಪ್ರಯತ್ನಗಳು ಅಗತ್ಯವಾಗಿ ಬೇಕಿವೆ. ಪ್ರಸಿದ್ಧಿ ಹೊಂದಿದವರಿಗೆ ಸಾಕಷ್ಟು ಪ್ರಚಾರ ದೊರಕುವುದು ಸಹಜ. ಎಕರೆಗಟ್ಟಳೆ ತೋಟ ಇರುವವರು ಆಗಾಗ ಕಾಣಿಸಿಕೊಳ್ಳುತ್ತಾರೆ. ಆದರೆ ಸೆಂಟ್ಸ್ ಲೆಕ್ಕದ ಭೂಮಿಯಲ್ಲೂ ಸಾಧನೆ ಮಾಡಿದವರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ಪತ್ರಿಕೋದ್ಯಮದಿಂದ ಆಗಬೇಕಿದೆ. ಹುಡುಕಿಕೊಂಡು ಹೋಗಿ ವಿಷಯವನ್ನು ಗುರುತಿಸುವ ಪ್ರಯತ್ನಗಳಾಗಬೇಕು. ಭಾರತವನ್ನು ನೈಜವಾಗಿ ಕಟ್ಟುವ ಕಾರ್ಯಗಳಲ್ಲಿ ಇದೂ ಒಂದು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರೂರಲ್ ಮಿರರ್ ಡಿಜಿಟಲ್ ಮೀಡಿಯಾದ ಮುಖ್ಯಸ್ಥ ಮಹೇಶ ಪುಚ್ಚಪ್ಪಾಡಿ ಮಾತನಾಡಿ ವಾಹಿನಿಗಳನ್ನು ಪತ್ರಿಕೆಗಳನ್ನು ನೋಡುವಾಗ ಇದು ಹೀಗೆಯೇ ಮುಂದುವರಿದರೆ ನಾಳಿನ ಸಮಾಜದ ಪರಿಸ್ಥಿತಿಯೇನು ಎಂಬ ಚಿಂತೆ ಕಾಡಲಾರಂಭಿಸುತ್ತದೆ. ಹಾಗಾಗಿ ನಮ್ಮಿಂದಾಗುವ ಬದಲಾವಣೆಯ ಪ್ರಯತ್ನಗಳನ್ನು ಸಣ್ಣಮಟ್ಟದಲ್ಲಾದರೂ ಮಾಡಬೇಕಾದ ಅಗತ್ಯಗಳಿವೆ. ಆದ್ದರಿಂದ ಸಕಾರಾತ್ಮಕ ಪತ್ರಿಕೋದ್ಯಮ ಎಂದರೇನು ಹಾಗೂ ಈ ದಿನಗಳಲ್ಲಿ ಮಾಧ್ಯಮಗಳ ಮುಖಾಂತರ ಅದನ್ನು ಹೇಗೆ ಜಾರಿಗೊಳಿಸಬೇಕು ಎಂಬ ಯೋಚನೆಯ ನೆಲೆಯಲ್ಲಿ ತರಬೇತಿ ತರಗತಿಗಳ ಅವಶ್ಯಕತೆ ಇದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಸಮಾಜ ಹಾದಿ ತಪ್ಪುತ್ತಿರುವುದನ್ನು ಕಾಣುತ್ತಿದ್ದೇವೆ. ದೇಶದ ಮೇಲೆ ದಾಳಿ ಮಾಡಿದವರನ್ನು, ಲೂಟಿಕೋರರನ್ನು ವೈಭವೀಕರಿಸುವ, ಅನುಸರಿಸುವ ಪ್ರಯತ್ನಗಳಾಗುತ್ತಿವೆ. ಇದನ್ನು ಖಂಡಿಸುವ, ಸತ್ಯ ವಿಷಯಗಳನ್ನು ಸಮಾಜಕ್ಕೆ ನೀಡುವ ಎದೆಗಾರಿಕೆಯುಳ್ಳ ಪತ್ರಕರ್ತರ ಅವಶ್ಯಕತೆ ಇದೆ ಎಂದು ಹೇಳಿದರು.

ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತೃಪ್ತಿ ಎಂ ಮಯ್ಯಾಳ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ಅಕ್ಷಿತಾ ಸ್ವಾಗತಿಸಿದರು. ವಿದ್ಯಾರ್ಥಿನಿ ಸೌಜನ್ಯಾ ವಂದಿಸಿ, ವಿದ್ಯಾರ್ಥಿನಿ ಪಂಚಮಿ ಬಾಕಿಲಪದವು ಕಾರ್ಯಕ್ರಮ ನಿರ್ವಹಿಸಿದರು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹೊಸರುಚಿ | ಬ್ರೇಡ್ ಪಿಜ್ಜಾ

ಬ್ರೇಡ್ ಪಿಜ್ಜಾಗೆ  ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ :  ಬ್ರೇಡ್ ಪೀಸ್…

54 minutes ago

ಅಡಿಕೆ ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ವರ್ಮುಡಿ ಅವರಿಗೆ ಮತ್ತೊಮ್ಮೆ ಅಂತರಾಷ್ಟ್ರೀಯ ಮನ್ನಣೆ

ಡಾ. ವಿಘ್ನೇಶ್ವರ ವರ್ಮುಡಿ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸಿದ್ದ ಲೇಖನಗಳನ್ನು ವಿಶ್ವದ ಬೇರೆ…

2 hours ago

ಮರೆತುಹೋದ ಮನೆಮಾತು ಮರಳಿ ನೆನಪಿಸಲು ಸ್ವಭಾಷಾ ಚಾತುರ್ಮಾಸ್ಯ : ರಾಘವೇಶ್ವರ ಶ್ರೀ

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸುವ ಉದ್ದೇಶದಿಂದ ಈ ಬಾರಿಯ ಚಾತುರ್ಮಾಸ್ಯವನ್ನು ಸ್ವಭಾಷಾ ಚಾತುರ್ಮಾಸ್ಯ…

2 hours ago

ಗಜಲಕ್ಷ್ಮೀ ರಾಜಯೋಗ – ಕೆಲವು ರಾಶಿಯವರಿಗೆ ಅದೃಷ್ಟ- ಸಿಗುವುದು ಯಶಸ್ಸು

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

2 hours ago

ರಬ್ಬರ್‌ ಆಮದು | ರಬ್ಬರ್‌ ಬೆಳೆಗಾರರಿಗೆ ತರಲಿದೆ ಧಾರಣೆ ಸಂಕಷ್ಟ

ದೇಶದಲ್ಲಿ ರಬ್ಬರ್‌ ಉತ್ಪಾದನೆ ಹೆಚ್ಚಳದ ನಡುವೆ ಇದೀಗ ರಬ್ಬರ್‌ ಆಮದು ನೀತಿಯು ರಬ್ಬರ್‌…

12 hours ago

ಅಕ್ರಮವಾಗಿ ಅಡಿಕೆ ಸಾಗಣೆ ಪ್ರಕರಣ | ಪಶ್ಚಿಮ ಬಂಗಾಳದಲ್ಲಿ ಅಡಿಕೆ ವ್ಯಾಪಾರಿಯ ಬಂಧನ

ಅಕ್ರಮವಾಗಿ ಅಡಿಕೆ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ನಕ್ಸಲ್ಬರಿ…

12 hours ago