Advertisement
MIRROR FOCUS

ಬೀದಿ ಬದಿಗೆ ಬಂದ ಹೋರಿಗಳು | ವಾಹನ ಸವಾರರಿಗೂ ಸಂಕಷ್ಟ | ತೋಟದವರಿಗೂ ಕಾಟ…! |

Share

ಗೋವು ಉಳಿಯಬೇಕು, ಆದರೆ ನಮ್ಮ ಮನೆಯಲ್ಲಿ ಅಲ್ಲ.. ಪಕ್ಕದ ಮನೆಯಲ್ಲಿ…!, ಈಗ ಅದೂ ಅಲ್ಲ, ರಸ್ತೆ ಬದಿಯಲ್ಲಿ ಎಂಬ ಹಾಗೆ ಆಗಿದೆ ಕಾಲ. ರಸ್ತೆ ಬದಿಗಳಲ್ಲಿ ಹೋರಿಗಳು ಬಂದು ಇಳಿಯುತ್ತವೆ, ಸಮೀಪದ ಮನೆಗಳಿಗೆ, ತೋಟಗಳಿಗೂ ಈಗ ಸಂಕಷ್ಟ. ವಾಹನ ಸವಾರರಿಗೂ ಕಷ್ಟ ಕಷ್ಟ..!. ಈಚೆಗೆ ಸುಳ್ಯದ ಎಲಿಮಲೆ ಬಳಿಯಲ್ಲಿ ಕೆರೆಗೆ ಹೋರಿ ಬಿದ್ದು ಸಂಕಷ್ಟ ಅನುಭವಿಸಿದೆ.

ಸುಳ್ಯದ ಹಲವು ಕಡೆಗಳಲ್ಲಿ ಹೋರಿ ಕರುಗಳಲ್ಲಿ ರಸ್ತೆ ಬದಿ, ಕಾಡಿನ ಬದಿಗಳಲ್ಲಿ , ಪೇಟೆ ಬದಿಗಳಲ್ಲಿ ಬಿಟ್ಟು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಈಚೆಗೆ ಎಲಿಮಲೆ ಬಳಿಯ ಚಳ್ಳ ಗೋವಿಂದ ಭಟ್ ಅವರ ತೋಟದ ಕೆರೆಯಲ್ಲಿ ಹೋರಿ ಕರುವೊಂದು ಕೆರೆಗೆ ಬಿದ್ದಿತ್ತು. ನಂತರ ಸ್ಥಳೀಯರ ಸಹಕಾರದಿಂದ ಮೇಲಕ್ಕೆತ್ತಲಾಯಿತು.ಕೆಲವು ಸಮಯದ ಹಿಂದೆ ರಸ್ತೆ ಬದಿಯಲ್ಲಿದ್ದ ಹೋರಿಯೊಂದು ಗುತ್ತಿಗಾರು ಬಳಿಯ ವಳಲಂಬೆಯಲ್ಲಿ ಬ್ಯಾರೆಲ್‌ ಒಳಗೆ ತಲೆಹಾಕಿ ಒದ್ದಾಟ ನಡೆಸಿತ್ತು. ಬಳಿಕ ಅಟೋ ಚಾಲಕರು ತೆರವುಗೊಳಿಸಲು ಹರಸಾಹಸ ಪಟ್ಟಿದ್ದರು. ಕೆಲವು ಸಮಯದ ಹಿಂದೆ ಉಬರಡ್ಕದ ಬಳಿಯೂ ಹೊಳೆಯಲ್ಲಿ ಹೋರಿ ಕರು ಕೆಸರಿನಲ್ಲಿ ಹೋತು ಹೋಗಿ ಪರದಾಟ ನಡೆಸಿತ್ತು.

ಹೀಗೆ ಕೆಲವು ಹೋರಿ ಕರುಗಳನ್ನು ಅಲ್ಲಲ್ಲಿ  ಕೆಲವೊಂದು ಅನಾಮಧೇಯರು ಬಿಟ್ಟು ಹೋಗುತ್ತಿದ್ದಾರೆ. ಈ ಹೋರಿಗಳು ಸಂಧಿಗಳಲ್ಲಿ ನುಗ್ಗಿ, ತರಕಾರಿ ಹಾಗೂ ಕೃಷಿ ಕಾರ್ಯಗಳಿಗೆ ಹಾನಿ ಮಾಡುತ್ತಿದೆ. ರಸ್ತೆ ಬದಿ ವಾಹನಗಳಿಗೂ ಅಡ್ಡ ಬಂದ ದ್ವಿಚಕ್ರ ಸವಾರರಿಗೂ ಸಂಕಷ್ಟವಾಗಿದೆ. ಹೋರಿ ಸಾಕಲಾಗದೇ ರಸ್ತೆಯಲ್ಲಿ ಬಿಡುವವರ ಕಾಟ ಹೆಚ್ಚಾಗಿದೆ.

ಇದಕ್ಕಾಗಿ ಆಯಾ ಗ್ರಾಮ ಪಂಚಾಯತ್‌ ಆ ಭಾಗದ ಗೋಮಾಳವನ್ನು ಗುರುತಿಸಿ ಗೋಪಾಲಕರ ಅನುಕೂಲಕ್ಕೆ ಅನುವು ಮಾಡಿ ಕೊಡಬೇಕಾಗಿದೆ. ಕೆಲವು ಕಡೆ ಲಭ್ಯವಿರುವ 50 ಎಕರೆಯಷ್ಟು ಗೋಮಾಳ ಯಾರಿಗೂ ಉಪಕಾರಕ್ಕೆ ಇಲ್ಲದಂತಾಗಿದೆ. ರಸ್ತೆ ಬದಿ ಇರುವ ಗೋವುಗಳನ್ನು ಇಂತಹ ಗೋಮಳಗಳಲ್ಲಿ ಬಿಡಬಹುದಾಗಿದೆ. ಇದಕ್ಕಾಗಿ ಗೋಮಳಗಳ ರಕ್ಷಣೆ ಹಾಗೂ ರಸ್ತೆ ಬದಿ ಹೋರಿಗಳನ್ನು  ಬಿಡುವವರ ಸಂಖ್ಯೆಯೂ ಕಡಿಮೆ ಆಗಬೇಕಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅವೈಜ್ಞಾನಿಕ ಮಳೆ ವರದಿ ಶೈಕ್ಷಣಿಕ ವಲಯಕ್ಕೆ ತೊಂದರೆ – ಹವಾಮಾನ ಮುನ್ಸೂಚನೆ ಕುರಿತು ಎಸ್.ಎಲ್. ಭೋಜೆಗೌಡ ಕಳವಳ

ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…

7 hours ago

ಹವಾಮಾನ ವರದಿ | 26-07-2026 | ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕು – ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ | ಕರಾವಳಿ–ಮಲೆನಾಡಿನಲ್ಲಿ 10 ದಿನ ಮಳೆಯ ಸಾಧ್ಯತೆ

ಪಶ್ಚಿಮ ಬಂಗಾಳ ಕರಾವಳಿಯಲ್ಲಿ ರೂಪುಗೊಳ್ಳಲಿರುವ ವಾಯುಭಾರ ಕುಸಿತದಿಂದ ಕರ್ನಾಟಕದಲ್ಲಿ ಮತ್ತೆ ಮುಂಗಾರು ಚುರುಕುಗೊಳ್ಳುವ…

7 hours ago

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

2 days ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

2 days ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

2 days ago