ಮುಗಿಲ ಮಾರಿಗೆ ರಾಗರತಿಯಾ..
ಮುಗಿಲ ಮಾರಿಗೆ ರಾಗರತಿಯಾ..
ನಂಜ ಏರಿತ್ತಾ…ಆಗ ಸಂಜೇ ಆಗಿತ್ತಾ
ಆಗ ಸಂಜೇ ಆಗಿತ್ತಾ…
ನೆಲದ ಅಂಚಿಗೆ ಮಂಜಿನ ಮುಸುಕೂ
ಹ್ಯಾಂಗೊ ಬಿದ್ದಿತ್ತಾ , ಗಾಳಿಗೆ ಮೇಲಕ್ಕೆದ್ದಿತ್ತಾ..
ಗಾಳಿಗೆ ಮೇಲಕ್ಕೆದ್ದಿತ್ತಾ….
ಮುಗಿಲ ಮಾರಿಗೇ ರಾಗ ರತಿಯಾ..
ನಂಜ ಏರಿತ್ತಾ…ಆಗ ಸಂಜೇ ಆಗಿತ್ತಾ…..
ವಾವ್…… ದ.ರಾ. ಬೇಂದ್ರೆಯವರು ತಮ್ಮ “ರಾಗರತಿ” ಗೀತೆಯಲ್ಲಿ ಪ್ರಕೃತಿಯ ಸೊಬಗು ಮತ್ತು ಬಾವ ವಿಕಾರದ ವರ್ಣನೆಯನ್ನು ಅದ್ಬುತವಾಗಿ ಸೆರೆ ಹಿಡಿದಿದ್ದಾರೆ.
ಎತ್ತಣ ಮಾಮರ
ಎತ್ತಣ ಕೋಗಿಲೆ ,
ಎತ್ತಣೆತ್ತಿಂದ ಸಂಭಂದವಯ್ಯಾ..
ಬೆಟ್ಟದಾ ನೆಲ್ಲಿಕಾಯಿ
ಸಮುದ್ರದೊಳಗಣ ಉಪ್ಪು
ಎತ್ತಣೆತ್ತಿಂದ ಸಂಬಂಧವಯ್ಯಾ…..
ಈ ಎತ್ತಣೆತ್ತಿನ ಸಂಭಂಧವೇ ನಾವೆಲ್ಲಾ ದೇವರೂ,ಪ್ರಕೃತಿ, ಶಕ್ತಿ ಎಂದು ನಂಬೋದಲ್ಲವೇ…ಈ ಸೂಕ್ಷ್ಮಗಳ ಅರಿಯುದರಲ್ಲೇ ,ಅರಿತು ನಡೆಯುವುದರಲ್ಲೇ ನಿಜ ಜೀವನೋತ್ಸಾಹ ಇರೋದು…
ಅದನ್ನೇ ದ.ರಾ ಬೇಂದ್ರೆಯವರು….. ಮಾನವನೂ ರಾಗವೆಂಬ ಮುಗಿಲು ರತಿಯಾಗಿ ಮನವೆಂಬ ನೆಲದಂಚಿಗೆ ಮಂಜಿನಂತೆ ಮುಸುಕಾಗಿ ಆವರಿಸಿ ಬಿದ್ದಾಗ ತನಗೆ ಅರಿಯದೇ ಹೊಸ ಜೀವ ಚೈತನ್ಯವೊಂದು ಹೊರ ಸೂಸುವುದರನ್ನು ಬಹಳ ಚೆನ್ನಾಗಿ ವರ್ಣಿಸಿದ್ದಾರೆ….
ಧೀಯೋಯೋನಃ ಪ್ರಚೋದಯಾತ್…. ಎಂದಷ್ಟೇ ನಮ್ಮ ಪ್ರಾರ್ಥನೆ.
# ಟಿ ಆರ್ ಸುರೇಶ್ಚಂದ್ರ ಕಲ್ಮಡ್ಕ
( ಮುಗಿಲ ಮಾರಿಗೆ ರಾಗರತಿಯಾ….. ಹಾಡು ಇಲ್ಲಿದೆ…..)
ಈ ಬಾರಿ ಮುಂಗಾರು ಮಳೆಯಲ್ಲಿ ಸರಾಸರಿ 105% ರಷ್ಟು ಮಳೆಯಾಗುವ ಸಾಧ್ಯತೆ ಇದೆ.…
ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಪಾಡುವುದು ಸ್ಥಳೀಯ ಆಡಳಿತಕ್ಕೆ ಎಷ್ಟು ಮುಖ್ಯವೋ ಅಲ್ಲಿಗೆ ಭೇಟಿ…
ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬೆಂಗಳೂರು-ಮುರುಡೇಶ್ವರ ಮತ್ತು ಬೆಂಗಳೂರು-ಕಣ್ಣೂರು ನಡುವೆ…
ಜಾನುವಾರುಗಳ ಕಾಲುಬಾಯಿ ರೋಗ ನಿಯಂತ್ರಣಕ್ಕಾಗಿ 7 ನೇ ಸುತ್ತಿನ ಲಸಿಕಾ ಅಭಿಯಾನವನ್ನು ರಾಜ್ಯಾದ್ಯಂತ…
ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿದೆ. ಕರಾವಳಿಯಲ್ಲಿ ಒಣಹವೆ ಮುಂದುವರೆದಿದೆ.…
ಅಗ್ನಿಪಥ್ ಯೋಜನೆಯ ಅಗ್ನಿವೀರರ 5 ನೇ ತಂಡದ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.…