Advertisement
ಅನುಕ್ರಮ

ಮಳೆ…..ಹೀಗೋಂದು ಸಣ್ಣ ವಿಶ್ಲೇಷಣೆ… | 67 ದಿನಗಳಲ್ಲಿ 2350 ಮಿಮೀ ಮಳೆ | ಕೃಷಿಕ ಟಿ ಆರ್‌ ಸುರೇಶ್ಚಂದ್ರ ವಿಶ್ಲೇಷಿಸಿದ್ದಾರೆ… |

Share
ಕೃಷಿಕ ಟಿ ಆರ್‌ ಸುರೇಶ್ಚಂದ್ರ ಅವರು ಪ್ರಕೃತಿಯನ್ನು ಗಮನಿಸುತ್ತಾ ಕೃಷಿ ಬದಲಾವಣೆ ಹಾಗೂ ಕೃಷಿ ಅಭಿವೃದ್ಧಿ ಪಡಿಸುವ ಕೃಷಿಕ. ಕೃಷಿ ಜೊತೆ ಪರಿಸರದ ಬದಲಾವಣೆಯನ್ನೂ ಒಬ್ಬ ಕೃಷಿಕನಾಗಿ ವಿಶ್ಲೇಷಣೆಯನ್ನೂ ಮಾಡುತ್ತಾರೆ. ಈ ವರ್ಷದ ಮಳೆಯನ್ನು ಅವರು ವಿಶ್ಲೇಷಣೆ ಮಾಡಿದ್ದಾರೆ ಇಲ್ಲಿ. – ರೂರಲ್‌ ಮಿರರ್‌

2020 ರಲ್ಲಿ 160 ದಿನಗಳಲ್ಲಿ 4565 ಮಿಮೀ
2021 ರಲ್ಲಿ 187 ದಿನಗಳಲ್ಲಿ 5431 ಮಿಮೀ.
ಈ ವರ್ಷ ಇಂದಿನ ತನಕದ 67 ದಿನಗಳಲ್ಲಿ 2350 ಮಿಮೀ ಮಳೆ ಸುರಿಯಿತು.

ಅಂದರೆ ….ಸಾಧಾರಣ ಇನ್ನೂ ನೂರು ದಿನ ಮಳೆ ಸುರಿದೀತು.
ಸರಾಸರಿ ವಾರ್ಷಿಕ ಮಳೆ ಸುರಿತ 5000 ಮಿಮೀ.

ಅಂದರೆ… ನಮ್ಮಲ್ಲಿ ಈಗಾಗಲೇ ಅರ್ಧ ಪಾಲು ವಾರ್ಷಿಕ ಮಳೆ ಸುರಿದಾಯಿತು ಅಂತ ಅಂದಾಜಿಸಬಹುದು.
ಅಂದರೆ ಇನ್ನು ನೂರು ದಿವಸಗಳಲ್ಲಿ ಹೆಚ್ಚು ಕಡಿಮೆ 2500 ಮಿಮೀ ಮಳೆ ಸುರಿದೀತು.

ಅಂದರೆ… ಪ್ರತೀ ದಿವಸ ಸಾಧಾರಣ 25 ಮಿಮೀ ಸುರಿಯಬೇಕು…, ಇದಕ್ಕಿಂತ ಹೆಚ್ಚು ದಿನವಹಿ ಸುರಿದರೆ ಮಳೆ ಮುಂದಿನ ದಿನಗಳಲ್ಲಿ ದಿನವಹಿ ಕಡಿಮೆ ಆಗುತ್ತಾ ಹೋಗಬಹುದು.

ಗಮನಿಸಿ…. ಈ ಇನ್ನು ಸುರಿಯಲಿರುವ 2500 ಮಿಮೀ ಮಳೆಯಲ್ಲಿ ಸಾದಾರಣ 1000 ಮಿಮೀ ಹಿಂಗಾರು ಮಳೆ (ಒಕ್ಟೋಬರ್, ನವೆಂಬರ್). ಅಂದರೆ ಇನ್ನು ಮಾನ್ಸೂನ್ ಮಳೆ ಸಾದಾರಣ 1500 ಮಿಮೀ ಇರುವುದು.

ಇದೆಲ್ಲಾ ಮಾನ್ಸೂನ್ ಮುಗಿಲಾವಿ ರಾಶಿ ಬಿದ್ದಿರುವ ಮೂರು ಸಾವಿರ ಮೈಲುಗಳಾಚೆ ಕಳೆದ ಬೇಸಿಗೆಯಲ್ಲಿ ಎಷ್ಟು ನೀರು ಆವಿ ಆಗಿ ಸ್ಟೋಕ್ ಬಿದ್ದಿದೇ ಅನ್ನುವುದರನ್ನು ಅವಲಂಬಿಸಿದೆ.

ಆದರೂ…. ಸಾಧಾರಣ 5000+- ಮಿಮೀ ಮಳೆ ಸುರಿಸುವ ಕೆಪೇಸಿಟಿಯ ನೀರು ಪ್ರತೀ ವರ್ಷ ಆವಿಯಾಗುವುದು. ಮತ್ತೆಲ್ಲಾ ಪ್ರಕೃತಿಯ ವೈಚಿತ್ರ್ಯವನ್ನು ಹೊಂದಿದೆಯಲ್ಲವೇ.

ಬರಹ :
# ಟಿ ಆರ್‌ ಸುರೇಶ್ಚಂದ್ರ, ಕಲ್ಮಡ್ಕ
ನಿಮ್ಮ ಅಭಿಪ್ರಾಯಗಳಿಗೆ :

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

Published by
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

Recent Posts

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ

ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…

12 hours ago

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

19 hours ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

2 days ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

2 days ago

ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ

ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…

3 days ago

ಪುತ್ತೂರಿಗೆ ಪುತ್ತಿಲ? ಪುತ್ತೂರಿನ ರಾಜಕೀಯದ ಹೊಸ ವ್ಯಾಕರಣ

ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…

3 days ago