ಹಲವು ದಿನಗಳ ಉರಿ ಬಿಸಿಲಿನ ಬಳಿಕ ಬುಧವಾರ ಸಂಜೆ ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಯಿತು. ಎರಡು ದಿನಗಳಿಂದ ಮಳೆ ಮುನ್ಸೂಚನೆ ಇತ್ತು. ಬುಧವಾರ ಸಂಜೆ ಜೋರಾಗಿ ಸುರಿದ ಗಾಳಿ ಮಳೆ ಸುಳ್ಯ ತಾಲೂಕಿನ ದುಗ್ಗಲಡ್ಕ ಬಳಿ ಮರ ಉರುಳಿ ರಸ್ತೆಗೆ ಬಿದ್ದರೆ ಗುತ್ತಿಗಾರು -ಬಳ್ಳಕ್ಕ ರಸ್ತೆಯಲ್ಲಿಯೂ ಮರ ಉರುಳಿ ರಸ್ತೆಗೆ ಬಿದ್ದಿತ್ತು. ಸಾರ್ವಜನಿಕರು ಮರ ತೆರವು ಮಾಡಿದರು. ಸುಳ್ಯ ತಾಲೂಕಿನ ಹಲವು ಕಡೆ, ಪುತ್ತೂರು, ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಯಿತು.
ಚಿತ್ರ : ಉಜಿತ್ ಶ್ಯಾಂ
ಮಳೆ ವರದಿ :
ಸುಳ್ಯ ತಾಲೂಕಿನ ಕಲ್ಲಾಜೆಯ ಸೇರಿದಂತೆ ವಿವಿಧ ಕಡೆ ಎರಡು ದಿನಗಳಿಂದ ತುಂತುರು ಮಳೆ ಇತ್ತು. ಬುಧವಾರ ಸಂಜೆ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಕಲ್ಮಡ್ಕದಲ್ಲಿ 18 ಮಿಮೀ ಮಳೆಯಾದರೆ ಬೆಳ್ಳಾರೆಯಲ್ಲಿ 15 ಮಿಮೀ ಮಳೆಯಾಯಿತು.ಪುತ್ತೂರು ಬಂಗಾರಡ್ಕದ ಬಳಿ 25 ಮಿಮೀ ಮಳೆ, ದೊಡ್ಡತೋಟದಲ್ಲಿ 11 ಮಿಮೀ ,ಬಳ್ಪದಲ್ಲಿ 30 ಮಿಮೀ, ಗುತ್ತಿಗಾರು ಕಮಿಲದಲ್ಲಿ 32 ಮಿಮೀ ಮಳೆಯಾಗಿದೆ. ಮುಂಡೂರಿನಲ್ಲಿ 5 ಮಿಮೀ , ಶಾಂತಿಗೋಡಿನಲ್ಲಿ 3 ಮಿಮೀ ಕೊಳ್ತಿಗೆಯಲ್ಲಿ 11 ಮಿಮೀ ,ಎಣ್ಮೂರು 31 ಮಿಮೀ, ಸುಳ್ಯ ನಗರ 5 ಮಿಮೀ, ಬಲ್ನಾಡು 2 ಮಿಮೀ,, ಸುಬ್ರಹ್ಮಣ್ಯ 8 ಮಿಮೀ, , ಹರಿಹರ 6.5 ಮಿಮೀ, , ಚೊಕ್ಕಾಡಿ 26.7ಮಿಮೀ,, ಬಾಳಿಲ 21 ಮಿಮೀ, , ಕಲ್ಲಾಜೆ 12 ಮಿಮೀ, ಹಾಲೆಮಜ%E
Advertisementಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿAdvertisementRural Mirror Special | Subscribe Our ChannelAdvertisement
29.04.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ ರಾಜ್ಯದಲ್ಲಿ ತಾಪಮಾನ…
ಹೆಸರಘಟ್ಟದಲ್ಲಿ ಕಂಡುಬಂದ ಹಕ್ಕಿಜ್ವರವನ್ನು ಆರೋಗ್ಯ ಇಲಾಖೆ ಸಂಪೂರ್ಣ ನಿಯಂತ್ರಣಕ್ಕೆ ತಂದಿದೆ. ಮಾನವ ಸೋಂಕಿನ…
ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ನೀರಿನ ಕೊರತೆಯನ್ನು ತಡೆಯಲು ಅರಣ್ಯ ಇಲಾಖೆ ಕೃತಕ ನೀರಿನ ತೊಟ್ಟಿಗಳನ್ನು…
ರಾಜ್ಯದಲ್ಲಿ ಭಾರಿ ಬಿಸಿಲು ಮುಂದುವರಿದಿದ್ದು, ಕೆಲವೆಡೆ ಗುಡುಗು ಸಹಿತ ಮಳೆಯ ಲಕ್ಷಣಗಳಿವೆ. ಏಪ್ರಿಲ್…
ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸಮೂಹ ಕ್ರಮಗಳು ಫಲ ನೀಡುತ್ತಿವೆ. ಗುತ್ತಿಗಾರಿನಲ್ಲಿ ಸಂವಾದ…
2026ರಲ್ಲಿ ಎಲ್ ನಿನೊ ಪರಿಣಾಮದಿಂದ ಭಾರತ ಸೇರಿ ಏಷ್ಯಾದಲ್ಲಿ ಕಡಿಮೆ ಮಳೆ ಮತ್ತು…