Advertisement
ಕಿಟಕಿ

ಅರ್ಥವಾಗದ ಮಳೆಯ ನಾಡಿಬಡಿತ…….! | ಅಡುಗೆ ಮನೆಯ ಕಿಟಿಕಿಯಾಚೆಗಿನ ನೋಟ..

Share

ಮಳೆಗಾಲದ ದಿನಗಳೆಂದರೆ ನಮ್ಮ ಕರಾವಳಿ , ಮಲೆನಾಡು, ಹಳ್ಳಿ ಪ್ರದೇಶಗಳಲ್ಲಿ ಒಂದು ರೀತಿಯ ವನವಾಸವೇ. ಹಾಗಂತ ಕಾಡಲ್ಲೇ ಇರುತ್ತೀರಾ ಅಂತ ಕೇಳ ಬೇಡಿ.ಅಂದರೆ, ಸಿಕ್ಕಾಪಟ್ಟೆ ಸುರಿಯುವ ಮಳೆಗೆ ಮನೆಯಿಂದ ಹೊರಬರಲಾಗದ ಸ್ಥಿತಿ.  ಅಷ್ಟೇ…!. ಮಳೆಗಾಲ ಒಬ್ಬೊಬ್ಬರದು ಒಂದೊಂದು ಮಾತಾದರೆ, ಅಡುಗೆ ಮನೆಯ ಒಳಗಿನಿಂದ ವಿಷಯವೇ ಬೇರೆ..!, ಇಲ್ಲೀಗ ಇಲ್ಲಗಳ ವಿಷಯ..!.

ಬೇಸಿಗೆಯಲ್ಲಿ ಮನೆಯ ಹಿತ್ತಿಲಿನಲ್ಲಿ ನಮೂನೆವಾರು ತರಕಾರಿಗಳನ್ನು ಬೆಳೆಸಿ , ನಿತ್ಯ ತಟ್ಟೆ ತುಂಬಾ ಅನ್ನಕ್ಕಿಂತ ಜಾಸ್ತಿ ತರಕಾರಿ ಹೋಳುಗಳನ್ನೇ ಊಟ ಮಾಡುವವರಿಗೆ ದಿಡೀರ್ ಕೈ ಬಾಯಿ ಕಟ್ಟಿದಂತಾಗುತ್ತದೆ. ಸೌತೆಕಾಯಿ , ಕುಂಬಳಕಾಯಿ, ಚೀನಿಕಾಯಿಗಳು ಸ್ವಲ್ಪ ದಿನ ಉಳಿವಂತಹ ತರಕಾರಿಗಳು. ಮನೆಯಲ್ಲಿ ಇವುಗಳಿದ್ದರೆ ಏನೋ ಧೈರ್ಯ. ಈ ಮಳೆಗೆ ಯಾವುದೇ ತರಕಾರಿಗಳೂ ಬೆಳೆಯದು. ಹರಿವೆ , ಬಸಳೆಯಂತೂ ಕೊಳೆತೇ ಹೋಗುವುದು. ಜೋರುಮಳೆಗೆ ಮೊದಲೇ ಗಿಡ ದೊಡ್ಡದಾಗಲಿ ಎಂದು ಸಾಲು ತಯಾರಿಸಿ ಬೀಜ ಹಾಕಿ ಗಿಡ ಮಾಡಿದರೆ ಈ ಜಡಿ ಮಳೆಗೆ ಹುಟ್ಟಿದ ಗಿಡವೂ ಕೊಳೆತೇ ಹೋಯಿತು. ಎಂದಿಗಿಂತ ಮೊದಲೇ ಸುರಿದ ಮಳೆ ಈ ಬಾರಿ ಮಳೆಗಾಲದ ತಯಾರಿಗೂ ಅವಕಾಶ ಕೊಡಲಿಲ್ಲ. ಸಾವಿರಗಟ್ಟಲೆ ಅಲ್ಲವಾದರೂ ನೂರರ ಸಂಖ್ಯೆಯ ಹಪ್ಪಳವೂ ಮಾಡಲಾಗಲಿಲ್ಲ. ಚೆನ್ನಾಗಿ ಬಲಿತ ಬಾಳೆಗೊನೆಗಳು ನೇತು ಕೊಂಡಿದ್ದರೂ ತೆಳ್ಳಗೆ ತುಂಡು ಮಾಡಿ ಬಿಸಿಲಿನಲ್ಲಿ ಒ‍ಣಗಿಸಿ ಡಬ್ಬಿಯಲ್ಲಿ ಹಾಕಿ ಇಡಲಿಲ್ಲ. ಎಲ್ಲಾ ನಮೂನೆಯ ಕಾಡು ಮಾವಿನ ಹಣ್ಣುಗಳಿದ್ದರೂ ಮಾಂಬಳದ ಚಾಪೆ ಹೊರ ತೆಗೆಯಲಾಗಲೇ ಇಲ್ಲ. ಪ್ರತಿ ವರುಷದಂತೆ ಈ ವರ್ಷ ಇಲ್ಲ. ಪ್ರಕೃತಿಯ ಮನಸಲ್ಲೇನು ಓಡುತ್ತಿದೆ ನಮಗರ್ಥವಾಗುತ್ತಿಲ್ಲ. ನಿರಂತರವಾಗಿ ಸುರಿಯುತ್ತಿರುವ ಮಳೆಯ ಹೃದಯದ ಬಡಿತ ಲೆಕ್ಕಕ್ಕೇ ಸಿಗುತ್ತಿಲ್ಲ. ಯಾಕೋ ಗೊತ್ತಿಲ್ಲ , ಬದಲಾಗುತ್ತಿರುವುದು ನಾವು …..ನಮ್ಮ ಬದುಕೋ ? ಪ್ರಕೃತಿಯೋ?

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 07-09-2026 | ಕರ್ನಾಟಕದಲ್ಲಿ ಮುಂದಿನ ಮಳೆಯ ಚಿತ್ರಣ ಹೇಗಿದೆ..?

ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…

7 hours ago

ಹೆಬ್ರಿಯ ಗೋಡಂಬಿ ತ್ಯಾಜ್ಯದಿಂದ ಹಡಗುಗಳಿಗೆ ಇಂಧನ..!

ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…

12 hours ago

ಮಡಿಕೇರಿಯಲ್ಲಿ ಅಡಿಕೆ ಹಾಳೆ ತಟ್ಟೆಗೂ ನಿಷೇಧ..!

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…

12 hours ago

ಹವಾಮಾನ ವರದಿ | 06-09-2026 | ಕರ್ನಾಟಕದಲ್ಲಿ ಮಳೆ ಇಳಿಮುಖದ ಲಕ್ಷಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…

1 day ago

ಭಾರತದ ಹಸಿರು ಯೋಜನೆಗಳಿಗೆ ಜಪಾನ್‌ನ ಕಾರ್ಬನ್ ಕ್ರೆಡಿಟ್ ಅವಕಾಶ – ರೈತರೂ ಪಡೆಯಬಹುದೇ ಇದರ ಲಾಭ?

ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…

1 day ago

ಹಿಮಾಲಯದಲ್ಲಿ ಮತ್ತೊಂದು ಅಪಾಯದ ಎಚ್ಚರಿಕೆ..!

ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…

1 day ago