Advertisement
ಕಿಟಕಿ

ಅರ್ಥವಾಗದ ಮಳೆಯ ನಾಡಿಬಡಿತ…….! | ಅಡುಗೆ ಮನೆಯ ಕಿಟಿಕಿಯಾಚೆಗಿನ ನೋಟ..

Share

ಮಳೆಗಾಲದ ದಿನಗಳೆಂದರೆ ನಮ್ಮ ಕರಾವಳಿ , ಮಲೆನಾಡು, ಹಳ್ಳಿ ಪ್ರದೇಶಗಳಲ್ಲಿ ಒಂದು ರೀತಿಯ ವನವಾಸವೇ. ಹಾಗಂತ ಕಾಡಲ್ಲೇ ಇರುತ್ತೀರಾ ಅಂತ ಕೇಳ ಬೇಡಿ.ಅಂದರೆ, ಸಿಕ್ಕಾಪಟ್ಟೆ ಸುರಿಯುವ ಮಳೆಗೆ ಮನೆಯಿಂದ ಹೊರಬರಲಾಗದ ಸ್ಥಿತಿ.  ಅಷ್ಟೇ…!. ಮಳೆಗಾಲ ಒಬ್ಬೊಬ್ಬರದು ಒಂದೊಂದು ಮಾತಾದರೆ, ಅಡುಗೆ ಮನೆಯ ಒಳಗಿನಿಂದ ವಿಷಯವೇ ಬೇರೆ..!, ಇಲ್ಲೀಗ ಇಲ್ಲಗಳ ವಿಷಯ..!.

ಬೇಸಿಗೆಯಲ್ಲಿ ಮನೆಯ ಹಿತ್ತಿಲಿನಲ್ಲಿ ನಮೂನೆವಾರು ತರಕಾರಿಗಳನ್ನು ಬೆಳೆಸಿ , ನಿತ್ಯ ತಟ್ಟೆ ತುಂಬಾ ಅನ್ನಕ್ಕಿಂತ ಜಾಸ್ತಿ ತರಕಾರಿ ಹೋಳುಗಳನ್ನೇ ಊಟ ಮಾಡುವವರಿಗೆ ದಿಡೀರ್ ಕೈ ಬಾಯಿ ಕಟ್ಟಿದಂತಾಗುತ್ತದೆ. ಸೌತೆಕಾಯಿ , ಕುಂಬಳಕಾಯಿ, ಚೀನಿಕಾಯಿಗಳು ಸ್ವಲ್ಪ ದಿನ ಉಳಿವಂತಹ ತರಕಾರಿಗಳು. ಮನೆಯಲ್ಲಿ ಇವುಗಳಿದ್ದರೆ ಏನೋ ಧೈರ್ಯ. ಈ ಮಳೆಗೆ ಯಾವುದೇ ತರಕಾರಿಗಳೂ ಬೆಳೆಯದು. ಹರಿವೆ , ಬಸಳೆಯಂತೂ ಕೊಳೆತೇ ಹೋಗುವುದು. ಜೋರುಮಳೆಗೆ ಮೊದಲೇ ಗಿಡ ದೊಡ್ಡದಾಗಲಿ ಎಂದು ಸಾಲು ತಯಾರಿಸಿ ಬೀಜ ಹಾಕಿ ಗಿಡ ಮಾಡಿದರೆ ಈ ಜಡಿ ಮಳೆಗೆ ಹುಟ್ಟಿದ ಗಿಡವೂ ಕೊಳೆತೇ ಹೋಯಿತು. ಎಂದಿಗಿಂತ ಮೊದಲೇ ಸುರಿದ ಮಳೆ ಈ ಬಾರಿ ಮಳೆಗಾಲದ ತಯಾರಿಗೂ ಅವಕಾಶ ಕೊಡಲಿಲ್ಲ. ಸಾವಿರಗಟ್ಟಲೆ ಅಲ್ಲವಾದರೂ ನೂರರ ಸಂಖ್ಯೆಯ ಹಪ್ಪಳವೂ ಮಾಡಲಾಗಲಿಲ್ಲ. ಚೆನ್ನಾಗಿ ಬಲಿತ ಬಾಳೆಗೊನೆಗಳು ನೇತು ಕೊಂಡಿದ್ದರೂ ತೆಳ್ಳಗೆ ತುಂಡು ಮಾಡಿ ಬಿಸಿಲಿನಲ್ಲಿ ಒ‍ಣಗಿಸಿ ಡಬ್ಬಿಯಲ್ಲಿ ಹಾಕಿ ಇಡಲಿಲ್ಲ. ಎಲ್ಲಾ ನಮೂನೆಯ ಕಾಡು ಮಾವಿನ ಹಣ್ಣುಗಳಿದ್ದರೂ ಮಾಂಬಳದ ಚಾಪೆ ಹೊರ ತೆಗೆಯಲಾಗಲೇ ಇಲ್ಲ. ಪ್ರತಿ ವರುಷದಂತೆ ಈ ವರ್ಷ ಇಲ್ಲ. ಪ್ರಕೃತಿಯ ಮನಸಲ್ಲೇನು ಓಡುತ್ತಿದೆ ನಮಗರ್ಥವಾಗುತ್ತಿಲ್ಲ. ನಿರಂತರವಾಗಿ ಸುರಿಯುತ್ತಿರುವ ಮಳೆಯ ಹೃದಯದ ಬಡಿತ ಲೆಕ್ಕಕ್ಕೇ ಸಿಗುತ್ತಿಲ್ಲ. ಯಾಕೋ ಗೊತ್ತಿಲ್ಲ , ಬದಲಾಗುತ್ತಿರುವುದು ನಾವು …..ನಮ್ಮ ಬದುಕೋ ? ಪ್ರಕೃತಿಯೋ?

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…

12 hours ago

200 ಹಸುಗಳಿಂದ ₹2 ಕೋಟಿ ವಾರ್ಷಿಕ ಆದಾಯ…! ಗಮನ ಸೆಳೆದ ಉತ್ತರ ಪ್ರದೇಶದ ಮಾದರಿ

ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…

12 hours ago

ರಬ್ಬರ್ ತೋಟ ಹಸಿರಾಗಿರಬಹುದು… ಆದರೆ ಕಾಡಿಗೆ ಪರ್ಯಾಯವಲ್ಲ…! ಮಲೇಷ್ಯಾ ಅಧ್ಯಯನ ವರದಿ

ರಬ್ಬರ್ ತೋಟಗಳು ಹಸಿರಾಗಿದ್ದರೂ ಅವು ನೈಸರ್ಗಿಕ ಮಳೆಕಾಡಿನ ಜೀವವೈವಿಧ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು…

17 hours ago

ಅಡುಗೆ ಎಣ್ಣೆ ಆಮದು 7% ಏರಿಕೆ – ಭಾರತ ಇನ್ನೂ ಆಮದು ಅವಲಂಬಿತ

ಭಾರತದ ಅಡುಗೆ ಎಣ್ಣೆ ಆಮದು ಎಂಟು ತಿಂಗಳಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಜೂನ್‌ನಲ್ಲಿ ಆಮದು…

17 hours ago

ಕೇರಳದಲ್ಲಿ ಪ್ರತಿವರ್ಷ ₹1,200 ಕೋಟಿ ಮೌಲ್ಯದ ಹಲಸು ವ್ಯರ್ಥ..! ಮೌಲ್ಯವರ್ಧನೆಗೆ ಸರ್ಕಾರ ಮುಂದಾಗಲಿ ಎಂಬ ಒತ್ತಾಯ

ಕೇರಳದಲ್ಲಿ ಉತ್ಪಾದನೆಯಾಗುವ ಬಹುತೇಕ ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ ಸುಮಾರು ₹1,200 ಕೋಟಿ…

17 hours ago

ಅವೈಜ್ಞಾನಿಕ ಮಳೆ ವರದಿ ಶೈಕ್ಷಣಿಕ ವಲಯಕ್ಕೆ ತೊಂದರೆ – ಹವಾಮಾನ ಮುನ್ಸೂಚನೆ ಕುರಿತು ಎಸ್.ಎಲ್. ಭೋಜೆಗೌಡ ಕಳವಳ

ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…

1 day ago