#RainFall | ಸುಳ್ಯ ತಾಲೂಕಿನಲ್ಲಿಎರಡನೇ ದಿನವೂ ಹಲವು ಕಡೆ 150 ಮಿಮೀ+ ಮಳೆ | ಮುಂದುವರಿದ ಧಾರಾಕಾರ ಮಳೆ |

July 24, 2023
8:52 AM
ಸುಳ್ಯ ತಾಲೂಕಿನ ಹಲವು ಕಡೆ ಧಾರಾಕಾರ ಮಳೆ ಮುಂದುವರಿದಿದೆ. ಸತತ ಎರಡನೇ ದಿನವೂ  150 ಮಿಮೀ+ ಮಳೆ ಹಲವು ಕಡೆ ಸುರಿದಿದೆ. ಮಳೆ ಮಾಹಿತಿ ದಾಖಲು ವ್ಯಾಟ್ಸಪ್‌ ಗುಂಪಿನ ಮಳೆ ಮಾಹಿತಿ ಪ್ರಕಾರ ಸುಳ್ಯ ತಾಲೂಕಿನ ಹಲವು ಕಡೆ ಅಧಿಕ ಮಳೆಯಾಗಿರುವುದು ಕಂಡುಬಂದಿದೆ.

ಸುಳ್ಯ ತಾಲೂಕಿನ ಹಲವು ಕಡೆ ಧಾರಾಕಾರ ಮಳೆ ಮುಂದುವರಿದಿದೆ. ಸತತ ಎರಡನೇ ದಿನವೂ  150 ಮಿಮೀ+ ಮಳೆ ಹಲವು ಕಡೆ ಸುರಿದಿದೆ. ಮತ್ತೆ ಧಾರಾಕಾರ ಮಳೆ ಸುರಿಯುತ್ತಿದೆ. ಸತತ ಮೂರನೇ ದಿನವೂ ಉತ್ತಮ ಮಳೆಯ ವಾತಾವರಣ ಕಂಡುಬಂದಿದೆ. ಹವಾಮಾನ ಆಸಕ್ತರು ಹಾಗೂ ಮಳೆ ದಾಖಲು ವ್ಯಾಟ್ಸಪ್‌ ಗುಂಪಿನ ಮಳೆ ಮಾಹಿತಿ ಪ್ರಕಾರ ಸುಳ್ಯ ತಾಲೂಕಿನ ಹಲವು ಕಡೆ ಅಧಿಕ ಮಳೆಯಾಗಿರುವುದು ದಾಖಲಾಗಿದೆ. ಅದರಲ್ಲೂ ಘಟ್ಟ ಪ್ರದೇಶದ ತಪ್ಪಲು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿರುವುದು ಮಳೆ ದಾಖಲೆ ಮೂಲಕ ತಿಳಿಯುತ್ತದೆ.

ಸುಳ್ಯದ ಕೊಲ್ಲಮೊಗ್ರದಲ್ಲಿ 191 ಮಿಮೀ ಮಳೆಯಾದರೆ, ಬೆಳ್ಳಾರೆ 98 ಮಿಮೀ, ಕಮಿಲ 200 ಮಿಮೀ, ಸುಳ್ಯ ನಗರದಲ್ಲಿ74 ಮಿಮೀ,  ಕಡಬ ಕೋಡಿಂಬಾಳ 139 ಮಿಮೀ, ಬಂಟ್ವಾಳ ಪುಣಚ 50 ಮಿಮೀ, ಕೊಳ್ತಿಗೆ 56 ಮಿಮೀ , ಮಂಚಿಯಲ್ಲಿ 98 ಮಿಮೀ,  ಪುತ್ತೂರು ಬಂಗಾರಡ್ಕ 115 ಮಿಮೀ, ಪುತ್ತೂರು ಬಲ್ನಾಡು 80 ಮಿಮೀ,  ಪುತ್ತೂರು ಸರ್ವೆಯಲ್ಲಿ 116 ಮಿಮೀ ಮಳೆ ದಾಖಲಾಗಿದೆ. ಕಾಸರಗೋಡು ಕಲ್ಲಕಟ್ಟ 74 ಮಿಮೀ, ರಾಮಕುಂಜ 88 ಮಿಮೀ, ಮರ್ಕಂಜ 120 ಮಿಮೀ, ಹರಿಹರ 181 ಮಿಮೀ, ದೊಡ್ಡತೋಟ 105 ಮಿಮೀ, ಕಲ್ಲಾಜೆ 222 ಮಿಮೀ, ಉಬರಡ್ಕ 92  ಮಿಮೀ, , ಬಂಟ್ವಾಳ ಕೆಲಿಂಜ 136 ಮಿಮೀ,  ಬಳ್ಪ 180 ಮಿಮೀ, ಮೆಟ್ಟಿನಡ್ಕ 232 ಮಿಮೀ,  ಪಾಣಾಜೆ 48 ಮಿಮೀ, ಎಡಮಂಗಲ 179 ಮಿಮೀ, ಸುಬ್ರಹ್ಮಣ್ಯ 170 ಮಿಮೀ, ಬಾಳಿಲ 170 ಮಿಮೀ, ನಡುಗಲ್ಲು 225 ಮಿಮೀ, ಮುರುಳ್ಯ ಶೇರ 168 ಮಿಮೀ, ಮಡಿಕೇರಿ ಚೆಂಬು 224 ಮಿಮೀ ,ಬೆಳ್ತಂಗಡಿ 106 ಮಿಮೀ, ಕಲ್ಮಡ್ಕ 148 ಮಿಮೀ, ಮಡಪ್ಪಾಡಿ 138 ಮಿಮೀ, ಕಂದ್ರಪ್ಪಾಡಿ ವಾಲ್ತಾಜೆ 228 ಮಿಮೀ, ಉಪ್ಪಿನಂಗಡಿ 117 ಮಿಮೀ, ಕಾರ್ಕಳ ಬಜಗೋಳಿಯಲ್ಲಿ 111 ಮಿಮೀ ಮಳೆಯಾಗಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಂಬೈನಲ್ಲಿ ಭಾರೀ ಮಳೆ ಅಬ್ಬರ – ರೆಡ್ ಅಲರ್ಟ್ ಮುಂದುವರಿಕೆ, ಜನಜೀವನ ಅಸ್ತವ್ಯಸ್ತ
July 4, 2026
10:47 PM
by: ದ ರೂರಲ್ ಮಿರರ್.ಕಾಂ
ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿಗಳ ತಡೆಗೆ BIS ಮಾನದಂಡ ಕಾರಣವೇ ? ಯಾವ ಅಡಿಕೆ ಉತ್ತಮ? ಗ್ರೇಡ್ ಹೇಗೆ ನಿರ್ಧಾರ?
July 4, 2026
9:45 PM
by: ದ ರೂರಲ್ ಮಿರರ್.ಕಾಂ
ಜಾಕ್‌ಫ್ರೂಟ್ ಸ್ಪೈಸಿ – ಹಲಸಿನ ಕಾಯಿಯಿಂದ 5 ನಿಮಿಷದಲ್ಲಿ ರುಚಿಕರ ಸ್ನ್ಯಾಕ್..!
July 4, 2026
3:44 PM
by: ದಿವ್ಯ ಮಹೇಶ್
ಅಡಿಕೆ ಬೆಳೆ ನಷ್ಟಕ್ಕೆ ಎನ್‌ಡಿಆರ್‌ಎಫ್ ಪರಿಹಾರ ತೀರಾ ಕಡಿಮೆ…! ಪ್ರಕೃತಿ ವಿಕೋಪದಲ್ಲಿ ರೈತರಿಗೆ ಅನ್ಯಾಯ?
July 4, 2026
2:59 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror