Advertisement
MIRROR FOCUS

ಮತ್ತೆ ಕೈಕೊಟ್ಟ ಹವಾಮಾನ | ಹಲವು ಕಡೆ ಮಳೆ-ತುಂತುರು ಮಳೆ | ಧನುರ್ಮಾಸದಲ್ಲಿ ವರುಣಾಗಮನ..! |

Share

ಮಳೆಗಾಲದಲ್ಲಿ ನಿರೀಕ್ಷೆಯಷ್ಟು ಮಳೆ ಬರದೇ ಹೋಯಿತು. ಬರದ ಛಾಯೆ ಆವರಿಸಿತು. ಚಳಿಗಾಲ ಬಂದಾಗಲೂ ಚಳಿ ದೂರವಾಯಿತು. ಈ ಬಾರಿ 18 ಡಿಗ್ರಿಗಿಂತ ಕಡಿಮೆ ಚಳಿ ಇಲ್ಲದೇ ಹೋಯಿತು. ಈಗ ಮತ್ತೆ ಮಳೆ ಶುರುವಾಗಿದೆ. ಕೆಲವು ಕಡೆ ಉತ್ತಮ ಮಳೆ, ಇನ್ನೂ ಕೆಲವು ಕಡೆ ತುಂತುರು ಮಳೆ ಕರಾವಳಿ ಪ್ರದೇಶದಲ್ಲಿ ಕಾಣಿಸಿದೆ. ಒಟ್ಟಾರೆ ಈ ಬಾರಿ ಹವಾಮಾನ ಕೈಕೊಟ್ಟಿದೆ. ಕೃಷಿ, ಗ್ರಾಮೀಣ ಭಾಗ ಸಂಕಷ್ಟಕ್ಕೆ ಸಿಲುಕುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಕಡಬ ,ಪುತ್ತೂರು, ಸುಳ್ಯ, ಬಂಟ್ವಾಳ ಭಾಗದಲ್ಲಿ ಬುಧವಾರ ಮುಂಜಾನೆ ಸುಮಾರು ಒಂದು ಗಂಟೆಗಳ ಕಾಲ ಮಳೆ ಸುರಿದಿದೆ. ಮಂಗಳವಾರ ಸಂಜೆಯಿಂದಲೇ ತುಂತುರು ಮಳೆಯ ಸಿಂಚನವಾಗುತ್ತಿದ್ದು ಮೋಡ ಕವಿದ ವಾತಾವರಣವಿತ್ತು.ಕಾಸರಗೋಡು ಕಡೆ 2 ಮಿಮೀ ವರೆಗೆ ಮಳೆಯಾದರೆ ಬಂಟ್ವಾಳ ಪ್ರದೇಶದಲ್ಲಿ 5 ಮಿಮೀ ಮಳೆಯಾಗಿದೆ.

ಧನುರ್ಮಾಸದಲ್ಲಿ ವಿಪರೀತ ಚಳಿ ಇರುವುದು ಪದ್ಧತಿ. ಆದರೆ ಈಗ ಅಕಾಲಿಕ ಮಳೆ ಕೃಷಿಕರಿಗೂ ಸಂಕಷ್ಟ.  ಅಡಿಕೆ ಬೆಳೆ ಸಹಿತ ಎಲ್ಲಾ ಕೃಷಿಕರಿಗೂ ಸಂಕಷ್ಟ. ಅಡಿಕೆ ಒಣಗಿಸಲು ಹರಸಾಹಸ, ರಬ್ಬರ್‌ ಇಳುವರಿ ಕುಂಠಿತವಾಗಿದೆ. ಮುಂದಿನ ಅಡಿಕೆ ಫಸಲಿಗೂ ಇದೇ ಸಂಕಷ್ಟದ ಮಳೆ. ಚಳಿಯ ಕೊರತೆ, ಮಳೆಯ ಆಗಮನ ಇದೆರಡೂ ಈಗ ಸಮಸ್ಯೆ, ಕೃಷಿಗೂ ಸಂಕಷ್ಟ.

ಉತ್ತರಾಯಣ ಆರಂಭವಾಗಿರುವ ಕಾರಣ ಹಲವು ಮನೆಗಳಲ್ಲಿ ಶುಭಕಾರ್ಯಗಳು, ಭೂತಾರಾದನೆಯಂತಹ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಅಕಾಲಿಕ ಮಳೆಗೆ ಕಾರ್ಯಕ್ರಮ ನಡೆಯುವ ಮನೆಗಳಲ್ಲಿ ಚಿಂತೆ ಉಂಟಾಗಿದೆ.

ಗ್ರಾಮೀಣ ಭಾಗಗಳು ಸೇರಿದಂತೆ ಈಗ ಅಭಿವೃದ್ಧಿ ಕಾರ್ಯಗಳು ಆರಂಭವಾಗುವ ಸಮಯ. ಈಗ ಅಕಾಲಿಕ ಮಳೆಯು ಅಭಿವೃದ್ಧಿ ಕಾರ್ಯಗಳೂ ವಿಳಂಬಕ್ಕೂ ಕಾರಣವಾಗುತ್ತಿದೆ.

RM ನ್ಯೂಸ್‌, ಕೊಕ್ಕಡ -ನೆಲ್ಯಾಡಿ

Belthangady, Kadaba ,Puttur, Sullia, Bantwal area of ​​Dakshina Kannada district received rain for about an hour on Wednesday morning.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬಿ.ಎಸ್‌ಸಿ. ಕೃಷಿ ನಂತರ ಏನು ? ಉದ್ಯೋಗ, ಉದ್ಯಮ ಮತ್ತು ಉನ್ನತ ಶಿಕ್ಷಣದ ಅತ್ಯುತ್ತಮ ಅವಕಾಶಗಳು ಇಲ್ಲಿವೆ

ಬಿ.ಎಸ್‌ಸಿ. ಕೃಷಿ ಪದವೀಧರರಿಗೆ ಸರ್ಕಾರಿ ಉದ್ಯೋಗ, ಖಾಸಗಿ ಕಂಪನಿಗಳು, ಬ್ಯಾಂಕಿಂಗ್, ಸಂಶೋಧನೆ ಮತ್ತು…

4 hours ago

ಅಡಿಕೆ–ಕಾಳುಮೆಣಸು ಬೆಳೆ ವಿಮೆ: ರೈತರ ನೋಂದಣಿಗೆ ಆ.17 ಅಂತಿಮ ದಿನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2026-27ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಅಡಿಕೆ…

4 hours ago

ಹವಾಮಾನ ವರದಿ | 10.08.2026 | ಕರ್ನಾಟಕದಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆ; ಆಗಸ್ಟ್‌ 12ರಂದು ಕರಾವಳಿಯಲ್ಲಿ ಮಳೆ ಹೆಚ್ಚಳ ಸಾಧ್ಯತೆ

ಮಧ್ಯಪ್ರದೇಶದಲ್ಲಿ ಹೊಸ ತಿರುವಿಕೆ ಪರಿಣಾಮ: ಕರಾವಳಿ, ಮಲೆನಾಡಿನಲ್ಲಿ ಮಳೆ ಚುರುಕು ಸಾಧ್ಯತೆ ಕರ್ನಾಟಕದ…

19 hours ago

ಕಡಿಮೆ ನೀರು, ಕಡಿಮೆ ಗೊಬ್ಬರ… ಹೆಚ್ಚು ಇಳುವರಿ – ಕೃಷಿಯಲ್ಲಿ ಹೊಸ ಕ್ರಾಂತಿ

ಕಡಿಮೆ ಸಂಪನ್ಮೂಲ ಬಳಸಿ ಹೆಚ್ಚು ಉತ್ಪಾದನೆ ಪಡೆಯಲು ಸ್ಮಾರ್ಟ್ ಸಂಪನ್ಮೂಲ ನಿರ್ವಹಣೆ ಅಗತ್ಯವಾಗಿದೆ.…

1 day ago

ಬರದತ್ತ ಇಂಗ್ಲೆಂಡ್‌ – ಆಹಾರ ಕೊರತೆ, ಕಾಡ್ಗಿಚ್ಚಿನ ಎಚ್ಚರಿಕೆ – ಕೃಷಿಗೆ ಭಾರಿ ಹೊಡೆತ – ರೈತರಿಗೆ ₹4,400 ಕೋಟಿ ನಷ್ಟದ ಅಂದಾಜು

ತೀವ್ರ ಬರ ಮತ್ತು ಉಷ್ಣಾಂಶದಿಂದ ಇಂಗ್ಲೆಂಡ್‌ನಲ್ಲಿ ಕೃಷಿ ಉತ್ಪಾದನೆ ಕುಸಿದಿದ್ದು, ಆಹಾರ ಕೊರತೆ…

1 day ago

ಹವಾಮಾನ ವರದಿ | 09.08.2026 | ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ ಕ್ಷೀಣ; ಆಗಸ್ಟ್‌ 11ರಿಂದ ಮಲೆನಾಡಿನಲ್ಲೂ ಮಳೆ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಸಣ್ಣ ಅವಧಿಯ ಸಾಮಾನ್ಯ ಮಳೆ ಮಾತ್ರ; ಮಲೆನಾಡಿನಲ್ಲಿ ಮಳೆ ಕಡಿಮೆಯಾಗುವ…

2 days ago