Advertisement
MIRROR FOCUS

ದಾಖಲೆ ಪ್ರಮಾಣದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಆವಕ | ಒಂದೇ ದಿನ ಬರೋಬ್ಬರಿ 4 ಲಕ್ಷ ಮೆಣಸಿನಕಾಯಿ ಚೀಲ ಮಾರುಕಟ್ಟೆಗೆ |

Share

ಕಳೆದ ಬಾರಿ ಕೆಂಪು ಮೆಣಸಿನಕಾಯಿ ಬೆಲೆಯ(Red Chilly Price) ಘಾಟು ಗ್ರಾಹಕರಿಗೆ(Customer) ಬಾರಿ ಹೊಡೆದಿತ್ತು. 500ರಿಂದ 600 ರವರೆಗೆ ಕೆಜಿ ಬ್ಯಾಡಗಿ ಮೆಣಸಿನ ಬೆಲೆ ಏರಿತ್ತು. ಆದರೆ ಈ ಬಾರಿ ಹಾವೇರಿ(Haveri) ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ(Byadagi mirchi Market) ಈ ವಾರ ದಾಖಲೆ ಪ್ರಮಾಣದ ಮೆಣಸಿನಕಾಯಿ ಆವಕವಾಗಿದೆ. ಮಾರುಕಟ್ಟೆಗೆ ಒಂದೇ ದಿನ ಸುಮಾರು ನಾಲ್ಕು ಲಕ್ಷ ಚೀಲಗಳ ಆವಕವಾಗಿದ್ದು, ಮಾರುಕಟ್ಟೆಯಲ್ಲಿ ಜಾಗ ಸಾಲದೇ ಮೆಣಸಿನಕಾಯಿ ಚೀಲಗಳನ್ನು ಇಳಿಸಿಕೊಳ್ಳಲಾರದ ಪರಿಸ್ಥಿತಿ ಉಂಟಾಗಿದೆ. ಆವಕ ಜಾಸ್ತಿಯಾದ ಹಿನ್ನೆಲೆ ಬೆಲೆಯಲ್ಲಿ ಕೊಂಚ ಇಳಿಕೆ ಕಾಣಬಹುದೇನೋ ಅನ್ನುವ ನಿರೀಕ್ಷೆ ಗ್ರಾಹಕರದ್ದು.

Advertisement
Advertisement

ಸುಮಾರು 3 ಲಕ್ಷ ಮೂವತ್ತು ಸಾವಿರ ಚೀಲಗಳನ್ನು ಮಾರುಕಟ್ಟೆಯಲ್ಲಿ ಇಳಿಸಿಕೊಂಡರೆ, ಉಳಿದ 60 ಸಾವಿರಕ್ಕೂ ಅಧಿಕ ಮೆಣಸಿನಕಾಯಿ ಚೀಲಗಳನ್ನು ಬ್ಯಾಡಗಿ ತಾಲೂಕು ಕ್ರೀಡಾಂಗಣದಲ್ಲಿ ಇಳಿಸಿಕೊಳ್ಳಲಾಯಿತು. ಎರಡು ದಿನಗಳ ಕಾಲ ರೈತರ ಮೆಣಸಿನಕಾಯಿಗೆ ಲಾಟ್​ ನಿರ್ಮಿಸಿ ದರ ನಿಗದಿ ಮಾಡಲಾಗಿತ್ತು.

Advertisement

ಮಾರುಕಟ್ಟೆ ವರ್ತಕರು ಮಾತನಾಡುತ್ತಾ, ‘ಇಷ್ಟು ಪ್ರಮಾಣದ ಆವಕವನ್ನು ಮಾರುಕಟ್ಟೆ ಆರಂಭವಾದಾಗಿನಿಂದ ನೋಡಿರಲಿಲ್ಲಾ. ಕಳೆದ ವರ್ಷ ಏಪ್ರಿಲ್​ನಲ್ಲಿ 3 ಲಕ್ಷ 26 ಸಾವಿರ ಮೆಣಸಿನಕಾಯಿ ಚೀಲಗಳು ಆವಕವಾಗಿತ್ತು. ಆದರೆ ಈ ವರ್ಷ 3 ಲಕ್ಷ 36 ಸಾವಿರ ಚೀಲಗಳನ್ನು ಮಾರುಕಟ್ಟೆಯಲ್ಲಿ ಮತ್ತು ಉಳಿದ 60 ಸಾವಿರಕ್ಕೂ ಅಧಿಕ ಚೀಲಗಳನ್ನು ಕ್ರೀಡಾಂಗಣದಲ್ಲಿ ಇಳಿಸಿಕೊಂಡಿದ್ದೇವೆ. ಈ ರೀತಿ ನಾಲ್ಕು ಲಕ್ಷ ಮೆಣಸಿನಕಾಯಿ ಚೀಲಗಳು ಆವಕವಾಗಿದೆ. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಆರಂಭವಾದಾಗಿನಿಂದ ಇಷ್ಟು ನೋಡಿರಲಿಲ್ಲಾ. ಇದೊಂದು ದಾಖಲೆ’. ಇನ್ನು ‘ಮೆಣಸಿನಕಾಯಿ ಈ ರೀತಿ ಅಧಿಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರಲು ಕಾರಣ ಮೆಣಸಿನಕಾಯಿ ಬೆಳೆಯುವ ರೈತರ ಸಂಖ್ಯೆ ಅಧಿಕವಾಗಿರುವುದು. ಅಲ್ಲದೆ ಮೆಣಸಿನಕಾಯಿ ಇಳುವರಿಯಲ್ಲಿ ಏರಿಕೆಯಾಗಿರುವುದು ಈ ರೀತಿಯ ಆವಕ ಏರಿಕೆಗೆ ಕಾರಣ’ ಎಂದು ಹೇಳಿದ್ದಾರೆ.

ಇನ್ನು ಆಂಧ್ರಪ್ರದೇಶದ ಗುಂಟೂರು ಮೆಣಸಿನಕಾಯಿ ಮಾರುಕಟ್ಟೆಗಿಂತ ಇಲ್ಲಿ ಅಧಿಕ ದರ ಸಿಗುವ ಕಾರಣ ಸುಮಾರು 600, 700 ಕೀಲೋಮೀಟರ್​ ದೂರದಿಂದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ರೈತರು ತಮ್ಮ ಉತ್ಪನ್ನ ತಂದು ಮಾರಾಟ ಮಾಡುತ್ತಾರೆ. ಮತ್ತೊಂದು ಪ್ರಮುಖ ಕಾರಣ ಎಂದರೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ಪಾರದರ್ಶಕತೆ ಮತ್ತು ಇ ಟೆಂಡರ್ ವ್ಯವಸ್ಥೆ. ಇಲ್ಲಿಯ ವರ್ತಕರು ಯಾವುದೇ ಕಾರಣಕ್ಕೂ ರೈತರಿಗೆ ಮೋಸವಾಗಲು ಬಿಡುವುದಿಲ್ಲಾ. ಅಲ್ಲದೆ ಯಾವುದೇ ರೀತಿಯ ವಂಚನೆಯನ್ನು ಇಲ್ಲಿ ವರ್ತಕರು ಸಹಿಸುವುದಿಲ್ಲಾ. ಈ ನಂಬಿಕೆಯಿಂದ ಈ ಮಾರುಕಟ್ಟೆಗೆ ವರ್ಷದಿಂದ ವರ್ಷಕ್ಕೆ ಮೆಣಸಿನಕಾಯಿ ಮಾರಾಟ ಮಾಡಲು ರೈತರು ಬರುತ್ತಿದ್ದಾರೆ ಎಂದು ವರ್ತಕ ಎಸ್.ಆರ್.ಪಾಟೀಲ್ ಹೇಳಿದ್ದಾರೆ.

Advertisement

ಈ ವರ್ಷ ಅಧಿಕ ಮಳೆಯಾಗದ ಕಾರಣ ಮೆಣಸಿನಕಾಯಿ ಬೆಳೆಗೆ ಫಂಗಸ್ ಸೇರಿದಂತೆ ಯಾವುದೇ ರೋಗಗಳು ಬಂದಿಲ್ಲಾ. ಅಲ್ಲದೆ ತುಂಗಭದ್ರಾ ಜಲಾಯಶ ಹಾಗೂ ಆಲಮಟ್ಟಿ ಡ್ಯಾಂ ನೀರು ಮೆಣಸಿನಕಾಯಿ ಬೆಳೆಯುವ ರೈತರಿಗೆ ಹೆಚ್ಚು ಉಪಯೋಗವಾಗಿದ್ದು ಇದರಿಂದ ಮೆಣಸಿನಕಾಯಿ ಬೆಳೆಯುವ ರೈತರಿಗೆ ಯಾವುದೇ ಬರಗಾಲದ ಬಿಸಿ ತಟ್ಟಲಿಲ್ಲಾ ಎಂದು ವರ್ತಕ ಎಸ್.ಆರ್.ಪಾಟೀಲ್ ತಿಳಿಸಿದ್ದಾರೆ.

ಉತ್ತರಕರ್ನಾಟಕದ ಪ್ರಮುಖ ಜಿಲ್ಲೆಗಳು ಮತ್ತು ಬಾದಾಮಿ ಬಾಗಲಕೋಟೆ ಮೆಣಸಿನಕಾಯಿ ಬೆಳೆಯು ಅಧಿಕವಾಗಿದ್ದರಿಂದ ಮಾರುಕಟ್ಟೆಗೆ ದಾಖಲೆ ಪ್ರಮಾಣದ ಮೆಣಸಿನಕಾಯಿ ಆವಕವಾಗಿದೆ. ಈ ವರ್ಷ ಮಳೆ ಇನ್ನು ಸ್ವಲ್ಪ ಬಂದಿದ್ದರೆ ಐದು ಲಕ್ಷ ಚೀಲದವರೆಗೆ ಹೋಗುತ್ತಿತ್ತು. ಮೆಣಸಿನಕಾಯಿ ಬೆಳೆಯಲ್ಲಿನ ಹೊಸ ಹೊಸ ತಳಿಗಳು ಪರಿಚಯವಾಗಿದ್ದು ಅಧಿಕ ಪ್ರಮಾಣದಲ್ಲಿ ಇಳುವರಿ ಬಿಡಲಾರಂಭಿಸಿದ್ದು, ಇದು ಸಹ ಮಾರುಕಟ್ಟೆಗೆ ಅಧಿಕ ಪ್ರಮಾಣದ ಆವಕಕ್ಕೆ ಕಾರಣ. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಪ್ರತಿವರ್ಷ ಎರಡು ಸಾವಿರ ಕೋಟಿ ರೂಪಾಯಿಗಿಂತ ಅಧಿಕ ಪ್ರಮಾಣದ ವಹಿವಾಟು ನಡೆಸುತ್ತಿದೆ. ಆದರೆ ಈ ವರ್ಷ ಮಾರುಕಟ್ಟೆಯ ವಹಿವಾಟು ಎರಡು ಸಾವಿರ 500 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ ಎಂದು ಪಾಟೀಲ್ ಮಾಹಿತಿ ನೀಡಿದ್ದಾರೆ.

Advertisement

– ಅಂತರ್ಜಾಲ ಮಾಹಿತಿ

Byadagi mirchi market of Haveri district has received a record amount of chillies this week. Around four lakh bags are available in the market in a single day, and there is a situation where the market cannot unload the bags of chilli without running out of space. Consumers are expecting a slight decrease in the price against the background of increased demand.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸುಸ್ಥಿರ ಕೃಷಿ ತರಬೇತಿ ಕಾರ್ಯಗಾರ | ಯುವ ಕೃಷಿಕರಿಗೆ ಕೃಷಿ ಬಗ್ಗೆ ಮಾಹಿತಿ

ಮೂರು ದಿನಗಳ 'ಸುಸ್ಥಿರ ಕೃಷಿ ತರಬೇತಿ'(Sustainable Agriculture Training) ಕಾರ್ಯಾಗಾರ ಮೇ.28 ರಿಂದ…

3 hours ago

ಕೆರೆಯಲ್ಲಿ ಸಾಕಿದ್ದ ಮೀನುಗಳ ಮಾರಣಹೋಮ | ಬೃಹತ್‌ ಗಾತ್ರ ಮೀನು ಸಾವು | ಅಪಾರ ನಷ್ಟ |

ದಾವಣಗೆರೆ(Davanagere) ತಾಲೂಕಿನ ಬೇತೂರು ಗ್ರಾಮದಲ್ಲಿರುವ  ಕೆರೆಯಲ್ಲಿ(Lake) ಮೀನುಗಳ(Fish) ಮಾರಣಹೋಮವಾಗಿದೆ(Dead). ಈ ಕೆರೆಯಲ್ಲಿ 3…

3 hours ago

ಮೇ 31ಕ್ಕೆ ದೇಶದಲ್ಲಿ ಮುಂಗಾರು ಪ್ರವೇಶ ಸಾಧ್ಯತೆ | ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಮಳೆ |

ಮೇ 31ರಿಂದ ದೇಶದಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ…

4 hours ago

ಭಾರತ ಚಂದ್ರನಂಗಳದಲ್ಲಿದೆ | ನಮ್ಮ ಮಕ್ಕಳು ಚರಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ | ಪಾಕ್ ಸಂಸದ ಪಾಕ್‌ ಆಡಳಿತ ವಿರುದ್ಧ ಕಿಡಿ

ಭಾರತ (India) ಚಂದ್ರನನ್ನು(Moon) ತಲುಪಿದೆ. ಆದರೆ ನಮ್ಮ ಮಕ್ಕಳು(Children) ಇಲ್ಲಿ ಚರಂಡಿಯಲ್ಲಿ ಬಿದ್ದು…

4 hours ago

ಎರಡನೇ ವರ್ಷದ ಆನೆ ಗಣತಿಗೆ ದಕ್ಷಿಣ ಭಾರತದ 4 ರಾಜ್ಯಗಳು ಸಜ್ಜು | ಆನೆಗಳ ಸಂಖ್ಯೆ ಹೆಚ್ಚಳವಾಗಿದೆಯೇ..?

ಕರ್ನಾಟಕ(Karnataka), ತಮಿಳುನಾಡು(Tamilnadu), ಆಂಧ್ರಪ್ರದೇಶ(Andra Pradesh) ಮತ್ತು ಕೇರಳ(Kerala) ಒಳಗೊಂಡ ದಕ್ಷಿಣ ಭಾರತದ ನಾಲ್ಕು…

7 hours ago

Karnataka Weather |16-05-2024 | ಹಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ | ಮೇ 17 ರಿಂದ ಉತ್ತಮ ಮಳೆ ಸಾಧ್ಯತೆ |

ಮೇ 17 ರಿಂದ ದಕ್ಷಿಣ ಒಳನಾಡು, ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ…

7 hours ago