Advertisement
Opinion

ಭತ್ತ ಸುಲಿದರೆ ಅಕ್ಕಿ | ಅಕ್ಕಿ ಊಟಕ್ಕೆ ಅಷ್ಟೇ ಅಲ್ಲ.. | ಅನೇಕ ರೋಗ ನಿವಾರಿಸುವ ಗುಣವೂ ಹೊಂದಿದೆ..|

Share

ಭತ್ತ(paddy) ನಮ್ಮ ಭಾರತದ ಪ್ರಮುಖ ಆಹಾರ‌‌‌‌‌‍(food). ಅಕ್ಕಿ ಊಟಕ್ಕೆ ಅಷ್ಟೇ ಅಲ್ಲ.. ಹಾಗೆ ಇದರಲ್ಲಿ ಹಸಿವು ನಿವಾರಿಸುವ ಗುಣ ಅಷ್ಟೇ ಅಲ್ಲ. ಇದನ್ನು ಅನೇಕ ರೋಗಗಳಿಗೆ ಔಷಧಿಯಾಗಿಯೂ(Medicinal) ಉಪಯೋಗಿಸಬಹುದು….

  • ಭತ್ತದ ಹೊಟ್ಟನ್ನು ಸುಟ್ಟು ಬೂದಿ ಮಾಡಿ ಚೆನ್ನಾಗಿ ಗಾಳಿಸಿ ವಸ್ತ್ರಗಾಳಿತ ಚೂರ್ಣಕ್ಕೆ ಸೈಂಧವ ಲವಣ ಸೇರಿಸಿ ಹಲ್ಲುಜ್ಜಲು ಉಪಯೋಗಿಸಿದರೆ ಹಲ್ಲು ನೋವು ಗುಣವಾಗುತ್ತದೆ.
  • ಭತ್ತದ ಹೊಟ್ಟಿನ ಬಸ್ಮಕ್ಕೆ ಅಂಟುವಾಳ ಪುಡಿ ಸೇರಿಸಿ ಸ್ನಾನಕ್ಕೆ ಉಪಯೋಗಿಸುವುದರಿಂದ ಕಜ್ಜಿ ತುರಿ ಗುಣವಾಗುತ್ತದೆ.
  • ಭತ್ತ ವನ್ನು ಹುರಿದು ಅರಳು ಮಾಡಿ ಮೇಲಿನ ಕವಚವನ್ನು ಬೇರ್ಪಡಿಸಿ ಆಹಾರವಾಗಿ ಉಪಯೋಗಿಸುವುದರಿಂದ ಅಜೀರ್ಣ ಗ್ಯಾಸ್ಟ್ರಿಕ್ ಗುಣವಾಗುತ್ತದೆ
  • ಭತ್ತದ ಮಿಲ್ಲಿನಲ್ಲಿ ಅಕ್ಕಿ ಮಾಡಿಸಿದಾಗ ಅಕ್ಕಿಯ ಜೊತೆಯಲ್ಲಿ ತೌಡು ಬರುತ್ತದೆ. ಇದು ಅತ್ಯಂತ ಪೌಷ್ಟಿಕವಾದ ಆಹಾರ. ಇದನ್ನು ಹುರಿದು ತುಪ್ಪ ಹಾಕಿ ಬೆಲ್ಲ ಹಾಕಿ ಉಂಡೆ ಮಾಡಿ ಮಕ್ಕಳಿಗೆ ತಿನ್ನಿಸಿದರೆ ತುಂಬಾ ಒಳ್ಳೆಯದು. ಇದು ವಿಟಮಿನ್ ಗಳ ಆಗರ
  • ತೌಡು ಡ್ರೈ ಫ್ರೂಟ್ಸ್ ಎಲ್ಲಾ ಸೇರಿಸಿ ಮಕ್ಕಳಿಗೆ ಮತ್ತು ಗರ್ಭಿಣಿ ಸ್ತ್ರೀಯರಿಗೆ ಕೊಡಬಹುದಾದ ಒಳ್ಳೆಯ ತಿನಿಸನ್ನು ತಯಾರಿಸಬಹುದು.
  • ಅಕ್ಕಿಯಿಂದ ಮಾಡುವ ಖಾದ್ಯಗಳು ತಮಗೆಲ್ಲ ಚಿರಪರಿಚಿತ.
  • ಅಕ್ಕಿಯನ್ನು ಹುರಿದು ಪುಡಿ ಮಾಡಿ ಬಿಸಿನೀರಿನೊಂದಿಗೆ ಸೇವಿಸಿದರೆ ಗ್ಯಾಸ್ಟ್ರಿಕ್ ಗುಣವಾಗುತ್ತದೆ.
  • ಒಂದು ಚಮಚ ಅಕ್ಕಿ ಹಿಟ್ಟಿಗೆ ನೀರು ಹಾಕಿ ದೋಸೆ ಹಿಟ್ಟಿನಂತೆ ಕದಡಿ ಬಿಸಿ ಮಾಡಿ ಪೇಸ್ಟ್ ಮಾಡಿ ಕೊಂಡು ಕುರದ ಮೇಲೆ ಹಚ್ಚಿದರೆ ಕುರು ಒಡೆಯುತ್ತದೆ.
  • ಅಕ್ಕಿ ಹಿಟ್ಟನ್ನು ದೋಸೆ ಹಿಟ್ಟಿನಂತೆ ಕದಡಿ ಕಾಯಿಸಿ ಪೇಸ್ಟ್ ಮಾಡಿ ಅರಿಶಿನ ನಿಂಬೆರಸ ಸೇರಿಸಿ ಮುಖಕ್ಕೆ ಪ್ಯಾಕ್ ಹಾಕುವುದರಿಂದ ಮುಖದ ಕಪ್ಪು ಕಲೆ ಬಂಗು ಮತ್ತು ಇತರೆ ಕಲೆಗಳು ಗುಣವಾಗುತ್ತದೆ.
  • ದೇಹ ಆಕಸ್ಮಿಕ ಬೆಂಕಿಯಿಂದ ಅಥವಾ ನೀರಿನಿಂದ ಸುಟ್ಟಾಗ ಅಕ್ಕಿ ಹಿಟ್ಟನ್ನು ಗಾಯದ ಮೇಲೆ ಉದುರಿಸಿದರೆ ಬೊಬ್ಬೆ ಏಳುವುದಿಲ್ಲ.
ಬರಹ :
ಸುಮನಾ ಮಳಲಗದ್ದೆ, ಪಾರಂಪರಿಕ ವೈದ್ಯರು, 9980182883
Paddy is the most important food of our India. Rice is not only for lunch.. It also has the property of relieving hunger. It can be used medicinally for many diseases
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

21 hours ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

22 hours ago

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

2 days ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

3 days ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

3 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

3 days ago