ಸುದ್ದಿಗಳು

ವಾಹನ ಸಂಚಾರಕ್ಕೆ ಮುಕ್ತವಾಗದ ಸೇತುವೆ | ಅಪಾಯ ಆಹ್ವಾನಿಸುತ್ತಿದೆ ಮರಳು ಚೀಲ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಇದು ವಿಷಯ :
ರಸ್ತೆ -ಸೇತುವೆ ಕಾಮಗಾರಿ ಮುಗಿದರೂ ವಾಹನ ಸಂಚಾರಕ್ಕೆ ಮುಕ್ತವಾಗದ ರಸ್ತೆ. ಇದಕ್ಕೆ ಅಡ್ಡವಾಗಿ ಇರಿಸಿದ ಮರಳು ಚೀಲ ಈಗ ವಾಹನ ಸವಾರರರಿಗೆ ಸಂಕಷ್ಟ ತಂದಿದೆ. ಇಲಾಖಾ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯಲ್ಲಿ  ಪಡ್ಪಿನಂಗಡಿ ಬಳಿಯ ಕುಳಾಯಿತೋಡಿಯಲ್ಲಿ  ಸೇತುವೆ ಸಂಪೂರ್ಣಗೊಂಡರೂ ವಾಹನ ಸಂಚಾರಕ್ಕೆ ಮುಕ್ತವಾಗಿಲ್ಲ. ಇದೀಗ ವಾಹನ ಸವಾರರಿಗೆ ಅದರಲ್ಲೂ ಬೈಕ್‌ ಸವಾರರಿಗೆ ಅಪಾಯವನ್ನು ಆಹ್ವಾನಿಸುತ್ತಿದೆ. ಈಗಾಗಲೇ ಹಲವು ಬೈಕ್‌ ಉರುಳಿ, ಸವಾರರಿಗೆ ಗಾಯವಾಗಿದೆ. ಇಲಾಖೆಗಳು ದಿವ್ಯ ಮೌನ ವಹಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.

Advertisement
ಬೈಕ್‌ ಉರುಳಿ ಜಖಂ ಆಗಿರುವ ವಸ್ತುಗಳು

ನಿಂತಿಕಲ್ಲು-ಪಡ್ಪಿನಂಗಡಿ ನಡುವೆ ಇರುವ ಕುಳಾಯಿತೋಡಿಯಲ್ಲಿ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯಲ್ಲಿ  ಪ್ರತ್ಯೇಕವಾದ ಸೇತುವೆ ರಚನೆಯಾಗಿದೆ. ಅದಕ್ಕೆ ಸಂಪರ್ಕ ರಸ್ತೆಯೂ ರಚನೆಯಾಗಿದೆ. ಆದರೆ ವಾಹನ ಸಂಚಾರ ಆಗದಂತೆ ಮರಳು ಚೀಲ ಇಡಲಾಗಿದೆ. ಇದೀಗ ಮರಳು ಚೀಲದ ಕಾರಣದಿಂದ ದ್ವಿಚಕ್ರ ಸವಾರರಿಗೆ ಅಪಾಯವನ್ನುಂಟು ಮಾಡಿದೆ. ದೂರದಿಂದ ಈ ಚೀಲದ ತಡೆಯು ಕಾಣದೆ ಹತ್ತಿರ ಬಂದಾಗಲಷ್ಟೇ ಕಾಣುವ ಕಾರಣದಿಂದ ಹಲವು ಬೈಕ್‌ ಸವಾರರು ಉರುಳಿದ್ದಾರೆ ಎಂದು ಸ್ಥಳೀಯರಾದ ಹಮೀದ್‌ ಮರಕಡ ಹೇಳಿದ್ದಾರೆ.

ಈಗಾಗಲೇ ಪೂರ್ಣಗೊಂಡ ಕಾಮಗಾರಿಯನ್ನು ವಾಹನ ಸಂಚಾರಕ್ಕೆ ಮುಕ್ತ ಮಾಡಬೇಕು. ಇದರಿಂದ ಜನರಿಗೂ ಸಮಸ್ಯೆ, ವಾಹನ ಸವಾರರಿಗೂ ಅಪಾಯವನ್ನು ಆಹ್ವಾನಿಸುತ್ತದೆ. ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ತಕ್ಷಣವೇ ವಾಹನ ಸಂಚಾರಕ್ಕೆ ಮುಕ್ತವಾಗಬೇಕು ಎಂದು ಗ್ರಾಪಂ ಮಾಜಿ ಸದಸ್ಯ ರಫೀಕ್‌ ಐವತ್ತೊಕ್ಲು ಒತ್ತಾಯಿಸಿದ್ದಾರೆ.

Advertisement

ಈಗಾಗಲೇ ನಿರ್ಮಾಣ ಮಾಡಿರುವ ಸೇತುವೆ ಹಾಗೂ ಸಂಪರ್ಕ ರಸ್ತೆಯು ಅವೈಜ್ಞಾನಿಕವಾಗಿದೆ ಎಂದು ಮೇಲ್ನೋಟದಿಂದ ನೋಡುವಾಗ ಕಾಣುತ್ತದೆ. ವಾಹನಗಳು ಅದರಲ್ಲೂ ದೂರದೂರಿನಿಂದ ಆಗಮಿಸುವ ವಾಹನ ಚಾಲಕರು ನೇರವಾಗಿ ಆಗಮಿಸಿದರೆ ಮುಂದಿರುವ ಗುಂಡಿಗೆ ಪಲ್ಟಿಯಾಗುವ ಸಾಧ್ಯತೆ ಇದೆ. ಇಂತಹ ಕಾಮಗಾರಿ ನಡೆಸುವಾಗ ಪೂರ್ವ ಯೋಜನೆ ಇಲ್ಲವೇ ಎಂದೂ ಸ್ಥಳೀಯರಾದ ರೋಹಿತ್‌ ಪ್ರಶ್ನಿಸಿದ್ದಾರೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸಾವಯವ ಕೃಷಿ ಉತ್ತೇಜನ | ಜೋಯಿಡಾ ತಾಲೂಕು ಸಾವಯವ ಕೃಷಿ ತಾಲೂಕು ಗುರಿ

ರಾಸಾಯನಿಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಗ್ಗುತ್ತಿದ್ದು, ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ನೈಸರ್ಗಿಕ…

2 hours ago

ವಿಕಸಿತ ಕೃಷಿ ಸಂಕಲ್ಪ ಅಭಿಯಾನ | 1 ಕೋಟಿ 34 ಲಕ್ಷಕ್ಕೂ ಅಧಿಕ ರೈತರೊಂದಿಗೆ ಸಂವಾದ

ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಅಡಿಯಲ್ಲಿ 2 ಸಾವಿರದ 170 ತಂಡಗಳನ್ನು ರಚಿಸಲಾಗಿತ್ತು.…

2 hours ago

ರಾಜ್ಯದಲ್ಲಿ 60 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ

ವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲಿ ರಾಜ್ಯದ ಕೊಡುಗೆ ಅಪಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.…

2 hours ago

ಮಲೆನಾಡಿನಲ್ಲಿ “ಭಾರಿ” ಮಳೆಯ ದಿನದಲ್ಲಿ ಶಾಲೆಗೆ ರಜೆ ಕೊಡುವರಾರು…!?

ಮಲೆನಾಡು ಕರಾವಳಿಯ ಪ್ರದೇಶದ ಸರ್ಕಾರಿ ಶಾಲೆಗೆ ಹೋಗುವ ಅನೇಕ ಮಕ್ಕಳು ಹಳ್ಳ-ಹೊಳೆ ದಾಟಬೇಕು,…

2 hours ago

ಗುರು-ಬುಧನಿಂದ ಈ 5 ರಾಶಿಗೆ ಸಕಲೈಶ್ವರ್ಯ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

3 hours ago