MIRROR FOCUS

ಕಟ್ಟಡಗಳು ಅಥವಾ ವಾಣಿಜ್ಯ ಚಟುವಟಿಕೆಗಳನ್ನು ರಕ್ಷಿಸಲು ಮರಗಳನ್ನು ಕಡಿಯುವಂತಿಲ್ಲ | ಕೇರಳ ಹೈಕೋರ್ಟ್

Share

ಕಟ್ಟಡಗಳು ಅಥವಾ ವಾಣಿಜ್ಯ ಚಟುವಟಿಕೆಗಳನ್ನು ರಕ್ಷಿಸಲು ಮರಗಳನ್ನು ಕಡಿಯಬಾರದು. ವಿನಾಕಾರಣ ಮರಗಳನ್ನು ಕಡಿಯುವುದು ನಮ್ಮ ಮಾತೃಭೂಮಿಯ ಮತ್ತು ಪರಿಸರದ ಕಗ್ಗೊಲೆಯೇ ಹೊರತು ಬೇರೇನೂ ಅಲ್ಲ ಎಂದು ಕೇರಳ ಹೈಕೋರ್ಟ್‌ ಹೇಳಿದೆ.…….ಮುಂದೆ ಓದಿ…..

Advertisement

ವಾಣಿಜ್ಯ ಕಟ್ಟಡಗಳಿಗೆ ಸಂಬಂಧಿಸಿದಂತೆ, ವ್ಯಾಪಾರ ವ್ಯವಹಾರಗಳ ಉದ್ದೇಶಗಳಿಗಾಗಿ ರಸ್ತೆ ಬದಿಯಲ್ಲಿರುವ ಮರಗಳನ್ನು ಕಡಿಯದಂತೆ ನೋಡಿಕೊಳ್ಳಲು ಕೇರಳ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಸಾರ್ವಜನಿಕರು ಅಪಾಯಕ್ಕೆ ಸಿಲುಕುವ ಸಾಧ್ಯತೆಯಂತಹ ಮರಗಳನ್ನು ಕಡಿಯಲು ಕೂಡಾ ಸರಿಯಾದ ಕಾರಣಗಳು ಇರಬೇಕು ಎಂದು ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಹೇಳಿದ್ದಾರೆ.

ಕಟ್ಟಡದ ಸಮೀಪವಿರುವ ಮರಗಳನ್ನು ಕಡಿಯಲು ಮತ್ತು ತೆಗೆಯಲು ಅನುಮತಿ ನೀಡಬೇಕು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ  ಅರ್ಜಿಯ ವಿಚಾರಣೆಯ ಬಳಿಕ ತೀರ್ಪು ನೀಡಲಾಗಿದೆ.

ಕೇರಳ ರಾಜ್ಯವು ಸಾಕಷ್ಟು ಕಾರಣವಿಲ್ಲದೆ  ರಸ್ತೆಬದಿಗಳಲ್ಲಿ ಮರಗಳನ್ನು ಕಡಿಯಲು  ಅನುಮತಿ ನೀಡದಂತೆ ನೋಡಿಕೊಳ್ಳಬೇಕು. ಮರಗಳು ತಂಪಾದ ವಾತಾವರಣವನ್ನು, ಶುದ್ಧ ಆಮ್ಲಜನಕ ಮತ್ತು ಪಕ್ಷಿಗಳು -ಪ್ರಾಣಿಗಳಿಗೆ ಆಶ್ರಯವನ್ನು ನೀಡುತ್ತವೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಕೇವಲ ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ ಅಥವಾ ಅಕ್ಕಪಕ್ಕದ ಕಟ್ಟಡಗಳಿಗೆ ನೆರಳಾಗುತ್ತದೆ ಎಂಬ ಕಾರಣಕ್ಕೆ ರಾಜ್ಯದ ರಸ್ತೆಬದಿಯಲ್ಲಿರುವ ಯಾವುದೇ ಮರಗಳನ್ನು ಕಡಿಯಲು ಅನುಮತಿ ನೀಡಬಾರದು, ಈ ಬಗ್ಗೆ ಅಗತ್ಯ ಆದೇಶಗಳನ್ನು ನೀಡಬೇಕು. ಮರದ ಹಾನಿಯಿಂದಾಗಿಯೇ ಇಂದು ಇದು ಜನರ ಜೀವನಕ್ಕೆ ಸಂಕಷ್ಟವಾಗುತ್ತಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ತಮ್ಮ ತೀರ್ಪಿನ ವೇಳೆ ಕವಿ-ಹೋರಾಟಗಾರ್ತಿ ಸುಗತಕುಮಾರಿ ಅವರ ಕವನವನ್ನು ಉಲ್ಲೇಖಿಸಿದ  ನ್ಯಾಯಮೂರ್ತಿ ಕುಂಞಿಕೃಷ್ಣನ್ ಅವರು,

ನಮ್ಮ ತಾಯಿಗಾಗಿ ಸಸಿ ನೆಡೋಣ….

ನಮ್ಮ ಪುಟ್ಟ ಮಕ್ಕಳಿಗಾಗಿ ಸಸಿ ನೆಡೋಣ….

ನೂರು ಪಕ್ಷಿಗಳಿಗೆ ಸಸಿ ನೆಡೋಣ….

ಉತ್ತಮ ನಾಳೆಗಾಗಿ ಸಸಿ ನೆಡೋಣ…..,

ಇದು ಉಸಿರಾಟಕ್ಕಾಗಿ ನೆಡಲಾಗುತ್ತದೆ….,

ಮಳೆಗಾಗಿ ಕೃತಜ್ಞತೆಯಿಂದ ಇದನ್ನು ನೆಡಲಾಗುತ್ತದೆ….,

ಸೌಂದರ್ಯಕ್ಕಾಗಿ, ಛಾಯೆಗಾಗಿ, ಹಣ್ಣುಗಳಂತಹ ಜೇನುತುಪ್ಪಕ್ಕಾಗಿ….,

ನೂರಾರು ಸಸಿಗಳನ್ನು ನೆಡೋಣ…….

ಮರಗಳನ್ನು ಕಡಿದು ತೆಗೆಯಲು ಕೊಡಲಿ ಹಿಡಿದಾಗಲೆಲ್ಲ ನಿಸರ್ಗ, ಪರಿಸರಕ್ಕಾಗಿ ಬದುಕಿದ ಸುಗತಕುಮಾರಿ ಟೀಚರ್ ಅವರ ಈ ಮಾತುಗಳನ್ನು ಈ ನಾಡಿನ ಪ್ರತಿಯೊಬ್ಬ ಪ್ರಜೆಯೂ ನೆನಪಿಸಿಕೊಳ್ಳಬೇಕು, ವಿನಾಕಾರಣ ಮರಗಳನ್ನು ಕಡಿಯುವುದು ನಮ್ಮ ಪ್ರಕೃತಿ ಮತ್ತು ಪರಿಸರದ ಕಗ್ಗೊಲೆಯೇ ಹೊರತು ಬೇರೇನೂ ಅಲ್ಲ ಎಂದು ಉಲ್ಲೇಖಿಸಿದರು. ಒಂದು ವೇಳೆ ಮರದ ಕೊಂಬೆಗಳು ವಾಲುತ್ತಿದ್ದರೆ ಅದನ್ನು ಕಡಿಯಬಹುದು, ಆದರೆ ಇಡೀ ಮರವನ್ನು ಕಡಿಯಬೇಕಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ರಸ್ತೆ ಬದಿಯಲ್ಲಿ ನಿಂತಿರುವ ಮರಗಳನ್ನು ರಕ್ಷಿಸುವುದು ಪಿಡಬ್ಲ್ಯುಡಿ ಕರ್ತವ್ಯವಾಗಿದೆ, ಅದನ್ನು ನಾಶಪಡಿಸುವ ಕೆಲಸವಲ್ಲ ಎಂದು ನ್ಯಾಯಾಲಯವು ಹೇಳಿದೆ.

(Source : PTI)

The Kerala High Court has directed the state government to ensure no trees on roadsides are felled merely because they obstruct commercial activities. The High Court said that trees can be cut and removed only if they are in damaged condition and as a result pose a danger to public safety.

ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 06-04-2025 | ಕೆಲವು ಕಡೆ ಸಾಮಾನ್ಯ ಮಳೆ ನಿರೀಕ್ಷೆ | ಎ.7 ರಿಂದ ಮಳೆಯ ಪ್ರಮಾಣ ಕಡಿಮೆ |

ರಾಜ್ಯದಲ್ಲಿ ಈಗಿನಂತೆ ಎಪ್ರಿಲ್ 7 ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿದ್ದು, ಎಪ್ರಿಲ್ 9…

6 hours ago

ಒಂದೆಡೆ ಮಳೆ-ಇನ್ನೊಂದೆಡೆ ಹೀಟ್‌ವೇವ್‌ | ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಏಪ್ರಿಲ್ 7 ರಿಂದ 9 ರವರೆಗೆ ಪೂರ್ವ ಭಾರತದಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ…

13 hours ago

ಮ್ಯಾನ್ಮಾರ್‌ನ ಭೂಕಂಪ | ಭಾರತೀಯ ಸೇನಾ ಆಸ್ಪತ್ರೆಯಲ್ಲಿ 700 ಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ

ಮ್ಯಾನ್ಮಾರ್‌ ಭೂಕಂಪದ ಬಳಿಕ ವಿವಿಧ ರೀತಿಯಲ್ಲಿ ಭಾರತವು ನೆರವು ನೀಡುತ್ತಿದೆ. ಇದುವರೆಗೆ ಭಾರತೀಯ ಸೇನಾ…

14 hours ago

ಮಾನವ-ಆನೆ ಸಂಘರ್ಷ ತಡೆಗೆ ಕ್ರಮ | 200 ಕೋ. ರೂ. ವೆಚ್ಚದ ರೈಲ್ವೆ ಬ್ಯಾರಿಕೇಡ್ ಕಾಮಗಾರಿ

ರಾಜ್ಯದಲ್ಲಿ 6395 ಆನೆಗಳಿದ್ದು, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಕಾಫಿ ತೋಟಗಳಲ್ಲಿ ನೂರಾರು…

15 hours ago

ಬೃಹಸ್ಪತಿ ಅಂದರೆ ಜ್ಞಾನವಂತ

ಬದುಕಿನ ದೀವಿಗೆ ಜ್ಞಾನ. ಅದು ಜ್ಞಾನ ದೀವಿಗೆ. ಜ್ಞಾನಕ್ಕೆ ಮುಪ್ಪಿಲ್ಲ, ಸಾವಿಲ್ಲ. ಅದು…

16 hours ago

ಪಶು ಸಖಿಯರ ಮಾಸಿಕ ಗೌರವಧನ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ

ರಾಜ್ಯದಲ್ಲಿ 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಬೇಸಿಗೆಯಲ್ಲಿ 89 ಲಕ್ಷ ಲೀಟರ್‌ಗೆ…

17 hours ago