Advertisement
MIRROR FOCUS

ಕಟ್ಟಡಗಳು ಅಥವಾ ವಾಣಿಜ್ಯ ಚಟುವಟಿಕೆಗಳನ್ನು ರಕ್ಷಿಸಲು ಮರಗಳನ್ನು ಕಡಿಯುವಂತಿಲ್ಲ | ಕೇರಳ ಹೈಕೋರ್ಟ್

Share

ಕಟ್ಟಡಗಳು ಅಥವಾ ವಾಣಿಜ್ಯ ಚಟುವಟಿಕೆಗಳನ್ನು ರಕ್ಷಿಸಲು ಮರಗಳನ್ನು ಕಡಿಯಬಾರದು. ವಿನಾಕಾರಣ ಮರಗಳನ್ನು ಕಡಿಯುವುದು ನಮ್ಮ ಮಾತೃಭೂಮಿಯ ಮತ್ತು ಪರಿಸರದ ಕಗ್ಗೊಲೆಯೇ ಹೊರತು ಬೇರೇನೂ ಅಲ್ಲ ಎಂದು ಕೇರಳ ಹೈಕೋರ್ಟ್‌ ಹೇಳಿದೆ.…….ಮುಂದೆ ಓದಿ…..

Advertisement
Advertisement

ವಾಣಿಜ್ಯ ಕಟ್ಟಡಗಳಿಗೆ ಸಂಬಂಧಿಸಿದಂತೆ, ವ್ಯಾಪಾರ ವ್ಯವಹಾರಗಳ ಉದ್ದೇಶಗಳಿಗಾಗಿ ರಸ್ತೆ ಬದಿಯಲ್ಲಿರುವ ಮರಗಳನ್ನು ಕಡಿಯದಂತೆ ನೋಡಿಕೊಳ್ಳಲು ಕೇರಳ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಸಾರ್ವಜನಿಕರು ಅಪಾಯಕ್ಕೆ ಸಿಲುಕುವ ಸಾಧ್ಯತೆಯಂತಹ ಮರಗಳನ್ನು ಕಡಿಯಲು ಕೂಡಾ ಸರಿಯಾದ ಕಾರಣಗಳು ಇರಬೇಕು ಎಂದು ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಹೇಳಿದ್ದಾರೆ.

Advertisement

ಕಟ್ಟಡದ ಸಮೀಪವಿರುವ ಮರಗಳನ್ನು ಕಡಿಯಲು ಮತ್ತು ತೆಗೆಯಲು ಅನುಮತಿ ನೀಡಬೇಕು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ  ಅರ್ಜಿಯ ವಿಚಾರಣೆಯ ಬಳಿಕ ತೀರ್ಪು ನೀಡಲಾಗಿದೆ.

ಕೇರಳ ರಾಜ್ಯವು ಸಾಕಷ್ಟು ಕಾರಣವಿಲ್ಲದೆ  ರಸ್ತೆಬದಿಗಳಲ್ಲಿ ಮರಗಳನ್ನು ಕಡಿಯಲು  ಅನುಮತಿ ನೀಡದಂತೆ ನೋಡಿಕೊಳ್ಳಬೇಕು. ಮರಗಳು ತಂಪಾದ ವಾತಾವರಣವನ್ನು, ಶುದ್ಧ ಆಮ್ಲಜನಕ ಮತ್ತು ಪಕ್ಷಿಗಳು -ಪ್ರಾಣಿಗಳಿಗೆ ಆಶ್ರಯವನ್ನು ನೀಡುತ್ತವೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಕೇವಲ ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ ಅಥವಾ ಅಕ್ಕಪಕ್ಕದ ಕಟ್ಟಡಗಳಿಗೆ ನೆರಳಾಗುತ್ತದೆ ಎಂಬ ಕಾರಣಕ್ಕೆ ರಾಜ್ಯದ ರಸ್ತೆಬದಿಯಲ್ಲಿರುವ ಯಾವುದೇ ಮರಗಳನ್ನು ಕಡಿಯಲು ಅನುಮತಿ ನೀಡಬಾರದು, ಈ ಬಗ್ಗೆ ಅಗತ್ಯ ಆದೇಶಗಳನ್ನು ನೀಡಬೇಕು. ಮರದ ಹಾನಿಯಿಂದಾಗಿಯೇ ಇಂದು ಇದು ಜನರ ಜೀವನಕ್ಕೆ ಸಂಕಷ್ಟವಾಗುತ್ತಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

Advertisement

ತಮ್ಮ ತೀರ್ಪಿನ ವೇಳೆ ಕವಿ-ಹೋರಾಟಗಾರ್ತಿ ಸುಗತಕುಮಾರಿ ಅವರ ಕವನವನ್ನು ಉಲ್ಲೇಖಿಸಿದ  ನ್ಯಾಯಮೂರ್ತಿ ಕುಂಞಿಕೃಷ್ಣನ್ ಅವರು,

ನಮ್ಮ ತಾಯಿಗಾಗಿ ಸಸಿ ನೆಡೋಣ….
Advertisement

ನಮ್ಮ ಪುಟ್ಟ ಮಕ್ಕಳಿಗಾಗಿ ಸಸಿ ನೆಡೋಣ….

ನೂರು ಪಕ್ಷಿಗಳಿಗೆ ಸಸಿ ನೆಡೋಣ….

Advertisement

ಉತ್ತಮ ನಾಳೆಗಾಗಿ ಸಸಿ ನೆಡೋಣ…..,

ಇದು ಉಸಿರಾಟಕ್ಕಾಗಿ ನೆಡಲಾಗುತ್ತದೆ….,

Advertisement

ಮಳೆಗಾಗಿ ಕೃತಜ್ಞತೆಯಿಂದ ಇದನ್ನು ನೆಡಲಾಗುತ್ತದೆ….,

ಸೌಂದರ್ಯಕ್ಕಾಗಿ, ಛಾಯೆಗಾಗಿ, ಹಣ್ಣುಗಳಂತಹ ಜೇನುತುಪ್ಪಕ್ಕಾಗಿ….,

Advertisement

ನೂರಾರು ಸಸಿಗಳನ್ನು ನೆಡೋಣ…….

ಮರಗಳನ್ನು ಕಡಿದು ತೆಗೆಯಲು ಕೊಡಲಿ ಹಿಡಿದಾಗಲೆಲ್ಲ ನಿಸರ್ಗ, ಪರಿಸರಕ್ಕಾಗಿ ಬದುಕಿದ ಸುಗತಕುಮಾರಿ ಟೀಚರ್ ಅವರ ಈ ಮಾತುಗಳನ್ನು ಈ ನಾಡಿನ ಪ್ರತಿಯೊಬ್ಬ ಪ್ರಜೆಯೂ ನೆನಪಿಸಿಕೊಳ್ಳಬೇಕು, ವಿನಾಕಾರಣ ಮರಗಳನ್ನು ಕಡಿಯುವುದು ನಮ್ಮ ಪ್ರಕೃತಿ ಮತ್ತು ಪರಿಸರದ ಕಗ್ಗೊಲೆಯೇ ಹೊರತು ಬೇರೇನೂ ಅಲ್ಲ ಎಂದು ಉಲ್ಲೇಖಿಸಿದರು. ಒಂದು ವೇಳೆ ಮರದ ಕೊಂಬೆಗಳು ವಾಲುತ್ತಿದ್ದರೆ ಅದನ್ನು ಕಡಿಯಬಹುದು, ಆದರೆ ಇಡೀ ಮರವನ್ನು ಕಡಿಯಬೇಕಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ರಸ್ತೆ ಬದಿಯಲ್ಲಿ ನಿಂತಿರುವ ಮರಗಳನ್ನು ರಕ್ಷಿಸುವುದು ಪಿಡಬ್ಲ್ಯುಡಿ ಕರ್ತವ್ಯವಾಗಿದೆ, ಅದನ್ನು ನಾಶಪಡಿಸುವ ಕೆಲಸವಲ್ಲ ಎಂದು ನ್ಯಾಯಾಲಯವು ಹೇಳಿದೆ.

(Source : PTI)

Advertisement

The Kerala High Court has directed the state government to ensure no trees on roadsides are felled merely because they obstruct commercial activities. The High Court said that trees can be cut and removed only if they are in damaged condition and as a result pose a danger to public safety.

ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…
Advertisement

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

Karnataka Weather | 26-06-2024 | ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆ | ಉಳಿದೆಡೆ ಸಾಮಾನ್ಯ ಮಳೆ |

ಮುಂಗಾರು ಚುರುಕಾಗಿದ್ದು ಈಗಿನ ಪ್ರಕಾರ ಜೂನ್ 29ರಿಂದ ಕರಾವಳಿ ಭಾಗಗಳಲ್ಲಿ ಮಳೆ ಪ್ರಮಾಣ…

2 hours ago

ಪರೀಕ್ಷಾ ಅಕ್ರಮಗಳು.. | ಅರ್ಹರನ್ನು ಗುರುತಿಸಲಾರದಷ್ಟು ಭ್ರಷ್ಟಗೊಂಡ ವ್ಯವಸ್ಥೆ…

ಭಾರತ(India) ಈ ಕ್ಷಣದಲ್ಲಿ, ಅಂತರಾಷ್ಟ್ರೀಯ(International) ಮಟ್ಟದಲ್ಲಿ ಸಾಕಷ್ಟು ಮುಂದುವರಿಯುತ್ತಿದೆ, ಬೆಳೆಯುತ್ತಿದೆ, ಅಭಿವೃದ್ಧಿ(Developing) ಹೊಂದುತ್ತಿದೆ,…

3 hours ago

ರೈತರಿಗೋಸ್ಕರ ಹಾಲಿನ ದರ ಪರಿಷ್ಕರಣೆ | ದರ ಹೆಚ್ಚಳದ ಲಾಭ ರೈತರಿಗೆ ಸಿಗಲಿದೆ | ಡಿಸಿಎಂ ಡಿಕೆ ಶಿವಕುಮಾರ್

ಹಾಲಿನ ದರ ಏರಿಕೆಯಿಂದ ರೈತರಿಗೂ ಲಾಭದ ಪಾಲು ಸಿಗಲಿದೆ, ಸಂಕಷ್ಟದಲ್ಲಿರುವ ಹೈನುಗಾರರಿಗೆ ನೆರವಾಗಲು…

3 hours ago

ಲೋಕಸಭೆಯ ಸ್ಪೀಕರ್‌ ಆಗಿ 2 ನೇ ಬಾರಿಗೆ ಓಂ ಬಿರ್ಲಾ ಆಯ್ಕೆ | ಚುನಾವಣೆ ಮೂಲಕ ನಡೆದ ಸಭಾಪತಿ ಆಯ್ಕೆ |

ಕಳೆದ ಒಂದು ವಾರದಿಂದ ಭಾರಿ ಕುತೂಹಲ ಮೂಡಿಸಿದ್ದ ಲೋಕಸಭೆ ಸ್ಪೀಕರ್‌(Lok sabha speaker)…

4 hours ago

ಮುಂಗಾರು ಚುರುಕು | ಕೆಆರ್‌ಎಸ್‌ ಡ್ಯಾಂ ಒಳಹರಿವಿನಲ್ಲಿ ಹೆಚ್ಚಳ | ಭಾರೀ ಮಳೆಗೆ ಮನೆಯ ಗೋಡೆ ಕುಸಿದು ನಾಲ್ವರ ದುರ್ಮರಣ

ಕಾವೇರಿ ಜಲಾನಯನ(cauvery belt) ಪ್ರದೇಶದಲ್ಲಿ ಮುಂಗಾರು (Monsoon) ಚುರುಕು ಪಡೆದುಕೊಂಡಿದ್ದು, ಕೆಆರ್‌ಎಸ್ ಡ್ಯಾಂ…

4 hours ago

ಡೆಂಗ್ಯು ಬಳಿಕ ಏನೇನು ಆಹಾರ ಸ್ವೀಕರಿಸಬೇಕು ? | ಡಾ.ರವಿಕಿರಣ ಪಟವರ್ಧನ ಅವರ ಸಲಹೆಗಳು..

ಡೆಂಗ್ಯು ನಂತರ ಹೇಳಿದ ಆಹಾರವನ್ನು ಸ್ವೀಕರಿದರೆ ರೋಗ,ರೋಗದ ನಂತರದ ಹಲವು ತೊಂದರೆಗಳು ಸುಲಭ ನಿವಾರಣೆಯಾಗಬಹುದು.…

1 day ago