ಓ ಕೆಂಪು ಗುಲಾಬಿ ಹೂವೇ…..
ನೀನೇ ಅಲ್ಲವೇ ಸುಂದರ ಚೆಲುವೆ
ಪದಗಳೇ ಸಿಗುತ್ತಿಲ್ಲ ನಿನ್ನ ವರ್ಣಿಸಲು
ಆದರೂ ಹೊರಟೆ ನಾ ನಿನ್ನ ಬಣ್ಣಿಸಲು
ಮೃದು ಕೋಮಲ ಕುಸುಮ ನಿನ್ನದು
ಎಲ್ಲರ ಕಣ್ಮನ ಸೆಳೆವ ಅಂದ ನಿನ್ನದು
ನಿನ್ನನೊಮ್ಮೆ ಹಿಡಿದು ಸ್ಪರ್ಶಿಸಲು
ಮನದಲ್ಲಿ ಅದೇನೋ ಪುಳಕವು
ಹೂಗಳ ಜಗದಿ ಮೆರೆಯೋ ರಾಣಿ ನೀನು…
ಸೌಂದರ್ಯ ರಾಶಿಗೆ ಸೋತಿಹುದು ರಾಣಿ ಜೇನು
ನಿನ್ನದೇ ಕುರಿತು ಮನದಿ ಮೂಡಿತೊಂದು ಕವಿತೆ
ಕೇಳು ನನ್ನ ಮನದನ್ನೆ, ಓ ಸುಲಲಿತೆ
ನಿನ್ನ ನೋಡಿದವರ ಮೊಗದಲ್ಲಿ ನಲಿವು
ಮರೆಯಾಗುವುದು ಮನದಿ ತುಂಬಿದ್ದ ನೋವು
ಭಗವಂತ ನಿನ್ನ ಸುತ್ತ ಮುಳ್ಳು ಇಟ್ಟ ಸರಿಯೇನು?
ಅದೇ ನಿನಗೆ ರಕ್ಷಣೆ,ಕ್ಷಮಿಸು ಮರೆತುಬಿಟ್ಟೆ ನಾನು
# ಅಪೂರ್ವ ಚೇತನ್ ಪೆರಂದೋಡಿ
ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…
26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…
ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್…
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…
ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…
ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…