ಓ ಕೆಂಪು ಗುಲಾಬಿ ಹೂವೇ…..
ನೀನೇ ಅಲ್ಲವೇ ಸುಂದರ ಚೆಲುವೆ
ಪದಗಳೇ ಸಿಗುತ್ತಿಲ್ಲ ನಿನ್ನ ವರ್ಣಿಸಲು
ಆದರೂ ಹೊರಟೆ ನಾ ನಿನ್ನ ಬಣ್ಣಿಸಲು
ಮೃದು ಕೋಮಲ ಕುಸುಮ ನಿನ್ನದು
ಎಲ್ಲರ ಕಣ್ಮನ ಸೆಳೆವ ಅಂದ ನಿನ್ನದು
ನಿನ್ನನೊಮ್ಮೆ ಹಿಡಿದು ಸ್ಪರ್ಶಿಸಲು
ಮನದಲ್ಲಿ ಅದೇನೋ ಪುಳಕವು
ಹೂಗಳ ಜಗದಿ ಮೆರೆಯೋ ರಾಣಿ ನೀನು…
ಸೌಂದರ್ಯ ರಾಶಿಗೆ ಸೋತಿಹುದು ರಾಣಿ ಜೇನು
ನಿನ್ನದೇ ಕುರಿತು ಮನದಿ ಮೂಡಿತೊಂದು ಕವಿತೆ
ಕೇಳು ನನ್ನ ಮನದನ್ನೆ, ಓ ಸುಲಲಿತೆ
ನಿನ್ನ ನೋಡಿದವರ ಮೊಗದಲ್ಲಿ ನಲಿವು
ಮರೆಯಾಗುವುದು ಮನದಿ ತುಂಬಿದ್ದ ನೋವು
ಭಗವಂತ ನಿನ್ನ ಸುತ್ತ ಮುಳ್ಳು ಇಟ್ಟ ಸರಿಯೇನು?
ಅದೇ ನಿನಗೆ ರಕ್ಷಣೆ,ಕ್ಷಮಿಸು ಮರೆತುಬಿಟ್ಟೆ ನಾನು
# ಅಪೂರ್ವ ಚೇತನ್ ಪೆರಂದೋಡಿ
ರಾಮನಗರ ಜಿಲ್ಲೆಯಲ್ಲಿ ಕೃಷಿ ಇಲಾಖೆ ಮತ್ತು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ…
ದಾವಣಗೆರೆ ಜಿಲ್ಲೆಗೆ ಮುಂದಿನ 2 ದಿನಗಳಲ್ಲಿ2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿದ್ದು…
ಬಳ್ಳಾರಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ…
ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 59507 ಟನ್ ಯೂರಿಯಾ ರಸಗೊಬ್ಬರ ಪೂರೈಕೆಯಾಗಿದ್ದು,…
ರಾಜ್ಯದ ರೈತರ ಸಂಕಷ್ಟ ಪರಿಹರಿಸಲು ಕೊರತೆಯಿರುವ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ…
ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ ಸುಮಾರು…