ಓ ಕೆಂಪು ಗುಲಾಬಿ ಹೂವೇ…..
ನೀನೇ ಅಲ್ಲವೇ ಸುಂದರ ಚೆಲುವೆ
ಪದಗಳೇ ಸಿಗುತ್ತಿಲ್ಲ ನಿನ್ನ ವರ್ಣಿಸಲು
ಆದರೂ ಹೊರಟೆ ನಾ ನಿನ್ನ ಬಣ್ಣಿಸಲು
ಮೃದು ಕೋಮಲ ಕುಸುಮ ನಿನ್ನದು
ಎಲ್ಲರ ಕಣ್ಮನ ಸೆಳೆವ ಅಂದ ನಿನ್ನದು
ನಿನ್ನನೊಮ್ಮೆ ಹಿಡಿದು ಸ್ಪರ್ಶಿಸಲು
ಮನದಲ್ಲಿ ಅದೇನೋ ಪುಳಕವು
ಹೂಗಳ ಜಗದಿ ಮೆರೆಯೋ ರಾಣಿ ನೀನು…
ಸೌಂದರ್ಯ ರಾಶಿಗೆ ಸೋತಿಹುದು ರಾಣಿ ಜೇನು
ನಿನ್ನದೇ ಕುರಿತು ಮನದಿ ಮೂಡಿತೊಂದು ಕವಿತೆ
ಕೇಳು ನನ್ನ ಮನದನ್ನೆ, ಓ ಸುಲಲಿತೆ
ನಿನ್ನ ನೋಡಿದವರ ಮೊಗದಲ್ಲಿ ನಲಿವು
ಮರೆಯಾಗುವುದು ಮನದಿ ತುಂಬಿದ್ದ ನೋವು
ಭಗವಂತ ನಿನ್ನ ಸುತ್ತ ಮುಳ್ಳು ಇಟ್ಟ ಸರಿಯೇನು?
ಅದೇ ನಿನಗೆ ರಕ್ಷಣೆ,ಕ್ಷಮಿಸು ಮರೆತುಬಿಟ್ಟೆ ನಾನು
# ಅಪೂರ್ವ ಚೇತನ್ ಪೆರಂದೋಡಿ
ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ "ಮಹಿಳಾ ಗ್ರಾಮಸಭೆ" ಯು ಸಂಪಾಜೆ ಗ್ರಾಮ ಪಂಚಾಯತ್…
ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ 852.6 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ಸಂಗ್ರಹಿಸಲಾಗಿದ್ದು,…
ಬೆಂಗಳೂರಿನಲ್ಲಿ ಈ ಹಿಂದೆ ಕಸ ವಿಲೇವಾರಿಗೆ 98 ಪ್ಯಾಕೇಜ್ ಟೆಂಡರ್ ಕರೆಯಲಾಗಿತ್ತು. ಈ…
ರಾಜ್ಯದ ಜೇನುತುಪ್ಪಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹಾಗೂ ಮಾರುಕಟ್ಟೆ ಒದಗಿಸಲು ತೋಟಗಾರಿಕಾ ಇಲಾಖೆಯಿಂದ…
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಶದಲ್ಲಿ 183 ಕೆರೆಗಳಿದ್ದು, ಕಳೆದ ಒಂದು ವಾರದಿಂದ…
ವಿದ್ಯುತ್ ಸರಬರಾಜು ಕಂಪನಿಗಳಿಗೆ ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಪಾವತಿಸಬೇಕಾಗಿದ್ದ …