ಕವನ | ಕೆಂಪು ಗುಲಾಬಿ

October 2, 2021
10:00 AM

ಓ ಕೆಂಪು ಗುಲಾಬಿ ಹೂವೇ…..
ನೀನೇ ಅಲ್ಲವೇ ಸುಂದರ ಚೆಲುವೆ
ಪದಗಳೇ ಸಿಗುತ್ತಿಲ್ಲ ನಿನ್ನ ವರ್ಣಿಸಲು
ಆದರೂ ಹೊರಟೆ ನಾ ನಿನ್ನ ಬಣ್ಣಿಸಲು

ಮೃದು ಕೋಮಲ ಕುಸುಮ ನಿನ್ನದು
ಎಲ್ಲರ ಕಣ್ಮನ ಸೆಳೆವ ಅಂದ ನಿನ್ನದು
ನಿನ್ನನೊಮ್ಮೆ ಹಿಡಿದು ಸ್ಪರ್ಶಿಸಲು
ಮನದಲ್ಲಿ ಅದೇನೋ ಪುಳಕವು

ಹೂಗಳ ಜಗದಿ ಮೆರೆಯೋ ರಾಣಿ ನೀನು…
ಸೌಂದರ್ಯ ರಾಶಿಗೆ ಸೋತಿಹುದು ರಾಣಿ ಜೇನು
ನಿನ್ನದೇ ಕುರಿತು ಮನದಿ ಮೂಡಿತೊಂದು ಕವಿತೆ
ಕೇಳು ನನ್ನ ಮನದನ್ನೆ, ಓ ಸುಲಲಿತೆ

ನಿನ್ನ ನೋಡಿದವರ ಮೊಗದಲ್ಲಿ ನಲಿವು
ಮರೆಯಾಗುವುದು ಮನದಿ ತುಂಬಿದ್ದ ನೋವು
ಭಗವಂತ ನಿನ್ನ ಸುತ್ತ ಮುಳ್ಳು ಇಟ್ಟ ಸರಿಯೇನು?
ಅದೇ ನಿನಗೆ ರಕ್ಷಣೆ,ಕ್ಷಮಿಸು ಮರೆತುಬಿಟ್ಟೆ ನಾನು

# ಅಪೂರ್ವ ಚೇತನ್ ಪೆರಂದೋಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಕೆಲವು ಸಂಬಂಧಗಳನ್ನು ಉಳಿಸುವುದು ಮೌನವೇ..
August 21, 2026
6:28 AM
by: ಮಹೇಶ್ ಪುಚ್ಚಪ್ಪಾಡಿ
ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?
August 13, 2026
6:50 AM
by: ಮಹೇಶ್ ಪುಚ್ಚಪ್ಪಾಡಿ
ಆಕೆ ಏಕೆ ತನ್ನ ನೋವನ್ನು ಯಾರಿಗೂ ಹೇಳುವುದಿಲ್ಲ..?
August 3, 2026
3:37 PM
by: ಮಹೇಶ್ ಪುಚ್ಚಪ್ಪಾಡಿ
ಅಪ್ಪ ಯಾಕೆ ವಿಚಿತ್ರವಾಗಿ ಕಾಣುತ್ತಾನೆ?
July 19, 2026
7:52 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror